ತಿಳಿವಳಿಕೆಯಿರದ ತೆಳುವಳಿಕೆಗಳು
ರಂಗಕ್ಕೇರಿದೆಡೆ ದಿಟವು ಸಟೆಯಾಗುದು, ಪಾಷಾಣ ಶರ್ಕರವಪ್ಪುದು, ನಿಕೃಷ್ಟ ರೋಮ ಯಮಪಾಶವಪ್ಪುದು!
ಭ್ರಮೆಯು ಪಿತೂರಿಯಪ್ಪುದು,
ರಾಸಭ ಕ್ಷೀರ ಅಮೃತವಪ್ಪುದು,
ಕೂಪವೇ ಕಪೋಲ ಸ್ವರ್ಗವಪ್ಪುದಲ್ಲದೆ ಭೂಮಂಡಲದೆ ಮಿಗಿಲಪ್ಪುದು!
ಜಗದಳಲ ಪಿಡುಗ ಪಿತೂರಿಯೆಂಬ ಪಿಡುಗಿನಾ ಕೂಪದ ಕುಂಞಿ, ನಿವಾರಣೆಗೆ ದಾನವ ಮಾಡಿದ ದಾನವೀರನ ದಾನವನೆನ್ನುವ ಸನ್ನಿ,
ಹುಸಿ ಭ್ರಮೆಯ ಹಿರಿಮೆಯ ಗರಿ ತೊಟ್ಟ ಮುನ್ನಿಗಳು ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ, ಪಾತಾಳದಿಂದತ್ತ ಬ್ರಹ್ಮಾಂಡದಿತ್ತಿತ್ತ ಲಿಂಗವ್ಹಿಡಿದು ಪೋಗುದ ಕಂಡು ನಾ ನಿನ್ನಲಿ ಸ್ಥಿರನಾದೆ ಹಗೆದಿಬ್ಬೇಶ್ವರ!
ರಂಗಕ್ಕೇರಿದೆಡೆ ದಿಟವು ಸಟೆಯಾಗುದು, ಪಾಷಾಣ ಶರ್ಕರವಪ್ಪುದು, ನಿಕೃಷ್ಟ ರೋಮ ಯಮಪಾಶವಪ್ಪುದು!
ಭ್ರಮೆಯು ಪಿತೂರಿಯಪ್ಪುದು,
ರಾಸಭ ಕ್ಷೀರ ಅಮೃತವಪ್ಪುದು,
ಕೂಪವೇ ಕಪೋಲ ಸ್ವರ್ಗವಪ್ಪುದಲ್ಲದೆ ಭೂಮಂಡಲದೆ ಮಿಗಿಲಪ್ಪುದು!
ಜಗದಳಲ ಪಿಡುಗ ಪಿತೂರಿಯೆಂಬ ಪಿಡುಗಿನಾ ಕೂಪದ ಕುಂಞಿ, ನಿವಾರಣೆಗೆ ದಾನವ ಮಾಡಿದ ದಾನವೀರನ ದಾನವನೆನ್ನುವ ಸನ್ನಿ,
ಹುಸಿ ಭ್ರಮೆಯ ಹಿರಿಮೆಯ ಗರಿ ತೊಟ್ಟ ಮುನ್ನಿಗಳು ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ, ಪಾತಾಳದಿಂದತ್ತ ಬ್ರಹ್ಮಾಂಡದಿತ್ತಿತ್ತ ಲಿಂಗವ್ಹಿಡಿದು ಪೋಗುದ ಕಂಡು ನಾ ನಿನ್ನಲಿ ಸ್ಥಿರನಾದೆ ಹಗೆದಿಬ್ಬೇಶ್ವರ!
ಖಂಡುಗ ಕಾವ್ಯ, ಗದ್ಯವ ಕೆತ್ತಿದರೇನು
ಭ್ರಷ್ಟ ಭರ್ತನ ಖಂಡಿಸದನ್ನಕ್ಕ!
ಅನಿಕೇತನದ ವಿಚಾರವನೆಷ್ಟು ಊದಿದರೇನು
ವಿಶ್ವಮಾನವನಡಿಯಲ್ಲಿ ಸ್ವಜನಪಾತವ ಒಗೆಯದನ್ನಕ್ಕ!
ದೇಶಭ್ರಷ್ಟ, ಧರ್ಮಭ್ರಷ್ಟವ ಖಂಡಿಸಿ ಸದಾಚಾರವ ಬೋಧಿಸುವ ಬಿನ್ನಾಣದ ಮುನ್ನ,
ಹೇ ಕವಯತ್ರಿ ಸದ್ಗೃಹಿಣಿ ನಿನ್ನ ಮನೆಯಲ್ಲಿ ಸದಾಚಾರವ ತರುವೆ ನೀನೆಂದು?
ಪತ್ನಿವಾಕ್ಯಪರಿಪಾಲಕನ ನಿಗ್ರಹಿಸದ ಪತ್ನಿ ನೀ ಆಚಾರವ ಪೇಳಿ ಪಾಷಾಣವ ನುಂಗಿದ ಪರಿಗೆ,
ನಿನ್ನಂತಹ ಸೋಗಿನ ಸ್ವಜನಪಾತಿ ಸಾಹಿತಿ ಬಳಗ ಭ್ರಷ್ಟ ಮಿತ್ರನ ಭಜಿಸುವ ಮೊರೆಗೆ,
ಸಂಸ್ಕೃತಿಯ ಕನ್ನಡದೇವನವನನಿಕೇತನ
ಬೆಕ್ಕಸ ಬೆರಗಾಗಿ ಶೂನ್ಯನಾದ ಹಗೆದಿಬ್ಬೇಶ್ವರ!
ಸಿಂಗಾರಿಗೌಡರನು ಸಿಂಗರಿಸೆ ಗರಿಯ ಮುಡಿಸಿ
ಗಿಡ್ಡೇಗೌಡರನು ಉದ್ಧರಿಸೆ ವಸಂತದ ಕೋಕಿಲವೆನಿಸಿ,
ಕೊಳಲನೂದಲು ಕುಹೂ ಕುಹೂವೆನ್ನಲು ಮಾಮರವನಕ್ಕಿಳಿಸಿದ
ಪ್ರವಾದಿಗಳ ಜಾಲಗಾರ ಶಿಷ್ಯನ ಪವಾಡವೇ ಹೇಳುತಿದೆ
ಪ್ರವಾದಿಗಳಿಂದಲ್ಲ ಶಿಷ್ಯರಂದೇ ಮಾಡಿದ್ದರೆಂದು!
ಈಗೇನ ಪೇಳುತಿಹೆ ನೀ ಹುಲುಮಾನವ,
ಬಲ್ಲವನೆಲ್ಲಬಲ್ಲ ವಿಶ್ವಮಾನವನವ ಹಗೇದಿಬ್ಬೇಶ್ವರ!
ಲಿಂಗಛೇಧನಕ್ಕೊಳಗಾದ ಪ್ರಚ್ಛನ್ನಾರಾಧ್ಯ
ಸೊಟ್ಟ ಸೊಣಗ ಶುನಕ ದಾರಿದ್ರ್ಯ!
ಪದ ದಾರಿದ್ರ್ಯದೆ ವಿರೂಪಗೊಂಡು ರೂಪವುಂಟೆಂಬ ಪರಿಯಲಿ
ತನ್ನ ಇಪ್ಪತ್ತು ಬೆರಳುಗಳನೆ ಮುಫತ್ತು ಲಿಂಗವನೆಂದು ಕಚಗುಳಿಯನಿಟ್ಟು
ಜಿಹ್ವಾಚಪಲದೆ ರಸನಿಸಿದರೆ
ತಕಧಿಮಿ ಕುಣಿವ ಹೆಡ್ಡ ಮೂಢರು
ಲಿಂಗವಲ್ಲದ ಅಂಗದೆ ಕೆರೆಸಿಕೊಂಡು ಹೆರುವುದೆಂತೋ ಹಗೇದಿಬ್ಬೇಶ್ವರ!
ಸತ್ಯ ಎಂಬುದು ಎಡಕ್ಕೆ ಸುಳಿದೆಡೆ ಅದು ಎಡವಲ್ಲ,
ಬಲಕ್ಕೆ ಸುಳಿದಡೆ ಅದು ಬಲವೂ ಅಲ್ಲ.
ಹೆಣ್ಣುಗಂಡಿನ ನಡುವೆ ಸುಳಿವಾತ್ಮದಂತೆಯೇ ಸುಳಿವ
ಸತ್ಯ ಶಿವ ಸುಂದರ! ಮಿದ ಸತ್ಯವಂ ಬಲ್ಲ
ಸನಾತನಿ ಬಲರು ಬಲವೆಂದು ಬಳಲಿ,
ವಿನೂತನಿ ಎಡರು ಎಡವೆಂದು ಎಡವಿ
ಸತ್ಯ ಪಥವ ಮಿಥ್ಯದಿ ತೊಳಲಾಡಿಸುತಿಹೆವೆಂದೊಡೆ
ಸತ್ಯ ಜತನಿಯು ಚಿತ್ತ ಹರ್ಷದಿ ಭಲರೇ ಭಲರೆಂದು ತೊಡೆ ತಟ್ಟಿ ನರ್ತಿಪ ಹಗೇದಿಬ್ಬೇಶ್ವರ!
ನರಿಯಿರದೆ ನರಿ ನರಿ ಎಂದ ಕುರಿಗಾಹಿ ನರರು
ಅಭೂತದೆ ಇಲ್ಲದ ಭೂತವ ಹೊತ್ತ ವಿಚಾರಪರರು
ವಿನಾ ಕಾರಣ ಧರ್ಮಕಾರಣವೆಂದವರು
ಇಂದು ನರಿ ಹುಲಿಯಾದಪ್ಪು
ಭೂತ ವರ್ತಮಾನವಾದಪ್ಪು
ನಿಕೃಷ್ಟ ರೋಮ ಯಮಪಾಶವಾದಪ್ಪು
ಮಾರಿಗೆ ಹೋರಿಯೇ ಹಾದಪ್ಪು
ನರರು, ಪರರು ಮೌನದಾ ಮೊರೆಗೆ ಪೋಗಿರ್ಪ ಪರಿಗೆ
ಪಾಖಂಡಿಗಳು ನೂರ್ಮಡಿ ಪೆಚ್ಚಿಹರು ನೋಡಾ ಹಗೆದಿಬ್ಬೇಶ್ವರ!
ಅಲೋಪತಿ, ಹೋಮಿಯೋಪತಿ, ಆಯುರ್ಪತಿ, ಗೃಹಪತಿ ಮುಂತಪ್ಪುಪತಿಗಳ ಜನಕಿ
ಸಸ್ಯ ಖಗಮೃಗಗಳ ಜನನಿ ಜಾನಕಿ!
ಬೆಳೆಯುತ್ತ ಬೆಳೆಯುತ್ತ ದಾಯಾದಿಗಳಾದ
ಇಂತಪ್ಪು ಜಾನಕೀಸುತರು ಮೂಲವನರಿಯದೆ ತಮ್ಮ ತಮ್ಮ ಹಿರಿತನವ ಮೆರೆವ ವೈದ್ಯ, ಪಂಡಿತ, ಹಕೀಮ, ಪಾಮರರ ಹಕೀಕತ್ತ ಕಂಡು ಬರಿದೇ ಬಪ್ಪುದೆ ಶಿವಜ್ಞಾನವೆಂದು ಗಹಗಹಿಸಿದನಪ್ಪ
ಅಪ್ಪರ ಅಪ್ಪ ನಮ್ಮಪ್ಪ ಹಗೆದಿಬ್ಬೇಶ್ವರ!
ನರೋತ್ತಮ ಸರ್ವೋತ್ತಮ ಪಂಡಿತೋತ್ತಮರೆಂಬ ವೇಷಧಾರಿಗಳೇ ಕೇಳಿರೈ.
ನರಿಯಂತೆ ಸರಿಹೊತ್ತು ಮಾನಿನಿಯರ
ಕಾಮಿನಿಯರೆಂದು ಭ್ರಮಿಸಿ ಉದಾರದಿ
ಮುಕ್ತತೆಯ ದ್ರವಿಸಪೋಗಿ ಪೀಡಿಸದಿರಿ.
ಪಂಥದಿ ಮಂತ್ರಿಸಿ ಸಿದ್ದಾಂತದೆ ಸಿದ್ಧಿಸಿದೊಡೆ ಹೊತ್ತಿ ಉರಿವದು ಉದರಾಗ್ನಿ ಮಾಯೆ ಮಾತ್ರ.
ನಾನು ಮುಕ್ತ ಕಾಮಿ ಶಿಶ್ನಪ್ರಸಾದಿ
ನಿಜ ಗುರುಲಿಂಗಜಂಗಮನೆಂದು
ಕಾಮ ಕಳೆದು ನಾಮವಳಿಸಿ
ನಿಜಮುಕ್ತದೆ ಅರುಹಿದೊಡೆ
ಕುಣಿಕುಣಿದು ಬಪ್ಪ ಮಾನಿನಿ
ಸೃಷ್ಟಿಯಗೈದು ಲಿಂಗೈಕ್ಯವಾ ಮೆರೆದು
ಉದಾರದಿ ನಿಜ ಮಾಯೆಯ ತೋರುವಳೆಂದು
ಪೇಳಿಪನು ಹಗೇದಿಬ್ಬೇಶ್ವರ!
ದೇಶದಂಚಿನ ಗಡಿಯ ಮಾತಿಲ್ಲ,
ದೇಶದೊಳಗಿನ ಖಜಾನೆಯ ಗತಿ ಕುರಿತು ಚಿಂತನೆಯ ಮಂಡಿಸಲಿಲ್ಲ.
ಬಂದೊದಗಿದ ಮಾರಿಯ ಕ್ಯಾರೆ ಎನಲಿಲ್ಲ,
ಸರ್ವರೋಗಕು ಸಾರಾಯಿ ಮದ್ದೆಂಬ
'ಕಾ' ಕಮಂಗಿಗಳ ಭಾಗ್ಯವೊಂದೇ ಬಡಪಾಯಿ ದೇಶಕೆ ಆತ್ಮ ನಿರ್ಭರದ ಸರಿದಾರಿಯೆಂದರಿತ ಸರದಾರ!
ಉಧೋ ಉಧೋ ಉಧೋ,
ಇತಿಹಾಸದಲ್ಲಿ ಇದೇ ಪ್ರಪ್ರಥಮ ನೋಡಲೇ ಹಗೆದಿಬ್ಬೇಶ್ವರ!
ಅಣುರೇಣುತೃಣಕ್ಕೆ ಬೆದರಿ ತವರಿಗೆ ಬರುವವರ ಕಮರಿಯಾಚೆ ನಿಲ್ಲಿಸಿ
ಹುರಿಯಾಳುಗಳವರನ್ನು ಭಂಗದ ಶುಚಿಗೆ ಗುರಿಯಾಗಿಸೆ,
ಭಂಗಿ ಸೇದಿದಂದದಿ ಭಟ್ಟಂಗಿಗಳು
ಇದು ಅಸ್ಪೃಶ್ಯ, ಬ್ರಾಹ್ಮಣ್ಯ, ಅವಹೇಳನ, ಇದು ಸ್ಥಿತಿವಂತರ ಆಸ್ತಿಯ ಮಸ್ತಿ ಇತ್ಯಾದಿ ತತ್ವ ಸಿದ್ದಾಂತವನು ಕಾವ್ಯ ಮೀಮಾಂಸದಿ ಪೇಳುತಿರೆ,
ಶುದ್ಧಿಗೊಳಗಾದ ಪಾಪದಾ ಕುರಿ,
ಬಾಹ್ಯವನೆಂತೋ ತೊಳೆದಿರಿ ಹುಚ್ಚಪ್ಪಗಳಿರಾ! ದಿಲ್ಲಿಯ ಸೋಂಕಿನ ಕಿಚ್ಚ
ನಾ ಹೊತ್ತು ತಂದಿಹೆ ಬೆಚ್ಚಗೆ ನನ್ನೆದೆಯೊಳಗೆ!
ಅದನೆಂತು ತೊಳೆಯುವಿರೆಂದು ಕೇಳದಾ ನಿಮ್ಮ ತತ್ವ ಮಸಿ ಸಿದ್ದಾಂತ ಕುರುಡು ಕುಂಟುಶಂಟವಪ್ಪುದು ಕಾಣಿ ಹಗೆದಿಬ್ಬೇಶ್ವರ!
ಪುಸ್ತಕವೊಂದನ್ನು ಅರ್ಥೈಸಿಕೊಳ್ಳಲಾಗದ ಕುಂಞಿ
ವಚನವೊಂದರ ಗ್ರಹಿಕೆ ತಪ್ಪೆಂದು
ಕೈಗೆಟುಕದ ದ್ರಾಕ್ಷಿ ಹುಳಿಯೆಂದು
ಕೈಲಾಗದೆ ಮೈ ಪರಚಿಕೊಳ್ಳುವ ಪರಿಗೆ
ಅದರೊಟ್ಟಿಗೆ ಹರಿವಿರದ ಅರಿವುಗೇಡಿಗಳು ಊಳಿಡುವ ಅರುಹಿಗೆ ನಾ ನಸುನಗುವೆ ಹಗೆದಿಬ್ಬೇಶ್ವರ!
ದೇಶ ಸುತ್ತು ಕೋಶ ಓದು ಎಂದನು ಸಂತ.
ಕೋಶ ಓದಿ ಖಂಡುಗ ಹೇಳಿದೊಡೆ ಪಂಡಿತ,
ದೇಶ ಸುತ್ತಿ ಲವಲೇಶ ಹೇಳಿದೊಡೆ ಪಾಮರ.
ಇಂತಪ್ಪು ನುಡಿಯುತೈದಾವೆ ಉಷ್ಣವೇರಿದ ಅಸಹಿಷ್ಣು ಕೋಶದ ಕೂಪ ಮಂಡೂಕಗಳು. ಕಿಂಚಿತ್ತು ಭೋರ್ಗರೆದು ತಂಪಾಗಿಸೋ ಮಂಡೂಕಗಳು ಸತ್ತಾವು ಹಗೇದಿಬ್ಬೆಶ್ವರ!
ಪ್ರಜಾಪ್ರಭುತ್ವದ ಬುನಾದಿಯ ಮೇಲೆ
ಸಂವಿಧಾನದ ನಿಯಮದಡಿಯಲಿ
ಚುನಾಯಿತ ಸರ್ಕಾರ ಸ್ಥಾಪಿತವಾದಲ್ಲಿ,
ಅದು ಜಡ್ದೆಂದು ಜರಿದ ಪ್ರಜ್ಞಾಧಿಪತಿಗಳು
ಸಂವಿಧಾನದ ನಿಲುವಂಗಿಯ ಝಾಡಿಸಿ ಧರಿಸಿ
ಕಾಫ್ಕಾ, ಬೀಫ್ಕಾ, ತಾವೋ ಎಂದು ತಂತ್ರಿಸಿ
ಸ್ಟ್ಯಾಲಿನ್, ಲೆನಿನ್ ಮಾವೋ ಎಂದು ಮಂತ್ರಿಸಿ
ಕ್ಯಾಸ್ಟ್ರೊ ಎಂಬ ಮಂತ್ರದಂಡದಿ ಕ್ಯಾಸ್ಟ್ರೇಟಿಸಿ
ಛೇ ಗವೇರ ಹುಚೇರ ಎಂದು ಹೂಂಕರಿಸಿ ತತ್ವಾಂಧತೆಯ ಪಸರಿಸಿದೊಡೆ
ಪಂಚಪ್ರಜ್ಞೆಗಳೆಲ್ಲ ಮರೆತು
ಉಘೇ ಉಘೇ ಎಂಬುದೇ ಪ್ರಜ್ಞೆಯಾದೊಡೆ
ಅವಜ್ಞೆಯೆಂದು ಗಹಗಹಿಸೀಯೆ ಹುಚ್ಚ,
ನಿನ್ನ ಭಕ್ತನೆಂದು ಪೆಚ್ಚಾಗಿಸಿ ಹಗೇವಿಗೆ ಹಾಕುವರೋ ಹಗೆದಿಬ್ಬೇಶ್ವರ!
ವೈದಿಕವೆಂಬರು ಅವೈದಿಕವೆಂಬರು
ಆರ್ಯ ದ್ರಾವಿಡರೆಂದು ಭೇದವ ಮೆರೆವರು
ಸಹಿಷ್ಣುವೆನ್ನುತ್ತ ಬಂಡಾಯಗೈವೆಂಬ
ವರ್ಗಭೇದದ ಪ್ರವರ್ಗಿಗಳೇ ಕೇಳಿ,
ಬ್ರಾಹ್ಮಣ, ಶೂದ್ರ, ದಲಿತಾದಿ ಮುಂತಪ್ಪು ಜಾತಿಗಳಲಿರ್ಪ ಕೆಂಪು ಕಪ್ಪಿನ ತೊಗಲ,
ನೀಲಿ, ಕಂದು,ಕಪ್ಪು ಕಂಗಳ,
ಗುಂಗುರು ರೇಶಿಮೆ ಕೂದಲ ಪ್ರವರ್ಗಗಳ
ಸೃಷ್ಟಿ ಎಂತಪ್ಪಾಯಿತೆಂದು ಬಲ್ಲಿರೇ?
ಹೋಗಿ ತಮ್ಮ ತನುವ ಒರೆಹಚ್ಚಿಸಿಕೊಳ್ಳಿ
ಮನವ ಸಂತೈಸಿಕೊಳ್ಳಿ ಹಗೆದಿಬ್ಬೇಶ್ವರ.
ವೃಷಣವ ಮಸ್ತಕವ ಮಾಡಿ
ತೃಣವ ಘನವೆನ್ನಿಸಿ
ಅರ್ಬುದದ ಬೀಜವ ಘನಲಿಂಗ ಮಾಡಿ
ಒಡ್ಡೋಲಗದಿ ಅದ್ಭುತ ಅತ್ಯದ್ಭುತವೆಂದು ಕೊಂಡಾಡುವ ತನು ವಿಕಾರಿ, ಮನ ವಿಕಾರಿಗಳ
ಅನು ವಿಕಾರವೆಪ್ಪುದೋ ಬಪ್ಪಾ
ವಿಕಾರ ವಿಹಾರಿ ಹಗೆದಿಬ್ಬೇಶ್ವರ!
"ಜಾತಿ ಅತೀಯತೆ"ಯನ್ನು
"ಜಾತ್ಯಾತೀತ"ವೆಂದು ಬಣ್ಣಿಸಿ
"ಜಾತ"ನನ್ನು ಅತೀತನಾಗಿಸಿ
ಅಮೇಧ್ಯವ ನೈವೇದ್ಯವ ಮಾಡಿ,
ಉಣ್ಣಲಿಕ್ಕುವ ಪಾತಕಿಗಿಂತ
ಘನಘೋರ ಪಾತಕ,
ಆತನ ಕಾಯಕವ ವಿಚಾರಿಸದೆ
ಆ ನೈವೇದ್ಯವ ಮಹಾಪ್ರಸಾದವೆಂದು
ನೆಕ್ಕಿ ನೆಕ್ಕಿ ಮುಕ್ಕುವ ಭುಂಜಕ.
ಆ ಪಾತಕದ ಭುಂಜಕ ಮೂಶಂಡಿಗಳಿಗೆ
ರೌರವ ನರಕ ಹಗೆದಿಬ್ಬೇಶ್ವರ!
ಸರ್ಕಾರೀ ಸೇವೆಯ ಗಾಳಿಗೆ ತೂರಿ
ಜಾತಿ ದುರಾಭಿಮಾನದೆಲ್ಲೆ ಮೀರಿ
ಜಾತಿ ಪಕ್ಷವ ಸೇರಿ,
ಐನಾತಿ ಜಾತ್ಯಸ್ಥನ ಹುಲ್ಲ
ಹೊರೆ ಹೊತ್ತ ಮೂಶಂಡಿ,
ವೈನಾತಿ ದೊರೆ ಕುಲಸ್ಥನ ಮೆರೆಸಿದೆಡೆ
ಅವನ ಸೊಲ್ಲ ಮುರಿವೆನೆಂಬ
ಪಾಶಂಡಿ ನೋಡಾ ಹಗೆದಿಬ್ಬೇಶ್ವರ!
ಸುದ್ದಿಯ ಹುಚ್ಚಿನ ಹಜಾರದ ಅಣ್ಣ,
ಇಲ್ಲದಾ ತುರ್ತ ಹೇರಿಕೊಂಡು
ಊಹೆಯ ಕೇಡಿಗೆ ಸಿಲುಕಿ, ಹಗ್ಗವ ಹಾವೆಂಬ ಮೋಡಿ ಮೋಹದ ಗುಡುಗುಡಿಯ ದಾಹದ
ವಿಭಕ್ತಿಯ ಗುಡಿಯ ಗಾರುಡಿಗರ ಗುಂಪಿಗೆ ಗಾಂಪನಾದ ಹಗೇದಿಬ್ಬೇಶ್ವರ!
ಮಾತೃಭಾಷೆಯಲಿ ಕಲಿತರೇನು
ದೇಶಭಾಷೆಯಲಿ ಓದಿದರೇನು
ಚಿಂತನೆಗೆ ಹಚ್ಚದಾ ಮೂಲ ಶಿಕ್ಷಣ,
ಎಂತಪ್ಪು ಭಾಷೆಯಲಿದ್ದರೇನು!
ಕೂಸು ಕಮಂಗಿಯಾಗುದಕೂ
ಭಾಷೆ ಇಂಗಿ ಹೋಗುದಕೂ
ಸಂಬಂಧವೆನಿತು ವಿಲಕ್ಷಣ
ಭಾಷಾ ವಿರಾಗಿ ಹಗೆದಿಬ್ಬೇಶ್ವರ!
ವಾಸ್ತವದ ಅರಿವ
ಅನುಭವದ ಹರಿವ
ಅನುಭಾವದಿ ಆರುಹಿದೆಡೆ,
ಹುಂಬಜರು ಡಂಭಾಚಾರದಿ
ಕೂಪಮಂಡೂಕ ಭರದಿ
ಧಗಧಗಿಸುವ ಪರಿಗೆ
ಹುಚ್ಚನಾಗದಿರು
ನೀ ಹಗೇದಿಬ್ಬೇಶ್ವರ.
ಕನ್ನಡಕ್ಕಾಗಿ ಕೈಯೆತ್ತು ನಿನ್ನ ಕೈ
ಕಲ್ಪವೃಕ್ಷವಾಗುತ್ತದೆಂದನಾ ಕವಿ.
ಖನ್ನಡವೆನಿ ಕೈ ಎತ್ತಿ ಕರವ(ವೇ) ಹೇರಿ
ಕಲ್ಪಕವ ಕಂಡುಕೊಂಡ ಭವಿ!
ಕವಿಯ ನುಡಿಗಿಂತ, ಭವಿಯ ಉದರಾಗ್ನಿ
ದಳ್ಳುರಿಯಾಗಿ ಆ ಬಣ ಈ ಬಣ ಸೇರಿ
ಹಿರಿಹಿರಿದು ಸಜ್ಜನರ
ಕಲ್ಪವೃಕ್ಷದೊಂದಿಗೆ ಕನ್ನಡ
ಕಾಮಧೇನುವ ಹಿಂಡುವುದ ಕಂಡು
ಬಸವಳಿದ ಹಗೆದಿಬ್ಬೇಶ್ವರ!
ಅರುಹ ಪೂಜಿಸಲೆಂದು ಕುರುಹು
ಎಂದನಾ ಗುಹೇಶ್ವರ
ದೇಹವೇ ದೇಗುಲ ಹೊನ್ನ ಶಿರವೇ
ಕಲಶವೆಂದನಾ ಅಣ್ಣ
ಗುಡಿ ಚರ್ಚು ಮಸಜೀದಿಗಳ ಬಿಟ್ಟು
ಹೊರಬನ್ನಿ ಎಂದನಾ ರಸಋಷಿ
ಈ ಮುಂತಪ್ಪು ಆದ್ಯರ ಮುಂದಿರಿಸಿ
ನಾಸ್ತಿಕ ಬುದ್ಧಿವಂತರು ತೊಡೆ ತಟ್ಟಿ,
ದೇವರಿರುವನು ಗುಡಿಯಲ್ಲೇ,
ಅದು ಆ ಒಂದರಲ್ಲೇ, ಶಬರಿಗಿರಿಯಲ್ಲೇ.
ಕಾಣ ಹೋಗಿರಿ ಹೆಂಗಳೆಯರೇ
ಎಂದು ಜಂಗಮವ ಮರೆಸಿ
ಸ್ಥಾವರವ ಮೆರೆಸಿ
ವೇದ್ಯರ ಮುರುಗಮರ್ಧನೋಲ್ಲಾಸದಿ ಕುಣಿವುದಕೆ ಆಧ್ಯಾತ್ಮ
ಅದ್ವಾನವಾಯಿತೈ ಹಗೇದಿಬ್ಬೇಶ್ವರ!
ಹರಿ ಹರ ಸುತ
ಹೆಣ್ಣಿಲ್ಲದೇ ಹುಟ್ಟಿದ ಅಚ್ಯುತ
ಸೃಷ್ಟಿ ನಿಯಮ ಮೀರಿ ಅನಂತ
ತಾನನಂತವಾಗುವ ಪರಿಯ ಪ್ರತೀಕ.
ಆ ಅಮೂರ್ತವ ಪಿಡಿದು
ಮೂರ್ತ ಮಾಯೆಯ ಸುತ್ತಿ
ಭೌತಿಕಗೊಳಿಸಿ, ಲೌಕಿಕವಾಗಿ ಸ್ತುತಿಸಿ
ಐಹಿಕ ವಾಂಛೆಯ ಗತಿಯಾಗಿಸುವ
ರಂಭೂರ್ವಶಿಮೇನಕೆಯರ ದೈಹಿಕ
ಬಿನ್ನಾಣ, ಗಂಡುಗಳ
ತೊಳಲಾಟದಲಿ ಅಯ್ಯಪ್ಪ ಬಸವಳಿದು
ಅಯ್ಯಯ್ಯಪ್ಪಾ ಶರಣೆಂಬ ನೋಡಾ ಹಗೇದಿಬ್ಬೇಶ್ವರ!
ಮೀಟಿದ್ದನ್ನು ಟ್ವೀಟಿಸಿದರೆ ಶಿಕ್ಷೆಯಪ್ಪುದೆ?
ಆರರ ಹೊಲಬ ಮೂರು ಮಾಡಿ
ಆರ್ಯರ ಹೊಲಸ ದೂರು ತೋಡಿ
ದೂರುವಲ್ಲಿ ದೂರಿದೆಡೆ
ನ್ಯಾಯ ಕಾರಣ ಶಿಕ್ಷೆಯಪ್ಪುದು.
ಆರ್ಯನ ಮಾರಿಯ
ಕುಲಗೆಡಿಸುವಾ ಪರಿಯ
ಆರಿಯದೇ ಕುಲೀನ
ನಾರೀ ಬಳಗ ಮತಿಹೀನ
ಬೊಬ್ಬಿರಿವುದಾ ಕಂಡು
ಕಾಳಿ ಗಹಗಹಿಸುತ್ತಿಹಳು ಹಗೇದಿಬ್ಬೇಶ್ವರ!
ರಾಷ್ಟ್ರಪಿತನ ಶಾಖಪ್ರಯೋಗಕ್ಕೆ
ಹದವಾಗಿ ಬದಿಗಿದ್ದು
ವೈಷ್ಣವ ಜನತೋ ತೇನೆ ಕಹಿಯೆಗೆ
ಸಿಹಿ ಸಿಹಿಯೆಂದು ಮುಲುಗಿದಾ ಬಾಲಕನ್ಯೆಯರಿಂದು
ಹೂವರಳಿ ಕಾಯಾಗಿ
ಮೈಯರಳಿ ಹಣ್ಣಾಗಿ ಮೀಟೂ ಮೀಟೂ ಎಂದು ಏಕತಾರಿಯ
ಮೀಟುವ ಪ್ರೌಢಿಮೆಗೆ ತಾಳ ಹಾಕುವ ಬಾರಾ ಹಗೇದಿಬ್ಬೇಶ್ವರ!
ಕೈರಳಿಯ ಪಿಣರಾಯಿ
ತೋ(ತು)ರಿಕೆಯ ಕಮ್ಯುನಿಷ್ಠ.
ಹೀಗಳೆವ ಸಂಸ್ಥಾನ ಫ್ಯಾಸಿಸ್ಟ!
ಕೆರೆಕೆರೆದು ಹುಣ್ಣಾಗಿ
ಮೈಯಳಿಯೆ ತಲೆಬಾಗಿ
ಫ್ಯಾಸಿಸ್ಟ ಸಂಸ್ಥಾನ ನೆನಪಾಗಿ
ಕಾಮಿ ಚೀನಾ, ಕ್ಯೂಬಾ, ರೂಸು
ಗಬ್ಬು ನಾರುವ ಹೂಸು
ಎನಿ ಮೂಗಮುಚ್ಚಿ ಮಫ್ಲರು ಸುತ್ತಿ
ಸಂಯುಕ್ತ ಸಂಸ್ಥಾನ ಸೇರಿರೆ,
ಕುಡುಗೋಲು ಸುತ್ತಿಗೆಯ ಕೆಂಪು ಬಾವುಟದಡಿ
ಲೆನ್ನಿನ್ನು ಸ್ಟಾಲಿನ್ನು ಪಿಂಪು ಜಪವನ್ನು ಪಠಿಸುತ್ತ,
ತೊಟ್ಟು ಗುವೆರಾ ಅಂಗಿ
ಎಳೆಯುತ್ತಾ ಕ್ಯಾಸ್ಟ್ರೋ ಭಂಗಿ
ಫ್ಯಾಸಿಸ್ಟ ಐಫೋನು ಐಪಾಡಲಿ
ಬಾಬಿ ಮಾರ್ಲಿಯ ಹಾಡಲಿ
ಪಿಣರಾಯಿ ಶಿಷ್ಯ(ಶ್ನ)ಕೋಟಿ
ಕ್ಯೂಬಾದ ಕಾಮ ಮೀಟಿ
ತೀಟೆ ತೀರುತ್ತಿರೆ ಪರಿಪರಿಯಾಗಿ
ನಾಚಿ ನೀರಾಗಿಹ ಹಗೇದಿಬ್ಬೇಶ್ವರ!
ನೊಬೆಲ್ ಪಾರಿತೋಷಕದ ಲೇಖಕನ
ಸ್ತ್ರೀಶೋಷಣೆಯ ಕೆಣಕರು
ಕನ್ನಡ ಜಾಣಜಾಣೆಯರ ಪತ್ರಿಕೆಯ ಪಿತಾಮಹ,
ಕಾಮಸಾಹಸವ ವರ್ಣಿಸೆ ಭಜಿಪರು!
ಜ್ಞಾನಪೀಠಿಯ ಸ್ತ್ರೀಪೀಡನೆಯ ಸೃಜನಶೀಲವೆಂಬ
ಇಂತಪ್ಪು "ಎಡ" ಸ್ತ್ರೀಸಂವೇದಿಗಳು
ಬಡ "ಬಲ" ಭಟ್ಟನ ಕುಚೋದ್ಯದ ಮದ್ಯಮರ್ಕಟತನಕೆ
ಯುದ್ಧ ಸಾರುದ ಕಂಡು "ಮಧ್ಯಮ"
ನಾ ಮುಗ್ಗರಿಸಿದೆ ಹಗೇದಿಬ್ಬೇಶ್ವರ!
ಉಳ್ಳವರ ಸಿರಿ ಕಂಡು ದಾನ ಧರ್ಮವ ಮಾಡರೆಂದು
ಕರುಬುವ ಮೂಲ ಉರಿಲಿಂಗಬುದ್ಧಿಯ ಮುಂಡಿಸದೆ
ಜಟೆಕೇಶ ಬೆಳೆಸಿ, ಕೆಂಪು ರುಮಾಲು ತೊಡಿಸಿ,
ಸಮಾಜವಾದದ ವಸ್ತ್ರವ ಸುತ್ತಿ, ಹಪಾಹಪಿಯ ಭಾವದಿ
ಪುರಾಣ ಸೃಷ್ಟಿಸಿ ಪ್ರವಚನ ಬೀರುತ್ತಾ,
ಗುಡುಗುಡಿಯ ಭ್ರಾಮಕದ ಧೂಮವನೆ ವ್ಯೂಮವೆನಿ,
ಲೋಕವ ಗುದ್ದಿ ತಿದ್ದ ಹೊರಟ ಪೆದ್ದರ ನೋಡಿ
ಬಿದ್ದು ಹೊರಳಾಡಿ ನಗುತಿಹನು ಹಗೇದಿಬ್ಬೇಶ್ವರ!
ನುಡಿದರೆ ಮುತ್ತಿನ ಹಾರದಂತಿರಬೇಕೆಂದನಣ್ಣ,
ನುಡಿದರೆ ರಕ್ತ ಕಾರಬೇಕೆಂಬ ತಮ್ಮ!
ನುಡಿದರೆ ಸ್ಪಟಿಕದ ಶಲಾಕೆಯಂತಿರಬೇಕೆಂದನಣ್ಣ,
ನುಡಿದರೆ ರಕ್ತದ ಓಕುಳಿಯಾಗಬೇಕೆಂಬ ತಮ್ಮ!
ನುಡಿದರೆ ಲಿಂಗಮೆಚ್ಚಿ ಅಹುದಹುದೆನ್ನಬೇಕೆಂದನಣ್ಣ,
ನುಡಿದರೆ ಕಿಚ್ಚನಚ್ಚಿ ಭಕ್ತರೊಚ್ಚಿ
ಕೆಂಪುಕೆಂಪಾಗಬೇಕೆಂಬ ಕ್ರಾಂತಿಜೀವಿಗಳ ಕೈಯಲ್ಲಿ
ಅಣ್ಣ ಭ್ರಾಂತಿಯಾಗಿ ಹೋಗಿಹ ಹಗೇದಿಬ್ಬೇಶ್ವರ!
ಅನ್ನಕ್ಕೆ ಆಳಾಗಿ, ತತ್ವಕ್ಕೆ ಶರಣಾಗಿ ಜಾತಿಗೆ ಮತಿಯಾಗಿ,
ಪ್ರಭುತ್ವ ಪತಿ(ತ್ನಿ)ಯೆನಿಸಿ, ಪ್ರಭಾವಳಿಗಳೇ ಹಿರಿಯಾಗಿ,
ಸತ್ಯ ಧರ್ಮ ನ್ಯಾಯಗಳು ಕಿರಿಯಾದೊಡೆ
ಆ ಪಾಂಡಿತ್ಯ ಪಾಮರರ ಅನುಭಾವ ಭವಿಯಾಗಿ
ಲೋಕಕ್ಕೆ ಹೊರೆ ಕಾಣಾ ಹಗೇದಿಬ್ಬೇಶ್ವರ!
ಸುತಾರನೆಂಬ ಹತಾರ ಕರ್ನಾಟಕದ ಕಬೀರನೆಂದರೆ,
ಗುರುರಾಜನೆಂಬ ನಾಯ್ಡು ಕರ್ನಾಟಕದ ನಾರದ ಮುನಿಯೇ?
ತತ್ವಜ್ಞಾನಕ್ಕೂ, ತತ್ವವಾಚನಕ್ಕೂ ವ್ಯತ್ಯಾಸವರಿಯದ,
ರೂಹನರಿಯದೆ ದೇಹ ಸ್ತುತಿಸುವ,
ಹರನನರಿಯದೆ ಹರಹರನೆಂದು ಬೊಬ್ಬಿರಿಯುವ,
ಹರಿಯ ಪೊರೆಯದೆ ಅವನಾಮವ ಪರಿಯುವ
ಡಂಭರನೇನೆಂಬೆ ಹಗೇದಿಬ್ಬೇಶ್ವರ!
ಆತ ಹುಸಿಯಾನ, ಹೂಸಿದ್ದೆ ಕಲೆಯೆಂದ,
ಸಂಬಂಧ ಹುಸಿಯೆಂದ, ಕಾಮದೇವತೆಗಳೇ ಅನ್ಯಧರ್ಮಜರವೆಂದ,
ಕಡೆಗೆ ಮತಿಗೆಟ್ಟು ಕಾಲಕ್ಕೆ ಗತಿಯಾದ!
ಇನ್ನೊಬ್ಬ ಭಗವಾನ, ಅಕ್ಷರದಿ ಇರಿದ,
ಮಾತಲಿ ಕೊಂದ, ದ್ವೇಷದ ದಳ್ಳುರಿಯ ಕಿಚ್ಚ ಪಸರಿಸಿದ,
ಕಡೆಗೆ ಆಸ್ಥಾನ ಪಂಡಿತನೇ ತಾನಾಗಿ ರಾಮನೇ ಹಯವಾನನೆಂದ.
ಈಗೊಬ್ಬ ಬಢವಾನ, ರಾಜಾಶ್ರಯದ ಗಧವಾನ
ತತ್ವನಿಂದಕನ ಹಿಡಿ ಕಡಿ ಕೊಲ್ಲೆಂದ, ಚಕ್ರಕ್ಕೆ ತೀರ್ಥ ಬಿಡಿಸಲು ಹೋಗಿ
ಚಕ್ರಸುಳಿಗೆ ಸಿಲುಕಿ, ಹುಸಿನಗೆ ಬೀರುತ್ತಾ ನಾ ತೇಲುತಿಹೆನೆಂಬ
ಇಂತಿಪ್ಪು ಸಿದ್ಧರಾಮನ ಜಟಿಲಮತಿಗಳ
ಕುಟಿಲತೆಯ ಅರ್ಥೈಸು ಹಗೇದಿಬ್ಬೇಶ್ವರ!
ಒಲೆ ಹತ್ತಿ ಉರಿದೊಡೆ ನಿಲಲುಬಹುದು ಧರೆ ಹತ್ತಿ ಉರಿದೊಡೆ?
ಲಿಂಗ(ಸಂವಿಧಾನ)ಕ್ಕೊಪ್ಪದ ಬಹುಪತ್ನಿತ್ವ
ಲೋಕ(ನೀತಿ)ಕ್ಕೊಪ್ಪದ ಪರನಾರೀ ಸಂಗ
ಲೋಕಾಳ್ವಿಕೆಗೆ ಒಪ್ಪಿತವಾಗಿ ಮೆರೆದೆಡೆ,
ಆ ವಿಕೃತ ಲೋಕವ ನೀನರ್ಪಿಸಿಕೋ ಹಗೇದಿಬ್ಬೇಶ್ವರ!
ತುಂಬುಗೊಡದ ಮೇಲೆ ಹಾಲ ಸುರಿದೆಡೆ
ಹರಿದು ಪೋಲಾಗುವುದಯ್ಯ
ಹರಿತ ಕತ್ತಿಯ ಮಸೆಯುತಿದ್ದೆಡೆ
ಮೂಸೆಗೆಸೆಯಬೇಕಾಗುವುದಯ್ಯ
ಬೇಕುಬೇಡಗಳ ಮೀರಿ ಸಂಪತ್ತ ಬೆನ್ನತ್ತಿದೆಡೆ
ಸುಖ ಶಾಂತಿಗೆಡುವುದಯ್ಯ
ಲೋಕ ಮೆಚ್ಚಿಸ ಹೋಗಿ
ಲೋಕದಾ ಸೆರೆಗೆ ನೀ ಸಿಲುಕದಿರು ಹಗೇದಿಬ್ಬೆಶ್ವರ!
ಜಿನ ಬ್ರಹ್ಮಶಿವನ ಸಮಯಪರೀಕ್ಷೆಯಲಿ ವೀರಶೈವ
ರಾಘವಾಂಕನ ವೀರೇಶಚರಿತೆಯಲಿ ವೀರಶೈವ
ಹರಿಹರನ ಬಸವರಾಜದೇವರ ರಗಳೆಯಲಿ ವೀರಶೈವ
ಶತ್ರು ಮಿತ್ರ ಭಕ್ತರ ಪುರಾಣಗಳಲಿ
ಆದ್ಯಬಸವಕಾಲೀನ ವಚನಕಾರರಲಿ ವೀರಶೈವ
ಲಿಂಗಾಯತ ಒಂದೆಂದು ಸಾರಿದೆಡೆ
ಭಿನ್ನವೆಂದು ಭಿನ್ನಹಿಸುವ ಭಿನ್ನಲಿಂಗಿಗಳ
ನಿರ್ವೀರ್ಯ ಲಿಂಗದಾ ಕೂಸ ಕಾಣಾ ಹಗೇದಿಬ್ಬೇಶ್ವರ!
ಸತ್ರದ ಕಾವಲುಭಟನ ಸಾಮ್ರಾಟನಾಗಿಸಿದನಂದು
ಚಾಣಕ್ಯನೆಂಬ ವಿಪ್ರ,
ಕೊಲೆಗಡುಕ ತಿಪ್ಪನ ರಕ್ಷಕನಾಗಿಸಿದ
ಪೂರ್ಣಯ್ಯನೆಂಬನಿನ್ನೊಬ್ಬ ಬ್ರಾಹ್ಮಣ,
ಸಂವಿಧಾನಶಿಲ್ಪಿಯ ಪೊರೆದು ಪೋಷಿಸಿದ
ಅಂಬೇವಾಡೇಕರನೆಂಬ ಹಾರುವ,
ಇಂತಪ್ಪು ಅಲ್ಪ ಹಾರುವರು ಮುಂತಪ್ಪು ಜನಂಗಳ ಕಲ್ಪ ಕಟ್ಟಿರೆ
ಅವಂಗಳ ನಿರ್ನಾಮ ಮಾಡೆಂಬ
ಲದ್ದಿಜೀವಿಗಳ ಶುದ್ಧಿ ಮಾಡೆಂಬ ಹಗೇದಿಬ್ಬೇಶ್ವರ
ಮಠದೊಳಗಿನ ವಿರಕ್ತ ಕಳ್ಳರು
ಕರವಶದ ಲಿಂಗವನು ಕೆದಕೆದಕಿ
ಅರಸುತ್ತೈದಾರೆ!
ಪೊಗರಿನಲ್ಲಿ ಸೊಡರ ಬಿಟ್ಟು
ಭಿಕ್ಷಾನ್ನದ ಖಾವಿಧಾರಿಗಳು
ತಮ್ಮತಾವರಿಯದೆ
ಆಧರಪಾನವನುಂಡು ತೇಗಿ
ಸುರಾಪಾನವ ಬೇಡುತೈದಾರೆ.
ಇದನರಿತ ಕುರಿಗಾಹಿಯೊಬ್ಬನು
ಹಿರಿದ ತಲೆಗಳ ಹಿಡಿದು
ಅಧ್ಯಾತ್ಮವಿಕಾರದ ನೆತ್ತರ ಕುಡಿದನು
ನೋಡಾ ಹಗೇದಿಬ್ಬೇಶ್ವರ!
ನೊಸಲ ಮೇಲೆ ವಿಭೂತಿ ಭಾರಿ
ಅಂಗದ ಮೇಲೆ ಲಿಂಗವ ಹೇರಿ
ಲಿಂಗವ ಹೊತ್ತ ಯತಿ ನೀ ಲಿಂಗಾಯತಿ
ಹಿಡಿ ಸರಿ ದಾರಿ ಎಂದು ದೀಕ್ಷೆ ಕೊಟ್ಟೆಡೆ
ನಾ ಲಿಂಗಾಯತ ನಾ ಲಿಂಗಾಯತ
ಆಯತವಾಗಲಿ ಭವ ಭಾಗ್ಯವೆನಗೆಂಬ
ಹೋರಿಗಳ ಹುರಿಗಟ್ಟಿ ಕೆಡುಹು ಹಗೇದಿಬ್ಬೇಶ್ವರ!
ಗುಹೇಶ್ವರ ಸ್ತ್ರೀಲಿಂಗ
ಚೆನ್ನಮಲ್ಲಿಕಾರ್ಜುನ ಪುಲ್ಲಿಂಗ
ಕೂಡಲಸಂಗಮದೇವ ಸಂಗಮಲಿಂಗ
ಇಂತಿಪ್ಪು ಅನುರಕ್ತ ಪರಿತ್ಯಕ್ತ ವಿರಕ್ತಿಗಳ
ಲಿಂಗಸಂಗಮದ ನವ ಕಲ್ಯಾಣಕ್ರಾಂತಿ
ಲಿಂಗವಂತ ಧರ್ಮ ಕಾಣಾ ಹಗೇದಿಬ್ಬೇಶ್ವರ!
ಕದಳಿಯ ಬನವ ಹೊಕ್ಕು ಹೊಲಬ
ತಿಳಿಯದೇ ಮೇಲ್ತಿಳಿಯ ನೆಕ್ಕಿ,
ಬಯಲ ಗಾಳಿಯ ಹಿಡಿದು ಘಟ್ಟಿಸದೇ
ಹೂಸಿದ ವಾಯುವ ಮೂಸಿ,
ಆಳಕ್ಕಿಳಿಯದೆ ಬರಿದೇ ಬಂದುದೇ
ಲಿಂಗಜ್ಞಾನವೆಂದು ಶಾಸನವ ಬರೆದ
ಪಂಡಿತರನೇನೆಂಬೆ ಹಗೇದಿಬ್ಬೇಶ್ವರ!
ವೀರಶೈವ ಬೇರೆಯೋ ಲಿಂಗಾಯತ ಬೇರೆಯೋ?
ವೀರಶೈವವೆಂಬ ಶಿವಲಿಂಗಕ್ಕೆ ಲಿಂಗಾಯತವೆಂಬ ಕಂಥಿಯ ಕಟ್ಟಿಸಿ,
ಆ ಲಿಂಗವ ಪೂಜಿಪ ಲಿಂಗಾಯತಿಗಳೇ
ಮುಂತಪ್ಪು ಲಿಂಗವ ತೊರೆದು ಬರಿಗಂಥಿಯ ಪೂಜಿಪಿರೇ?
ಆತ್ಮ ಬೇರೆಯೋ, ದೇಹ ಬೇರೆಯೋ!
ಇಂತಿಪ್ಪು ಆತ್ಮವ ತೊರೆದು ದೇಹವ ಪೊರೆವ
ಶವಗಳಿಗಿಲ್ಲ ಸಂಸ್ಕಾರವೆಂಬ ಹಗೇದಿಬ್ಬೇಶ್ವರ!
ಜಾತಿ ಕೂಟವ ಬಯಸಿ ಕೂಡಲಸಂಗನ
ವಿಶ್ವಗುರುವೆಂದು ಹೊಗಳುವರಯ್ಯ
ಜಾತಿ ಬಲವ ಬಯಸಿ ಸಾಮಂತನ ನಾಡಪ್ರಭುವಾಗಿಸಿದರಯ್ಯ
ಬಹುಮನೆಯ ಗೆಲ್ಲಲು ದಂಡುಕೋರನ ಹಬ್ಬವ ಹೂಡಿ
ರಾಯನ ಭಾರ್ಯನಾಗಿಸಿ
ವೃಷಣಗಳ ಶಿರದ ಗಾತ್ರಕೆ ಹಿಗ್ಗಿಸಿ ಪೊರೆವವರ
ಮಸ್ತಕವೆಲ್ಲಿಹುದೋ ಹಗೇದಿಬ್ಬೇಶ್ವರ!
ಭರತ ಪರ್ವದ ಸಾಗರ ಮಥನದಲ್ಲಿ
ಭಕ್ತಗಣ ಅಮೃತವೆಂದೂ, ಅಭಕ್ತಗಣ
ಹಾಲಾಹಲವೆಂದು ಕೋಲಾಹಲ ಮಾಡುತ್ತಿರೆ
ದೂರತೀರದ ಜನ ಅದೆಲ್ಲ ಉಪ್ಪುನೀರೆಂದಡೇ
ಇಂತಿಪ್ಪು ಭಕ್ತ/ಅಭಕ್ತರ ವಿಸ್ಮೃತಿಯ
ಪ್ರಲಾಪವ ನೋಡಾ ಹಗೇದಿಬ್ಬೇಶ್ವರ!
ಖಾದಿ ಬುದ್ಧಿಜೀವಿ, ಖಾವಿ ಸುದ್ದಿಜೀವಿ, ಕೂಡಲು ಸಂಗನಿಲ್ಲದೇ
ಆತ್ಮಲಿಂಗಾನಂದದ ಲೋಲುಪತೆಯಲ್ಲೂ
ಅತೃಪ್ತ ಸ್ತ್ರೀಜೀವಿ
ಇಂತಿಪ್ಪು ವೀರ ಲಿಂಗ, ಶೈವ ಆಯತ,
ಹುಚ್ಚ ನೀ ಬಿಡು ಹಗೇದಿಬ್ಬೇಶ್ವರ!
ಒಂದೆಡೆ ಜಗ್ಗೇಶನ ಪ್ರತಾಪ,
ಮಗದೆಡೆ ಪ್ರಕಾಶನ ಪ್ರಲಾಪ!
ಒಬ್ಬ ಕಮಲಮುಖಿಗೆ ಕಣ್ಣು ಹೊಡೆವವ!
ಇನ್ನೊಬ್ಬ ಬುದ್ಧಿಜೀವಿ ದುಪ್ಪಟ್ಟಿಯೊಳಗೆ "ಕೈ"ಕೆಲಸದಲ್ಲಿ ತೊಡಗಿರುವವ
ಹ*ವನ ಬಿಟ್ಟು ಹಣಿಕಿದವನ ಹಿಡಿದಾರು ಹಗೇದಿಬ್ಬೇಶ್ವರ!
ರಂಗಮಂದಿರದಲ್ಲಿ ರಾಷ್ಟ್ರಗೀತೆಯ ಪಾಡೆಂದುದು ನ್ಯಾಯಾಂಗ
ಮಸಣದಿ ರಾಷ್ಟ್ರಧ್ವಜವ ಹಾಸಿತ್ತು ಶಾಸಕಾಂಗ, ಜನಾಂಗ.
ಮೌಢ್ಯ ಸುದ್ದಿಯ ಪಸರಿಸುತಿಹ ಪತ್ರಿಕಾ ವಿಕಾರಾಂಗ,
ಈ ಸುದ್ದಿ ಮೆದ್ದು ವಿಶ್ವಗುರುವೆಂಬ ಪೆದ್ದು ಮುಖಕ್ಕೊರೆಸುವ
ಬುದ್ಧಿಜೀವಿ ವಿಕಲಾಂಗಗಳ ಶಿಕ್ಷಣಾಂಗವನೇನೆಂಬೆ!
ಹುಚ್ಚುಮುಂಡೆಯ ಕಲ್ಯಾಣದಿ ಕಲ್ಯಾಣವಾಗೆಂಬೆ ಹಗೇದಿಬ್ಬೇಶ್ವರ!
ನಿನ್ನೊಳು ಮಾಯೆಯೋ, ಮಾಯೆಯೊಳು ನೀನೋ!
ಮಾಯೆಯನು ಜಯಿಪ
ಕಪಟಿ ಜತನವ ಬಿಟ್ಟು
ಮಾಯೆಯೊಳು ಮಾಯಾಗಿ
ಮಾಯವಾಗಿ ಹೋಗು ಹಗೆದಿಬ್ಬೇಶ್ವರ!
ಅಭೂತದೆ ಇಲ್ಲದ ಭೂತವ ಹೊತ್ತ ವಿಚಾರಪರರು
ವಿನಾ ಕಾರಣ ಧರ್ಮಕಾರಣವೆಂದವರು
ಇಂದು ನರಿ ಹುಲಿಯಾದಪ್ಪು
ಭೂತ ವರ್ತಮಾನವಾದಪ್ಪು
ನಿಕೃಷ್ಟ ರೋಮ ಯಮಪಾಶವಾದಪ್ಪು
ಮಾರಿಗೆ ಹೋರಿಯೇ ಹಾದಪ್ಪು
ನರರು, ಪರರು ಮೌನದಾ ಮೊರೆಗೆ ಪೋಗಿರ್ಪ ಪರಿಗೆ
ಪಾಖಂಡಿಗಳು ನೂರ್ಮಡಿ ಪೆಚ್ಚಿಹರು ನೋಡಾ ಹಗೆದಿಬ್ಬೇಶ್ವರ!
ಅಲೋಪತಿ, ಹೋಮಿಯೋಪತಿ, ಆಯುರ್ಪತಿ, ಗೃಹಪತಿ ಮುಂತಪ್ಪುಪತಿಗಳ ಜನಕಿ
ಸಸ್ಯ ಖಗಮೃಗಗಳ ಜನನಿ ಜಾನಕಿ!
ಬೆಳೆಯುತ್ತ ಬೆಳೆಯುತ್ತ ದಾಯಾದಿಗಳಾದ
ಇಂತಪ್ಪು ಜಾನಕೀಸುತರು ಮೂಲವನರಿಯದೆ ತಮ್ಮ ತಮ್ಮ ಹಿರಿತನವ ಮೆರೆವ ವೈದ್ಯ, ಪಂಡಿತ, ಹಕೀಮ, ಪಾಮರರ ಹಕೀಕತ್ತ ಕಂಡು ಬರಿದೇ ಬಪ್ಪುದೆ ಶಿವಜ್ಞಾನವೆಂದು ಗಹಗಹಿಸಿದನಪ್ಪ
ಅಪ್ಪರ ಅಪ್ಪ ನಮ್ಮಪ್ಪ ಹಗೆದಿಬ್ಬೇಶ್ವರ!
ನರಿಯಂತೆ ಸರಿಹೊತ್ತು ಮಾನಿನಿಯರ
ಕಾಮಿನಿಯರೆಂದು ಭ್ರಮಿಸಿ ಉದಾರದಿ
ಮುಕ್ತತೆಯ ದ್ರವಿಸಪೋಗಿ ಪೀಡಿಸದಿರಿ.
ಪಂಥದಿ ಮಂತ್ರಿಸಿ ಸಿದ್ದಾಂತದೆ ಸಿದ್ಧಿಸಿದೊಡೆ ಹೊತ್ತಿ ಉರಿವದು ಉದರಾಗ್ನಿ ಮಾಯೆ ಮಾತ್ರ.
ನಾನು ಮುಕ್ತ ಕಾಮಿ ಶಿಶ್ನಪ್ರಸಾದಿ
ನಿಜ ಗುರುಲಿಂಗಜಂಗಮನೆಂದು
ಕಾಮ ಕಳೆದು ನಾಮವಳಿಸಿ
ನಿಜಮುಕ್ತದೆ ಅರುಹಿದೊಡೆ
ಕುಣಿಕುಣಿದು ಬಪ್ಪ ಮಾನಿನಿ
ಸೃಷ್ಟಿಯಗೈದು ಲಿಂಗೈಕ್ಯವಾ ಮೆರೆದು
ಉದಾರದಿ ನಿಜ ಮಾಯೆಯ ತೋರುವಳೆಂದು
ಪೇಳಿಪನು ಹಗೇದಿಬ್ಬೇಶ್ವರ!
ದೇಶದಂಚಿನ ಗಡಿಯ ಮಾತಿಲ್ಲ,
ದೇಶದೊಳಗಿನ ಖಜಾನೆಯ ಗತಿ ಕುರಿತು ಚಿಂತನೆಯ ಮಂಡಿಸಲಿಲ್ಲ.
ಬಂದೊದಗಿದ ಮಾರಿಯ ಕ್ಯಾರೆ ಎನಲಿಲ್ಲ,
ಸರ್ವರೋಗಕು ಸಾರಾಯಿ ಮದ್ದೆಂಬ
'ಕಾ' ಕಮಂಗಿಗಳ ಭಾಗ್ಯವೊಂದೇ ಬಡಪಾಯಿ ದೇಶಕೆ ಆತ್ಮ ನಿರ್ಭರದ ಸರಿದಾರಿಯೆಂದರಿತ ಸರದಾರ!
ಉಧೋ ಉಧೋ ಉಧೋ,
ಇತಿಹಾಸದಲ್ಲಿ ಇದೇ ಪ್ರಪ್ರಥಮ ನೋಡಲೇ ಹಗೆದಿಬ್ಬೇಶ್ವರ!
ಅಣುರೇಣುತೃಣಕ್ಕೆ ಬೆದರಿ ತವರಿಗೆ ಬರುವವರ ಕಮರಿಯಾಚೆ ನಿಲ್ಲಿಸಿ
ಹುರಿಯಾಳುಗಳವರನ್ನು ಭಂಗದ ಶುಚಿಗೆ ಗುರಿಯಾಗಿಸೆ,
ಭಂಗಿ ಸೇದಿದಂದದಿ ಭಟ್ಟಂಗಿಗಳು
ಇದು ಅಸ್ಪೃಶ್ಯ, ಬ್ರಾಹ್ಮಣ್ಯ, ಅವಹೇಳನ, ಇದು ಸ್ಥಿತಿವಂತರ ಆಸ್ತಿಯ ಮಸ್ತಿ ಇತ್ಯಾದಿ ತತ್ವ ಸಿದ್ದಾಂತವನು ಕಾವ್ಯ ಮೀಮಾಂಸದಿ ಪೇಳುತಿರೆ,
ಶುದ್ಧಿಗೊಳಗಾದ ಪಾಪದಾ ಕುರಿ,
ಬಾಹ್ಯವನೆಂತೋ ತೊಳೆದಿರಿ ಹುಚ್ಚಪ್ಪಗಳಿರಾ! ದಿಲ್ಲಿಯ ಸೋಂಕಿನ ಕಿಚ್ಚ
ನಾ ಹೊತ್ತು ತಂದಿಹೆ ಬೆಚ್ಚಗೆ ನನ್ನೆದೆಯೊಳಗೆ!
ಅದನೆಂತು ತೊಳೆಯುವಿರೆಂದು ಕೇಳದಾ ನಿಮ್ಮ ತತ್ವ ಮಸಿ ಸಿದ್ದಾಂತ ಕುರುಡು ಕುಂಟುಶಂಟವಪ್ಪುದು ಕಾಣಿ ಹಗೆದಿಬ್ಬೇಶ್ವರ!
ಪುಸ್ತಕವೊಂದನ್ನು ಅರ್ಥೈಸಿಕೊಳ್ಳಲಾಗದ ಕುಂಞಿ
ವಚನವೊಂದರ ಗ್ರಹಿಕೆ ತಪ್ಪೆಂದು
ಕೈಗೆಟುಕದ ದ್ರಾಕ್ಷಿ ಹುಳಿಯೆಂದು
ಕೈಲಾಗದೆ ಮೈ ಪರಚಿಕೊಳ್ಳುವ ಪರಿಗೆ
ಅದರೊಟ್ಟಿಗೆ ಹರಿವಿರದ ಅರಿವುಗೇಡಿಗಳು ಊಳಿಡುವ ಅರುಹಿಗೆ ನಾ ನಸುನಗುವೆ ಹಗೆದಿಬ್ಬೇಶ್ವರ!
ದೇಶ ಸುತ್ತು ಕೋಶ ಓದು ಎಂದನು ಸಂತ.
ಕೋಶ ಓದಿ ಖಂಡುಗ ಹೇಳಿದೊಡೆ ಪಂಡಿತ,
ದೇಶ ಸುತ್ತಿ ಲವಲೇಶ ಹೇಳಿದೊಡೆ ಪಾಮರ.
ಇಂತಪ್ಪು ನುಡಿಯುತೈದಾವೆ ಉಷ್ಣವೇರಿದ ಅಸಹಿಷ್ಣು ಕೋಶದ ಕೂಪ ಮಂಡೂಕಗಳು. ಕಿಂಚಿತ್ತು ಭೋರ್ಗರೆದು ತಂಪಾಗಿಸೋ ಮಂಡೂಕಗಳು ಸತ್ತಾವು ಹಗೇದಿಬ್ಬೆಶ್ವರ!
ಪ್ರಜಾಪ್ರಭುತ್ವದ ಬುನಾದಿಯ ಮೇಲೆ
ಸಂವಿಧಾನದ ನಿಯಮದಡಿಯಲಿ
ಚುನಾಯಿತ ಸರ್ಕಾರ ಸ್ಥಾಪಿತವಾದಲ್ಲಿ,
ಅದು ಜಡ್ದೆಂದು ಜರಿದ ಪ್ರಜ್ಞಾಧಿಪತಿಗಳು
ಸಂವಿಧಾನದ ನಿಲುವಂಗಿಯ ಝಾಡಿಸಿ ಧರಿಸಿ
ಕಾಫ್ಕಾ, ಬೀಫ್ಕಾ, ತಾವೋ ಎಂದು ತಂತ್ರಿಸಿ
ಸ್ಟ್ಯಾಲಿನ್, ಲೆನಿನ್ ಮಾವೋ ಎಂದು ಮಂತ್ರಿಸಿ
ಕ್ಯಾಸ್ಟ್ರೊ ಎಂಬ ಮಂತ್ರದಂಡದಿ ಕ್ಯಾಸ್ಟ್ರೇಟಿಸಿ
ಛೇ ಗವೇರ ಹುಚೇರ ಎಂದು ಹೂಂಕರಿಸಿ ತತ್ವಾಂಧತೆಯ ಪಸರಿಸಿದೊಡೆ
ಪಂಚಪ್ರಜ್ಞೆಗಳೆಲ್ಲ ಮರೆತು
ಉಘೇ ಉಘೇ ಎಂಬುದೇ ಪ್ರಜ್ಞೆಯಾದೊಡೆ
ಅವಜ್ಞೆಯೆಂದು ಗಹಗಹಿಸೀಯೆ ಹುಚ್ಚ,
ನಿನ್ನ ಭಕ್ತನೆಂದು ಪೆಚ್ಚಾಗಿಸಿ ಹಗೇವಿಗೆ ಹಾಕುವರೋ ಹಗೆದಿಬ್ಬೇಶ್ವರ!
ವೈದಿಕವೆಂಬರು ಅವೈದಿಕವೆಂಬರು
ಆರ್ಯ ದ್ರಾವಿಡರೆಂದು ಭೇದವ ಮೆರೆವರು
ಸಹಿಷ್ಣುವೆನ್ನುತ್ತ ಬಂಡಾಯಗೈವೆಂಬ
ವರ್ಗಭೇದದ ಪ್ರವರ್ಗಿಗಳೇ ಕೇಳಿ,
ಬ್ರಾಹ್ಮಣ, ಶೂದ್ರ, ದಲಿತಾದಿ ಮುಂತಪ್ಪು ಜಾತಿಗಳಲಿರ್ಪ ಕೆಂಪು ಕಪ್ಪಿನ ತೊಗಲ,
ನೀಲಿ, ಕಂದು,ಕಪ್ಪು ಕಂಗಳ,
ಗುಂಗುರು ರೇಶಿಮೆ ಕೂದಲ ಪ್ರವರ್ಗಗಳ
ಸೃಷ್ಟಿ ಎಂತಪ್ಪಾಯಿತೆಂದು ಬಲ್ಲಿರೇ?
ಹೋಗಿ ತಮ್ಮ ತನುವ ಒರೆಹಚ್ಚಿಸಿಕೊಳ್ಳಿ
ಮನವ ಸಂತೈಸಿಕೊಳ್ಳಿ ಹಗೆದಿಬ್ಬೇಶ್ವರ.
ವೃಷಣವ ಮಸ್ತಕವ ಮಾಡಿ
ತೃಣವ ಘನವೆನ್ನಿಸಿ
ಅರ್ಬುದದ ಬೀಜವ ಘನಲಿಂಗ ಮಾಡಿ
ಒಡ್ಡೋಲಗದಿ ಅದ್ಭುತ ಅತ್ಯದ್ಭುತವೆಂದು ಕೊಂಡಾಡುವ ತನು ವಿಕಾರಿ, ಮನ ವಿಕಾರಿಗಳ
ಅನು ವಿಕಾರವೆಪ್ಪುದೋ ಬಪ್ಪಾ
ವಿಕಾರ ವಿಹಾರಿ ಹಗೆದಿಬ್ಬೇಶ್ವರ!
"ಜಾತಿ ಅತೀಯತೆ"ಯನ್ನು
"ಜಾತ್ಯಾತೀತ"ವೆಂದು ಬಣ್ಣಿಸಿ
"ಜಾತ"ನನ್ನು ಅತೀತನಾಗಿಸಿ
ಅಮೇಧ್ಯವ ನೈವೇದ್ಯವ ಮಾಡಿ,
ಉಣ್ಣಲಿಕ್ಕುವ ಪಾತಕಿಗಿಂತ
ಘನಘೋರ ಪಾತಕ,
ಆತನ ಕಾಯಕವ ವಿಚಾರಿಸದೆ
ಆ ನೈವೇದ್ಯವ ಮಹಾಪ್ರಸಾದವೆಂದು
ನೆಕ್ಕಿ ನೆಕ್ಕಿ ಮುಕ್ಕುವ ಭುಂಜಕ.
ಆ ಪಾತಕದ ಭುಂಜಕ ಮೂಶಂಡಿಗಳಿಗೆ
ರೌರವ ನರಕ ಹಗೆದಿಬ್ಬೇಶ್ವರ!
ಸರ್ಕಾರೀ ಸೇವೆಯ ಗಾಳಿಗೆ ತೂರಿ
ಜಾತಿ ದುರಾಭಿಮಾನದೆಲ್ಲೆ ಮೀರಿ
ಜಾತಿ ಪಕ್ಷವ ಸೇರಿ,
ಐನಾತಿ ಜಾತ್ಯಸ್ಥನ ಹುಲ್ಲ
ಹೊರೆ ಹೊತ್ತ ಮೂಶಂಡಿ,
ವೈನಾತಿ ದೊರೆ ಕುಲಸ್ಥನ ಮೆರೆಸಿದೆಡೆ
ಅವನ ಸೊಲ್ಲ ಮುರಿವೆನೆಂಬ
ಪಾಶಂಡಿ ನೋಡಾ ಹಗೆದಿಬ್ಬೇಶ್ವರ!
ಸುದ್ದಿಯ ಹುಚ್ಚಿನ ಹಜಾರದ ಅಣ್ಣ,
ಇಲ್ಲದಾ ತುರ್ತ ಹೇರಿಕೊಂಡು
ಊಹೆಯ ಕೇಡಿಗೆ ಸಿಲುಕಿ, ಹಗ್ಗವ ಹಾವೆಂಬ ಮೋಡಿ ಮೋಹದ ಗುಡುಗುಡಿಯ ದಾಹದ
ವಿಭಕ್ತಿಯ ಗುಡಿಯ ಗಾರುಡಿಗರ ಗುಂಪಿಗೆ ಗಾಂಪನಾದ ಹಗೇದಿಬ್ಬೇಶ್ವರ!
ಮಾತೃಭಾಷೆಯಲಿ ಕಲಿತರೇನು
ದೇಶಭಾಷೆಯಲಿ ಓದಿದರೇನು
ಚಿಂತನೆಗೆ ಹಚ್ಚದಾ ಮೂಲ ಶಿಕ್ಷಣ,
ಎಂತಪ್ಪು ಭಾಷೆಯಲಿದ್ದರೇನು!
ಕೂಸು ಕಮಂಗಿಯಾಗುದಕೂ
ಭಾಷೆ ಇಂಗಿ ಹೋಗುದಕೂ
ಸಂಬಂಧವೆನಿತು ವಿಲಕ್ಷಣ
ಭಾಷಾ ವಿರಾಗಿ ಹಗೆದಿಬ್ಬೇಶ್ವರ!
ವಾಸ್ತವದ ಅರಿವ
ಅನುಭವದ ಹರಿವ
ಅನುಭಾವದಿ ಆರುಹಿದೆಡೆ,
ಹುಂಬಜರು ಡಂಭಾಚಾರದಿ
ಕೂಪಮಂಡೂಕ ಭರದಿ
ಧಗಧಗಿಸುವ ಪರಿಗೆ
ಹುಚ್ಚನಾಗದಿರು
ನೀ ಹಗೇದಿಬ್ಬೇಶ್ವರ.
ಕನ್ನಡಕ್ಕಾಗಿ ಕೈಯೆತ್ತು ನಿನ್ನ ಕೈ
ಕಲ್ಪವೃಕ್ಷವಾಗುತ್ತದೆಂದನಾ ಕವಿ.
ಖನ್ನಡವೆನಿ ಕೈ ಎತ್ತಿ ಕರವ(ವೇ) ಹೇರಿ
ಕಲ್ಪಕವ ಕಂಡುಕೊಂಡ ಭವಿ!
ಕವಿಯ ನುಡಿಗಿಂತ, ಭವಿಯ ಉದರಾಗ್ನಿ
ದಳ್ಳುರಿಯಾಗಿ ಆ ಬಣ ಈ ಬಣ ಸೇರಿ
ಹಿರಿಹಿರಿದು ಸಜ್ಜನರ
ಕಲ್ಪವೃಕ್ಷದೊಂದಿಗೆ ಕನ್ನಡ
ಕಾಮಧೇನುವ ಹಿಂಡುವುದ ಕಂಡು
ಬಸವಳಿದ ಹಗೆದಿಬ್ಬೇಶ್ವರ!
ಅರುಹ ಪೂಜಿಸಲೆಂದು ಕುರುಹು
ಎಂದನಾ ಗುಹೇಶ್ವರ
ದೇಹವೇ ದೇಗುಲ ಹೊನ್ನ ಶಿರವೇ
ಕಲಶವೆಂದನಾ ಅಣ್ಣ
ಗುಡಿ ಚರ್ಚು ಮಸಜೀದಿಗಳ ಬಿಟ್ಟು
ಹೊರಬನ್ನಿ ಎಂದನಾ ರಸಋಷಿ
ಈ ಮುಂತಪ್ಪು ಆದ್ಯರ ಮುಂದಿರಿಸಿ
ನಾಸ್ತಿಕ ಬುದ್ಧಿವಂತರು ತೊಡೆ ತಟ್ಟಿ,
ದೇವರಿರುವನು ಗುಡಿಯಲ್ಲೇ,
ಅದು ಆ ಒಂದರಲ್ಲೇ, ಶಬರಿಗಿರಿಯಲ್ಲೇ.
ಕಾಣ ಹೋಗಿರಿ ಹೆಂಗಳೆಯರೇ
ಎಂದು ಜಂಗಮವ ಮರೆಸಿ
ಸ್ಥಾವರವ ಮೆರೆಸಿ
ವೇದ್ಯರ ಮುರುಗಮರ್ಧನೋಲ್ಲಾಸದಿ ಕುಣಿವುದಕೆ ಆಧ್ಯಾತ್ಮ
ಅದ್ವಾನವಾಯಿತೈ ಹಗೇದಿಬ್ಬೇಶ್ವರ!
ಹರಿ ಹರ ಸುತ
ಹೆಣ್ಣಿಲ್ಲದೇ ಹುಟ್ಟಿದ ಅಚ್ಯುತ
ಸೃಷ್ಟಿ ನಿಯಮ ಮೀರಿ ಅನಂತ
ತಾನನಂತವಾಗುವ ಪರಿಯ ಪ್ರತೀಕ.
ಆ ಅಮೂರ್ತವ ಪಿಡಿದು
ಮೂರ್ತ ಮಾಯೆಯ ಸುತ್ತಿ
ಭೌತಿಕಗೊಳಿಸಿ, ಲೌಕಿಕವಾಗಿ ಸ್ತುತಿಸಿ
ಐಹಿಕ ವಾಂಛೆಯ ಗತಿಯಾಗಿಸುವ
ರಂಭೂರ್ವಶಿಮೇನಕೆಯರ ದೈಹಿಕ
ಬಿನ್ನಾಣ, ಗಂಡುಗಳ
ತೊಳಲಾಟದಲಿ ಅಯ್ಯಪ್ಪ ಬಸವಳಿದು
ಅಯ್ಯಯ್ಯಪ್ಪಾ ಶರಣೆಂಬ ನೋಡಾ ಹಗೇದಿಬ್ಬೇಶ್ವರ!
ಮೀಟಿದ್ದನ್ನು ಟ್ವೀಟಿಸಿದರೆ ಶಿಕ್ಷೆಯಪ್ಪುದೆ?
ಆರರ ಹೊಲಬ ಮೂರು ಮಾಡಿ
ಆರ್ಯರ ಹೊಲಸ ದೂರು ತೋಡಿ
ದೂರುವಲ್ಲಿ ದೂರಿದೆಡೆ
ನ್ಯಾಯ ಕಾರಣ ಶಿಕ್ಷೆಯಪ್ಪುದು.
ಆರ್ಯನ ಮಾರಿಯ
ಕುಲಗೆಡಿಸುವಾ ಪರಿಯ
ಆರಿಯದೇ ಕುಲೀನ
ನಾರೀ ಬಳಗ ಮತಿಹೀನ
ಬೊಬ್ಬಿರಿವುದಾ ಕಂಡು
ಕಾಳಿ ಗಹಗಹಿಸುತ್ತಿಹಳು ಹಗೇದಿಬ್ಬೇಶ್ವರ!
ರಾಷ್ಟ್ರಪಿತನ ಶಾಖಪ್ರಯೋಗಕ್ಕೆ
ಹದವಾಗಿ ಬದಿಗಿದ್ದು
ವೈಷ್ಣವ ಜನತೋ ತೇನೆ ಕಹಿಯೆಗೆ
ಸಿಹಿ ಸಿಹಿಯೆಂದು ಮುಲುಗಿದಾ ಬಾಲಕನ್ಯೆಯರಿಂದು
ಹೂವರಳಿ ಕಾಯಾಗಿ
ಮೈಯರಳಿ ಹಣ್ಣಾಗಿ ಮೀಟೂ ಮೀಟೂ ಎಂದು ಏಕತಾರಿಯ
ಮೀಟುವ ಪ್ರೌಢಿಮೆಗೆ ತಾಳ ಹಾಕುವ ಬಾರಾ ಹಗೇದಿಬ್ಬೇಶ್ವರ!
ಕೈರಳಿಯ ಪಿಣರಾಯಿ
ತೋ(ತು)ರಿಕೆಯ ಕಮ್ಯುನಿಷ್ಠ.
ಹೀಗಳೆವ ಸಂಸ್ಥಾನ ಫ್ಯಾಸಿಸ್ಟ!
ಕೆರೆಕೆರೆದು ಹುಣ್ಣಾಗಿ
ಮೈಯಳಿಯೆ ತಲೆಬಾಗಿ
ಫ್ಯಾಸಿಸ್ಟ ಸಂಸ್ಥಾನ ನೆನಪಾಗಿ
ಕಾಮಿ ಚೀನಾ, ಕ್ಯೂಬಾ, ರೂಸು
ಗಬ್ಬು ನಾರುವ ಹೂಸು
ಎನಿ ಮೂಗಮುಚ್ಚಿ ಮಫ್ಲರು ಸುತ್ತಿ
ಸಂಯುಕ್ತ ಸಂಸ್ಥಾನ ಸೇರಿರೆ,
ಕುಡುಗೋಲು ಸುತ್ತಿಗೆಯ ಕೆಂಪು ಬಾವುಟದಡಿ
ಲೆನ್ನಿನ್ನು ಸ್ಟಾಲಿನ್ನು ಪಿಂಪು ಜಪವನ್ನು ಪಠಿಸುತ್ತ,
ತೊಟ್ಟು ಗುವೆರಾ ಅಂಗಿ
ಎಳೆಯುತ್ತಾ ಕ್ಯಾಸ್ಟ್ರೋ ಭಂಗಿ
ಫ್ಯಾಸಿಸ್ಟ ಐಫೋನು ಐಪಾಡಲಿ
ಬಾಬಿ ಮಾರ್ಲಿಯ ಹಾಡಲಿ
ಪಿಣರಾಯಿ ಶಿಷ್ಯ(ಶ್ನ)ಕೋಟಿ
ಕ್ಯೂಬಾದ ಕಾಮ ಮೀಟಿ
ತೀಟೆ ತೀರುತ್ತಿರೆ ಪರಿಪರಿಯಾಗಿ
ನಾಚಿ ನೀರಾಗಿಹ ಹಗೇದಿಬ್ಬೇಶ್ವರ!
ನೊಬೆಲ್ ಪಾರಿತೋಷಕದ ಲೇಖಕನ
ಸ್ತ್ರೀಶೋಷಣೆಯ ಕೆಣಕರು
ಕನ್ನಡ ಜಾಣಜಾಣೆಯರ ಪತ್ರಿಕೆಯ ಪಿತಾಮಹ,
ಕಾಮಸಾಹಸವ ವರ್ಣಿಸೆ ಭಜಿಪರು!
ಜ್ಞಾನಪೀಠಿಯ ಸ್ತ್ರೀಪೀಡನೆಯ ಸೃಜನಶೀಲವೆಂಬ
ಇಂತಪ್ಪು "ಎಡ" ಸ್ತ್ರೀಸಂವೇದಿಗಳು
ಬಡ "ಬಲ" ಭಟ್ಟನ ಕುಚೋದ್ಯದ ಮದ್ಯಮರ್ಕಟತನಕೆ
ಯುದ್ಧ ಸಾರುದ ಕಂಡು "ಮಧ್ಯಮ"
ನಾ ಮುಗ್ಗರಿಸಿದೆ ಹಗೇದಿಬ್ಬೇಶ್ವರ!
ಉಳ್ಳವರ ಸಿರಿ ಕಂಡು ದಾನ ಧರ್ಮವ ಮಾಡರೆಂದು
ಕರುಬುವ ಮೂಲ ಉರಿಲಿಂಗಬುದ್ಧಿಯ ಮುಂಡಿಸದೆ
ಜಟೆಕೇಶ ಬೆಳೆಸಿ, ಕೆಂಪು ರುಮಾಲು ತೊಡಿಸಿ,
ಸಮಾಜವಾದದ ವಸ್ತ್ರವ ಸುತ್ತಿ, ಹಪಾಹಪಿಯ ಭಾವದಿ
ಪುರಾಣ ಸೃಷ್ಟಿಸಿ ಪ್ರವಚನ ಬೀರುತ್ತಾ,
ಗುಡುಗುಡಿಯ ಭ್ರಾಮಕದ ಧೂಮವನೆ ವ್ಯೂಮವೆನಿ,
ಲೋಕವ ಗುದ್ದಿ ತಿದ್ದ ಹೊರಟ ಪೆದ್ದರ ನೋಡಿ
ಬಿದ್ದು ಹೊರಳಾಡಿ ನಗುತಿಹನು ಹಗೇದಿಬ್ಬೇಶ್ವರ!
ನುಡಿದರೆ ಮುತ್ತಿನ ಹಾರದಂತಿರಬೇಕೆಂದನಣ್ಣ,
ನುಡಿದರೆ ರಕ್ತ ಕಾರಬೇಕೆಂಬ ತಮ್ಮ!
ನುಡಿದರೆ ಸ್ಪಟಿಕದ ಶಲಾಕೆಯಂತಿರಬೇಕೆಂದನಣ್ಣ,
ನುಡಿದರೆ ರಕ್ತದ ಓಕುಳಿಯಾಗಬೇಕೆಂಬ ತಮ್ಮ!
ನುಡಿದರೆ ಲಿಂಗಮೆಚ್ಚಿ ಅಹುದಹುದೆನ್ನಬೇಕೆಂದನಣ್ಣ,
ನುಡಿದರೆ ಕಿಚ್ಚನಚ್ಚಿ ಭಕ್ತರೊಚ್ಚಿ
ಕೆಂಪುಕೆಂಪಾಗಬೇಕೆಂಬ ಕ್ರಾಂತಿಜೀವಿಗಳ ಕೈಯಲ್ಲಿ
ಅಣ್ಣ ಭ್ರಾಂತಿಯಾಗಿ ಹೋಗಿಹ ಹಗೇದಿಬ್ಬೇಶ್ವರ!
ಅನ್ನಕ್ಕೆ ಆಳಾಗಿ, ತತ್ವಕ್ಕೆ ಶರಣಾಗಿ ಜಾತಿಗೆ ಮತಿಯಾಗಿ,
ಪ್ರಭುತ್ವ ಪತಿ(ತ್ನಿ)ಯೆನಿಸಿ, ಪ್ರಭಾವಳಿಗಳೇ ಹಿರಿಯಾಗಿ,
ಸತ್ಯ ಧರ್ಮ ನ್ಯಾಯಗಳು ಕಿರಿಯಾದೊಡೆ
ಆ ಪಾಂಡಿತ್ಯ ಪಾಮರರ ಅನುಭಾವ ಭವಿಯಾಗಿ
ಲೋಕಕ್ಕೆ ಹೊರೆ ಕಾಣಾ ಹಗೇದಿಬ್ಬೇಶ್ವರ!
ಸುತಾರನೆಂಬ ಹತಾರ ಕರ್ನಾಟಕದ ಕಬೀರನೆಂದರೆ,
ಗುರುರಾಜನೆಂಬ ನಾಯ್ಡು ಕರ್ನಾಟಕದ ನಾರದ ಮುನಿಯೇ?
ತತ್ವಜ್ಞಾನಕ್ಕೂ, ತತ್ವವಾಚನಕ್ಕೂ ವ್ಯತ್ಯಾಸವರಿಯದ,
ರೂಹನರಿಯದೆ ದೇಹ ಸ್ತುತಿಸುವ,
ಹರನನರಿಯದೆ ಹರಹರನೆಂದು ಬೊಬ್ಬಿರಿಯುವ,
ಹರಿಯ ಪೊರೆಯದೆ ಅವನಾಮವ ಪರಿಯುವ
ಡಂಭರನೇನೆಂಬೆ ಹಗೇದಿಬ್ಬೇಶ್ವರ!
ಆತ ಹುಸಿಯಾನ, ಹೂಸಿದ್ದೆ ಕಲೆಯೆಂದ,
ಸಂಬಂಧ ಹುಸಿಯೆಂದ, ಕಾಮದೇವತೆಗಳೇ ಅನ್ಯಧರ್ಮಜರವೆಂದ,
ಕಡೆಗೆ ಮತಿಗೆಟ್ಟು ಕಾಲಕ್ಕೆ ಗತಿಯಾದ!
ಇನ್ನೊಬ್ಬ ಭಗವಾನ, ಅಕ್ಷರದಿ ಇರಿದ,
ಮಾತಲಿ ಕೊಂದ, ದ್ವೇಷದ ದಳ್ಳುರಿಯ ಕಿಚ್ಚ ಪಸರಿಸಿದ,
ಕಡೆಗೆ ಆಸ್ಥಾನ ಪಂಡಿತನೇ ತಾನಾಗಿ ರಾಮನೇ ಹಯವಾನನೆಂದ.
ಈಗೊಬ್ಬ ಬಢವಾನ, ರಾಜಾಶ್ರಯದ ಗಧವಾನ
ತತ್ವನಿಂದಕನ ಹಿಡಿ ಕಡಿ ಕೊಲ್ಲೆಂದ, ಚಕ್ರಕ್ಕೆ ತೀರ್ಥ ಬಿಡಿಸಲು ಹೋಗಿ
ಚಕ್ರಸುಳಿಗೆ ಸಿಲುಕಿ, ಹುಸಿನಗೆ ಬೀರುತ್ತಾ ನಾ ತೇಲುತಿಹೆನೆಂಬ
ಇಂತಿಪ್ಪು ಸಿದ್ಧರಾಮನ ಜಟಿಲಮತಿಗಳ
ಕುಟಿಲತೆಯ ಅರ್ಥೈಸು ಹಗೇದಿಬ್ಬೇಶ್ವರ!
ಒಲೆ ಹತ್ತಿ ಉರಿದೊಡೆ ನಿಲಲುಬಹುದು ಧರೆ ಹತ್ತಿ ಉರಿದೊಡೆ?
ಲಿಂಗ(ಸಂವಿಧಾನ)ಕ್ಕೊಪ್ಪದ ಬಹುಪತ್ನಿತ್ವ
ಲೋಕ(ನೀತಿ)ಕ್ಕೊಪ್ಪದ ಪರನಾರೀ ಸಂಗ
ಲೋಕಾಳ್ವಿಕೆಗೆ ಒಪ್ಪಿತವಾಗಿ ಮೆರೆದೆಡೆ,
ಆ ವಿಕೃತ ಲೋಕವ ನೀನರ್ಪಿಸಿಕೋ ಹಗೇದಿಬ್ಬೇಶ್ವರ!
ತುಂಬುಗೊಡದ ಮೇಲೆ ಹಾಲ ಸುರಿದೆಡೆ
ಹರಿದು ಪೋಲಾಗುವುದಯ್ಯ
ಹರಿತ ಕತ್ತಿಯ ಮಸೆಯುತಿದ್ದೆಡೆ
ಮೂಸೆಗೆಸೆಯಬೇಕಾಗುವುದಯ್ಯ
ಬೇಕುಬೇಡಗಳ ಮೀರಿ ಸಂಪತ್ತ ಬೆನ್ನತ್ತಿದೆಡೆ
ಸುಖ ಶಾಂತಿಗೆಡುವುದಯ್ಯ
ಲೋಕ ಮೆಚ್ಚಿಸ ಹೋಗಿ
ಲೋಕದಾ ಸೆರೆಗೆ ನೀ ಸಿಲುಕದಿರು ಹಗೇದಿಬ್ಬೆಶ್ವರ!
ಜಿನ ಬ್ರಹ್ಮಶಿವನ ಸಮಯಪರೀಕ್ಷೆಯಲಿ ವೀರಶೈವ
ರಾಘವಾಂಕನ ವೀರೇಶಚರಿತೆಯಲಿ ವೀರಶೈವ
ಹರಿಹರನ ಬಸವರಾಜದೇವರ ರಗಳೆಯಲಿ ವೀರಶೈವ
ಶತ್ರು ಮಿತ್ರ ಭಕ್ತರ ಪುರಾಣಗಳಲಿ
ಆದ್ಯಬಸವಕಾಲೀನ ವಚನಕಾರರಲಿ ವೀರಶೈವ
ಲಿಂಗಾಯತ ಒಂದೆಂದು ಸಾರಿದೆಡೆ
ಭಿನ್ನವೆಂದು ಭಿನ್ನಹಿಸುವ ಭಿನ್ನಲಿಂಗಿಗಳ
ನಿರ್ವೀರ್ಯ ಲಿಂಗದಾ ಕೂಸ ಕಾಣಾ ಹಗೇದಿಬ್ಬೇಶ್ವರ!
ಸತ್ರದ ಕಾವಲುಭಟನ ಸಾಮ್ರಾಟನಾಗಿಸಿದನಂದು
ಚಾಣಕ್ಯನೆಂಬ ವಿಪ್ರ,
ಕೊಲೆಗಡುಕ ತಿಪ್ಪನ ರಕ್ಷಕನಾಗಿಸಿದ
ಪೂರ್ಣಯ್ಯನೆಂಬನಿನ್ನೊಬ್ಬ ಬ್ರಾಹ್ಮಣ,
ಸಂವಿಧಾನಶಿಲ್ಪಿಯ ಪೊರೆದು ಪೋಷಿಸಿದ
ಅಂಬೇವಾಡೇಕರನೆಂಬ ಹಾರುವ,
ಇಂತಪ್ಪು ಅಲ್ಪ ಹಾರುವರು ಮುಂತಪ್ಪು ಜನಂಗಳ ಕಲ್ಪ ಕಟ್ಟಿರೆ
ಅವಂಗಳ ನಿರ್ನಾಮ ಮಾಡೆಂಬ
ಲದ್ದಿಜೀವಿಗಳ ಶುದ್ಧಿ ಮಾಡೆಂಬ ಹಗೇದಿಬ್ಬೇಶ್ವರ
ಮಠದೊಳಗಿನ ವಿರಕ್ತ ಕಳ್ಳರು
ಕರವಶದ ಲಿಂಗವನು ಕೆದಕೆದಕಿ
ಅರಸುತ್ತೈದಾರೆ!
ಪೊಗರಿನಲ್ಲಿ ಸೊಡರ ಬಿಟ್ಟು
ಭಿಕ್ಷಾನ್ನದ ಖಾವಿಧಾರಿಗಳು
ತಮ್ಮತಾವರಿಯದೆ
ಆಧರಪಾನವನುಂಡು ತೇಗಿ
ಸುರಾಪಾನವ ಬೇಡುತೈದಾರೆ.
ಇದನರಿತ ಕುರಿಗಾಹಿಯೊಬ್ಬನು
ಹಿರಿದ ತಲೆಗಳ ಹಿಡಿದು
ಅಧ್ಯಾತ್ಮವಿಕಾರದ ನೆತ್ತರ ಕುಡಿದನು
ನೋಡಾ ಹಗೇದಿಬ್ಬೇಶ್ವರ!
ನೊಸಲ ಮೇಲೆ ವಿಭೂತಿ ಭಾರಿ
ಅಂಗದ ಮೇಲೆ ಲಿಂಗವ ಹೇರಿ
ಲಿಂಗವ ಹೊತ್ತ ಯತಿ ನೀ ಲಿಂಗಾಯತಿ
ಹಿಡಿ ಸರಿ ದಾರಿ ಎಂದು ದೀಕ್ಷೆ ಕೊಟ್ಟೆಡೆ
ನಾ ಲಿಂಗಾಯತ ನಾ ಲಿಂಗಾಯತ
ಆಯತವಾಗಲಿ ಭವ ಭಾಗ್ಯವೆನಗೆಂಬ
ಹೋರಿಗಳ ಹುರಿಗಟ್ಟಿ ಕೆಡುಹು ಹಗೇದಿಬ್ಬೇಶ್ವರ!
ಗುಹೇಶ್ವರ ಸ್ತ್ರೀಲಿಂಗ
ಚೆನ್ನಮಲ್ಲಿಕಾರ್ಜುನ ಪುಲ್ಲಿಂಗ
ಕೂಡಲಸಂಗಮದೇವ ಸಂಗಮಲಿಂಗ
ಇಂತಿಪ್ಪು ಅನುರಕ್ತ ಪರಿತ್ಯಕ್ತ ವಿರಕ್ತಿಗಳ
ಲಿಂಗಸಂಗಮದ ನವ ಕಲ್ಯಾಣಕ್ರಾಂತಿ
ಲಿಂಗವಂತ ಧರ್ಮ ಕಾಣಾ ಹಗೇದಿಬ್ಬೇಶ್ವರ!
ಕದಳಿಯ ಬನವ ಹೊಕ್ಕು ಹೊಲಬ
ತಿಳಿಯದೇ ಮೇಲ್ತಿಳಿಯ ನೆಕ್ಕಿ,
ಬಯಲ ಗಾಳಿಯ ಹಿಡಿದು ಘಟ್ಟಿಸದೇ
ಹೂಸಿದ ವಾಯುವ ಮೂಸಿ,
ಆಳಕ್ಕಿಳಿಯದೆ ಬರಿದೇ ಬಂದುದೇ
ಲಿಂಗಜ್ಞಾನವೆಂದು ಶಾಸನವ ಬರೆದ
ಪಂಡಿತರನೇನೆಂಬೆ ಹಗೇದಿಬ್ಬೇಶ್ವರ!
ವೀರಶೈವ ಬೇರೆಯೋ ಲಿಂಗಾಯತ ಬೇರೆಯೋ?
ವೀರಶೈವವೆಂಬ ಶಿವಲಿಂಗಕ್ಕೆ ಲಿಂಗಾಯತವೆಂಬ ಕಂಥಿಯ ಕಟ್ಟಿಸಿ,
ಆ ಲಿಂಗವ ಪೂಜಿಪ ಲಿಂಗಾಯತಿಗಳೇ
ಮುಂತಪ್ಪು ಲಿಂಗವ ತೊರೆದು ಬರಿಗಂಥಿಯ ಪೂಜಿಪಿರೇ?
ಆತ್ಮ ಬೇರೆಯೋ, ದೇಹ ಬೇರೆಯೋ!
ಇಂತಿಪ್ಪು ಆತ್ಮವ ತೊರೆದು ದೇಹವ ಪೊರೆವ
ಶವಗಳಿಗಿಲ್ಲ ಸಂಸ್ಕಾರವೆಂಬ ಹಗೇದಿಬ್ಬೇಶ್ವರ!
ಜಾತಿ ಕೂಟವ ಬಯಸಿ ಕೂಡಲಸಂಗನ
ವಿಶ್ವಗುರುವೆಂದು ಹೊಗಳುವರಯ್ಯ
ಜಾತಿ ಬಲವ ಬಯಸಿ ಸಾಮಂತನ ನಾಡಪ್ರಭುವಾಗಿಸಿದರಯ್ಯ
ಬಹುಮನೆಯ ಗೆಲ್ಲಲು ದಂಡುಕೋರನ ಹಬ್ಬವ ಹೂಡಿ
ರಾಯನ ಭಾರ್ಯನಾಗಿಸಿ
ವೃಷಣಗಳ ಶಿರದ ಗಾತ್ರಕೆ ಹಿಗ್ಗಿಸಿ ಪೊರೆವವರ
ಮಸ್ತಕವೆಲ್ಲಿಹುದೋ ಹಗೇದಿಬ್ಬೇಶ್ವರ!
ಭರತ ಪರ್ವದ ಸಾಗರ ಮಥನದಲ್ಲಿ
ಭಕ್ತಗಣ ಅಮೃತವೆಂದೂ, ಅಭಕ್ತಗಣ
ಹಾಲಾಹಲವೆಂದು ಕೋಲಾಹಲ ಮಾಡುತ್ತಿರೆ
ದೂರತೀರದ ಜನ ಅದೆಲ್ಲ ಉಪ್ಪುನೀರೆಂದಡೇ
ಇಂತಿಪ್ಪು ಭಕ್ತ/ಅಭಕ್ತರ ವಿಸ್ಮೃತಿಯ
ಪ್ರಲಾಪವ ನೋಡಾ ಹಗೇದಿಬ್ಬೇಶ್ವರ!
ಖಾದಿ ಬುದ್ಧಿಜೀವಿ, ಖಾವಿ ಸುದ್ದಿಜೀವಿ, ಕೂಡಲು ಸಂಗನಿಲ್ಲದೇ
ಆತ್ಮಲಿಂಗಾನಂದದ ಲೋಲುಪತೆಯಲ್ಲೂ
ಅತೃಪ್ತ ಸ್ತ್ರೀಜೀವಿ
ಇಂತಿಪ್ಪು ವೀರ ಲಿಂಗ, ಶೈವ ಆಯತ,
ಹುಚ್ಚ ನೀ ಬಿಡು ಹಗೇದಿಬ್ಬೇಶ್ವರ!
ಒಂದೆಡೆ ಜಗ್ಗೇಶನ ಪ್ರತಾಪ,
ಮಗದೆಡೆ ಪ್ರಕಾಶನ ಪ್ರಲಾಪ!
ಒಬ್ಬ ಕಮಲಮುಖಿಗೆ ಕಣ್ಣು ಹೊಡೆವವ!
ಇನ್ನೊಬ್ಬ ಬುದ್ಧಿಜೀವಿ ದುಪ್ಪಟ್ಟಿಯೊಳಗೆ "ಕೈ"ಕೆಲಸದಲ್ಲಿ ತೊಡಗಿರುವವ
ಹ*ವನ ಬಿಟ್ಟು ಹಣಿಕಿದವನ ಹಿಡಿದಾರು ಹಗೇದಿಬ್ಬೇಶ್ವರ!
ರಂಗಮಂದಿರದಲ್ಲಿ ರಾಷ್ಟ್ರಗೀತೆಯ ಪಾಡೆಂದುದು ನ್ಯಾಯಾಂಗ
ಮಸಣದಿ ರಾಷ್ಟ್ರಧ್ವಜವ ಹಾಸಿತ್ತು ಶಾಸಕಾಂಗ, ಜನಾಂಗ.
ಮೌಢ್ಯ ಸುದ್ದಿಯ ಪಸರಿಸುತಿಹ ಪತ್ರಿಕಾ ವಿಕಾರಾಂಗ,
ಈ ಸುದ್ದಿ ಮೆದ್ದು ವಿಶ್ವಗುರುವೆಂಬ ಪೆದ್ದು ಮುಖಕ್ಕೊರೆಸುವ
ಬುದ್ಧಿಜೀವಿ ವಿಕಲಾಂಗಗಳ ಶಿಕ್ಷಣಾಂಗವನೇನೆಂಬೆ!
ಹುಚ್ಚುಮುಂಡೆಯ ಕಲ್ಯಾಣದಿ ಕಲ್ಯಾಣವಾಗೆಂಬೆ ಹಗೇದಿಬ್ಬೇಶ್ವರ!
ನಿನ್ನೊಳು ಮಾಯೆಯೋ, ಮಾಯೆಯೊಳು ನೀನೋ!
ಮಾಯೆಯನು ಜಯಿಪ
ಕಪಟಿ ಜತನವ ಬಿಟ್ಟು
ಮಾಯೆಯೊಳು ಮಾಯಾಗಿ
ಮಾಯವಾಗಿ ಹೋಗು ಹಗೆದಿಬ್ಬೇಶ್ವರ!