ಸುಧಾಮೂರ್ತಿ ಸೌಟು, ಸಲೀಮನ ಚಾಟು.

 ಹೀಗೆಯೇ ಹಲವು ವರ್ಷಗಳ ಹಿಂದೆ ಶಾರ್ಲೆಟ್ ನಗರದ ಕ್ಲೈಂಟ್ ಕಂಪೆನಿಗೆ ಪ್ರತಿ ವಾರ ಭೇಟಿ ಕೊಡುತ್ತಿದ್ದೆ. ಅಲ್ಲಿ ಹೈದರಾಬಾದ್ ಹಿನ್ನೆಲೆಯ ಸಲೀಮನಿಗೆ ಅದೇನೋ ಸಹಾಯ ಬೇಕಿತ್ತು, ಕೊಟ್ಟಿದ್ದೆ. ಅದಕ್ಕೆ ಆತ, "ನಿನಗೆ ಒಂದು ಲಂಚ್ ಕೊಡಿಸುವೆ" ಎಂದು ಒತ್ತಾಯಿಸುತ್ತಿದ್ದ. ಕಡೆಗೆ ಆಗಲಿ ಎಂದು ಒಪ್ಪಿದೆ. ಅದಕ್ಕೆ ಅವನು, "ನಾನು ಫ್ಯಾನ್ಸಿ ಗಿನ್ಸಿ ಎಲ್ಲಾ ಕೊಡಿಸಲು ಆಗಲ್ಲ. ಸಿಂಪಲ್ಲಾಗಿ ಸಬ್ವೇ ಸ್ಯಾಂಡ್ವಿಚ್ ಕೊಡಿಸುವೆ" ಎಂದ. "ಅದಕ್ಕೇನು! ನೀನು ಏನು ಕೊಡಿಸಿದರೂ ಸರಿ, ಮಾರಾಯ" ಎಂದಿದ್ದೆ. 


ಸಬ್ವೇಗೆ ಕರೆದುಕೊಂಡು ಹೋದ ಅವನು, ಹನ್ನೆರಡು ಇಂಚಿನ ಒಂದು ವೆಜ್ಜೀ ಸ್ಯಾಂಡ್ವಿಚ್ ಆರ್ಡರ್ ಮಾಡಿ ನನ್ನೆಡೆಗೆ ತಿರುಗಿ, "ರವಿ ಭಾಯ್, ಇದನ್ನೇ ಬೈಟು ಮಾಡಿದರೆ ಸಾಕಲ್ಲವೇ!" ಎಂದು ಕೇಳಿದ. ನಾನು ಸರಿ ಎಂದೆ. ಹೊಟ್ಟೆ ಬಟ್ಟೆ ಕಟ್ಟಿ ಕಾಸು ಉಳಿಸುವ ಅನೇಕರನ್ನು ಕಂಡಿದ್ದ ನನಗೆ ಇದೇನೂ ಹೊಸತಲ್ಲ. ಹಾಗಾಗಿ ಓಕೆ ಎಂದೆ.


ಆರ್ಡರ್ ತೆಗೆದುಕೊಂಡ ಹುಡುಗಿಗೆ ಸಲೀಂ, "ಕೆನ್ ಯೂ ಪುಟ್ ಆನ್ ನ್ಯೂ ಗ್ಲೌಸಸ್" ಎಂದು ಆಕೆಗೆ ಹೊಸ ಗ್ಲೌಸ್ ತೊಟ್ಟು ತನ್ನ ಸ್ಯಾಂಡ್ವಿಚ್ ಮಾಡಲು ಹೇಳಿದ. ಆಕೆ ಹೊಸ ಗ್ಲೌಸ್ ತೊಟ್ಟು ಸ್ಯಾಂಡ್ವಿಚ್ ತಯಾರಿಸಿ ಅದನ್ನು ಎರಡು ಹೋಳು ಮಾಡಲು ಚಾಕು ಎತ್ತಿಕೊಂಡಳು. ತಕ್ಷಣವೇ ಸಲೀಂ, "ಕೆನ್ ಯೂ ಯೂಸ್ ಫ್ರೆಶ್ ನೈಫ್ ಟು ಕಟ್ ಇಟ್?" ಎಂದು ಆಕೆಗೆ ಬೇರೆ ಚಾಕು ತೆಗೆದುಕೊಂಡು ಸ್ಯಾಂಡ್ವಿಚ್ ಹೋಳು ಮಾಡಲು ಕೇಳಿದ. ಆಕೆ ವಿನಮ್ರವಾಗಿ ಬೇರೆ ಚಾಕು ತಂದು ಹನ್ನೆರಡು ಇಂಚಿನ ಸ್ಯಾಂಡ್ವಿಚ್ಚನ್ನು ಕತ್ತರಿಸಿ ಆರು ಇಂಚಿನ ಎರಡು ಸ್ಯಾಂಡ್ವಿಚ್ ಮಾಡಿಕೊಟ್ಟಳು.


ಕಟ್ಟಾ ಧಾರ್ಮಿಕ ಶ್ರದ್ಧಾಳುವಾದ ಸಲೀಮನ ಸಮಸ್ಯೆ ಆತ ಹಲಾಲ್ ಆಲ್ಲದ ಪದಾರ್ಥಗಳನ್ನು ತಿನ್ನದೇ ಇರುವುದಷ್ಟೇ ಅಲ್ಲ ಅದನ್ನು ಮುಟ್ಟುವುದು ಸಹ ಹರಾಮ್ ಎಂದುಕೊಂಡದ್ದು. ಹಾಗಾಗಿ ವೆಜ್ಜೀ ಸ್ಯಾಂಡ್ವಿಚ್ ಆರ್ಡರ್ ಮಾಡಿದ್ದ.


ಹಲಾಲ್ ಅಲ್ಲದ ಪದಾರ್ಥಗಳನ್ನು ಮುಟ್ಟಿದ್ದ ಆಕೆಗೆ ಹೊಸ ಗ್ಲೌಸ್ ತೊಡಲು ಮತ್ತು ಹಲಾಲ್ ಅಲ್ಲದ ಆಹಾರವನ್ನು ಕತ್ತರಿಸಿದ್ದ ಚಾಕು ಬದಲಿಸಿ ಫ್ರೆಶ್ ಚಾಕು ಬಳಸಲು ಕೇಳಿದ್ದು ಸಹ ಇದೇ ಕಾರಣಕ್ಕಾಗಿ. ಆತ ಹಾಗೆ ಕೇಳಿದ್ದಕ್ಕೆ ಕೊಂಚವೂ ಬೇಸರಿಸಿಕೊಳ್ಳದೆ ಆಕೆ ಸೇವೆಯನ್ನು ಕೊಟ್ಟದ್ದು ಸಲೀಮನ ವೈಯಕ್ತಿಕ ಧಾರ್ಮಿಕ ಶ್ರದ್ಧೆಯನ್ನು ಗೌರವಿಸಿಯಷ್ಟೇ.


ಹಲಾಲ್ ಪದಾರ್ಥವನ್ನು ಮಾತ್ರ ತಿನ್ನುವ ಸಲೀಂ ನನ್ನನ್ನು ಯಾವುದಾದರೂ ಕಬಾಬ್ ಜಾಯಿಂಟಿಗೆ ಕರೆದೊಯ್ಯದೆ ಧರ್ಮಭ್ರಷ್ಟವಾಗಿಸಬಲ್ಲ ಸಬ್ವೇಗೆ ಕರೆದಾಗ ಕೊಂಚ ಆಶ್ಚರ್ಯಗೊಂಡಿದ್ದ ನನಗೆ ಆತ ಏಕೆ ನನ್ನನ್ನು ಅಲ್ಲಿಗೇ ಕರೆದೊಯ್ದದ್ದು ಎಂದು ಆತ ಬಿಲ್ ಕೊಡುವವರೆಗೆ ಅರ್ಥವಾಗಿರಲಿಲ್ಲ! 


ಚೆಕ್ ಔಟ್ ಹುಡುಗಿ, "ಇಟ್ಸ್ $6.99" ಎಂದಾಗ ಸಲೀಂ ತನ್ನ ಜೇಬಿನಿಂದ ಒಂದು ಪುಕ್ಕಟೆ ಸ್ಯಾಂಡ್ವಿಚ್ ಕೂಪನ್ ಕೊಟ್ಟು, "ಥ್ಯಾಂಕ್ ಯು" ಎಂದಾಗ ಆತನ ಊಟದ ಒತ್ತಾಯ, ಧಾರ್ಮಿಕ ಶ್ರದ್ಧೆ, ಸ್ಯಾಂಡ್ವಿಚ್ ಹುಡುಗಿಯ ಸೇವಾ ಮನೋಭಾವ, ಅಮೆರಿಕನ್ ಮಾರುಕಟ್ಟೆಯ ಚಾಪೆಯ ತಂತ್ರದ ಕೂಪನ್, ಧರ್ಮವನ್ನು ಪಂಥಕ್ಕೊಡ್ಡಿಯಾದರೂ ಸರಿಯೇ ರಂಗೋಲಿ ಕೆಳಗೆ ನುಸುಳಬೇಕು ಎನ್ನುವ ಸಲೀಮನ ಪ್ರತಿತಂತ್ರ ಎಲ್ಲವೂ ತಲೆಯಲ್ಲಿ ಗಿರ್ರನೆ ಗಿರಕಿ ಹೊಡೆಯತೊಡಗಿತು.


"ಫ್ರೆಂಚ್ ಫ್ರೈ ಕರಿಯಲು ಬಳಸಿದ ಪ್ರಾಣಿಜನ್ಯ ಎಣ್ಣೆ ನನ್ನನ್ನು ಧರ್ಮಭ್ರಷ್ಟನಾಗಿಸಿತು" ಎಂದು ಮೆಕ್ಡಾನಾಲ್ಡ್ ಇಂದ ಕಾಸು ಬಿಚ್ಚಿಸಿದ್ದ ಭಾರತೀಯರ, ಮತ್ತು ಸುಧಾ ಮೂರ್ತಿಯವರ "ಮಾಂಸದ ಸಾರಿನಲ್ಲಿ ಅದ್ದಿದ ಸೌಟನ್ನು ಸಾಂಬಾರಿನಲ್ಲಿ ಅದ್ದಿ ಬಡಿಸಿದರೆ... ಎಂದು ಭಯವಾಗುತ್ತದೆ" ಎಂಬರ್ಥದ ಮಾತನ್ನು ಅರ್ಥಹೀನರಾಗಿ ಬಳಸಿದ "ಉದಾರ ಚಿಂತಕ"ರೆಲ್ಲರ ಮೂಲವು ಗಿರಕಿ ಹೊಡೆಯುತ್ತಿದ್ದ ನನ್ನ ತಲೆಯಲ್ಲಿ ಕಡೆಕಡೆದು ಬೆಣ್ಣೆಯಂತೆ ಸುಜ್ಞಾನವಾಗಿ ಸುಸ್ಪಷ್ಟವಾಗಿ ತೇಲಿಬಂದಿತು.


ಅದು ಏನಪ್ಪಾ ಎಂದರೆ........


ಎನ್ಫೀಲ್ಡ್ ಕೋವಿಗೆ ತುಂಬಲು ಕೊಟ್ಟ ಕೊಬ್ಬು ಸವರಿದ ತೋಟಾಗಳಿಗೆ ಉದ್ದೇಶಪೂರ್ವಕವಾಗಿ ಧರ್ಮಭ್ರಷ್ಟರಾಗಿಸಲು ಹಂದಿ, ದನದ ಕೊಬ್ಬು ಸವರಿದ್ದು ಎಂದು "ಕಿಡಿ" ಹಚ್ಚಿ ಸ್ವಾತಂತ್ರ್ಯ ಪಡೆದ ದೇಶದಲ್ಲಿ ಇನ್ನೆಂತಹ ಪ್ರಜೆಗಳು ಇರಲು ಸಾಧ್ಯ!


ಕ್ಯಾಮೆರಾ ಇಡಿ, ಸೌಟು ಬಿಡಿ, "ಫನ್"ಗಾಗಿ ಫಕ್ ಮಾಡಿ. ಎಲ್ಲಾ ಮಕ್ಕಳಾಟ ಆಡಿ ಮಕ್ಕಳು ಮಾಡಿ.


ಹಮೇ ತೋ ಲೂಟ್ ಲಿಯಾ ಮಿಲ್ಕೇ ಹುಸ್ನ್ ವಾಲೋನೇ ಗೋರೆ ಗೋರೆ ಗಾಲೋನೇ ಕಾಲೇ ಕಾಲೇ ಬಾಲೋನೇ....


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

ಕ್ರೇಜಿ ಫಿಲೋಸಾಫರ್ ಅವರ "ಅರಿದಡೆ ಆರದು ಮರೆದೊಡೆ ಮೂರದು" ವಿಶ್ಲೇಷಣೆ

 ಓದಿದ ಪುಸ್ತಕ


ಅರಿದಡೆ ಆರದು ಮರೆದೊಡೆ ಮೂರದು

ಲೇಖಕರು #ರವಿಹಂಜ್

#ಇದು ಕಥೆಯಲ್ಲ ಕಾದಂಬರಿಯೂ ಅಲ್ಲ 

ಇದು ನಮ್ಮೂರಿನ ನಿಮ್ಮೂರಿನ  ನಿಜ ಇತಿಹಾಸ


#ಇತ್ತೀಚಿಗೆ ಓದಿದ ಪುಸ್ತಕ

ರವಿ ಹಂಜ್ ರವರ ಮಹಾಪಯಣ ಪುಸ್ತಕವನ್ನು ಓದಿ  ಕ್ರಿಸ್ತ ಶಕ ಆರನೇ ಶತಮಾನವನ್ನು ಹೊಕ್ಕು ಬಂದಿದ್ದೆ 

ಈಗ ಅವರ ಮತ್ತೊಂದು ಪುಸ್ತಕ ಓದಿ    ಹನ್ನೆರನೇ ಶತಮಾನದಿಂದ ಹದಿನೆಂಟನೇ ಶತಮಾನದ ವರೆವಿಗೂ  (ಹಾಗೂ ಪ್ರಸ್ತತ ದಿನದ ವರೆವಿಗೂ) ಕರುನಾಡಿನ ಉತ್ತರ ತುದಿಯಿಂದ ದಕ್ಷಿಣದ ತುದಿಯ ವರೆವಿಗೂ ಕರುನಾಡಿನಲ್ಲಿ ಸಂಭವಿಸಿದ ರೋಚಕ ಇತಿಹಾಸವನ್ನು ಓದಿದಾಗ ಅಂತಹ ಕ್ರೌರ್ಯಗಳಿಂದ ಜನ ಸಾಮಾನ್ಯರನ್ನು ಕಾಪಾಡಿರುವ ನಮ್ಮ ಸಂವಿಧಾನ .ಕಾನೂನು ಕಟ್ಟಲೆಗಳ‌ಬಗ್ಗೆ ಗೌರವವು ಹೆಚ್ಚಾಯ್ತು  ಹಾಗೂ 

ರವಿ ಹಂಜ್  ರವರ ಜ್ಞಾನ ಬಂಡಾರದಲ್ಲಡಗಿರುವ ಅಧ್ಬುತ ಕನ್ನಡ ಪದ ಪುಂಜಗಳನ್ನು ಓದಿ ಕನ್ನಡದಲ್ಲೇ ಓದಿ ಬರೆದರೂ ಸಹಾ ಆ ಪದಗಳ ಹಾಗೂ ಅಂತಹ ವಾಖ್ಯಗಳ ಅಸ್ತತ್ವವನ್ನೇ ಅರಿಯದಿದ್ದ ನನ್ನ ಬಗ್ಗೆ ನನಗೇ ಬೇಸರವಾಯ್ತು..

#ಅರಿದಡೆ ಆರದು ಮರೆದೊಡೆ ಮೂರದು 

ಒಂದು ಅಧ್ಬುತ ಹಾಗು ಕರುನಾಡಿನ. ಓದುಗನಿಗೆ ಅವನ ಯಾವ ಊರಿನವನೇ ಆಗಿದರು ಅವನೂರಿನ ಇತಿಹಾಸವನ್ನು ಓದಿದ ಅನುಭವವಾಗುವುದು .

ಹೆಚ್ ಎಸ್ ಶಿವಪ್ರಕಾಶ್ ರವರ ಮಹಾಚೈತ್ರ ಕೃತಿಯಂತೆಯೇ ಕಲ್ಯಾಣ ನಗರದೊಳಗೆ ನೆಡೆಯು ನಾಟಕದ ದೃಷ್ಯದಿಂದ ಆರಂಭವಾಗುವ ಕಥೆ ಹಾಗು ಕಥೆಯ ವಿಷಯ ನಾಟಕದ ಪಾತ್ರದಾರಿಗಳನ್ನು ಪ್ರೇಕ್ಷಕರನ್ನು .ಸಾರ್ವಜನಿಕರನ್ನೂ ಹಾಗೂ ಓದುಗನನ್ನು ಸೇರಿಸಿಕೊಂಡ ಪುಟಗಳು ಮುಂದುವರೆಯುತ್ತವೆ..

ಬಳ್ಳಾರಿ ಕಾಲೇಜೊಂದರಲ್ಲಿ  ಪ್ರಾದ್ಯಾಪಕನಾಗಿರುವ ಸ್ನೇಹಿತನೊಬ್ಬ ಹೇಳುತ್ತಿದ್ದ 

ನಮ್ಮ ನಾಡು ಅದರಲ್ಲೂ ಹಳೆ ಮೈಸೂರು ಪ್ರಾಂತ್ಯವು ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಅಕ್ಕ ಪಕ್ಕದ ಮೂರ್ನಾಲ್ಕು ರಾಜ್ಯಗಳಿಗಿಂತಲೂ ಮುಂದುವರೆದಿದೆ ಇದಕ್ಕೆ ಕಾರಣ ಮೈಸೂರು ಸಂಸ್ಥಾನದ ಆಳ್ವಿಕೆಯಲ್ಲಿದ್ದ ಜನಪರ ಹಾಗೂ ಪ್ರಗತಿಪರ ಕಾರ್ಯಗಳು ಎಂದು ನಾನು ಅವನ ಮಾತನ್ನು  ಸಮ್ಮತಿಸಿಕೊಂಡಿದ್ದೆ ಹಾಗೂ ಸಮ್ಮತಿಸುತ್ತೇನೆ ..

ಈ ಪುಸ್ತಕ ಓದಿದ ನಂತರ ಕರುನಾಡಿನ ಕೆಳ ವರ್ಗದ ಜಾತಿಯ ಜನರ ಶೈಕ್ಷಣಿಕ ಹಾಗೂ ಭೌದ್ದಿಕ ವಿಕಾಸದಲ್ಲಿ  ಹಾಗು ಕೃಷಿಕ್ರಾಂತಿಯಲ್ಲಿ ವೀರಶೈವ ಮಠಗಳ ಕೊಡುಗೆಯ ಬಗ್ಗೆ ತಿಳಿದು ಆಶ್ಚರ್ಯವಾಯ್ತು 

ಇಷ್ಟಕ್ಕೂ ಈ ಪುಸ್ತಕವು ಖಂಡಿತಾ ಒಂದು ಕಲ್ಪಿತ ಕಥೆಯಲ್ಲ ಕಾದಂಬರಿಯಲ್ಲ  ನಿಜ ಇತಿಹಾಸವನ್ನು ತಿಳಿಸುವ ಒಂದು ಸಂಶೋಧನಾ ಕೃತಿ. 

ವೀರಶೈವ ಮಠಗಳಲ್ಲಿ ನೆಡೆಯತ್ತಿದ್ದ ಅಕ್ಷರ ದಾಸೋಹ ಅನ್ನದಾಸೋಹದ ಚಿಂತನೆಗಳನ್ನು ನಾಡಿನ ಉದ್ದಗಲಕ್ಕೂ ಹರಡಿ ಕಾರ್ಯರೂಪಗೊಳಿಸಿದರ ಫಲವಾಗಿ  ಇಂದು ಕರುನಾಡು ಹಲವು ರಾಜ್ಯಗಳಿಗಿಂತಲೂ ಶೈಕ್ಷಣಿಕ ಆರ್ಥಿಕ ಹಾಗೂ ಬೌದ್ದಿಕ ಪ್ರಗತಿ ಸಾಧಿಸಿದೆ ಎಂದು ನಿಸ್ಸಂಶಯವಾಗಿ ಹೇಳಬಹುದು. 

ಜಾತಿ ವ್ಯವಸ್ತೆ .ಕ್ರೌರ್ಯ.ಕ್ರಾಂತಿಕಾರಿಗಳು .ಶರಣರು.ಸಾದು ಸಜ್ಜನರು ಮಠಾದೀಶರು.   ಸನ್ಯಾಸಿ  ಸನ್ಯಾಸತ್ವ .ವ್ಯಾಪಾರಿ ಉದ್ಯೋಗಿ ‌ಅವರುಗಳ ಹಲವು ಮುಖಗಳ ಅನಾವರಣ .

ಶರಣರ ಉದಯ ಯಾವ ಶರಣ ಯಾವ ವಚನವನ್ನು ಯಾವ ಸಂದರ್ಭದಲ್ಲಿ ಏಕೆ ಹೇಳಿದ .ಇವೆಲ್ಲವನ್ನೂ ನಾವು ಕಥೆಯಂತೆ ಓದುತ್ತಿದ್ದರೂ ನಮಗೆ ಇತಿಹಾಸವು ಅರ್ಥವಾಗುತ್ತಿರುತ್ತದೆ .

ಈ ಪುಸ್ತಕವು ಒಂದು ಇತಿಹಾಸವನ್ನು ನಾಟಕದಂತೆ .ತೊಗಲುಗೊಂಬೆಯ ಆಟದಂತೆ ಕಥೆಯಂತೆ.ವಚನಗಳಂತೆ ಹೇಳುವ ಒಂದು ಪ್ರಯೋಗದಂತಿದೆ .

ಓದುಗನಿಗೂ ಸಹಾ ಇಂತಹ ಪ್ರಯೋಗಾತ್ಮಕ ಪುಸ್ತಕ ಓದುವುದು ಒಂದು ಹೊಸ ಅನುಭವವೂ ಹೊಸ ಸಂವೇದನೆಯೂ ಉಂಟಾಗುವುದು .


#ನಮ್ಮೂರು

ನಮ್ಮೂರಿನಲ್ಲಿ ತೆಂಗಿನ ಮರಗಳೇ ಪ್ರಮುಖ ಬೆಳೆ ಆದುದರಿಂದ ನಮ್ಮ ಊರನ್ನು   ಕಲ್ಪತರು ನಾಡೆನ್ನುವರು ನಮ್ಮೂರಿಗೆ ತೆಂಗು ಬಂದ ಇತಿಹಾಸ ತಿಳಿದಿರಲಿಲ್ಲ .

ಇಲ್ಲಿ ಮೊಟ್ಟ ಮೊದಲು ತೆಂಗು ಬೆಳೆಸಿದ ಹಾಗು ತೋಟಗಳನ್ನು ನಿರ್ಮಿಸಿದ ತೋಂಟದ ಸಿದ್ದಸಿದ್ದಲಿಂಗ ಶರಣರಿಗೊಂದು ನಮೋ ನಮಃ .

ಒಂದು ವಿಶೇಷ ಕೃತಿಯನ್ನು ರಚಿಸಿ ಓದಿರೆಂದು ಪ್ರೀತಿಯಿಂದ ಕಳುಹಿಸಿದ ರವಿಹಂಜ್ ಸರ್  ನಿಮಗೆ ಪ್ರೀತಿಯ ಪ್ರಣಾಮಗಳು

ಅಟ್ರಾಸಿಟಿ ಅಟ್ರಾಸಿಟಿ

 ಮೂವತ್ತು ವರ್ಷಗಳ ಹಿಂದೆ ನಮ್ಮ ಬಂಧುಗಳ ಹಳ್ಳಿಯ ಕ್ಷೌರಿಕನ ಮೇಲೆ ಒಂದು ಅಟ್ರಾಸಿಟಿ ಕೇಸು ಬಿದ್ದಿತ್ತು. ಮಂಗಳವಾರ ರಜಾ ಮಾಡಿದ್ದ ಕ್ಷೌರಿಕನ ಮನೆಗೆ ಹೋದ ಆ ಊರಿನ ದಲಿತ ಮುಖಂಡ ಮುಖಕ್ಷೌರ ಮಾಡಲು ಆಗ್ರಹಿಸಿದ. ಈ ದಿನ ರಜಾ ಎಂದ ಕ್ಷೌರಿಕನ ಮೇಲೆ ಅಟ್ರಾಸಿಟಿ ಕೇಸು ಹಾಕಿ ಆ ಕ್ಷೌರಿಕ ಮುಂದೆಂದೂ ಕ್ಷೌರಿಕ ವೃತ್ತಿ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟು ಆ ಕೇಸು ರಾಜಿ ಆಯಿತು.


ನನ್ನ ಬಂಧುವೊಬ್ಬರು ನಿತ್ಯ ಮಧ್ಯರಾತ್ರಿ ಕೋವಿಯನ್ನು ಬಗಲಿಗೆ ಏರಿಸಿಕೊಂಡು ತಮ್ಮ ತೆಂಗಿನತೋಟದ ಒಂದು ಭಾಗಕ್ಕೆ ತೆರಳಿ ಆಕಾಶಕ್ಕೆ ಗುಂಡು ಹಾರಿಸಿ ಮನೆಗೆ ತೆರಳಿ ಮಲಗುತ್ತಿದ್ದರು. ಹೀಗೆಯೇ ಒಮ್ಮೆ ಅವರು ಆಕಾಶಕ್ಕೆ ಹಾರಿಸಿದ ಗುಂಡು ಕಾಯಿ ಕದಿಯಲು ಮರವೇರಿದ್ದ ಕಳ್ಳನಿಗೆ ಗಾಬರಿ ಉಂಟು ಮಾಡಿ ಆತ ದೊಪ್ಪೆಂದು ಮರದಿಂದ ಉರುಳಿ ಸತ್ತಿದ್ದ. ಅವರ ದುರಾದೃಷ್ಟಕ್ಕೆ ಆ ಕಳ್ಳ ದಲಿತನಾಗಿದ್ದ. ಮತ್ತದೇ ಅಟ್ರಾಸಿಟಿ, ಕೊಲೆ, ಇತ್ಯಾದಿ "ಮೀಸಲಾತಿ" ಮೊಕದ್ದಮೆ, ಶಿಕ್ಷೆ......ತಮ್ಮ ತೋಟವನ್ನು ಕಳ್ಳರಿಂದ, ಕಾಡುಪ್ರಾಣಿಗಳಿಂದ ಕಾಯ್ದುಕೊಳ್ಳುವ ಪ್ರಯತ್ನ ಮಾಡಿದ ಪರವಾನಗಿ ಹೊಂದಿದ ಕೋವಿದಾರ ರೈತನಿಗೆ.


ಇಂತಹ ಅಟ್ರಾಸಿಟಿ ಕೇಸುಗಳು ಪ್ರತಿ ಹಳ್ಳಿಯಲ್ಲಿ ಹತ್ತಾರು ಆ ಕಾಲದಲ್ಲೇ ಇದ್ದವು. ಈಗ ಅವು ಮಿತಿ ಮೀರಿವೆ. ಈ ಬಗ್ಗೆ ಯಾವಾಗ  ಮಣಿಪುರದ ಮಾದರಿ ಸಾಮಾಜಿಕ ಸಂಘರ್ಷ ಆಸ್ಫೋಟಗೊಳ್ಳುವುದೋ ಬಲ್ಲವರು ಯಾರು?!? 


ಇನ್ನು ಇದೇ ಮೀಸಲಾತಿ ಏಳ್ಗೆಯ ದಲಿತ ಸಾಹಿತ್ಯ ಪರಿಷತ್ತಿನ ಮುಂದಿನ ವಾರದ ಬಿಜಾಪುರ ಸಾಹಿತ್ಯ ಸಮ್ಮೇಳನದಲ್ಲಿ ಎಂಬತ್ತು ಭಾಗ ಬಲಿತ (ಬಲಗೈ) ದಲಿತರದೇ ಮೇಜುವಾನಿ. ಅಲ್ಲಿ ಎಡಗೈ ತೊಳೆಯಲು ಮಾತ್ರ ಎಂಬಂತಿದೆ. ಪ್ರಾತಿನಿಧಿತ್ವ ಸರಿಯಿಲ್ಲ ಎಂದು ಹಾವೇರಿಯ ಸಾಹಿತ್ಯ ಸಮ್ಮೇಳನಕ್ಕೆ ಪರ್ಯಾಯ ಮಾಡಿದ್ದ ಚಿಂತಕರು ಇದಕ್ಕೆ ಎಡಗೈ ಪರ್ಯಾಯ ಮಾಡುವರೇ?!? 


ಇದು ಅಸಮತೋಲಿತ ಮೀಸಲಾತಿಯ ವಾಸ್ತವ. ಯಾರು ಏನೇ ಹೇ"ಲಿ"ದರೂ ಇದು ವಾಸ್ತವ. ಇದು ಹೇ"ಲಿ"ಕೆ ಎಂದು ಹತ್ತು ಸಾವಿರ ಮೈಲಿ ದೂರದ ಏಸಿ ರೂಮಿನಲ್ಲಿ ಕುಳಿತ ನನ್ನಂತಹ ವಿದೇಶಿ ಏಜೆಂಟನಿಗೆ ಕಾಣುವುದು ಭಾರತದ ಬೆವರಿನ ವಾಸನೆಯ ಮಣ್ಣಿನ ಕಣಕಣ ಅಂಟಿಸಿಕೊಂಡ ಭಾರತ ಮಾತೆಯ ಸತ್ಪುತ್ರ/ತ್ರಿ/Q/? ಸಂವಿಧಾನ ಊದುವ Non Disclosure Agreement (NDA) INDIAನ್ ಮಕ್ಕಳಿಗೆ ಏಕೆ ಕಾಣುತ್ತಿಲ್ಲ?! 


ಜಾತಿಗಳ ಬಗ್ಗೆ ಏನೂ ಗೊತ್ತಿರದ ನಾನು ಕನ್ನಡ ಸಾಹಿತ್ಯ ಲೋಕ ಪ್ರವೇಶಿಸಿದ ಕ್ಷಣಕ್ಕೆ ಭಾರತದ ಜಾತಿ ವ್ಯವಸ್ಥೆಯನ್ನು ಅರಿಯದಿದ್ದರೆ ನನಗೆ ಈ ಕ್ಷೇತ್ರದಲ್ಲಿ ಸಂವಹಿಸುವುದು ಸಾಧ್ಯವೇ ಇಲ್ಲ ಎಂದು ನನ್ನ ಸಾಹಿತ್ಯಿಕ ಮಿತ್ರ/ತ್ರೆಯರು ಮನವರಿಕೆ ಮಾಡಿಕೊಟ್ಟರು. ಅದರ ಫಲಶ್ರುತಿಯೇ ನಾನು ಕೇವಲ ದ.ಸಾ.ಪ. ಆಮಂತ್ರಣ ಪತ್ರಿಕೆ ನೋಡಿ ಯಾರು ಬಲಗೈ ಯಾರು ಎಡಗೈ ಎಂದು ಹೇಳುವಷ್ಟು ಪರಿಣಿತಿ ಗಳಿಸಿರುವೆ. ಏಕೆಂದರೆ ಅರಿವೇ ಗುರು. ಮನಸ್ಸಿದ್ದರೆ ಮಾರ್ಗ, ಜಾತಿ ಅರಿಯಲು, ಅಳಿಸಲು!

 

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ


ಅಂಬೇಡ್ಕರ್ ವಾದಿಗಳ ಗುರಾಣಿ

 ನಾನೊಬ್ಬ ನಾಸ್ತಿಕ. ನನ್ನನ್ನು ಬಿಟ್ಟರೆ ಅನ್ಯ ದೇವರು ಇಲ್ಲ ಎಂಬುದೇ ನನ್ನ ತತ್ವ. ಆದರೆ ನಾನೊಬ್ಬ ಸಹಮಾನವ, ಸಾಮಾಜಿಕ ಜೀವಿ. ಹಾಗಾಗಿ ನನ್ನ ಸಹಜೀವಿಗಳ ನಂಬಿಕೆಯನ್ನು ಗೌರವಿಸುತ್ತೇನೆ. ಹಾಗೆಯೇ ಮೌಢ್ಯವನ್ನು ಖಂಡಿಸುತ್ತೇನೆ. ಯಾರಾದರೂ ಒಂದು ಕಲ್ಲನ್ನು ಪೂಜಿಸುತ್ತಿದ್ದರೆ ಅದನ್ನು ಗೌರವಿಸುತ್ತೇನೆ. ಹಾಗೆಯೇ ಯಾರಾದರೂ ಒಂದು ಕಲ್ಲನ್ನು ತಂದು 'ನಾಸ್ತಿಕ ಎನ್ನುವಿಯಲ್ಲ ಇದರ ಮೇಲೆ ಮೂತ್ರ ಮಾಡು ನೋಡೋಣ' ಎಂದು ಸವಾಲು ಹಾಕಿದರೆ, ಸವಾಲು ಗೆಲ್ಲುತ್ತೇನೆ. 


ಇದು ನನ್ನ ವೈಜ್ಞಾನಿಕ, ಮಾನವಿಕ, ಸಾಮಾಜಿಕ ನಿಲುವು.


ಈಗ ನನ್ನಂತಹದೇ ನಿಲುವಲ್ಲದಿದ್ದರೂ ಅದಕ್ಕೂ ಮೀರಿದ ನಿಲುವು ಕನ್ನಡ ನಾಡಿನ ಉದಾರವಾದಿ, ಧರ್ಮನಿರಪೇಕ್ಷ, ಸಂವಿಧಾನಬದ್ಧ, ವೈಜ್ಞಾನಿಕ, ಸಮಸಮಾಜದ ಕಳಕಳಿಯ ಚಿಂತಕರದ್ದು! ಅದು ಇತ್ತೀಚಿನ ಚಂದ್ರಯಾನ ಉಡಾವಣೆ ಸಮಯದಲ್ಲಿ ಕುಂಭದ್ರೋಣ ವರ್ಷಧಾರೆಯಂತೆ ಧರಾ"ಶಾಯಿ"ಯಾಗಿ ಹರಿದಿದೆ. ಆದರೆ ಇದು ನನಗೆ ಅವರ ಮಾನಸಿಕ ದ್ವಂದ್ವವಾಗಿ ಕಾಣುತ್ತಿದ್ದೆ. ಏಕೆಂದರೆ ಮನೋವೈಜ್ಞಾನಿಕ ವಿಶ್ಲೇಷಣೆ ನನ್ನ ಆಸಕ್ತಿ. ನಾನು ಗುರುತಿಸಿದ ಅವರ ದ್ವಂದ್ವಗಳು ಸಾಕಷ್ಟಿದ್ದರೂ ಈ ಎರಡು ಇಂದಿಗೆ ಸಾಕು:


* ವಿಜ್ಞಾನಿಗಳು ವೈಜ್ಞಾನಿಕವಾಗಿ ಇರಬೇಕು. "ಬಾಬಾ ಸಾಹೇಬ"ರ ಸಂವಿಧಾನದ ಪ್ರಜಾಪ್ರಭುತ್ವ ಸಂಸ್ಥೆಗಳಲ್ಲಿ ಪೂಜೆ ಪುನಸ್ಕಾರ ಸಲ್ಲದು.


ಹೌದು, ವಿಜ್ಞಾನಿಗಳು ವೈಜ್ಞಾನಿಕವಾಗಿ ಇರಬೇಕು. ಅವರು ಧಾರ್ಮಿಕ ಮೌಢ್ಯ ಹೊಂದಿರಬಾರದು. ಆದರೆ ಆ ವಿಜ್ಞಾನಿಗಳು ಪೂಜೆಯನ್ನು ಸರ್ಕಾರದ ಭಾಗವಾಗಿ ಮಾಡದೆ ಮನೆಯಲ್ಲಿ ಮಾಡಿಕೊಳ್ಳಲಿ ಎಂಬ ಉದಾರ ಮಾಫಿ ಏಕೆ? ವಿಜ್ಞಾನಿ ವೈಜ್ಞಾನಿಕವಾಗಿ ಇರಬೇಕು ಎಂದ ಮೇಲೆ ಈ ದ್ವಂದ್ವ ನಿಲುವು ಏಕೆ?


"ಬಾಬಾ ಸಾಹೇಬ"ರ ಸಂವಿಧಾನಬದ್ಧ ಸರ್ಕಾರವೇ ವೈಜ್ಞಾನಿಕ ಇಸ್ರೋ ಸಂಸ್ಥೆ, ಧಾರ್ಮಿಕ ಮುಜರಾಯಿ, ವಕ್ಫ್, ಇತ್ಯಾದಿ ಏಕೆ ನಡೆಸುತ್ತಿದೆ? ಇದು ಸರ್ಕಾರದ ದ್ವಂದ್ವವಲ್ಲವೇ!? ಸರ್ಕಾರ ಈ ತಪ್ಪನ್ನು ಸರಿಪಡಿಸಿಕೊಂಡರೆ ಜನರು ತಾವಾಗೇ ಸರಿಯಾಗುತ್ತಾರಲ್ಲವೇ!


*  "ಬಾಬಾ ಸಾಹೇಬ"ರ ಸಾಂವಿಧಾನಿಕ ಬಹುತ್ವ ಭಾರತದಲ್ಲಿ ಹೇರಿಕೆ ಸಲ್ಲ.


ಉದಾರವಾದಿ ಚಿಂತಕರ ಈವರೆಗಿನ ಚಿಂತನೆಯ ಮಹಾಮಜಲೇ ಹೇರಿಕೆ. ಅವರ ಪ್ರತಿಯೊಂದು ಚಿಂತನೆ ಹೇರಿಕೆಯೇ ಆಗಿದೆ ಎಂದು ನಿತ್ಯ ದೃಢವಾಗಿ ಕಂಗೊಳಿಸುತ್ತಿದೆ. ಮುಖ್ಯಮಂತ್ರಿ ಯಾರ ಕೈ ಕುಲುಕಬೇಕು, ಯಾರನ್ನು ಅಪ್ಪಬೇಕು ಎಂದು ಸಾರ್ವತ್ರಿಕವಾಗಿ ಹೇರುವ ಇವರು ಖಾಸಗಿಯಾಗಿ ಏನೇನು ಬಹು ಬಹುತ್ವಗಳನ್ನು  ಮುಮ ಅವರ ಮೈಮೇಲೆ ಹೇರುವರೋ....!


ಚಂದ್ರಯಾನಕ್ಕೆ ತಿರುಪತಿ ನಾಮ ಎಂದ ಉಪನ್ಯಾಸಕರ ಕಾಲೇಜಿನಲ್ಲಿ ಫೋಟೋ ಎಷ್ಟಿವೆ, ಊದುಬತ್ತಿ ಹಚ್ಚುತ್ತಾರೆಯೇ, ಪೂಜೆಗಳು ಆಗುತ್ತವೆಯೇ ಎಂಬುದನ್ನೇ ಖಂಡಿಸದ ಆ ಉಪನ್ಯಾಸಕರು ಲೋಕಕ್ಕೆ ನಾಮ ಹಾಕುತ್ತಿಲ್ಲವೆ ಎಂಬ ಖಾತ್ರಿಯೇ ಇಲ್ಲ! ಆದರೆ ಇಸ್ರೋ ವಿಜ್ಞಾನಿಗಳು ಭತ್ಯೆ ಪಡೆದು ಪೂಜೆ ಮಾಡಿಸಿದರೆ ಎಂಬ ಖಾತ್ರಿ ಇರುವಂತೆ ಲೋಕಕ್ಕೆ ನಾಮ ಹಾಕಲು ಹೊರಟಿದ್ದರು. "ಎತ್ತು ಈಯಿತು ಎಂದರೆ ಕೊಟ್ಟಿಗೆಗೆ ಕಟ್ಟು" ಎಂಬಂತೆ!


ಇನ್ನೂ ಮಜಾ ಎಂದರೆ "ಮುಸ್ಲಿಂ ಚಿಂತಕರ ಚಾವಡಿ" ಎಂಬ ಧಾರ್ಮಿಕ ಜೋಡಣೆ ಇರುವ ಉದಾರವಾದಿ, ವೈಜ್ಞಾನಿಕ, ಸಾಮಾಜಿಕ, "ಧರ್ಮನಿರಪೇಕ್ಷ" ವ್ಯಕ್ತಿಗಳು ಈ ಚಂದ್ರಯಾನ ಪೂಜೆ ಖಂಡಿಸುವಲ್ಲಿ ಮುಂಚೂಣಿಯಲ್ಲಿರುವುದು. ಮೊದಲು ಅವರು ತಾವು ಅಲ್ಲಾಹ್ ಸಮೇತ ಯಾವ ದೇವರನ್ನೂ ನಂಬುವುದಿಲ್ಲ. ಕಾಬಾ ಎಂಬುದು ಕೇವಲ ಕಲ್ಲು ಎಂದು ತಮ್ಮ ವೈಜ್ಞಾನಿಕ ನಿಲುವನ್ನು ಸ್ಪಷ್ಟಪಡಿಸಿ ಈ ಹೋರಾಟ ಕೈಗೊಳ್ಳಲಿ. ಇಲ್ಲದಿದ್ದರೆ ಜನತೆಯ ಕ್ಷಮೆ ಕೋರಿ "ಮುಸ್ಲಿಂ ಚಿಂತಕರ ಚಾವಡಿ" ಬರಖಾಸ್ತುಗೊಳಿಸಲಿ. ಅಲ್ಲಿಯವರೆಗೆ ಅವರಿಗೆ ಚಂದ್ರಯಾನವಲ್ಲದೆ ಯಾವ ಧಾರ್ಮಿಕ ವಿಷಯವಿರಲಿ, ಮೌಢ್ಯವನ್ನು ಸಹ ಖಂಡಿಸುವ ನೈತಿಕತೆ ಇಲ್ಲ.


ಇಲ್ಲಿ "ಬಾಬಾ ಸಾಹೇಬ"ರ ಎಂಬುದನ್ನು ""ನಲ್ಲಿ ಏಕೆ ಹಾಕಿದ್ದೇನೆಂದರೆ ಬಾಬಾ ಸಾಹೇಬರನ್ನು ಇವರು ಗುರಾಣಿಯಾಗಿ ಬಳಸುತ್ತಿದ್ದಾರೆ. ತಮ್ಮ ಪೊಳ್ಳುವಾದದ ರಕ್ಷಣೆಗೆ ಅಂಬೇಡ್ಕರ್ ಅವರನ್ನು ಗುರಾಣಿಯಾಗಿಟ್ಟುಕೊಂಡಿರುವ ಇವರಿಂದ ಸಮಾಜ ಎಚ್ಚರದಿಂದ ಇರಬೇಕು. ಏಕೆಂದರೆ ನಾಮ ಹಾಕಿದ ಉಪನ್ಯಾಸಕ ಸಹ ತನ್ನ ವಾದಕ್ಕೆ "ಬಾಬಾ ಸಾಹೇಬ"ರ ಗುರಾಣಿಯನ್ನೇ ಬಳಸಿದ್ದು.


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

ವ್ಯಂಗೋಕ್ತಿ

 ಒಂದು ವಿಷಯ ಯಾ ವ್ಯಕ್ತಿಯ ಮೂರ್ಖತನವನ್ನು ವಿಡಂಬನಾತ್ಮಕವಾಗಿ ಅಣಕವಾಡಿ ಅಥವಾ ಅವಹೇಳಿಸುವುದನ್ನು "ವ್ಯಂಗೋಕ್ತಿ" ಎನ್ನುತ್ತಾರೆ. ಇದು ಸಾಹಿತ್ಯದಲ್ಲಿ ಒಂದು ಪ್ರಮುಖ ಪ್ರಾಕಾರ. ಇಂಗ್ಲಿಷ್ ಸಾಹಿತ್ಯ ಅದರಲ್ಲೂ ಬ್ರಿಟಿಷ್ ಇಂಗ್ಲಿಷ್ ಸಾಹಿತ್ಯದಲ್ಲಿ ಈ ಪ್ರಾಕಾರವು ಹೆಚ್ಚು ಪ್ರಚಲಿತವಾಗಿದೆ. ಇದು ಕುಚೋದ್ಯದ ಹಾಸ್ಯ ಎನಿಸಿದರೂ ಈ ಪ್ರಾಕಾರವು ಸಂದೇಶಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಓದುಗರಿಗೆ ತಲುಪಿಸುತ್ತದೆ. ಇದು ಸಾಹಿತ್ಯದ ಒಂದು ತಂತ್ರ ಮಾಧ್ಯಮವಾಗಿ ಬರಹಗಾರನ ಕೋಪ, ಹತಾಶೆ, ಜುಗುಪ್ಸೆ, ಕುಚೋದ್ಯಗಳು ನವಿರು ಅಥವಾ ಗಾಢ ಹಾಸ್ಯದ ಲೇಪನದೊಂದಿಗೆ ಪ್ರಚಲಿತ ಸಾಮಾಜಿಕ, ರಾಜಕೀಯ ಅಥವಾ ಇನ್ಯಾವುದೇ ವಿದ್ಯಮಾನಗಳ ಕುರಿತಾದ ಕಟು ವಿಮರ್ಶೆಯನ್ನು ಒಳಗೊಂಡಿರುತ್ತದೆ. ಇಂಗ್ಲಿಷಿನಲ್ಲಿ ವ್ಯಂಗೋಕ್ತಿಯನ್ನು sarcasm ಎನ್ನುತ್ತಾರೆ. ಲ್ಯಾಟಿನ್ ಪದ sarcasmos ಮತ್ತು ಗ್ರೀಕ್ ಪದ sarkasmos ಎರಡರಿಂದಲೂ ಬಂದಿರುವ ಈ ಎರಡೂ ಭಾಷೆಗಳಲ್ಲಿ ಈ ಪದವು "ಚರ್ಮ ಸುಲಿಯುವುದು", "ರೋಷದಿಂದ ತುಟಿ ಕಚ್ಚುವುದು", "ಕುಹಕ ನಗೆ" ಎಂಬ ಅರ್ಥ ಹೊಂದಿದೆ. ಕ್ರಿ.ಶ. ೧೫೫೦ರಿಂದಲೂ ಈ ಪ್ರಕಾರವು ಪಾಶ್ಚಿಮಾತ್ಯ ಸಾಹಿತ್ಯದಲ್ಲಿ ಬಳಕೆಯಲ್ಲಿದೆ.


ನನ್ನ ಫೇಸ್ಬುಕ್ ಪೋಸ್ಟುಗಳು ಸಹ ಈ ರೀತಿಯ ಭಾರತದ ಸಾಮಾಜಿಕ, ರಾಜಕೀಯ ಮತ್ತಿತರೆ ಪ್ರಚಲಿತ ವಿದ್ಯಮಾನಗಳ ಕುರಿತಾದ ವಿಡಂಬನಾತ್ಮಕ ಬರಹಗಳು. ಸಾಕಷ್ಟು ಭಾರತೀಯ ಶ್ರೀಸಾಮಾನ್ಯರು ನನ್ನ ಬರಹಗಳನ್ನು ಇದೇ ಅರ್ಥದಲ್ಲಿ ಸ್ವೀಕರಿಸಿದರೂ ಅನೇಕ ಸಾಹಿತಿಗಳು, ಪತ್ರಕರ್ತರು, ಚಿಂತಕರು, ಸಾಕ್ಷಿಪ್ರಜ್ಞೆಗಳು, ಕನ್ನಡ ಸಂಶೋಧನ ಪಿಹೆಚ್ದಿ ಮತ್ತು ಸ್ನಾತಕೋತ್ತರ ಪದವೀಧರರು ಇವುಗಳನ್ನು ಗ್ರಹಿಸುವಲ್ಲಿ ಸೋತು ಅಥವಾ ಸೋತಂತೆ ನಟಿಸಿ ನನ್ನನ್ನು ಬಲವೆಂದು, ಎಡವೆಂದು, ನಡುವೆಂದು, ಮೋಜುಗಾರನೆಂದು, ವಿಲಾಸಿಯೆಂದು, ವಿದೇಶಿಯೆಂದು ಇತ್ಯಾದಿಯಾಗಿ ಬ್ರ್ಯಾಂಡ್ ಮಾಡುತ್ತಿದ್ದಾರೆ. ನಾನು ಈ ಮೇಲಿನ ಯಾವುದೋ ಕೇವಲ ಒಂದು ಮಾತ್ರವಲ್ಲದೆ ಎಲ್ಲವೂ ಆಗಿರುವ ಓರ್ವ ಶ್ರೀಸಾಮಾನ್ಯ ಮಾತ್ರ ಆಗಿರುತ್ತೇನೆ. ದಯಮಾಡಿ ನನ್ನನ್ನು ಹಳೇ ಮೈಸೂರು ಕಡೆ "ಪುಕ್ಸಟ್ಟೆ ತು... ಎಂದರೆ ಮೈತುಂಬಾ ತು..." ಎನ್ನುವಂತೆ ಮೈತುಂಬಾ ಇರುವವನೆಂದು ಗ್ರಹಿಸದೆ 'ಇರುವಲ್ಲಿ ಎಲ್ಲರಂತೆ ಒಂದೇ ಇರುವವ' ಎಂದು ಪರಿಗಣಿಸಬೇಕಾಗಿ ವಿನಂತಿಸುವೆ. ನಾನು ವಿಡಂಬನೆಯನ್ನು ಕೇವಲ ಜಾಗೃತಿ ಮೂಡಿಸುವ ಒಂದು ತಂತ್ರವಾಗಿ ನೋಡುತ್ತೇನೆಯೇ ಹೊರತು ಇನ್ನೇನಾಗಿಯೂ ಅಲ್ಲ. 


ಬ್ರಿಟಿಷ್ ಹಾಸ್ಯಗಾರ ರಿಕಿ ಜೆರ್ವೈಸ್ ಹೇಳುವಂತೆ ನಾನು ಸಹ ಬ್ರಿಟಿಷರು ಈ ಸಾಹಿತ್ಯ ಪ್ರಕಾರವನ್ನು ಕತ್ತಿ ಮತ್ತು ಗುರಾಣಿಯಾಗಿ ಸದಾ ಬಳಸುವಂತೆ ಬಳಸುತ್ತೇನೆ.  ನಮ್ಮ  ಚಿಂತಕರು ಹೇಗೆ ಸಂವಿಧಾನ, ಬುದ್ಧ, ಬಸವ, ಅಂಬೇಡ್ಕರ್, ಕುವೆಂಪು ಹಿಂದುತ್ವ, ಫ್ಯಾಸಿಸಂ, ಜಾತ್ಯಾತೀತ, ಅಸ್ಮಿತೆ, ಸೆಕ್ಯುಲರ್ ಇತ್ಯಾದಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪದಕೋಶವನ್ನು ಕತ್ತಿ, ಗುರಾಣಿಯಾಗಿ ಬಳಸುವರೋ ಹಾಗೆ! 


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ