ಸಂವಿಧಾನ ದಿನ!

 ಒಂದು ದೇಶದ ಸಂವಿಧಾನ ಎಂದರೆ ಅದನ್ನು ಕೇವಲ "ಛೂ ಮಂತರ್ ಕಾಳಿ" ಎಂದು ಓರ್ವ ವ್ಯಕ್ತಿ ಗಾಳಿಯಲ್ಲಿ ಕೈಯಾಡಿಸಿ ಸೃಷ್ಟಿಸಲಾಗದು. ಅದಕ್ಕೆ ಆಕರಸೂಚಿ, ಪರಾಮರ್ಶನ ಸಿಬ್ಬಂದಿ, ವಿಮರ್ಶನ ಸಲಹೆಗಾರರು, ತಿದ್ದುಪಡಿ ಸಹಾಯಕರು, ಇತ್ಯಾದಿಯಾಗಿ ಒಂದು ಕಚೇರಿಯೇ ಇರುತ್ತದೆ. ಅದರ ಮುಖ್ಯಸ್ಥ ಓರ್ವ ವ್ಯಕ್ತಿಯೇ ಆಗಿದ್ದರೂ ನಿರ್ಣಾಯಕ ನಿರ್ಧಾರ ಆ ಪ್ರಜಾತಂತ್ರ ಸಂಸ್ಥೆಯ ಸಮೂಹದ್ದಾಗಿರುತ್ತದೆ.

ಹಾಗಾಗಿಯೇ ಜಗತ್ತಿನ ಎಲ್ಲಾ ದೇಶಗಳ ಸಂವಿಧಾನ ಸಮಿತಿಯ ಮುಖ್ಯಸ್ಥರ ಹೆಸರು ಪ್ರಮುಖ ಎನಿಸಿದರೂ ಅದು ಆದಷ್ಟು ಗೌಣವಾಗಿರುತ್ತದೆ. ಫ್ರಾನ್ಸಿನ ಚಾರ್ಲ್ಸ್ ಡಿ ಗಾಲಿ ಮತ್ತು ಮಿಕೆಲ್ ಡಿಬ್ರೆ ಇರಬಹುದು, ಅಮೆರಿಕಾದ ಜೇಮ್ಸ್ ಮ್ಯಾಡಿಸನ್ ಆಗಬಹುದು ಅಥವಾ ಬರೆಯದೆಲೇ ಜಾರಿಯಲ್ಲಿರುವ ಇಂಗ್ಲೆಂಡಿನ ಸಂವಿಧಾನ ಇರಬಹುದು. ಇಲ್ಲೆಲ್ಲ ಕರ್ತೃಗಿಂತ ಕೃತಿ ಮುಖ್ಯ. ಆದರೆ ಅಂತಹ ಒಂದು ಸುಧಾರಿತ ಸಂವಿಧಾನದ ಜಾತ್ಯಾತೀತ ಚೌಕಟ್ಟಿನ ಅಡಿಯಲ್ಲಿಯೇ ಜಾತಿ ಪದ್ದತಿಯು ಆ ದೇಶದ ಸಂವಿಧಾನ ಸಮಿತಿಯ ಮುಖ್ಯಸ್ಥರ ಜಾತಿಯನ್ನೇ ಓಲೈಸಲು ಪ್ರಮುಖವಾಗಿಸಿ ಅವರ ಜಾತಿಯನ್ನು, ಕೇವಲ ಒಂದು ಜಾತಿಯ ಕಾರಣಕ್ಕಾಗಿ ಮೆರೆಸುತ್ತದೆ ಎಂದರೆ ಅದು ಅವರು ಬರೆದ ಸಂವಿಧಾನಿಕ ದೇಶದ ನಿರ್ಣಾಯಕ ಸೋಲು ಎನ್ನಲು ಯಾವುದೇ ಹಿಂಜರಿಕೆ ಆಗದು.

ಈ ಹಿನ್ನೆಲೆಯಲ್ಲಿ ಆ ಸಂವಿಧಾನಕಾರರ ಜಾತಿಯನ್ನು ಮೆರೆಸುವುದು ಜಾತ್ಯಾತೀತ ಎನಿಸುವುದಾದರೆ ಆ ವೈಭವೀಕರಣವನ್ನು ಪ್ರಶ್ನಿಸುವುದು ಸಾಂವಿಧಾನಿಕವಾಗಿ ಹೆಚ್ಚು ಜಾತ್ಯಾತೀತ ಎನಿಸುತ್ತದೆ. ಈಗಾಗಲೇ ಜಾತಿ ಆಧಾರಿತ ಅಭ್ಯರ್ಥಿಕೆ, ಆಯಕಟ್ಟಿನ ಪದವಿ, ಅಧಿಕಾರಿ ವರ್ಗಾವಣೆಗಳು "ಸಾಮಾಜಿಕ ನ್ಯಾಯದ ವಿಷಮ ದಂಧೆ" ಆಗಿರುವಾಗ ಜಾತಿ ಆಧಾರಿತ ಜನಗಣತಿಯನ್ನು ನಡೆಸುವುದು ಹೇಗೆ ದೇಶದ ಮಿಷನ್, "ವೈವಿಧ್ಯತೆಯಲ್ಲಿ ಏಕತೆ"ಯನ್ನು ಸಾಧಿಸುವುದು? ಒಂದೆಡೆ ಸಂವಿಧಾನ ಓದುತ್ತಾ ಇನ್ನೊಂದೆಡೆ ಜಾತಿನಾಶಕ್ಕೆ ಕರೆ ಕೊಡುವ ಪ್ರಜ್ಞಾವಂತ ಬುದ್ದಿಜೀವಿಗಳ ಜಾತಿ ನಿರ್ಮೂಲನ ಆಂದೋಲನಕ್ಕೆ ಹೇಗೆ ನೀರೆರೆಯುವುದು? ಎಲ್ಲಕ್ಕಿಂತ ಪ್ರಮುಖವಾಗಿ ಇಪ್ಪತ್ತೊಂದನೇ ಶತಮಾನಕ್ಕೆ ದೇಶವನ್ನು ಹೇಗೆ ಅಣಿಗೊಳಿಸುವುದು? 

ಅಂದಹಾಗೆ ಇಪ್ಪತ್ತೊಂದನೇ ಶತಮಾನದ ಕಾಲು (ಶತಮಾನ) ಮುರಿದೇಹೋಗಿದೆ.

ಇನ್ನು ಈ ಪ್ರಶ್ನಿಸುವ ಪ್ರಕ್ರಿಯೆಗೆ ಪ್ರತಿಕ್ರಿಯೆಯಾಗಿ ಯಾವುದೇ ರೀತಿಯ ಶೋಷಿತ, ಪೋಷಿತ ಇತ್ಯಾದಿ ಗಿಲೀಟಿನ ಕ್ರಿಯಾಶೀಲತೆಯನ್ನು ಸೇರಿಸುವುದು ಕ್ರೀಂ ಕ್ರೀಂ ಹ್ರೀಂ ಹ್ರೀಂ ಬ್ರೂಮ್ ಬೂಮ್ ಬಂಚಕಬೂಮ್! 

ಏಕ್ ದೂಸರೆ ಸೇ ಕರತೇ ಹೈ ಪ್ಯಾರ್ "ಹಮ್", ಏಕ್ ದೂಸರೆ ಕೆ ಲಿಯೇ ಬೇಕರಾರ್ "ಹಮ್!!!"

ಭಾಯಿಯೋs ಬೆಹೆನೋs.....

ಮೇರೆ ಪ್ಯಾರೇ ದೇಶ್ ವಾಸಿಯೋs.... "ಕಮಲ್" ಪಕಡೋ ಕಮಾಲ್ ದೇಖೋs...

ಪ್ಯಾರ್ ಕಿ ದುಖಾನ್ ಸೇ "ಹಮ್" ಪ್ಯಾರ್ "ಬೇಚೆಂಗೆ" ಅಪನಿ ಜಾತ್ ಕೇ ಆಧಾರ್ ಪರ್, ಮುಫ್ತ್ ನಹೀಂ! ಗಸ್ ಕೇ "ಹಾತ್" ಪಕಡೋ ಔರ್ ಆಗೇ ಬಡಾವೋs...

ಹೇ ಡ್ಯೂಡ್, ವಾಟ್ ದ ಹೆಕ್ ಈಸ್ ಹಾಟ್ ಕ ಕಮಾಲ್.... ವೀಸ್ವಗೂರುsss!?! ಪ್ಯಾಸ್ ಮಿ ದೋಸ್ ಸ್ಪೈಸಿ ಡೋನಟ್ಸ್ ಪ್ಲೀಸ್!

Happy Thanksgiving!

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ