ಅಂತೂ ಇಂತೂ ’ಇಂದಿನ ಭಾರತದ ವ್ಯಕ್ತಿರೂಪ’ದಂತಿರುವ ಲಾಲೂ ಪ್ರಸಾದ್ ಯಾದವ್, ಕನ್ನಡ ಓರಾಟಗಾರರನ್ನು ’ಡರ್ಟಿಃ ಪೀಪಲ್’ ಎಂದು ಅಭಿಪ್ರಾಯಿಸಿದ್ದಾರೆ. ಇದನ್ನು ವಿರೋಧಿಸುವ ಮೊದಲು ನಾವೇಕೆ ’ಕಚಡಾ ಲೋಗ್’ ಎಂಬುದನ್ನು ಒಮ್ಮೆ ಅವಲೋಕಿಸೋಣ.
ಹುಟ್ಟುತ್ತಿದ್ದಂತೆಯೇ ಎರಡು ಬಣವಾದ ’ಕನ್ನಡ ರಕ್ಷಣಾ ವೇದಿಕೆ’ಯ ಹಿಂದೆ ವಿವಿಧ ರಾಜಕಾರಣಿಗಳಿರುವುದು ಯಾರಿಗೂ ತಿಳಿಯದ್ದೇನಲ್ಲ. ಗೋಕಾಕ್ ವರದಿ ಜಾರಿಗೆ ಹೋರಾಡಿದ ಅಂದಿನ ಕನ್ನಡ ಕಾಳಜಿಗೂ ಇಂದಿನ ಸುದ್ದಿಪ್ರಿಯ ಸಂಘಗಳ ಕನ್ನಡ ಕಾಳಜಿಗೂ ಬೆಟ್ಟದಷ್ಟು ವ್ಯತ್ಯಾಸವಿದೆ. ರೈಲ್ವೇಯಲ್ಲಿ ಸಾಕಷ್ಟು ಕನ್ನಡಿಗರಿಲ್ಲದಿರುವುದು ಅತ್ಯಂತ ಕಠೋರ ಸತ್ಯವಾದರೂ ಇದಕ್ಕೆ ಕಾರಣ ನಾವುಗಳು, ನಮ್ಮ ಸಂಸದರು ಮತ್ತು ಮಂತ್ರಿಗಳು. ಸದಾ ಹೈಕಮ್ಯಾಂಡಿನ ಅಡಿಯಾಳಾಗಿರುವ ಈ ರಾಜಕಾರಣಿಗಳು ಪಕ್ಷಭೇದವನ್ನು ಮರೆತು ಯಾವತ್ತಾದರೂ ಒಂದು ಜನಪರ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆಯೇ? ನಮ್ಮವರೇ ಆದ ಜಾಫರ್ ಶರೀಫ್ ಅದೆಷ್ಟು ಕಾಲ ರೈಲ್ವೆ ಸಚಿವರಾಗಿರಲಿಲ್ಲ! ’ಜೀ ಹುಜೂರ್ ಮ್ಹಾ’ ಎಂದು ಕಾಲ ಹಾಕಿದ ಇವರು ಒಂದೆರಡು ರೈಲು ಬಿಟ್ಟಿದ್ದು, ಕಾಲಕ್ಕೆ ತಕ್ಕಂತೆ ಬ್ರಾಡ್ಗೇಜ್ ಮಾಡಿಸಿದ್ದು ಬಿಟ್ಟರೆ ಇನ್ನೇನು ಮಾಡಿದ್ದಾರೆ?
ಇದೇ ಕರವೇ ಕರ ಮುಗಿದು ಸರ್ವ ಸಂಸದರ ಸಭೆಯನ್ನು ಕರೆದರೆ ಬಂದದ್ದು ಬೆರಳೆಣಿಕೆಯಷ್ಟು. ಅದಕ್ಕೇ ನಾವುಗಳು ಕಚಡಾಫೆಲೋಸ್! ಬಾರದ ಈ ಸಂಸದರ ವಿರುದ್ಧ ತೀವ್ರ ಚಳುವಳಿ ಮಾಡಿ ಅವರಿಗೆ ಬುದ್ದಿ ಕಲಿಸದೆ, ಬಡ ಬಿಹಾರೀ ನಿರುದ್ಯೋಗಿಗಳಿಗೆ ತಡೆಯೊಡ್ಡಿ ಸಂದರ್ಶನವನ್ನು ತಪ್ಪಿಸಿದ್ದಕ್ಕೇ ನಾವುಗಳು ಗೂಂಡಾ ಲೋಗ್! ಸಾಮಾನ್ಯವಾಗಿ ವಿಶ್ವದೆಲ್ಲೆಡೆಯ ಜನರು ಸೇರುವ ಒಲಿಂಪಿಕ್ಸ್ ತರಹದ ಅಂತರ್ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ವಾದ್ಯಸಂಗೀತದಲ್ಲಿಯೇ ರಾಷ್ಟ್ರಗೀತೆಗಳನ್ನು ಹಾಡಿಸುವ ಪರಿಪಾಠವಿರುವಂತೆಯೇ ತಮ್ಮ ಒಂದು ಅಂತರ್ರಾಷ್ಟ್ರೀಯ ಕಾರ್ಯಕ್ರಮದಲ್ಲಿ ವಾದ್ಯಸಂಗೀತದಲ್ಲಿ ರಾಷ್ಟ್ರಗೀತೆಯನ್ನು ನುಡಿಸುವಂತೆ ಮಾಡಿದ್ದಕ್ಕೆ ಒಬ್ಬ ಹೆಮ್ಮೆಯ ಕನ್ನಡಿಗನನ್ನು ರಾಷ್ಟ್ರದ್ರೋಹಿಯೆಂದ ನಾವುಗಳು ಅಲ್ಪಜರಲ್ಲವೇ? ಕನ್ನಡ ಹೋರಾಟಗಾರರೆಂದು ಹೇಳಿಕೊಳ್ಳುತ್ತಾ ಸಿನಿಮಾ ಲಾಬಿ, ರಿಯಲ್ ಎಸ್ಟೇಟ್ ಲಾಬಿ, ಟ್ರಾನ್ಸಫರ್ ಲಾಬಿ, ಮಾಫಿಯಾ ಮುಂತಾದ ಡರ್ಟಿ ವ್ಯವಹಾರಗಳನ್ನು ಮಾಡುತ್ತಿರುವ ಇಂದಿನ ಕನ್ನಡ ಓರಾಟಗಾರರು ಅದ್ಯಾವ ರೀತಿಯಿಂದ ಡರ್ಟಿಯಾಗಿರದೇ ಸರ್ವಾಂಗಶುದ್ಧರಾಗಿರುವರೋ?
ಇದೆಲ್ಲವನ್ನೂ ಮೀರಿದ ಸಂಗತಿಯೆಂದರೆ, ರೈಲ್ವೆಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗಿದೆಯೆಂದು ನಮ್ಮ ಆತ್ಮೀಯ ಚಿತ್ರದುರ್ಗದ ಶ್ರೀಗಳು ತಮ್ಮ ಬೆಂಬಲಿಗರೊಂದಿಗೆ ರೈಲು ನಿಲ್ಲಿಸಿ, ಎಲ್ಲಾ ದಿನಪತ್ರಿಕೆಗಳಲ್ಲಿ ಫೋಟೋ ಹಾಕಿಸಿಕೊಂಡವರು, ತಾವೇ ಸ್ಪಾನ್ಸರ್ ಮಾಡಿದ ’ಯಾದವ ಪೀಠ’ದ ಉದ್ಘಾಟನೆಗೆ ಬಂದ ಲಾಲೂ ಬಳಿ ಈ ವಿಷಯದ ಬಗ್ಗೆ ತುಟಿಪಿಟಿಕ್ ಎನ್ನದೆ ಜಾಣ ಮರೆವು ತೋರಿದರು. ಆ ಸಮಾರಂಭಕ್ಕೆ ಬಂದದ್ದರಿಂದಲೇ ತಾನೇ ಲಾಲೂ ಈ ಮಾತುಗಳನ್ನಾಡಿದ್ದು. ಆದರೂ ಕೂಡಾ ಈ ವಿಷಯದ ಬಗ್ಗೆ ಚಕಾರವೆತ್ತದೆ ಈ ಶ್ರೀಗಳು ಸುಮ್ಮನಿದ್ದದ್ದೇಕೋ? ಬಹುಶಃ ರೈಲ್ವೇ ಪೀಠವನ್ನು ಕಟ್ಟುವ ಕನಸು ಕಾಣುತ್ತಿದ್ದರೆನಿಸುತ್ತದೆ. ಆ ಸಮಾರಂಭದಲ್ಲಿ ಈ ಬ್ರಹ್ಮಚಾರಿಗಳು ವೈದಿಕತೆಯನ್ನು ಧಿಕ್ಕರಿಸಿ ವೈಚಾರಿಕತೆಯನ್ನು ಮೆರೆಸಿ ಎಂದು ಪ್ರಲೋಭಿಸಿದ್ದನ್ನು ಪೋಲೀ ಲಾಲೂ, ’ಬ್ರಹ್ಮಚರ್ಯೆ ಕೂಡ ವೈದಿಕತೆಯ ಪ್ರತೀಕ. ಅದನ್ನು ಧಿಕ್ಕರಿಸಿ ಕಾಮಿಸಿ ನೋಡು’ ಎಂದು ಅರ್ಥೈಸಿಕೊಂಡೇ ಇರಬೇಕು ’ಕ್ಯಾ ಕಚ್ಚರಾ ಲೋಗ್ ಹೈ!’ ಎಂದು ಉದ್ಗರಿಸಿದ್ದುದು.
ಇಂದು ’ಕನ್ನಡ ಪರ ಹೋರಾಟ’ವೆಂಬುದು ಒಂದು ಹುಲುಸಾದ ಉದ್ಯಮ. ಅದಕ್ಕೇ ಕಂಡ ಕಂಡಲ್ಲಿ ಕನ್ನಡ ಸೇನೆ, ಕನ್ನಡ ಪಕ್ಷ, ಕನ್ನಡ ಸಮಿತಿ ಇನ್ನೂ ಏನೇನೋ ಕನ್ನಡ ಹೆಸರಿನ ಸಂಸ್ಥೆಗಳು ಹುಟ್ಟಿಕೊಳ್ಳುತ್ತಿರುವುದು, ಮತ್ತು ಆ ಸಂಸ್ಥೆಗಳು ಹಲವು ಬಣಗಳಾಗುತ್ತಿರುವುದು! ಒಂದು ಸಮಗ್ರ ದೂರದರ್ಶಿತ್ವವಿಲ್ಲದೆ ಈ ಎಲ್ಲಾ ಸಂಘಗಳೂ ಹಿರಿಯ ಪುಡಾರಿಗಳಿಗೆ ಮರಿ ಪುಡಾರಿಗಳು ತಯಾರು ಮಾಡಿಕೊಡುವ ಓಟ್ ಬ್ಯಾಂಕ್ ಗಳಾಗಿರುವುದು ಕನ್ನಡದ ದುರಂತವೇ ಸರಿ.
ಇದಕ್ಕೆ ಉದಾಹರಣೆಯೇನೋ ಎಂಬಂತೆ ಇತ್ತೀಚೆಗೆ ಕನ್ನಡ ಪಕ್ಷವೊಂದನ್ನು ಹುಟ್ಟು ಹಾಕಿರುವ ನಮ್ಮ ಕನ್ನಡ ಲೇಖಕ ಕಂ ಹೋರಾಟಗಾರ ಕಂ ಉದಯೋನ್ಮುಖ ರಾಜಕಾರಣಿ ಚಂಪಾ "ಕನ್ನಡಿಗರಿಗೆ ರಾಜ್ ಠಾಕ್ರೆ ಆದರ್ಶವಾಗಬೇಕು" ಎಂದಿರುವುದು. ಸದ್ಯ ನಮ್ಮ ಪುಣ್ಯ, "ಹಿಟ್ಲರ್ ನಮ್ಮ ಆದರ್ಶವಾಗಬೇಕು" ಎಂದಿಲ್ಲವಲ್ಲ!
ಬೆಂಗಳೂರಿನಲ್ಲಿ ಕೇಂದ್ರೀಕೃತವಾಗಿರುವ ಅಭಿವೃದ್ಧಿ ಕರ್ನಾಟಕದೆಲ್ಲೆಡೆ ವಿಭಜಿತಗೊಂಡಿದ್ದರೆ, ಈ ಸಂಸ್ಥೆಗಳಲ್ಲಿ ಕೆಲಸಕ್ಕೆ ಬರುವ ವಲಸಿಗರಿಗೆ ತಮ್ಮ ಭಾಷಿಗರು ಸಿಕ್ಕದೇ ನಿತ್ಯ ವ್ಯವಹರಿಸಲು ಬೇರೆ ದಾರಿಯಿಲ್ಲದೆ ಕನ್ನಡ ಕಲಿಯುತ್ತಿದ್ದರು. ಆಗ ಆ ಅನಿವಾರ್ಯತೆಯ ಕಾರಣ ಅವರುಗಳ ಭಾಷೆ ಬರೀ ಅವರ ಮನೆಮಾತಾಗಿರುತ್ತಿತ್ತು. ಹೀಗೊಂದು ಅನಿವಾರ್ಯ ಪರಿಸ್ಥಿತಿ ಹಿಂದೆ ಇದ್ದುದರಿಂದಲೇ ಕನ್ನಡ ಮನೆಮಾತಲ್ಲದ ಮೂವರು ಕನ್ನಡಿಗರು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದುಕೊಂಡಿರುವುದು! ಇಂದು ಯಥೇಚ್ಚವಾಗಿ ಸುಲಭವಾಗಿ ಬೆಂಗಳೂರಿನಲ್ಲಿ ತಮ್ಮ ತಮ್ಮ ಭಾಷಿಗರು ಈ ವಲಸಿಗರಿಗೆ ಸಿಕ್ಕುವುದರಿಂದ ಕನ್ನಡದ ಅನಿವಾರ್ಯತೆಯೇ ಅವರಿಗಾಗುವುದಿಲ್ಲ!
ಇನ್ನು ಕನ್ನಡಕ್ಕಾಗಿ ಹೋರಾಡಲು ನಮ್ಮ ಕನ್ನಡ ಹೋರಾಟಗಾರರಿಗೆ ಬೆಂಗಳೂರಿನ ಗಾಂಧಿನಗರದಲ್ಲಿಯೇ ಕಛೇರಿ ಬೇಕೆ? ಅದನ್ನು ಹಂಪಿಗೋ ಬನವಾಸಿಗೋ ಬದಲಾಯಿಸಿಕೊಂಡು ಕನ್ನಡ ಪರ್ಅ ಹೋರಾಟವನ್ನು ಮಾಡಬಹುದಲ್ಲವೇ? ಸರಿ, ಗಾಂಧಿನಗರದಲ್ಲಿದ್ದರೂ ಅಲ್ಲಿ ತಯಾರಾಗುವ ಕನ್ನಡ ಸಿನೆಮಾಗಳಲ್ಲಿನ ಕನ್ನಡ ಭಾಷೆಯನ್ನು ಸುಧಾರಿಸಲು ಯಾವುದಾದರೂ ಪ್ರಯತ್ನವನ್ನು ಮಾಡಿದ್ದಾರೆಯೇ?
ಸುಮ್ಮನೇ ಇಂದಿನ ಕನ್ನಡ ಸುದ್ದಿಪತ್ರಿಕೆಗಳು, ಪಠ್ಯಪುಸ್ತಕಗಳು, ಚಿತ್ರರಂಗ ಇವುಗಳನ್ನು ಗಮನಿಸಿದರೇ ಸಾಕು ನಮ್ಮ ಕನ್ನಡ ಮಟ್ಟ ಹೇಗಿದೆಯೆಂದು ತಿಳಿಯುತ್ತದೆ. ಇನ್ನು ಕನ್ನಡಿಗರೋ ಕೊಟ್ಟ ಕೆಲಸವನ್ನು ಮಾಡದ ಸೋಮಾರಿಗಳಾದ್ದರಿಂದಲೇ ವಲಸಿಗರು ಬರುತ್ತಿರುವುದು. ವಲಸಿಗರು ಮಾಡುವ ಕೆಲಸ ಅವರೊಪ್ಪುವ ಸಂಬಳಕ್ಕೆ ಕನ್ನಡಿಗರ್ಯಾರೂ ದೊರಕದ ಕಾರಣವೇ ಅಲ್ಲವೇ ವಲಸಿಗರು ಬಂದಿದ್ದುದು, ಬರುತ್ತಿರುವುದು. ಕೂಪ ಮಂಡೂಕಗಳಂತೆ ಏನೋ ಬಿಂಕ, ಕೊಂಕು ಈರ್ಶೆ ಎಲ್ಲ ಗುಣಗಳನ್ನು ತುಂಬಿಕೊಂಡು ಇರುವ ಕೆಲಸದಲ್ಲಿಯೂ ಇರಲಾಗದ ಅದೆಷ್ಟು ಕನ್ನಡಿಗರಿಲ್ಲ. ಇಂದು ಬೆಂಗಳೂರಿನಲ್ಲಿ ಕಟ್ಟಡ ಕಟ್ಟುವ, ಗಾರೆ ಕೆಲಸಕ್ಕೆ ತಮಿಳರಾದರೆ, ನೆಲಹಾಸು, ಮಾರ್ಬಲ್ ಕೆಲಸಕ್ಕೆ ಬಿಹಾರಿಗಳು, ಬಡಿಗೆ ಕೆಲಸಕ್ಕೆ ರಾಜಸ್ಥಾನಿಗಳು ಬಂದಿರುವುದು ನಮ್ಮಲ್ಲಿಯ ಜನಶಕ್ತಿಯ ಕೊರತೆಯಿಂದಲೇ ತಾನೆ? ಇಂದು ಕನ್ನಡಿಗ ರೈತ ಸೋಮಾರಿಯಾಗಿ ಆಂಧ್ರದ ಕುಶಲಮತಿಗಳಿಗೆ ತಮ್ಮ ಹೊಲಗಳನ್ನು ಗುತ್ತಿಗೆ ಕೊಟ್ಟು ’ಕಟ್ಟೆ ಪುರಾಣ’ದಲ್ಲಿ ತೊಡಗಿರುವುದಕ್ಕೆ ಹೊರರಾಜ್ಯದವರು ಕಾರಣವೇ? ನಮ್ಮ ನಮ್ಮ ನೀತಿ ನಿಯಮಗಳನ್ನು ಸರಿಪಡಿಸಿ ಕನ್ನಡಿಗರಿಂದ ಸೋಮಾರಿತನದ ಭೂತವನ್ನು ಬಿಡಿಸುವಂತಹ ಹೋರಾಟವನ್ನು ಕನ್ನಡ ಸೇನೆಗಳು ಹಾಕಿಕೊಳ್ಳಬೇಕೇ ವಿನಹ ಕನ್ನಡಿಗರನ್ನು ಇನ್ನಷ್ಟು ಸೋಮಾರಿಗಳನ್ನಾಗಿ ಮಾಡುವಂತಹ ಯೋಜನೆಗಳನ್ನಲ್ಲ.
ಒಟ್ಟಾರೆ ಇವರ ಹೋರಾಟದ ಏಕಾಂಶವೆಂದರೆ ಅನ್ಯಭಾಷಿಗರನ್ನು ಸದೆಬಡಿಯುವುದು. ಇದು ದ್ವೇಷವನ್ನು ಬೆಳೆಸುತ್ತದೇ ವಿನಹ ಭಾಷೆಯನ್ನಂತೂ ಅಲ್ಲ!
ಇನ್ನು ರೈಲ್ವೇ ಒಂದು ಕೇಂದ್ರ ಸರ್ಕಾರದ ಸಂಸ್ಥೆಯಾದರೂ ಆ ಸಂಸ್ಥೆಯನ್ನು ಯಾವ ರೀತಿ ಸ್ಥಳೀಯರಿಗೆ ಅದನ್ನು ’ನಮ್ಮ ರೈಲ್ವೇ’ ಎಂಬ ಭಾವನೆ ಮೂಡಿಸಬೇಕೆಂಬ ದೂರದೃಷ್ಟಿಯಿಲ್ಲದೆ, ಯಾವ ಯಾವ ಉದ್ಯೋಗಗಳಲ್ಲಿ ಸ್ಥಳೀಯ ಭಾಷಿಕರು ಅವಶ್ಯಕವೆಂಬ ತಿಳುವಳಿಕೆಯಿದ್ದರೂ ಅದನ್ನು ಅಳವಡಿಸಬೇಕೆಂಬ ಛಲವಿಲ್ಲದೆ ಆ ಸಂಸ್ಥೆಯೊಂದು ಸೇವಾ ಸಂಸ್ಥೆಯಾಗಿರದೆ ಆಡಳಿತಶಾಹೀ ಕೇಂದ್ರವಾಗಿದೆ. ಜಾತಿಬಲ, ಹಣಬಲ, ಕುತಂತ್ರಿತನ, ತಲೆಹಿಡುಕುತನಗಳಿಂದ ಮಂತ್ರಿಗಳಾದವರಿಗೂ, ಅಮಿತಾಭ್ ಬಚ್ಚನ್ ಹೈಟ್ ಎಷ್ಟು; ಮಾಧುರಿ ದೀಕ್ಷಿತ್ ಸೊಂಟದ ಅಗಲವೆಷ್ಟು; ಎಂಬಂತಹ ಪ್ರಶ್ನೆಗಳಿಗೆ ಉತ್ತರಗಳನ್ನು ಉರು ಹೊಡೆದು ಐ.ಎ.ಎಸ್. / ಐ.ಪಿ.ಎಸ್. ಪಾಸು ಮಾಡಿ ಅಧಿಕಾರಿಗಳಾದ ಬಚ್ಚಾಗಳಿಗೆ ಒಂದು ಸಂಸ್ಥೆಯನ್ನು ನಡೆಸುವ ಶಕ್ತಿ ಇರುತ್ತದೆಯೇ?
ಇಲ್ಲಿ ನಿಮಗೊಂದು ವಿಷಯವನ್ನು ಹೇಳಬಯಸುತ್ತೇನೆ. ಇಂದು ಬ್ರಿಟಿಷ್, ಲುಫ್ತಾನ್ಸಾ, ಏರ್ ಫ್ರಾನ್ಸ್ ಏರ್ ಲೈನ್ ಗಳು ಬೆಂಗಳೂರಿಗೂ, ಹೈದರಾಬಾದಿಗೂ ಸೇವೆಯನ್ನೊದಗಿಸುತ್ತಿರುದು ತಿಳಿದಿದೆ ತಾನೆ. ಈ ಸಂಸ್ಥೆಗಳು ಮೊದಲಿನಿಂದಲೂ ಮದ್ರಾಸ್, ಬಾಂಬೆಗಳಿಗೆ ಹಾರುತ್ತಿದ್ದರೂ ಅದರಲ್ಲಿ ಭಾರತೀಯ ಊಟ, ಸಿನಿಮಾಗಳು ಇರುತ್ತಿರಲಿಲ್ಲ. ಯಾವಾಗ ಭಾರತೀಯ ಮೂಲದ ಪ್ರಯಾಣಿಕರ ಸಂಖ್ಯೆ ಜಾಸ್ತಿಯಾಯಿತೋ ಈ ಸಂಸ್ಥೆಗಳು ಭಾರತೀಯ ’ಹೋಸ್ಟ್’ಗಳನ್ನು ನೇಮಿಸಿಕೊಂಡು ಹಿಂದಿ, ತೆಲುಗು, ತಮಿಳಿನಲ್ಲಿ ಸ್ವಾಗತ, ಧನ್ಯವಾದಗಳೊಂದಿಗೆ ಸೀಟ್ ಬೆಲ್ಟ್ ಹಾಕಿಕೊಳ್ಳುವ ಮತ್ತಿತರೆ ರಕ್ಷಣಾಸೂಚಿಗಳನ್ನೂ ಹೇಳುತ್ತಾರೆ. ಏಕೆಂದರೆ ತಮ್ಮ ಆದಾಯದ ಮೂಲವಾದ ಈ ಪ್ರಯಾಣಿಕರಿಗೆ ಇದು ’ನಮ್ಮ ಏರ್ ಲೈನ್’ ಎಂಬ ಭಾವನೆಯನ್ನು ಮೂಡಿಸಲು. ಹಲವಾರು ಬಾರಿ ಕೆಲಸದ ನಿಮಿತ್ತ ಚೆನ್ನೈ, ಹೈದರಾಬಾದಿಗೆ ಶಿಕಾಗೋನಿಂದ ಪ್ರಯಾಣಿಸಿರುವ ನನಗೆ ಈ ಏರ್ ಲೈನುಗಳಲ್ಲಾದ ’ಪರ್ಸನಲೈಜೇಷನ್’ ಬದಲಾವಣೆ ಗಮನಕ್ಕೆ ಬಂತು. ಹೈದರಾಬಾದ್ ಫ್ಲೈಟ್ ಗಳಲ್ಲಿ ತೆಲುಗು ಸಂದೇಶ, ಸಿನಿಮಾಗಳನ್ನು ಭಿತ್ತರಿಸಿ, ಚೆನ್ನೈ ಫ್ಲೈಟ್ ಗಳಲ್ಲಿ ತಮಿಳು ಬಳಸುತ್ತಾರೆ.
ಅದೇ ವೈಯುಕ್ತಿಕವಾಗಿ ಬೆಂಗಳೂರಿಗೆ ಬರುವ ನನಗೆ ಈ ಏರ್ ಲೈನುಗಳು ಕನ್ನಡ ಬಳಸದಿರುವುದೂ ಗಮನಕ್ಕೆ ಬಂತು. ಇವರ ಪ್ರಕಾರ ಮುಂಬೈನಲ್ಲಿ ಮರಾಠಿ ಮಾತನಾಡುವವರು ಕಡಿಮೆ ಇದ್ದು ಹಿಂದಿಯೇ ಅಲ್ಲಿನ ಅಧಿಕೃತ ಭಾಷೆಯಾದುದರಿಂದ ಮುಂಬೈಗೆ ಹೋಗುವ ವಿಮಾನಗಳಲ್ಲಿ ಹಿಂದಿಯನ್ನು ಬಳಸಿದಂತೆಯೇ, ಬೆಂಗಳೂರಿನಲ್ಲಿಯೂ ಕೂಡ ಹಿಂದಿಯೇ ಪ್ರಮುಖ ಭಾಷೆಯಾದುದರಿಂದ ಈ ವಿಮಾನಕ್ಕೂ ಹಿಂದಿ ಬಳಸುತ್ತೇವೆಂದು ನನ್ನ ಹೋಸ್ಟ್ ತಿಳಿಸಿದಳು. ಸದ್ಯ, ಬೆಂಗಳೂರಿನ ಏರ್ ಪೋರ್ಟಿನ ತುಂಬೆಲ್ಲಾ ಕೂಲಿಯಿಂದ ಗ್ರೌಂಡ್ ಆಫೀಸರ್ ವರೆಗೂ ತುಂಬಿರುವ ತಮಿಳು / ಮಲಯಾಳೀ ಭಾಷಿಗರನ್ನು ನೋಡಿ, ಬೆಂಗಳೂರಿನ ಅಧಿಕೃತ ಭಾಷೆ ತಮಿಳು, ಮಲಯಾಳಂ, ಎನ್ನದೇ ನಮ್ಮ ರಾಷ್ಟ್ರಭಾಷೆಯನ್ನು ಹೆಸರಿಸಿದಳಲ್ಲಾ ಅದೇ ಸಮಾಧಾನ!
ಇರಲಿ ಅದು ಬೇರೆ ವಿಷಯ. ಆದರೆ ಅಂತಹ ಒಂದು ಸಣ್ಣ ಆದರೆ ಅತಿಮುಖ್ಯವಾದ ’ಪರ್ಸನಲೈಜೇಷನ್’ ವ್ಯಾಪಾರೀ ತಂತ್ರವನ್ನು ನಮ್ಮ ಪೂರ್ವಜರು ’ಅತಿಥಿ ದೇವೋಭವ’ ಎಂದು ಎಂದೋ ಘೋಷಿಸಿದ್ದರೂ ಅದರ ವಿಶಾಲಾರ್ಥ ಇನ್ನೂ ನಮ್ಮ ರೈಲ್ವೇಗೆ ತಿಳಿದಿಲ್ಲವೇನೋ?
ಅಣಕ:
ಸದಾ ಹುಂಬನಂತೆ, ಮೂರ್ಖಶಿಖಾಮಣಿಯಂತಿದ್ದ ಲಾಲೂ ಬಗೆಗಿನ ಜೋಕುಗಳನ್ನು ಓದಿದ್ದೀರಷ್ಟೆ. ಹಾಗಿದ್ದ ಲಾಲೂ, ಇಂದು ಒಬ್ಬ ಸಮರ್ಥ ನಾಯಕನಂತೆ ರೈಲ್ವೇಯನ್ನು ನಿಭಾಯಿಸುತ್ತಿರುವುದು; ಐ.ಐ.ಎಮ್. ನಂತಹ ಪ್ರತಿಷ್ಟಿತ(?) ವಿದ್ಯಾಸಂಸ್ಥೆಗಳಲ್ಲಿ ಮ್ಯಾನೇಜಮೆಂಟ್ ಬಗ್ಗೆ ಲೆಕ್ಚರ್ ಕೊರೆಯುವುದು; ಕಾರ್ಪೋರೇಟ್ ಅಧಿಕಾರಿಯ ಮಾದರಿ ರೈಲ್ವೇ ಬಡ್ಜೆಟ್ ಮಂಡಿಸುವುದು ಮುಂತಾದ ಅಸಾಮಾನ್ಯ ಬುದ್ದಿಮತ್ತೆಯ ಪ್ರತಿಭೆಯನ್ನು ಗಳಿಸಿದ್ದು ಹೇಗೆ ಬಲ್ಲಿರಾ?
ಅದಕ್ಕೆ ನೀವು ಹುಲ್ಲು ಮೇಯಬೇಕು, ಮೇದ ಮೇವನ್ನು ಆಗಾಗ್ಗೆ ಬಾಯಿಗೆ ತಂದುಕೊಂಡು ಚಪ್ಪರಿಸಬೇಕು,
ಸುಮ್ಮನೇ ’ಡರ್ಟಿ ಪೀಪಲ್’ ತರಹ ರಾಜಾ ವ್ಹಿಸ್ಕಿ ಕುಡಿದು ತಲೆ(ಮಾಂಸ) ತಿನ್ನದ್ರಿಂದಲ್ಲ!
ಪರಿಸರ ಪ್ರಜ್ಞೆ ಮತ್ತು ನಮ್ಮ ಮೌಢ್ಯ
ಕಸದಿಂದ ರಸವೆಂಬುದನ್ನು ಅಕ್ಷರಶಃ ಜೀವಿಸಿ ತಮ್ಮ ಸೃಷ್ಟಿಯ ಹಿಂದಿನ ಆ ಸೃಷ್ಟಿಕರ್ತನ ಉದ್ದೇಶವನ್ನು ಪ್ರತ್ಯಕ್ಷಿಕವಾಗಿ ತೋರುತ್ತಿರುವ ದಾವಣಗೆರೆಯ ಹಂದಿಗಳ ಬಗ್ಗೆ ಓದಿದ್ದಿರಷ್ಟೆ. ಹಾಗೆಯೇ ಒಮ್ಮೆ ಪ್ರಾಂತ್ಯಗಳು, ರಾಜ್ಯಗಳು, ದೇಶಗಳಿಗನುಗುಣವಾಗಿ ಆ ಭಗವಂತನು ಸೃಷ್ಟಿಸಿರುವ ಜೀವರಾಶಿಗಳನ್ನು ಒಮ್ಮೆ ಗಂಭೀರವಾಗಿ ಅವಲೋಕಿಸಿ ನೋಡಿ. ಈ ಪ್ರತಿಯೊಂದು ಸೃಷ್ಟಿಗಳೂ ಒಂದೊಂದು ಭೌಗೋಳಿಕ ಲಕ್ಷಣಗಳಲ್ಲಿ ಯಾವುದೋ ಒಂದು ಘನ ಉದ್ದೇಶದಿಂದ ಅಲ್ಲಲ್ಲಿ ನಿಯೋಜಿತಗೊಂಡು ಇತರೆಡೆ ನಿಯಮಿತಗೊಂಡಿವೆ. ಇದನ್ನು ಮನಗಂಡೇ ಮುಂದುವರಿದ ರಾಷ್ಟ್ರಗಳು ತಮ್ಮ ನೈಸರ್ಗಿಕ ಜೀವಸಂಕುಲವಲ್ಲದೇ ಇತರೆ ಯಾವುದೇ ಜೀವಸಂಕುಲವೂ ಯಾವ ವಿಧದಿಂದಲೂ ತಮ್ಮ ನಿಸರ್ಗದಲ್ಲಿ ಕಲಬೆರಕೆಯಾಗದಂತೆ ತಡೆಗಟ್ಟುತ್ತಿವೆ. ಇತ್ತೀಚೆಗೆ ನಾನಿರುವ ಶಿಕಾಗೋ ಏರಿಯಾದಲ್ಲಿ ಕಂಡುಬಂದ ವಲಸೆಗಾರ ಏಷಿಯನ್ ಕಾರ್ಪ್ (ಗೆಂಡೆಮೀನು) ಅನ್ನು ಇಲ್ಲಿನ ಪರಿಸರ ಸಂರಕ್ಷಣಾ ಇಲಾಖೆಯು ಯುದ್ಧದ ಮಾದರಿಯಲ್ಲಿ ತಂತ್ರಗಳನ್ನು ಅಳವಡಿಸಿಕೊಂಡು ಈ ಮೀನುಗಳನ್ನು ಬಲಿಹಾಕಿ ನಾಮಾವಶೇಷ ಮಾಡಿತು! ಇದು ಅತ್ಯಂತ ಸಾಮಾನ್ಯ ಸಂಗತಿಯಾಗಿ ನಮಗೆಲ್ಲ ಅನ್ನಿಸಬಹುದು. ಆದರೆ ಆ ಮೀನು ಏಷ್ಯಾದಿಂದ ಅದು ಹೇಗೋ ಬಂದು ಇಲ್ಲಿ ಸೇರಿ ಅತಿ ಶೀಘ್ರವಾಗಿ ವಂಶಾಭಿವೃದ್ಧಿ ಮಾಡುತ್ತ, ಇಲ್ಲಿನ ನೈಸರ್ಗಿಕ ಕಾರ್ಪ್ ಮೀನುಗಳನ್ನು ಕ್ರಮೇಣವಾಗಿ ಇಲ್ಲವಾಗಿಸಿ ಈ ಪರಿಸರದ ಒಂದು ಜೀವ ಸಂಕುಲವನ್ನು ಇಲ್ಲವಾಗಿಸಿಬಿಡುತ್ತಿತ್ತು. ಪರಿಸರ ಸಂರಕ್ಷಣೆಯೆಂದರೆ, ಕೇವಲ ಪ್ರಾಣಿಗಳನ್ನು ಸಂರಕ್ಷಿಸುವುದಷ್ಟೇ ಅಲ್ಲದೆ ಆಯಾ ಪ್ರಾಂತೀಯ ಪ್ರಭೇಧ ವರ್ಗಕ್ಕೆ ಹಾನಿ ಬರುವ ಕೊಂಚ ಸುಳಿವು ದೊರಕಿದರೂ ಅದನ್ನು ಕೂಡಲೇ ನಿಯಂತ್ರಿಸಬೇಕೆಂಬುದು ಗಮನೀಯ ಅಂಶ.
ವಿಶ್ವದೆಲ್ಲೆಡೆಯ ಜನರಿಲ್ಲಿಗೆ ವಲಸೆ ಬಂದು ಕಲೆತು, ಬೆರೆತು ವಿಶಿಷ್ಟ ಮನುಕುಲದ ಕಲಬೆರಕೆ ತಳಿಯೆಂಬಂತಿರುವ ಅಮೇರಿಕನ್ನರು ತಮ್ಮ ಪ್ರಾಣಿ, ವನ, ಗಿಡ, ಮರವಲ್ಲದೇ ನಿಸರ್ಗದ ಯಾವುದೇ ಜೀವಸಂಕುಲವಿರಲಿ ಅದನ್ನು ಅತ್ಯಂತ ನಿಷ್ಟವಾಗಿ ಕಲಬೆರಕೆಯಾಗದಂತೆ ಕಾಯ್ದು ಕಾಪಾಡುತ್ತಾರೆ. ಆದ್ದರಿಂದಲೇ ಇಲ್ಲಿನ ನಾಯಿ, ಬೆಕ್ಕು, ಹಸುಗಳೆಲ್ಲ ಇನ್ನೂ ಕಲಬೆರಕೆಯಾಗದೇ ಆದಷ್ಟೂ ತಮ್ಮ ಮೂಲ ವಂಶವಾಹಿನಿಯನ್ನು ಕಾಪಾಡಿಕೊಂಡಿವೆ. ಕೆಲವು ಕಲಬೆರಕೆ ನಾಯಿ, ಬೆಕ್ಕುಗಳಿದ್ದರೂ ಅವುಗಳನ್ನು ವಿವಿಧ ವಿಂಗಡನೆಗೊಳಪಡಿಸಿ ಪ್ರತ್ಯೇಕವಾಗಿಯೇ ನೋಡುತ್ತಾರೆ.
ನಿಮಗೆ ಇನ್ನೊಂದು ಘಟನೆಯನ್ನು ಹೇಳಬೇಕೆಂದರೆ, ಇಲ್ಲಿನ ಓರೆಗಾನ್ ರಾಜ್ಯದ ರೈತರಿಗೆ ಬೇಸಿಗೆಯಲ್ಲಿ ಕೊಲಂಬಿಯಾ ನದಿಯಿಂದ ಹೆಚ್ಚುವರಿಯಾಗಿ ನೀರನ್ನಿತ್ತು ೫ ಲಕ್ಷ ಎಕರೆ ಭೂಮಿಯನ್ನು ಅಧಿಕೃತವಾಗಿ ನೀರಾವರಿಗೆ ಒಳಪಡಿಸವ ಯೋಜನೆಯನ್ನು ಅಲ್ಲಿನ ಸರ್ಕಾರ ಹಾಕಿಕೊಂಡಿತು. ಅದರ ಅನುಷ್ಟಾನಕ್ಕೆ ಮುನ್ನ ಪರಿಸರದ ಮೇಲೆ ಪರಿಣಾಮವೇನಾಗಬಹುದೆಂದು ಸಂಶೋಧಿಸಿ, ಈ ಯೋಜನೆಯಿಂದ ಆ ನದಿಯಲ್ಲಿರುವ ಮೂಲ ಕಾರ್ಪ್ ಮೀನುಗಳ ಸಂತತಿಗೆ ಈ ಯೋಜನೆ ಮಾರಕವಾಗುತ್ತದೆಂದು ಯೋಜನೆಯನ್ನು ಕೈಬಿಟ್ಟಿತು.
ಇದೆಲ್ಲವನ್ನು ಏಕೆ ಹೇಳಿದೆನೆಂದರೆ, ಇಂದು ಭಾರತದ ಜೀವಸಂಕುಲದ ಹಲವಾರು ಪ್ರಭೇಧಗಳು ನಾಮಾವಶೇಷವಾಗಿವೆ ಮತ್ತು ಆಗುತ್ತಲಿವೆ ಅಥವಾ ತಮ್ಮ ಮೂಲ ಸ್ವರೂಪವನ್ನು ಕಳೆದುಕೊಂಡು ಕಲಬೆರಕೆಗೊಳ್ಳುತ್ತಿವೆ.
ಗಿಡ, ಮರ, ಕಲ್ಲು, ಬೆಟ್ಟ, ಎಲೆ, ಹೂ, ಕಾಯಿಗಳೆಲ್ಲವೂ ಪೂಜ್ಯ, ಪವಿತ್ರವೆಂದು ನಿಸರ್ಗವನ್ನೇ ಪೂಜಿಸುತ್ತಿದ್ದ ಭಾರತೀಯ, ನವನಾಗರೀಕತೆಯ ಶಿಕ್ಷಣವನ್ನು ಪಡೆಯುತ್ತ ಉನ್ನತಿ ಹೊಂದಿ ತನ್ನ ಸಂಸ್ಕೃತಿಯ ಸಂಸ್ಕಾರವನ್ನರಿಯದೆ ಇಂದು ಹೀಗೆ ಪೂಜಿಸುವುದೆಲ್ಲ ಮೌಢ್ಯವೆಂದು ತನ್ನ ಬೇರುಗಳನ್ನು ಕಡಿದುಕೊಳ್ಳುತ್ತ ಮರೀಚಿಕೆಯ ಬೆನ್ನು ಬಿದ್ದಿದ್ದಾನೆ. ಮಲ್ಲಿಗೆ, ಸಂಪಿಗೆ, ಹೂವಮ್ಮ, ಪೂವಮ್ಮ, ಕನಕಾಂಬರಿ, ಪಾರಿಜಾತ, ಎಂಬೆಲ್ಲ ಪರಿಸರ ಸಂಬಂಧಿ ಹೆಸರುಗಳಿಗೆ ತಿಲಾಂಜಲಿಯಿತ್ತು, ನತಾಷಾ, ಬಿಪಾಸಾ, ಕರಿಷ್ಮಾ, ರೀಟಾ, ಎಂದೆಲ್ಲ ಮಿಂಚುಳ್ಳಿಗಳಾಗುತ್ತಿದ್ದಾವೆ ನಮ್ಮ ಹೆಣ್ಣುಗಳು. ಇನ್ನು ಗಂಡಸರು ಕಾಡಪ್ಪ, ಅಡವಿಯೆಪ್ಪ, ಕಲ್ಲಪ್ಪ, ಬಸವಣ್ಣ, ಹುಲಿಯಪ್ಪ, ಕರಡೆಪ್ಪ ಎಂಬ ಪರಿಸರಸ್ನೇಹೀ ಹೆಸರುಗಳಿಂದ ಬಹುದೂರ ಸಾಗಿದ್ದಾರೆ. ಪ್ರಕೃತಿಯೊಂದಿಗೆ ಪ್ರಕೃತಿಯಾಗಿ ಹಾಸುಹೊಕ್ಕಾಗಿ ಬಾಳುವುದು ನಾಗರೀಕತೆಯೋ, ಪರಿಸರಕ್ಕೆ ವಿರುದ್ಧವಾಗಿ ನಡೆದು ವಿಕೋಪಗಳನ್ನು ಸೃಷ್ಟಿಸುವುದು ನಾಗರೀಕತೆಯೋ ಅರಿಯದಾಗಿದೆ.
ನಮ್ಮ ಪೂರ್ಣಚಂದ್ರ ತೇಜಸ್ವಿಯವರು ಹೇಳಿದಂತೆ ನಮ್ಮ ನದಿಗಳೆಲ್ಲ ಚರಂಡಿಗಳಾಗಿ ಅಲ್ಲಿ ಯಾವ್ಯಾವ ಜಾತಿಯ ಮೀನುಗಳಿದ್ದವೋ ಬಲ್ಲವರ್ಯಾರು? ಸುಮ್ಮನೆ ಅಲ್ಲಲ್ಲಿ ಕೇಳರಿತ ಕತೆಗಳ ಆಧಾರದ ಮೇಲೆ ನಮ್ಮ ನದಿಯಲ್ಲಿರಬಹುದಾಗಿದ್ದ ಮೀನುಗಳ ತಳಿಗಳನ್ನು ದಾಖಲಿಸಿ ಅವುಗಳಲ್ಲಿ ಯಾವ್ಯಾವು ಅಳಿಸಿಹೋಗಿದ್ದಾವೆಂದು ಕಂಡುಕೊಳ್ಳಬೇಕಾದ ಪರಿಸ್ಥಿತಿ ನಮ್ಮ ಹೊಣೆಗೇಡಿ ನಾಯಕರುಗಳ ಸ್ವಾತಂತ್ರ್ಯದ ಪರಿಕಲ್ಪನೆಯ ದೆಸೆಯಿಂದ ಬಂದೊದಗಿದೆ.
ಈ ನಿಟ್ಟಿನಲ್ಲಿ ರಾಮಚಂದ್ರಾಪುರದ ಸ್ವಾಮೀಜಿಯೋರ್ವರು ಪರಿಸರ ಸಂರಕ್ಷಣೆಯ ದೃಷ್ಟಿಯಿಂದಲ್ಲದಿದ್ದರೂ ಧಾರ್ಮಿಕ ದೃಷ್ಟಿಯಿಂದಲಾದರೂ ಸ್ಥಳೀಯ ಗೋ ತಳಿಯನ್ನು ರಕ್ಷಿಸುತ್ತಿರುವುದು ಸ್ತುತ್ಯಾರ್ಹ. ಆದರೆ ಪೂಜ್ಯನೀಯವಲ್ಲದ, ಯಾವುದೇ ಧಾರ್ಮಿಕ ಕವಚವಿಲ್ಲದ ಅಸಂಖ್ಯಾತ ಭಾರತೀಯ ಜೀವ, ಸಸ್ಯ ಸಂಕುಲಗಳನ್ನು ರಕ್ಷಿಸುವವರ್ಯಾರು?
ಹಿಂದೆಲ್ಲ ಬೇಲಿ ಸಾಲಿನಲ್ಲಿ, ಕುರುಚಲು ಕಾಡುಗಳಲ್ಲಿ ಹೇರಳವಾಗಿ ಕಂಡುಬರುತ್ತಿದ್ದ ಬಾರೆ, ಕಾರೆಯಂತಹ ಕಾಡುಹಣ್ಣಿನ ಗಿಡಗಳು; ಮುಳ್ಳುಬೆಂಡೆ, ಮುಳ್ಳುಬದನೆ, ತೊಂಡೆಯಂತಹ ತರಕಾರಿ ಸಸ್ಯಗಳು; ಮುತ್ತುಗ, ಜಾಲಿ, ಮುರುಗಲದಂತಹ ಚಿಕ್ಕ ಮರಗಳು ಇಲ್ಲವಾಗಿ ಇವುಗಳ ಸ್ಥಾನವನ್ನು ಲಂಟಾನ, ಪಾರ್ಥೇನಿಯಮ್ ಮತ್ತು ನೀಲಗಿರಿಯಂತಹ ವಿದೇಶೀ ತಳಿಗಳು ಬದಲಾಯಿಸುತ್ತಿವೆ. ಪರಿಸರ ಸಂರಕ್ಷಣೆಯೆಂದರೆ ಹಸಿರು ಬೆಳೆಸುವುದೆಂದುಕೊಂಡಿರುವ ನಮ್ಮ ಅರಣ್ಯ ಇಲಾಖೆ ಪರಿಸರದ ಆಳ ಪರಿಜ್ಞಾನವಿಲ್ಲದೆ ಸಾಗುವಾನಿ, ಬೀಟೆ, ಮಾವು, ಹಲಸು, ಮತ್ತಿತರೆ ಅತ್ಯಂತ ಮಲೆನಾಡ ತಳಿಗಳೆನ್ನಬಹುದಾದ ಮರಗಳನ್ನು ಅಲ್ಲಲ್ಲಿ ಅಕೇಶಿಯಾ, ನೀಲಗಿರಿ, ಸಿಲ್ವರ್, ಆಸ್ಟ್ರೇಲಿಯನ್ ಯೂಕಲಿಪ್ಟಸ್ ಮುಂತಾದ ವಿದೇಶೀ ತಳಿಗಳಿಂದ ಕಾಡು ಅಳಿದ ಮಲೆನಾಡ ಕೆಲ ಪ್ರದೇಶಗಳಲ್ಲಿ ಬದಲಾಯಿಸುತ್ತಿದೆ. ಖಾಲಿ ಪ್ರದೇಶಗಳಲ್ಲಿ ಶೀಘ್ರವಾಗಿ ಹಸಿರು ತುಂಬಿ ಜನಮನ್ನಣೆ ಗಳಿಸಲೋ, ಸರ್ಕಾರೀ ಯಂತ್ರವನ್ನು ಸಂತೃಪ್ತಗೊಳಿಸಲೋ ಒಟ್ಟಾರೆ ಈ ರೀತಿಯ ದೇಶೀ ತಳಿಗಳನ್ನು ಬದಲಾಯಿಸುತ್ತ ಮುಂದೆ ಮಲೆನಾಡನ್ನೆಲ್ಲ ಬೆರಕೆನಾಡನ್ನಾಗಿ ಪರಿವರ್ತಿಸುವರೇನೋ!
ನಮ್ಮ ಭೌಗೋಳಿಕ ಪರಿಸರದ ಒಂದು ಸ್ಪಷ್ಟ ರೂಪುರೇಷೆಯಿಲ್ಲದೆ, ಆಳ ಅಭ್ಯಾಸವಿಲ್ಲದೆ ಎಡಬಿಡಂಗಿಯಂತೆ ಯೋಜನೆಗಳನ್ನು ಹಾಕಿಕೊಳ್ಳುತ್ತಿರುವ ನಮ್ಮ ಅರಣ್ಯ ಇಲಾಖೆಗಳ ಮತ್ತು ನಮ್ಮ ದಿಕ್ಕೆಟ್ಟ ರೈತರ ದೆಸೆಯಿಂದಲೇ ಇಂದು ಬಯಲು ಸೀಮೆಯ ಬೆಳೆಗಳಾದ ತೊಗರಿ, ಮೆಕ್ಕೆಜೋಳ, ಮತ್ತಿತರೆ ಬೆಳೆಗಳನ್ನು ಮಲೆನಾಡಿನಲ್ಲಿ ಬೆಳೆಯುವ ಪರಿಸ್ಥಿತಿ ಬಂದಿರುವುದು ಮತ್ತು ಬರುತ್ತಿರುವುದು.
ಮೊದಲೆಲ್ಲಾ ಆಯುರ್ವೇದ ಔಷಧಿಗಳಿಗೆ ಕಾಡು ಹೊಕ್ಕು ಈ ಸಸ್ಯಮೂಲಿಕೆಗಳನ್ನು ತರುತ್ತಿದ್ದರೆ, ಈಗ ಅವುಗಳೆಲ್ಲ ನಮ್ಮ ನಿಸರ್ಗದಿಂದ ಕಣ್ಮರೆಯಾಗಿ ನಮ್ಮ ಮಾದರೀ ರೈತರು ಅಶ್ವಗಂಧಿ, ತುಂಬೆ, ಆನೆಗಡ್ಡೆ, ಅಮೃತಬಳ್ಳಿ, ಇನ್ನು ಮುಂತಾದ ಕಾಡುಗಿಡಗಳನ್ನು ಬೇಸಾಯಬೆಳೆಗಳಾಗಿ ಬೆಳೆಯುವಂತಹ ಪರಿಸ್ಥಿತಿ ಸೃಷ್ಟಿಯಾಗಿರುವುದು ಪರಿಸರ ನಾಶದ ಕರೆಗಂಟೆಯೆಂಬ ಪರಿಜ್ಞಾನವೂ ನಮ್ಮವರಿಗಿಲ್ಲ.
ಪರಿಸರ ಸಂರಕ್ಷಣೆಯ ಸಮಗ್ರತೆ, ಆಳ, ಮುನ್ನೋಟಗಳ ಕಿಂಚಿತ್ತೂ ಪರಿಜ್ಞಾನವಿಲ್ಲದ ಇಲಾಖೆಗಳು, ಸರ್ಕಾರಗಳು ಬೆಂಗಳೂರನ್ನು ಸಿಂಗಾಪುರವನ್ನು ಮಾಡಿದಂತೆ ನಮ್ಮ ಪರಿಸರವನ್ನು ಮಂಗಳನನ್ನಾಗಿ ಮಾಡುವತ್ತ ದಾಪುಗಾಲಿಡುತ್ತಿದ್ದಾರೆ.
ಹುಚ್ಚು ಅಮೇರಿಕನ್ನರು ಮಂಗಳನಲ್ಲಿಗೆ ಹೋಗುವತ್ತ ಯೋಚಿಸುತ್ತಿದ್ದರೆ, ಜಾಣ ಭಾರತೀಯರು ಮಂಗಳನನ್ನೇ ಭಾರತದಲ್ಲಿ ಸೃಷ್ಟಿಸುತ್ತಿದ್ದಾರೆ!
ಒಮ್ಮೊಮ್ಮೆ ಗಹನವಾಗಿ ಯೋಚಿಸಿದಾಗ, ಸ್ವತಂತ್ರ ಭಾರತದ ಧೀರ್ಘ ರೂಪುರೇಷೆಗಳಿಲ್ಲದೆ, ಸಮಗ್ರ ಅಭಿವೃದ್ಧಿಯ ಸ್ಪಷ್ಟ ಚಿತ್ರಣವೂ ಇಲ್ಲದೆ, ಕಠೋರ ಸತ್ಯಗಳನ್ನು ಹುಂಬ ಭಾವನೆಗಳಿಂದ ಮರೆಮಾಚಿ, ನಮ್ಮ ಹಿರಿಯರು ಭಾವುಕರಾಗಿ ಸ್ವಾತಂತ್ರ್ಯಕ್ಕೆ ಹೋರಾಡಿ ಸ್ವಾತಂತ್ರ್ಯ ಗಳಿಸಿದ್ದು, ಮಿಲನ ಮುನ್ನವೇ ಶೀಘ್ರಸ್ಖಲನವಾದಂತಾಗಿ ನಮ್ಮ ಸ್ವಾತಂತ್ರ್ಯ ನಿರೀಕ್ಷಿತ ಫಲ ನೀಡಲಿಲ್ಲವೇನೋ ಅನ್ನಿಸುತ್ತದೆ.
ಹಾಂ! ನಮ್ಮ ಮಠಾಧೀಶ್ವರರೂ, ಪೀಠಾಧಿಪತಿಗಳೂ ಮೂಲಿಕೆ ವನ, ಬೀಜ ರಕ್ಷಣೆ, ವನ್ಯಧಾಮ, ಪರಿಸರ ರಕ್ಷಣೆಗೆ ಹಠಾತ್ತಾಗಿ ಮುಂದಾಗಿ ಈ ವಿಷಯಗಳಲ್ಲಿ ಕೈಂಕರ್ಯರಾಗಿರುವುದನ್ನು ಕಂಡು, ಇದು ಅವರುಗಳ ಇನ್ನೊಂದು ’ಪ್ರಚಾರಪ್ರಿಯತೆ’ ತೀಟೆಯೆಂಬುದು ಮನವರಿಕೆಯಾಗಿದ್ದರೂ ಅಷ್ಟಾದರೂ ಒಂದು ಒಳ್ಳೆಯ ಕಾರ್ಯವನ್ನು ಈ ಪುಣ್ಯಾತ್ಮರು ಮಾಡುತ್ತಿದ್ದಾರಲ್ಲ ಎಂದು ಸಮಾಧಾನಗೊಂಡಿದ್ದೆ. ಆದರೆ ಇವರ ಈ ಕೈಂಕರ್ಯ ಕೇಂದ್ರ ಸರ್ಕಾರದ ’ಇಂಡಿಯನ್ ಕೌನ್ಸಿಲ್ ಫಾರ್ ಅಗ್ರಿಕಲ್ಚರ್’ ನ ಸಂಶೋಧನಾ ನಿಧಿಯನ್ನು ’ಸ್ವಾಹಾ’ ಮಾಡಲು ಎಂದು ನನ್ನ ಕೃಷಿ ವಿಜ್ಞಾನಿ ಮಿತ್ರರು ಇತ್ತೀಚೆಗೆ ತಿಳಿಸಿದಾಗಲೇ ಇವರ ಮರ್ಮ ತಿಳಿದಿದ್ದು!
ಅಣಕ:
ಹೀಗೆಯೇ ಒಮ್ಮೆ ನನ್ನ ಚೀನೀ ಗೆಳತಿಯೊಂದಿಗೆ ಮಾತನಾಡುತ್ತ ಭಾರತೀಯರ ಜಾತಿಪದ್ದತಿ, ಒಳಪಂಗಡಗಳನ್ನು ಕುರಿತು ಮಾತನಾಡುತ್ತ, ಬಹುಶಃ ಈ ಪದ್ದತಿಗಳನ್ನು ತಮ್ಮ ’ಜನಾಂಗೀಯ ನೇಟಿವಿಟಿ’ಯನ್ನು ಉಳಿಸಿಕೊಳ್ಳಲು ಜಾರಿಗೊಳಿಸಿಕೊಂಡು ಅದನ್ನು ಇಂದಿಗೂ ಪಾಲಿಸುತ್ತಿರುವುದರಿಂದ, ಭಾರತೀಯರೇ ಅಧಿಕವಾಗಿ ತಮ್ಮ ’ಜನಾಂಗೀಯ ನೇಟಿವಿಟಿ’ಯನ್ನು ಕಾಪಾಡಿಕೊಂಡಿದ್ದಾರೆಂದು ನಾವು ಹೇಳಬಹುದೆಂದೆನು. ಅದನ್ನವಳು ಸಾರಾಸಗಟಾಗಿ ತಿರಸ್ಕರಿಸುತ್ತ "ನಾನು ಕಂಡುಕೊಂಡಂತೆ ಭಾರತೀಯರೇ ಅತಿ ಹೆಚ್ಚಾಗಿ ಮಿಶ್ರತಳಿಗಳಾಗಿರುವುದೆಂದೂ ನಮಗೆ ತಿಳಿದ ಕೆಲವು ಭಾರತೀಯ ಮಿತ್ರರನ್ನೇ ಹೆಸರಿಸಿ ಇವರೆಲ್ಲ ವಿವಿಧ ಆಕಾರ, ಚರ್ಮದ ಬಣ್ಣ, ಕೂದಲು ಪ್ರತಿಯೊಂದು ಚರ್ಯೆಗಳೂ ವಿಧವಿಧವಾಗಿದ್ದು, ಅವರೆಲ್ಲ ಬಿಳಿಯ, ಕರಿಯ, ಕೊಲ್ಲಿ, ಇನ್ನು ಯಾವ್ಯಾವುದೋ ತಳಿಗಳೆಲ್ಲದರ ಸಮ್ಮಿಳಿತವಾಗಿ ಕಾಣುತ್ತಾರೆಂದು ವರ್ಣಿಸಿ, ಅತ್ಯಂತ ಶುಭ್ರ ಮಾನವ ತಳಿಯೆಂದರೆ ಓರಿಯೆಂಟಲ್ ತಳಿಯೆಂದು ಹೇಳುತ್ತ "ಯಾರೊಬ್ಬರಾದರೂ ಗುಂಗುರು ಕೂದಲಿನ ಚೀನೀಯರನ್ನು ತೋರು"ಎಂದು ಸವಾಲೆಸೆದಳು. ಅಲ್ಲಿಯವರೆಗೂ ಭಾರತೀಯ ಪರಿಸರವಷ್ಟೇ ಕೆಟ್ಟುಹೋಗಿದೆಯೆಂದುಕೊಂಡು ಯೋಚಿಸುತ್ತದ್ದ ನನಗೆ ಭಾರತೀಯ ಮನುಜ ತಳಿಯ ಈ ಸಹಜ ಸತ್ಯವನ್ನು ತೋರಿ, ತುಂಟನಗೆಯ ಆ ಚೀನೀ ಪೋರಿ ನನ್ನ ಮರ್ಮಕ್ಕೇ ಕೈ ಹಾಕಿದ್ದಳು.
ಅದಕ್ಕೆ ನಾವುಗಳು ’ಭಾರೀ ಬೆರಿಕಿ ಅದೀವಿ!’ (ಉತ್ತರ ಕರ್ನಾಟಕದ ಶೈಲಿ)!
ವಿಶ್ವದೆಲ್ಲೆಡೆಯ ಜನರಿಲ್ಲಿಗೆ ವಲಸೆ ಬಂದು ಕಲೆತು, ಬೆರೆತು ವಿಶಿಷ್ಟ ಮನುಕುಲದ ಕಲಬೆರಕೆ ತಳಿಯೆಂಬಂತಿರುವ ಅಮೇರಿಕನ್ನರು ತಮ್ಮ ಪ್ರಾಣಿ, ವನ, ಗಿಡ, ಮರವಲ್ಲದೇ ನಿಸರ್ಗದ ಯಾವುದೇ ಜೀವಸಂಕುಲವಿರಲಿ ಅದನ್ನು ಅತ್ಯಂತ ನಿಷ್ಟವಾಗಿ ಕಲಬೆರಕೆಯಾಗದಂತೆ ಕಾಯ್ದು ಕಾಪಾಡುತ್ತಾರೆ. ಆದ್ದರಿಂದಲೇ ಇಲ್ಲಿನ ನಾಯಿ, ಬೆಕ್ಕು, ಹಸುಗಳೆಲ್ಲ ಇನ್ನೂ ಕಲಬೆರಕೆಯಾಗದೇ ಆದಷ್ಟೂ ತಮ್ಮ ಮೂಲ ವಂಶವಾಹಿನಿಯನ್ನು ಕಾಪಾಡಿಕೊಂಡಿವೆ. ಕೆಲವು ಕಲಬೆರಕೆ ನಾಯಿ, ಬೆಕ್ಕುಗಳಿದ್ದರೂ ಅವುಗಳನ್ನು ವಿವಿಧ ವಿಂಗಡನೆಗೊಳಪಡಿಸಿ ಪ್ರತ್ಯೇಕವಾಗಿಯೇ ನೋಡುತ್ತಾರೆ.
ನಿಮಗೆ ಇನ್ನೊಂದು ಘಟನೆಯನ್ನು ಹೇಳಬೇಕೆಂದರೆ, ಇಲ್ಲಿನ ಓರೆಗಾನ್ ರಾಜ್ಯದ ರೈತರಿಗೆ ಬೇಸಿಗೆಯಲ್ಲಿ ಕೊಲಂಬಿಯಾ ನದಿಯಿಂದ ಹೆಚ್ಚುವರಿಯಾಗಿ ನೀರನ್ನಿತ್ತು ೫ ಲಕ್ಷ ಎಕರೆ ಭೂಮಿಯನ್ನು ಅಧಿಕೃತವಾಗಿ ನೀರಾವರಿಗೆ ಒಳಪಡಿಸವ ಯೋಜನೆಯನ್ನು ಅಲ್ಲಿನ ಸರ್ಕಾರ ಹಾಕಿಕೊಂಡಿತು. ಅದರ ಅನುಷ್ಟಾನಕ್ಕೆ ಮುನ್ನ ಪರಿಸರದ ಮೇಲೆ ಪರಿಣಾಮವೇನಾಗಬಹುದೆಂದು ಸಂಶೋಧಿಸಿ, ಈ ಯೋಜನೆಯಿಂದ ಆ ನದಿಯಲ್ಲಿರುವ ಮೂಲ ಕಾರ್ಪ್ ಮೀನುಗಳ ಸಂತತಿಗೆ ಈ ಯೋಜನೆ ಮಾರಕವಾಗುತ್ತದೆಂದು ಯೋಜನೆಯನ್ನು ಕೈಬಿಟ್ಟಿತು.
ಇದೆಲ್ಲವನ್ನು ಏಕೆ ಹೇಳಿದೆನೆಂದರೆ, ಇಂದು ಭಾರತದ ಜೀವಸಂಕುಲದ ಹಲವಾರು ಪ್ರಭೇಧಗಳು ನಾಮಾವಶೇಷವಾಗಿವೆ ಮತ್ತು ಆಗುತ್ತಲಿವೆ ಅಥವಾ ತಮ್ಮ ಮೂಲ ಸ್ವರೂಪವನ್ನು ಕಳೆದುಕೊಂಡು ಕಲಬೆರಕೆಗೊಳ್ಳುತ್ತಿವೆ.
ಗಿಡ, ಮರ, ಕಲ್ಲು, ಬೆಟ್ಟ, ಎಲೆ, ಹೂ, ಕಾಯಿಗಳೆಲ್ಲವೂ ಪೂಜ್ಯ, ಪವಿತ್ರವೆಂದು ನಿಸರ್ಗವನ್ನೇ ಪೂಜಿಸುತ್ತಿದ್ದ ಭಾರತೀಯ, ನವನಾಗರೀಕತೆಯ ಶಿಕ್ಷಣವನ್ನು ಪಡೆಯುತ್ತ ಉನ್ನತಿ ಹೊಂದಿ ತನ್ನ ಸಂಸ್ಕೃತಿಯ ಸಂಸ್ಕಾರವನ್ನರಿಯದೆ ಇಂದು ಹೀಗೆ ಪೂಜಿಸುವುದೆಲ್ಲ ಮೌಢ್ಯವೆಂದು ತನ್ನ ಬೇರುಗಳನ್ನು ಕಡಿದುಕೊಳ್ಳುತ್ತ ಮರೀಚಿಕೆಯ ಬೆನ್ನು ಬಿದ್ದಿದ್ದಾನೆ. ಮಲ್ಲಿಗೆ, ಸಂಪಿಗೆ, ಹೂವಮ್ಮ, ಪೂವಮ್ಮ, ಕನಕಾಂಬರಿ, ಪಾರಿಜಾತ, ಎಂಬೆಲ್ಲ ಪರಿಸರ ಸಂಬಂಧಿ ಹೆಸರುಗಳಿಗೆ ತಿಲಾಂಜಲಿಯಿತ್ತು, ನತಾಷಾ, ಬಿಪಾಸಾ, ಕರಿಷ್ಮಾ, ರೀಟಾ, ಎಂದೆಲ್ಲ ಮಿಂಚುಳ್ಳಿಗಳಾಗುತ್ತಿದ್ದಾವೆ ನಮ್ಮ ಹೆಣ್ಣುಗಳು. ಇನ್ನು ಗಂಡಸರು ಕಾಡಪ್ಪ, ಅಡವಿಯೆಪ್ಪ, ಕಲ್ಲಪ್ಪ, ಬಸವಣ್ಣ, ಹುಲಿಯಪ್ಪ, ಕರಡೆಪ್ಪ ಎಂಬ ಪರಿಸರಸ್ನೇಹೀ ಹೆಸರುಗಳಿಂದ ಬಹುದೂರ ಸಾಗಿದ್ದಾರೆ. ಪ್ರಕೃತಿಯೊಂದಿಗೆ ಪ್ರಕೃತಿಯಾಗಿ ಹಾಸುಹೊಕ್ಕಾಗಿ ಬಾಳುವುದು ನಾಗರೀಕತೆಯೋ, ಪರಿಸರಕ್ಕೆ ವಿರುದ್ಧವಾಗಿ ನಡೆದು ವಿಕೋಪಗಳನ್ನು ಸೃಷ್ಟಿಸುವುದು ನಾಗರೀಕತೆಯೋ ಅರಿಯದಾಗಿದೆ.
ನಮ್ಮ ಪೂರ್ಣಚಂದ್ರ ತೇಜಸ್ವಿಯವರು ಹೇಳಿದಂತೆ ನಮ್ಮ ನದಿಗಳೆಲ್ಲ ಚರಂಡಿಗಳಾಗಿ ಅಲ್ಲಿ ಯಾವ್ಯಾವ ಜಾತಿಯ ಮೀನುಗಳಿದ್ದವೋ ಬಲ್ಲವರ್ಯಾರು? ಸುಮ್ಮನೆ ಅಲ್ಲಲ್ಲಿ ಕೇಳರಿತ ಕತೆಗಳ ಆಧಾರದ ಮೇಲೆ ನಮ್ಮ ನದಿಯಲ್ಲಿರಬಹುದಾಗಿದ್ದ ಮೀನುಗಳ ತಳಿಗಳನ್ನು ದಾಖಲಿಸಿ ಅವುಗಳಲ್ಲಿ ಯಾವ್ಯಾವು ಅಳಿಸಿಹೋಗಿದ್ದಾವೆಂದು ಕಂಡುಕೊಳ್ಳಬೇಕಾದ ಪರಿಸ್ಥಿತಿ ನಮ್ಮ ಹೊಣೆಗೇಡಿ ನಾಯಕರುಗಳ ಸ್ವಾತಂತ್ರ್ಯದ ಪರಿಕಲ್ಪನೆಯ ದೆಸೆಯಿಂದ ಬಂದೊದಗಿದೆ.
ಈ ನಿಟ್ಟಿನಲ್ಲಿ ರಾಮಚಂದ್ರಾಪುರದ ಸ್ವಾಮೀಜಿಯೋರ್ವರು ಪರಿಸರ ಸಂರಕ್ಷಣೆಯ ದೃಷ್ಟಿಯಿಂದಲ್ಲದಿದ್ದರೂ ಧಾರ್ಮಿಕ ದೃಷ್ಟಿಯಿಂದಲಾದರೂ ಸ್ಥಳೀಯ ಗೋ ತಳಿಯನ್ನು ರಕ್ಷಿಸುತ್ತಿರುವುದು ಸ್ತುತ್ಯಾರ್ಹ. ಆದರೆ ಪೂಜ್ಯನೀಯವಲ್ಲದ, ಯಾವುದೇ ಧಾರ್ಮಿಕ ಕವಚವಿಲ್ಲದ ಅಸಂಖ್ಯಾತ ಭಾರತೀಯ ಜೀವ, ಸಸ್ಯ ಸಂಕುಲಗಳನ್ನು ರಕ್ಷಿಸುವವರ್ಯಾರು?
ಹಿಂದೆಲ್ಲ ಬೇಲಿ ಸಾಲಿನಲ್ಲಿ, ಕುರುಚಲು ಕಾಡುಗಳಲ್ಲಿ ಹೇರಳವಾಗಿ ಕಂಡುಬರುತ್ತಿದ್ದ ಬಾರೆ, ಕಾರೆಯಂತಹ ಕಾಡುಹಣ್ಣಿನ ಗಿಡಗಳು; ಮುಳ್ಳುಬೆಂಡೆ, ಮುಳ್ಳುಬದನೆ, ತೊಂಡೆಯಂತಹ ತರಕಾರಿ ಸಸ್ಯಗಳು; ಮುತ್ತುಗ, ಜಾಲಿ, ಮುರುಗಲದಂತಹ ಚಿಕ್ಕ ಮರಗಳು ಇಲ್ಲವಾಗಿ ಇವುಗಳ ಸ್ಥಾನವನ್ನು ಲಂಟಾನ, ಪಾರ್ಥೇನಿಯಮ್ ಮತ್ತು ನೀಲಗಿರಿಯಂತಹ ವಿದೇಶೀ ತಳಿಗಳು ಬದಲಾಯಿಸುತ್ತಿವೆ. ಪರಿಸರ ಸಂರಕ್ಷಣೆಯೆಂದರೆ ಹಸಿರು ಬೆಳೆಸುವುದೆಂದುಕೊಂಡಿರುವ ನಮ್ಮ ಅರಣ್ಯ ಇಲಾಖೆ ಪರಿಸರದ ಆಳ ಪರಿಜ್ಞಾನವಿಲ್ಲದೆ ಸಾಗುವಾನಿ, ಬೀಟೆ, ಮಾವು, ಹಲಸು, ಮತ್ತಿತರೆ ಅತ್ಯಂತ ಮಲೆನಾಡ ತಳಿಗಳೆನ್ನಬಹುದಾದ ಮರಗಳನ್ನು ಅಲ್ಲಲ್ಲಿ ಅಕೇಶಿಯಾ, ನೀಲಗಿರಿ, ಸಿಲ್ವರ್, ಆಸ್ಟ್ರೇಲಿಯನ್ ಯೂಕಲಿಪ್ಟಸ್ ಮುಂತಾದ ವಿದೇಶೀ ತಳಿಗಳಿಂದ ಕಾಡು ಅಳಿದ ಮಲೆನಾಡ ಕೆಲ ಪ್ರದೇಶಗಳಲ್ಲಿ ಬದಲಾಯಿಸುತ್ತಿದೆ. ಖಾಲಿ ಪ್ರದೇಶಗಳಲ್ಲಿ ಶೀಘ್ರವಾಗಿ ಹಸಿರು ತುಂಬಿ ಜನಮನ್ನಣೆ ಗಳಿಸಲೋ, ಸರ್ಕಾರೀ ಯಂತ್ರವನ್ನು ಸಂತೃಪ್ತಗೊಳಿಸಲೋ ಒಟ್ಟಾರೆ ಈ ರೀತಿಯ ದೇಶೀ ತಳಿಗಳನ್ನು ಬದಲಾಯಿಸುತ್ತ ಮುಂದೆ ಮಲೆನಾಡನ್ನೆಲ್ಲ ಬೆರಕೆನಾಡನ್ನಾಗಿ ಪರಿವರ್ತಿಸುವರೇನೋ!
ನಮ್ಮ ಭೌಗೋಳಿಕ ಪರಿಸರದ ಒಂದು ಸ್ಪಷ್ಟ ರೂಪುರೇಷೆಯಿಲ್ಲದೆ, ಆಳ ಅಭ್ಯಾಸವಿಲ್ಲದೆ ಎಡಬಿಡಂಗಿಯಂತೆ ಯೋಜನೆಗಳನ್ನು ಹಾಕಿಕೊಳ್ಳುತ್ತಿರುವ ನಮ್ಮ ಅರಣ್ಯ ಇಲಾಖೆಗಳ ಮತ್ತು ನಮ್ಮ ದಿಕ್ಕೆಟ್ಟ ರೈತರ ದೆಸೆಯಿಂದಲೇ ಇಂದು ಬಯಲು ಸೀಮೆಯ ಬೆಳೆಗಳಾದ ತೊಗರಿ, ಮೆಕ್ಕೆಜೋಳ, ಮತ್ತಿತರೆ ಬೆಳೆಗಳನ್ನು ಮಲೆನಾಡಿನಲ್ಲಿ ಬೆಳೆಯುವ ಪರಿಸ್ಥಿತಿ ಬಂದಿರುವುದು ಮತ್ತು ಬರುತ್ತಿರುವುದು.
ಮೊದಲೆಲ್ಲಾ ಆಯುರ್ವೇದ ಔಷಧಿಗಳಿಗೆ ಕಾಡು ಹೊಕ್ಕು ಈ ಸಸ್ಯಮೂಲಿಕೆಗಳನ್ನು ತರುತ್ತಿದ್ದರೆ, ಈಗ ಅವುಗಳೆಲ್ಲ ನಮ್ಮ ನಿಸರ್ಗದಿಂದ ಕಣ್ಮರೆಯಾಗಿ ನಮ್ಮ ಮಾದರೀ ರೈತರು ಅಶ್ವಗಂಧಿ, ತುಂಬೆ, ಆನೆಗಡ್ಡೆ, ಅಮೃತಬಳ್ಳಿ, ಇನ್ನು ಮುಂತಾದ ಕಾಡುಗಿಡಗಳನ್ನು ಬೇಸಾಯಬೆಳೆಗಳಾಗಿ ಬೆಳೆಯುವಂತಹ ಪರಿಸ್ಥಿತಿ ಸೃಷ್ಟಿಯಾಗಿರುವುದು ಪರಿಸರ ನಾಶದ ಕರೆಗಂಟೆಯೆಂಬ ಪರಿಜ್ಞಾನವೂ ನಮ್ಮವರಿಗಿಲ್ಲ.
ಪರಿಸರ ಸಂರಕ್ಷಣೆಯ ಸಮಗ್ರತೆ, ಆಳ, ಮುನ್ನೋಟಗಳ ಕಿಂಚಿತ್ತೂ ಪರಿಜ್ಞಾನವಿಲ್ಲದ ಇಲಾಖೆಗಳು, ಸರ್ಕಾರಗಳು ಬೆಂಗಳೂರನ್ನು ಸಿಂಗಾಪುರವನ್ನು ಮಾಡಿದಂತೆ ನಮ್ಮ ಪರಿಸರವನ್ನು ಮಂಗಳನನ್ನಾಗಿ ಮಾಡುವತ್ತ ದಾಪುಗಾಲಿಡುತ್ತಿದ್ದಾರೆ.
ಹುಚ್ಚು ಅಮೇರಿಕನ್ನರು ಮಂಗಳನಲ್ಲಿಗೆ ಹೋಗುವತ್ತ ಯೋಚಿಸುತ್ತಿದ್ದರೆ, ಜಾಣ ಭಾರತೀಯರು ಮಂಗಳನನ್ನೇ ಭಾರತದಲ್ಲಿ ಸೃಷ್ಟಿಸುತ್ತಿದ್ದಾರೆ!
ಒಮ್ಮೊಮ್ಮೆ ಗಹನವಾಗಿ ಯೋಚಿಸಿದಾಗ, ಸ್ವತಂತ್ರ ಭಾರತದ ಧೀರ್ಘ ರೂಪುರೇಷೆಗಳಿಲ್ಲದೆ, ಸಮಗ್ರ ಅಭಿವೃದ್ಧಿಯ ಸ್ಪಷ್ಟ ಚಿತ್ರಣವೂ ಇಲ್ಲದೆ, ಕಠೋರ ಸತ್ಯಗಳನ್ನು ಹುಂಬ ಭಾವನೆಗಳಿಂದ ಮರೆಮಾಚಿ, ನಮ್ಮ ಹಿರಿಯರು ಭಾವುಕರಾಗಿ ಸ್ವಾತಂತ್ರ್ಯಕ್ಕೆ ಹೋರಾಡಿ ಸ್ವಾತಂತ್ರ್ಯ ಗಳಿಸಿದ್ದು, ಮಿಲನ ಮುನ್ನವೇ ಶೀಘ್ರಸ್ಖಲನವಾದಂತಾಗಿ ನಮ್ಮ ಸ್ವಾತಂತ್ರ್ಯ ನಿರೀಕ್ಷಿತ ಫಲ ನೀಡಲಿಲ್ಲವೇನೋ ಅನ್ನಿಸುತ್ತದೆ.
ಹಾಂ! ನಮ್ಮ ಮಠಾಧೀಶ್ವರರೂ, ಪೀಠಾಧಿಪತಿಗಳೂ ಮೂಲಿಕೆ ವನ, ಬೀಜ ರಕ್ಷಣೆ, ವನ್ಯಧಾಮ, ಪರಿಸರ ರಕ್ಷಣೆಗೆ ಹಠಾತ್ತಾಗಿ ಮುಂದಾಗಿ ಈ ವಿಷಯಗಳಲ್ಲಿ ಕೈಂಕರ್ಯರಾಗಿರುವುದನ್ನು ಕಂಡು, ಇದು ಅವರುಗಳ ಇನ್ನೊಂದು ’ಪ್ರಚಾರಪ್ರಿಯತೆ’ ತೀಟೆಯೆಂಬುದು ಮನವರಿಕೆಯಾಗಿದ್ದರೂ ಅಷ್ಟಾದರೂ ಒಂದು ಒಳ್ಳೆಯ ಕಾರ್ಯವನ್ನು ಈ ಪುಣ್ಯಾತ್ಮರು ಮಾಡುತ್ತಿದ್ದಾರಲ್ಲ ಎಂದು ಸಮಾಧಾನಗೊಂಡಿದ್ದೆ. ಆದರೆ ಇವರ ಈ ಕೈಂಕರ್ಯ ಕೇಂದ್ರ ಸರ್ಕಾರದ ’ಇಂಡಿಯನ್ ಕೌನ್ಸಿಲ್ ಫಾರ್ ಅಗ್ರಿಕಲ್ಚರ್’ ನ ಸಂಶೋಧನಾ ನಿಧಿಯನ್ನು ’ಸ್ವಾಹಾ’ ಮಾಡಲು ಎಂದು ನನ್ನ ಕೃಷಿ ವಿಜ್ಞಾನಿ ಮಿತ್ರರು ಇತ್ತೀಚೆಗೆ ತಿಳಿಸಿದಾಗಲೇ ಇವರ ಮರ್ಮ ತಿಳಿದಿದ್ದು!
ಅಣಕ:
ಹೀಗೆಯೇ ಒಮ್ಮೆ ನನ್ನ ಚೀನೀ ಗೆಳತಿಯೊಂದಿಗೆ ಮಾತನಾಡುತ್ತ ಭಾರತೀಯರ ಜಾತಿಪದ್ದತಿ, ಒಳಪಂಗಡಗಳನ್ನು ಕುರಿತು ಮಾತನಾಡುತ್ತ, ಬಹುಶಃ ಈ ಪದ್ದತಿಗಳನ್ನು ತಮ್ಮ ’ಜನಾಂಗೀಯ ನೇಟಿವಿಟಿ’ಯನ್ನು ಉಳಿಸಿಕೊಳ್ಳಲು ಜಾರಿಗೊಳಿಸಿಕೊಂಡು ಅದನ್ನು ಇಂದಿಗೂ ಪಾಲಿಸುತ್ತಿರುವುದರಿಂದ, ಭಾರತೀಯರೇ ಅಧಿಕವಾಗಿ ತಮ್ಮ ’ಜನಾಂಗೀಯ ನೇಟಿವಿಟಿ’ಯನ್ನು ಕಾಪಾಡಿಕೊಂಡಿದ್ದಾರೆಂದು ನಾವು ಹೇಳಬಹುದೆಂದೆನು. ಅದನ್ನವಳು ಸಾರಾಸಗಟಾಗಿ ತಿರಸ್ಕರಿಸುತ್ತ "ನಾನು ಕಂಡುಕೊಂಡಂತೆ ಭಾರತೀಯರೇ ಅತಿ ಹೆಚ್ಚಾಗಿ ಮಿಶ್ರತಳಿಗಳಾಗಿರುವುದೆಂದೂ ನಮಗೆ ತಿಳಿದ ಕೆಲವು ಭಾರತೀಯ ಮಿತ್ರರನ್ನೇ ಹೆಸರಿಸಿ ಇವರೆಲ್ಲ ವಿವಿಧ ಆಕಾರ, ಚರ್ಮದ ಬಣ್ಣ, ಕೂದಲು ಪ್ರತಿಯೊಂದು ಚರ್ಯೆಗಳೂ ವಿಧವಿಧವಾಗಿದ್ದು, ಅವರೆಲ್ಲ ಬಿಳಿಯ, ಕರಿಯ, ಕೊಲ್ಲಿ, ಇನ್ನು ಯಾವ್ಯಾವುದೋ ತಳಿಗಳೆಲ್ಲದರ ಸಮ್ಮಿಳಿತವಾಗಿ ಕಾಣುತ್ತಾರೆಂದು ವರ್ಣಿಸಿ, ಅತ್ಯಂತ ಶುಭ್ರ ಮಾನವ ತಳಿಯೆಂದರೆ ಓರಿಯೆಂಟಲ್ ತಳಿಯೆಂದು ಹೇಳುತ್ತ "ಯಾರೊಬ್ಬರಾದರೂ ಗುಂಗುರು ಕೂದಲಿನ ಚೀನೀಯರನ್ನು ತೋರು"ಎಂದು ಸವಾಲೆಸೆದಳು. ಅಲ್ಲಿಯವರೆಗೂ ಭಾರತೀಯ ಪರಿಸರವಷ್ಟೇ ಕೆಟ್ಟುಹೋಗಿದೆಯೆಂದುಕೊಂಡು ಯೋಚಿಸುತ್ತದ್ದ ನನಗೆ ಭಾರತೀಯ ಮನುಜ ತಳಿಯ ಈ ಸಹಜ ಸತ್ಯವನ್ನು ತೋರಿ, ತುಂಟನಗೆಯ ಆ ಚೀನೀ ಪೋರಿ ನನ್ನ ಮರ್ಮಕ್ಕೇ ಕೈ ಹಾಕಿದ್ದಳು.
ಅದಕ್ಕೆ ನಾವುಗಳು ’ಭಾರೀ ಬೆರಿಕಿ ಅದೀವಿ!’ (ಉತ್ತರ ಕರ್ನಾಟಕದ ಶೈಲಿ)!
Subscribe to:
Posts (Atom)