Selective ಹೋರಾಟಗಳು

 ಹದಿನೆಂಟನೇ ಶತಮಾನದ ಫ್ರೆಂಚ್ ಕ್ರಾಂತಿಯ ಸಂದರ್ಭದಲ್ಲಿ ಬಹುಪಾಲು ಬುದ್ಧಿಜೀವಿಗಳು ತಟಸ್ಥರಾಗಿದ್ದರೂ ಬ್ಯಾರನ್ ಮಾಂಟೆಸ್ಕ್ಯೂ, ವಾಲ್ಟೇರ್, ಜೀನ್ ರೋಸ್ಯು ಅಂತಹ ತತ್ವಜ್ಞಾನಿ ಸಾಹಿತಿಗಳು ಫ್ರೆಂಚ್ ಜಾಗೃತಿಗೆ ಕಾರಣರಾಗಿದ್ದರು.


ಹಿಟ್ಲರ್ ಕಾಲದ ಜರ್ಮನಿಯಲ್ಲಿ ಯಹೂದಿಗಳ ರಕ್ಷಣೆಗೆ ಮುಂದಾಗಿದ್ದ ಮಾರ್ಥಾ ವೇಟ್ಸ್ಟಿಲ್ ಶಾರ್ಪ್ ದಂಪತಿ, ವೇರಿಯನ್ ಫ್ರೈ, ಜೀನೋ ಬರ್ತಾಲಿ, ಜಾನ್ ಸ್ವಾರ್ಟರ್ನ್ಜಿಕ್, ಜಾನ್ ಕರಾಸ್ಕಿ ಮುಂತಾದವರ ಬರಹ ಮತ್ತು ವರದಿಗಳಲ್ಲದೆ ಅವರು ಖುದ್ದು ರಿಸ್ಕ್ ತೆಗೆದುಕೊಂಡು ಯಹೂದಿಗಳನ್ನು ರಕ್ಷಿಸಿದ್ದರು.


ರಷ್ಯನ್ ಕ್ರಾಂತಿಯ ಉದಾರವಾದಿಗಳೆಂದು ಗುರುತಿಸಿಕೊಂಡಿದ್ದ intelligentsia ಗುಂಪಿನ ಆಂಟಾನ್ ಚೆಕೋವ್, ವಾಸಿಲಿ ಜುಕೊವ್ಸ್ಕಿ, ಅಲೆಕ್ಸಾಂಡರ್ ರಾಡಿಷ್ಚೆವ್, ಆಂಡ್ರೆ ಸಕರೋವರಂತಹ ಬುದ್ದಿಜೀವಿಗಳಲ್ಲದೆ ಲಿಯೋ ಟಾಲ್ಸ್ಟಾಯ್ ಅಂತಹ ಸಾಹಿತಿಗಳು ಸಹ ಕ್ರಾಂತಿಯ ಮೇಲೆ ಗಾಢ ಪ್ರಭಾವವನ್ನು ಬೀರಿದ್ದರು.


ಸಲ್ಮಾನ್ ರಶ್ದಿ ಅವರು ತಮ್ಮ ಕೃತಿ "ಸಟಾನಿಕ್ ವರ್ಸಸ್"ನಿಂದಾಗಿ ಫತ್ವಾಕ್ಕೊಳಗಾದಾಗ ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬೆಂಬಲಿಸಿದ್ದ ಭಾರತೀಯ ಸಾಹಿತ್ಯ ವಲಯವು ಚಾರ್ಲಿ ಹೆಬ್ಡೋ ಅವರ ಅಭಿವ್ಯಕ್ತಿ ಸ್ವಾತಂತ್ರ್ಯದ ಕಾಲಕ್ಕಾಗಲೇ ಓಲೈಕೆಯ ಜಾಣ ಪ್ರಭಾವಕ್ಕೊಳಗಾಗಿ ಮೌನವಾಗಿತ್ತು. ರಶ್ದಿ ಫತ್ವಾ ವಿರೋಧಿಸಿದ್ದ ಸಾಹಿತಿಗಳೇ ಹೆಬ್ಡೋ ಫತ್ವಾಕ್ಕೆ ಮೌನ ವಹಿಸಿದ್ದರು ಎಂಬುದು ಗಮನಾರ್ಹ.  ಈ ಮಧ್ಯೆ ಬಂದ ತಸ್ಲೀಮಾ ನಸ್ರೀನ್ ಅವರಿಗೆ ಭಾರತೀಯ ಜನ ಸಾಮಾನ್ಯರ ಒಕ್ಕೊರಲಿನ ಬೆಂಬಲ ಸಿಕ್ಕರೂ ಭಾರತೀಯ ಸಾಹಿತಿಗಳ ಬೆಂಬಲ ರಶ್ದಿ ಕಾಲಕ್ಕಿಂತ ಇಲ್ಲವೇ ಇಲ್ಲ ಎನ್ನುವಷ್ಟು ಇಳಿಮುಖಗೊಂಡಿತ್ತು ಎಂಬುದೂ ಗಮನಾರ್ಹ! ಮಾತನಾಡಲೇಬೇಕಾದಾಗ ಇವರೆಲ್ಲಾ ಜಾಣಮೌನಕ್ಕೆ ಜಾರಿದ್ದರು.


ಭಾರತೀಯ ಉದಾರವಾದದ ಆಯ್ದ ಹೋರಾಟಗಳ, ಅತೀವ ಓಲೈಕೆಯ ಫಲವೇ ಇಂದಿನ ಹಿಜಾಬ್-ಕೇಸರಿಶಾಲು, ಹಲಾಲ್-ಜಟ್ಕಾ, ಜಾತ್ರೆ-ಉರ್ಸ್ ವ್ಯಾಪಾರಗಳ ಜಂಜಾಟಕ್ಕೆ ಸ್ಫೂರ್ತಿ! ರಶ್ದಿ ಕಾಲದಲ್ಲಿ ಧರ್ಮಾತೀತವಾಗಿದ್ದ ಎಡಪಂಥೀಯ ಹೋರಾಟವು ಹೆಬ್ಡೋ ಕಾಲಕ್ಕೆ ಧರ್ಮಾಧೀನವಾಗಿದೆ. ಹಾಗೆಯೇ ಧಾರ್ಮಿಕ ಅವಹೇಳನವೆನಿಸಿದ್ದ ಹುಸೇನರ ಕಲೆಯ ಎಡದ ಪುರಸ್ಕಾರ ಇಂದು ಫೋಟೋಶಾಪ್ ಕಲೆಯನ್ನು ಪರೋಕ್ಷವಾಗಿ ಪ್ರಚೋದಿಸಿ ಪ್ರೋತ್ಸಾಹಿಸಿ ಮುನ್ನೆಲೆಗೆ ತಂದಿದೆ.


ಜಾಗತಿಕವಾಗಿ ರೋಮನ್ ಸಾಮ್ರಾಜ್ಯದಲ್ಲಿ, ಯುರೋಪ್ ಕ್ರಾಂತಿಗಳಲ್ಲಿ, ಚೈನಾ ರಷ್ಯಾದಂತಹ ಕಮ್ಯುನಿಸ್ಟ್ ಆಡಳಿತಗಳಲ್ಲಿ, ಕಳೆದ ದಶಕದ ಈಜಿಪ್ಟ್ ಕ್ಷಿಪ್ರ ಕ್ರಾಂತಿಯಲ್ಲಿ ಸಹ ಅಭಿವ್ಯಕ್ತಿ ಸ್ವಾತಂತ್ರ್ಯದ ನಿಷ್ಪಕ್ಷಪಾತ ಹೋರಾಟಗಳ ಪ್ರಭಾವವನ್ನು  ಮನಗಾಣಬಹುದು. ಆದರೆ ಭಾರತದಲ್ಲಿ ಅದು selective ಹೋರಾಟವಾಗಿ ರೂಪುಗೊಂಡು ದೇಶವನ್ನು ದುರಂತದೆಡೆ ತಳ್ಳಿದೆ. ಬಲಪಂಥೀಯರ ಇಂದಿನ "ಪ್ರತಿಕ್ರಿಯೆ"ಗೆ ಕ್ರಿಯಾಶೀಲ ಎಡಪಂಥವು ಭದ್ರ ಬುನಾದಿಯನ್ನು ಹಾಕಿಕೊಟ್ಟಿದೆ. ಓಲೈಕೆ (appeasement), ಊಳಿಗಮಾನ ಪ್ರಜಾಪ್ರಭುತ್ವ (Feudal Democracy), ಮತ್ತು ಅಧಿನಾಯಕತ್ವ (Hegemony)ಗಳು ಒಂದು ದೇಶವನ್ನು ಏನು ಮಾಡಬಲ್ಲವು ಎಂಬುದಕ್ಕೆ ಇಂದಿನ ಏಕೈಕ ಉದಾಹರಣೆ, ಭಾರತ! 


ಇನ್ನು ಹೀಗಿದ್ದೂ ಭಾರತ ಮಿಂಚುತ್ತಿರುವುದೇಕೆ? (ಜನ)ಸಂಖ್ಯಾಕಾರಣ! ಇದನ್ನು ಮನಗಾಣಬೇಕೆ, ಓದಿ ಬಸವರಾಜಕಾರಣ! ;) 


BTW, Use your powerful left brain wisely and left hand cleanly!


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

ಸಂವಿಧಾನ structure

 ಭಾರತ ಇಂದು ಎಡ ಬಲ ನಡುವೆ ಇಬ್ಭಾಗವಾಗಿರುವಾಗ

ಭಾರತೀಯ ಎಡ ಬಲ ಚಿಂತಕರು, ರಾಜಕಾರಣಿಗಳು, ನಾಗರೀಕರು ಅಸಲಿಗೆ ನೈಜ ಕಾಳಜಿಯಿದ್ದರೆ ಚಿಂತಿಸಬೇಕಾದ್ದು ದೇಶ -> ಉದ್ಘೋಷ -> ಸಂವಿಧಾನ -> ಕಾನೂನು -> ಆಡಳಿತ.


ಒಂದು ಕಂಪೆನಿ ಹೇಗೆ ಒಂದು ಮಿಷನ್ ಸ್ಟೇಟ್ಮೆಂಟ್ ಹೊಂದಿ ಅದಕ್ಕೆ ತಕ್ಕಂತೆ KPI ಗಳನ್ನು ಹಾಕಿಕೊಂಡು ಅದರ ಅನುಷ್ಠಾನಕ್ಕೆ ನಿಯಮಗಳನ್ನು, ಗುರಿಗಳನ್ನು ಹೊಂದಿರುತ್ತದೋ ಅದೇ ರೀತಿಯಲ್ಲಿ ಒಂದು ದೇಶ ಸಹ. ಹಾಗೆ ನೋಡಿದಾಗ ನಮ್ಮದು:


ದೇಶ - ಭಾರತ (Entity)

ಉದ್ಘೋಷ - ಸತ್ಯಮೇವ ಜಯತೆ (Mission)

ಸಂವಿಧಾನ - ಭಾರತೀಯ ಸಂವಿಧಾನ (KPI)

ಕಾಯ್ದೆ - ಇಂಡಿಯನ್ ಪೀನಲ್ ಕೋಡ್ ಯಾನೆ ಐಪಿಸಿ, ಆಸ್ತಿ ಕಾಯ್ದೆ, ಕಾಂಟ್ರಾಕ್ಟ್ ಕಾಯ್ದೆ, ಟ್ರಸ್ಟ್ ಕಾಯ್ದೆ, ಕೌಟುಂಬಿಕ ಕಾಯ್ದೆ, ಕಾರ್ಮಿಕ ಕಾಯ್ದೆ ಇತ್ಯಾದಿ (Goals, Regulations, Tool, Governance and Plans aligned to KPIs)

ಆಡಳಿತ - ಸಾಂವಿಧಾನಿಕ ಪ್ರಜಾಪ್ರಭುತ್ವ (Execution)


ಹೀಗೆ ಯಾವುದೇ ದೇಶದ ಸಂವಿಧಾನವು ಆ ದೇಶದ ಮೂಲಭೂತ ಕಾನೂನು ಆಗಿರುತ್ತದೆ. ಅದು ತನ್ನ ನಾಗರಿಕ ಸಂಹಿತೆಯನ್ನು ಪ್ರತಿನಿಧಿಸುತ್ತದೆ. ಅಲ್ಲದೆ ಆ ದೇಶದ ಆಡಳಿತವು ಜಾರಿಗೊಳಿಸುವ ಪ್ರತಿಯೊಂದು ಕಾನೂನುಗಳು ತನ್ನ ಸಂವಿಧಾನದ ಸಂಹಿತೆಯ ಪರಿಮಿತಿಗನುಗುಣವಾಗಿರಬೇಕು ಎಂದು ನಿರ್ದೇಶಿಸುತ್ತದೆ. ದೇಶದ ಎಲ್ಲಾ ಕಾನೂನುಗಳು ಸಂವಿಧಾನದ ಪರಿಮಿತಿಯೊಳಗಿರುವಂತೆ ನೋಡಿಕೊಳ್ಳುವುದು ಕೇಂದ್ರ ನ್ಯಾಯಾಂಗ ಸಮಿತಿಯ ಆದ್ಯ ಕರ್ತವ್ಯ. 


ಜಾಗತಿಕವಾಗಿ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಇಂತಹ ಸಾಂವಿಧಾನಿಕ ವ್ಯವಸ್ಥೆ ಇರುವಾಗ, ಪ್ರಪಂಚದ ಎಲ್ಲಾ ಸಂವಿಧಾನಗಳನ್ನೂ ಪರಾಮರ್ಶಿಸಿ ರಚಿಸಿರುವ ಭಾರತೀಯ ಸಂವಿಧಾನವನ್ನು ಭಾರತ ಹೇಗೆ ಅನುಷ್ಠಾನಗೊಳಿಸಿದೆ?


"ಸತ್ಯಮೇವಜಯತೆ" ಎಂಬ ಉದ್ಘೋಷ ಹೊತ್ತ ಭಾರತದ ಸಂವಿಧಾನ ಜನವರಿ ೨೬, ೧೯೫೦ ರಲ್ಲಿ ಅನುಷ್ಠಾನಕ್ಕೆ ಬಂದಿತು. ಜಗತ್ತಿನಲ್ಲೇ ಅತ್ಯಂತ ಉದ್ದದ ಸಂವಿಧಾನ ಎನಿಸಿರುವ ಭಾರತೀಯ ಸಂವಿಧಾನದ ಬಹುಪಾಲು ಆಡಳಿತಾತ್ಮಕ ಅಧ್ಯಾಯಗಳು "Government of India Act 1935" ನಿಂದ ನಕಲುಗೊಂಡಿದ್ದರೆ ಉಳಿದ ವಿಷಯಗಳನ್ನು ಪ್ರಪಂಚದ ಇತರೆ ಸಂವಿಧಾನಗಳಿಂದ ಪಡೆದುಕೊಳ್ಳಲಾಗಿದೆ. 


ಆದರೆ ಸಂವಿಧಾನಕ್ಕೆ ಮುಂಚೆಯೇ ಉರ್ಜಿತವಾಗಿದ್ದು ಮತ್ತು ಯಥಾವತ್ತಾಗಿ ಜಾರಿಯಿದ್ದ ಕಾಯ್ದೆಗಳು ಎಷ್ಟರ ಮಟ್ಟಿಗೆ ವಿಶ್ಲೇಷಣೆಗೊಂಡು ಸಂವಿಧಾನಕ್ಕೆ ಅದರ ರಚನೆಯಲ್ಲಿ ಸಂಯೋಜಿಸಲ್ಪಟ್ಟವು? ಅಥವಾ ನೂತನ ಸಂವಿಧಾನದ ಪರಿಮಿತಿಯೊಳಗೆ ಈ ಕಾಯ್ದೆಗಳು ಇರುವವು ಎಂದು ಹೇಗೆ ದೃಢೀಕರಿಸಲಾಯಿತು? 


ಹಾಗೆ ಜಾರಿಯಲ್ಲಿದ್ದ ಕ್ರಿಮಿನಲ್ ಕಾಯ್ದೆಗಳು ಬ್ರಿಟಿಷ್ ಭಾರತದಲ್ಲಿ ೧೮೬೨ ರಿಂದ ಐಪಿಸಿ ಕಾಯ್ದೆಗಳಾಗಿ ಜಾರಿಯಿದ್ದರೆ ಕಾಂಟ್ರಾಕ್ಟ್ ಕಾಯ್ದೆ ೧೮೭೨, ಆಸ್ತಿ ಕಾಯ್ದೆ ೧೮೮೨, ಟ್ರಸ್ಟ್ ಕಾಯ್ದೆ ೧೮೮೨, ಕೌಟುಂಬಿಕ ಕಾಯ್ದೆಯು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ ಎಂದು ೧೭೭೨ ರಿಂದಲೂ ಜಾರಿಯಲ್ಲಿವೆ. ಇನ್ನು ಕಾರ್ಮಿಕ ಕಾಯ್ದೆ, ತೆರಿಗೆ ಕಾಯ್ದೆ, ಕಂಪೆನಿ ಕಾಯ್ದೆಗಳು ಕಾಲಕ್ಕೆ ತಕ್ಕಂತೆ ಸ್ವತಂತ್ರ ಭಾರತದಲ್ಲಿ ರಚನೆಯಾಗಿವೆ.  


೨೦೧೯ರವರೆಗೆ ೭೮ ಬಾರಿ ವಿವಿಧ ಐಪಿಸಿ ಕಾಯ್ದೆಗಳು ತಿದ್ದುಪಡಿಗೊಂಡಿರುವಂತೆ ಸ್ವಾತಂತ್ರ್ಯಪೂರ್ವದ ಇತರೆ ಕಾನೂನುಗಳು ಸಹ ಕಾಲಕ್ಕೆ ತಕ್ಕಂತೆ ತಿದ್ದುಪಡಿಗಳನ್ನು ಹೊಂದಿದ್ದರೂ ಸಾಕಷ್ಟು ಮೂಲ ಸ್ವರೂಪಗಳು ಈ ಎಲ್ಲಾ ಕಾಯ್ದೆಗಳಲ್ಲಿ ಹಾಗೆಯೇ ಉಳಿದಿವೆ. ಆದರೆ ಮೂಲಭೂತವಾಗಿ ಈ ಎಲ್ಲಾ  ಸ್ವಾತಂತ್ರ್ಯಾಪೂರ್ವ ಮತ್ತು ಸ್ವಾತಂತ್ರೋತ್ತರ ಕಾನೂನುಗಳು ಸಂವಿಧಾನಕ್ಕನುಗುಣವಾಗಿ ಇರುವವೋ ಇಲ್ಲವೋ ಎಂದು ಯಾವುದಾದರೂ ಸಮಿತಿಗಳು ವರದಿ ಕೊಟ್ಟು ಪುರಸ್ಕರಿಸಿವೆಯೇ? 


ಸಂವಿಧಾನ ರಚನೆಯ ಕಾಲದಲ್ಲಿ ಪಿತ್ರಾರ್ಜಿತವಾಗಿ ಬಂದ ಈ ಬ್ರಿಟಿಷ್ ವಸಾಹತು ಕಾನೂನುಗಳು ಹೊಚ್ಚ ಹೊಸ ಪ್ರಜಾಪ್ರಭುತ್ವ ಭಾರತದ ಆಶಯಕ್ಕೆ ಮತ್ತು ಸಂವಿಧಾನಕ್ಕೆ ಹೊಂದುತ್ತವೆಯೇ ಎಂದು ಸಂವಿಧಾನ ರಚನೆಯ ತಂಡ, ಶಿಲ್ಪಿ, ಆಡಳಿತ ಕಂಡುಕೊಂಡಿತ್ತೆ??? ಗೊತ್ತಿಲ್ಲ. ಈವರೆಗಿನ ನನ್ನ ಶೋಧನೆಗೆ ಅಂತಹ ಸಂಗತಿ, ಮಾಹಿತಿ ಕಣ್ಣಿಗೆ ಬಿದ್ದಿಲ್ಲ. ನಾನಾಭಾಯ್ ಪಾಲ್ಕಿವಾಲಾರ we the people, we the nation ಪುಸ್ತಕಗಳು ಕೊಂಚ ಮಾಹಿತಿ ನೀಡಿದರೂ ಎಲ್ಲಾ ಕಾಯ್ದೆಗಳು ಪರಾಮರ್ಶನಗೊಂಡಿವೆ ಎಂದು ಖಚಿತಪಡಿಸವು.


ಒಂದು ವೇಳೆ ಸಮಿತಿಯೊಂದು ವರದಿ ಕೊಟ್ಟಿದ್ದರೂ ಅದು ಎಲ್ಲವನ್ನೂ ಪರಿಶೀಲಿಸಿತ್ತೆ? ಹಾಗೆ ಪರಿಶೀಲಿಸಿದ್ದರೆ ಮೋದಿ ಸರ್ಕಾರ ಇಂತಹ ಹತ್ತು ಹಲವಾರು ಕಾಯ್ದೆಗಳನ್ನು ಇತ್ತೀಚೆಗೆ ರದ್ದುಗೊಳಿಸುವ ಪ್ರಮೇಯಯೇ ಬರುತ್ತಿರಲಿಲ್ಲವಲ್ಲವೇ?! 


ಇವು ಓರ್ವ ಸಾಗರೋತ್ತರ  ಕುತೂಹಲಿ ನಾಗರಿಕನ ಪ್ರಶ್ನೆಗಳು.


ಆದರೆ ಅಂತಹ ಪ್ರಯತ್ನ ಆಗಿಯೇ ಇಲ್ಲವೇನೋ ಎನ್ನುವ ಸಂಶಯ ಸಾಕಷ್ಟು ಬಲವಾಗಿದೆ. ಏಕೆಂದರೆ ಸಂವಿಧಾನದ ಆಶಯಕ್ಕೂ ಮತ್ತು ಜಾರಿಯಲ್ಲಿರುವ ಕಾನೂನುಗಳ ನ್ಯಾಯ ನಿಯಮಕ್ಕೂ ಸಾಕಷ್ಟು ಅಭಾಸಗಳಿವೆ.


ಅಂತಹ ಒಂದು ಸಾಮಾನ್ಯ ಅಭಾಸದ ಉದಾಹರಣೆ ಹೀಗಿದೆ:


"ಸತ್ಯಮೇವ ಜಯತೆ" ಎಂಬ ಉದ್ಘೋಷ ಹೊತ್ತ ರಾಷ್ಟ್ರದ ಒಬ್ಬ ಘನವೆತ್ತ "ಜನ"ಪ್ರತಿನಿಧಿ ತನ್ನ ಸಂವಿಧಾನಕ್ಕೆ ವಿರುದ್ಧವಾಗಿ ಬಹುಪತ್ನಿತ್ವವನ್ನು ಪಾಲಿಸುತ್ತಿದ್ದರೆ ಅದನ್ನು ಆತನ ಪತ್ನಿಯರು ಮಾತ್ರ ಪ್ರಶ್ನಿಸಬೇಕೇ ಹೊರತು ಜನರು ಪ್ರಶ್ನಿಸುವಂತಿಲ್ಲ. ಇದು ಕೌಟುಂಬಿಕ ಕಾಯ್ದೆಯ ಒಂದು ನಿಯಮ. ಆ ಜನಪ್ರತಿನಿಧಿ ಜನರಿಂದಲೇ ಚುನಾಯಿತನಾಗಿದ್ದು, ಅಸಂವಿಧಾನಿಕ ನಡೆ ಹೊಂದಿದ್ದರೂ ಅದನ್ನು "ಜನ" ಪ್ರಶ್ನಿಸಲಾಗದಂತೆ ಈ ನಿಯಮ ಸಂವಿಧಾನಬಾಹಿರವಾಗಿದೆ. 


ಇಲ್ಲಿ ದೇಶದ ಮಿಷನ್ ಸ್ಟೇಟ್ಮೆಂಟ್ ಮತ್ತು ಸಂವಿಧಾನ ಎರಡನ್ನೂ ಈ ಕೌಟುಂಬಿಕ ಕಾಯ್ದೆ ಹೇಗೆ ಬಾಯಿ ಮುಚ್ಚಿಸಿದೆ ಎಂದು ಕಂಡುಕೊಳ್ಳಬಹುದು. ಇಂತಹ ಸಾವಿರಾರು ಅಭಾಸಗಳು ದೇಶ -> ಉದ್ಘೋಷ -> ಸಂವಿಧಾನ -> ಕಾನೂನು -> ಆಡಳಿತದಲ್ಲಿವೆ.


ಹೀಗಿದ್ದಾಗ ಸಂವಿಧಾನ ರಚನೆಯಲ್ಲಿ ಈ ಕಾಯ್ದೆಗಳನ್ನು ಗಮನದಲ್ಲಿಟ್ಟಕೊಳ್ಳಬೇಕಿತ್ತೋ ಅಥವಾ ಇದ್ದ ಕಾಯ್ದೆಗಳಿಗೆ ತಕ್ಕಂತೆ ಸಂವಿಧಾನ ರಚಿಸಬೇಕಿತ್ತೋ?!? ಐಪಿಸಿ ಸೇರಿ ಎಲ್ಲಾ ಸಮಗ್ರ ಕಾಯ್ದೆಗಳು ಸಮಗ್ರವಾಗಿ ತಿದ್ದುಪಡಿಯಾಗಬೇಕೊ ಅಥವಾ ಸಂವಿಧಾನ ಸಮಗ್ರವಾಗಿ ತಿದ್ದುಪಡಿಯಾಗಬೇಕೊ? ಇಂದು ಸಂವಿಧಾನ ಧರ್ಮಗ್ರಂಥವಾಗಿರುವಾಗ ಇಂತಹ ಆಮೂಲಾಗ್ರ ತಿದ್ದುಪಡಿ ಸಾಧ್ಯವೇ?!?


ಇತಿ ಸಂವಿಧಾನ ಸಂಪ್ರತಿ ಹೀ!!!!


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ