ಕಲ್ಲಡ್ಕ ಭಟ್

 ಯಾವುದೋ ಒಬ್ಬ ತಲೆತಿರುಕ "ಭಟ್ಟ" ಒಂದು ಧರ್ಮದ ಹೆಂಗಸರಿಗೆ ದಿನಕ್ಕೊಬ್ಬ ಗಂಡ ಇರುತ್ತಿದ್ದ ಎಂದು ಮಾತನಾಡಿದರೆ ಸಮಾಜದಲ್ಲಿ ಅಶಾಂತಿ ಉಂಟಾಗುತ್ತದೆ ಎಂಬ ಭಯ ಆ ದೇಶದ ಬುದ್ಧಿಜೀವಿಗಳಿಗೆ ಮೂಡುತ್ತಿರುವುದು ಆ ದೇಶದ ಬಹುದೊಡ್ಡ ಬೌದ್ಧಿಕ ದುರಂತ. ಅದರಲ್ಲೂ ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವ, ಶ್ರೇಷ್ಠ ಸಂವಿಧಾನ ಎನ್ನುವ ಹಮ್ಮು ಬಿಮ್ಮುಗಳ ದೇಶದ ಶತಮಾನೀಯ ದುರಂತ. ಕಾಕತಾಳೀಯವಾಗಿ ಸ್ವಾತಂತ್ರ್ಯದ ಬಾಪು, ಸಂವಿಧಾನದ ಪೋಪುಗಳ ನಡುವೆ ಶ್ರೇಷ್ಠತೆಯನ್ನು ಅವರವರ ಚೇಲಾಗಳು ಒರೆಗೆ ಒಡ್ಡಿರುವ ದುರಂತ ಸಮಯ!!!!

ಇವೆಲ್ಲಕ್ಕಿಂತ ದೊಡ್ಡ ದುರಂತ ಕೃಷ್ಣನ ಬಹುಪತ್ನಿತ್ವ, ದ್ರೌಪದಿಯ ಬಹುಪತಿತ್ವ, ಶ್ರೀರಾಮನ ಏಕಪತ್ನಿತ್ವ, ಅಖಂಡ ಸನ್ಯಾಸಿಗಳ ಬ್ರಹ್ಮಚರ್ಯದ ಸನಾತನತ್ವ, ವೀರ್ಯದಿಂದ ವೀರಭದ್ರ, ಋತುಚಕ್ರದ ತ್ಯಾಜ್ಯದಿಂದ ಗಣಪತಿಯನ್ನು ಅನ್ಯಲಿಂಗದ ಸಹಾಯವಿಲ್ಲದೆ ಸೃಷ್ಟಿಸಿದ ಕೃತಕ ಬುದ್ಧಿಮತ್ತೆಯ ಆದಿಜ್ಞಾನ ಮೂಲದ ದೇಶವು ನನ್ನ ಹ್ಯಾಷ್ಟ್ಯಾಗ್ ಅನ್ನು ಶತಮಾನೀಯ ಭವಿಷ್ಯವಾಣಿ ಮಾಡುತ್ತಿರುವುದು.....ದಾರುಣ, ಕಾರುಣ, ಕಾರಣ, ಮಾರಣ ದುರಂತ!

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ