ಸುಧಾಮೂರ್ತಿ ಸೌಟು, ಸಲೀಮನ ಚಾಟು.

 ಹೀಗೆಯೇ ಹಲವು ವರ್ಷಗಳ ಹಿಂದೆ ಶಾರ್ಲೆಟ್ ನಗರದ ಕ್ಲೈಂಟ್ ಕಂಪೆನಿಗೆ ಪ್ರತಿ ವಾರ ಭೇಟಿ ಕೊಡುತ್ತಿದ್ದೆ. ಅಲ್ಲಿ ಹೈದರಾಬಾದ್ ಹಿನ್ನೆಲೆಯ ಸಲೀಮನಿಗೆ ಅದೇನೋ ಸಹಾಯ ಬೇಕಿತ್ತು, ಕೊಟ್ಟಿದ್ದೆ. ಅದಕ್ಕೆ ಆತ, "ನಿನಗೆ ಒಂದು ಲಂಚ್ ಕೊಡಿಸುವೆ" ಎಂದು ಒತ್ತಾಯಿಸುತ್ತಿದ್ದ. ಕಡೆಗೆ ಆಗಲಿ ಎಂದು ಒಪ್ಪಿದೆ. ಅದಕ್ಕೆ ಅವನು, "ನಾನು ಫ್ಯಾನ್ಸಿ ಗಿನ್ಸಿ ಎಲ್ಲಾ ಕೊಡಿಸಲು ಆಗಲ್ಲ. ಸಿಂಪಲ್ಲಾಗಿ ಸಬ್ವೇ ಸ್ಯಾಂಡ್ವಿಚ್ ಕೊಡಿಸುವೆ" ಎಂದ. "ಅದಕ್ಕೇನು! ನೀನು ಏನು ಕೊಡಿಸಿದರೂ ಸರಿ, ಮಾರಾಯ" ಎಂದಿದ್ದೆ. 


ಸಬ್ವೇಗೆ ಕರೆದುಕೊಂಡು ಹೋದ ಅವನು, ಹನ್ನೆರಡು ಇಂಚಿನ ಒಂದು ವೆಜ್ಜೀ ಸ್ಯಾಂಡ್ವಿಚ್ ಆರ್ಡರ್ ಮಾಡಿ ನನ್ನೆಡೆಗೆ ತಿರುಗಿ, "ರವಿ ಭಾಯ್, ಇದನ್ನೇ ಬೈಟು ಮಾಡಿದರೆ ಸಾಕಲ್ಲವೇ!" ಎಂದು ಕೇಳಿದ. ನಾನು ಸರಿ ಎಂದೆ. ಹೊಟ್ಟೆ ಬಟ್ಟೆ ಕಟ್ಟಿ ಕಾಸು ಉಳಿಸುವ ಅನೇಕರನ್ನು ಕಂಡಿದ್ದ ನನಗೆ ಇದೇನೂ ಹೊಸತಲ್ಲ. ಹಾಗಾಗಿ ಓಕೆ ಎಂದೆ.


ಆರ್ಡರ್ ತೆಗೆದುಕೊಂಡ ಹುಡುಗಿಗೆ ಸಲೀಂ, "ಕೆನ್ ಯೂ ಪುಟ್ ಆನ್ ನ್ಯೂ ಗ್ಲೌಸಸ್" ಎಂದು ಆಕೆಗೆ ಹೊಸ ಗ್ಲೌಸ್ ತೊಟ್ಟು ತನ್ನ ಸ್ಯಾಂಡ್ವಿಚ್ ಮಾಡಲು ಹೇಳಿದ. ಆಕೆ ಹೊಸ ಗ್ಲೌಸ್ ತೊಟ್ಟು ಸ್ಯಾಂಡ್ವಿಚ್ ತಯಾರಿಸಿ ಅದನ್ನು ಎರಡು ಹೋಳು ಮಾಡಲು ಚಾಕು ಎತ್ತಿಕೊಂಡಳು. ತಕ್ಷಣವೇ ಸಲೀಂ, "ಕೆನ್ ಯೂ ಯೂಸ್ ಫ್ರೆಶ್ ನೈಫ್ ಟು ಕಟ್ ಇಟ್?" ಎಂದು ಆಕೆಗೆ ಬೇರೆ ಚಾಕು ತೆಗೆದುಕೊಂಡು ಸ್ಯಾಂಡ್ವಿಚ್ ಹೋಳು ಮಾಡಲು ಕೇಳಿದ. ಆಕೆ ವಿನಮ್ರವಾಗಿ ಬೇರೆ ಚಾಕು ತಂದು ಹನ್ನೆರಡು ಇಂಚಿನ ಸ್ಯಾಂಡ್ವಿಚ್ಚನ್ನು ಕತ್ತರಿಸಿ ಆರು ಇಂಚಿನ ಎರಡು ಸ್ಯಾಂಡ್ವಿಚ್ ಮಾಡಿಕೊಟ್ಟಳು.


ಕಟ್ಟಾ ಧಾರ್ಮಿಕ ಶ್ರದ್ಧಾಳುವಾದ ಸಲೀಮನ ಸಮಸ್ಯೆ ಆತ ಹಲಾಲ್ ಆಲ್ಲದ ಪದಾರ್ಥಗಳನ್ನು ತಿನ್ನದೇ ಇರುವುದಷ್ಟೇ ಅಲ್ಲ ಅದನ್ನು ಮುಟ್ಟುವುದು ಸಹ ಹರಾಮ್ ಎಂದುಕೊಂಡದ್ದು. ಹಾಗಾಗಿ ವೆಜ್ಜೀ ಸ್ಯಾಂಡ್ವಿಚ್ ಆರ್ಡರ್ ಮಾಡಿದ್ದ.


ಹಲಾಲ್ ಅಲ್ಲದ ಪದಾರ್ಥಗಳನ್ನು ಮುಟ್ಟಿದ್ದ ಆಕೆಗೆ ಹೊಸ ಗ್ಲೌಸ್ ತೊಡಲು ಮತ್ತು ಹಲಾಲ್ ಅಲ್ಲದ ಆಹಾರವನ್ನು ಕತ್ತರಿಸಿದ್ದ ಚಾಕು ಬದಲಿಸಿ ಫ್ರೆಶ್ ಚಾಕು ಬಳಸಲು ಕೇಳಿದ್ದು ಸಹ ಇದೇ ಕಾರಣಕ್ಕಾಗಿ. ಆತ ಹಾಗೆ ಕೇಳಿದ್ದಕ್ಕೆ ಕೊಂಚವೂ ಬೇಸರಿಸಿಕೊಳ್ಳದೆ ಆಕೆ ಸೇವೆಯನ್ನು ಕೊಟ್ಟದ್ದು ಸಲೀಮನ ವೈಯಕ್ತಿಕ ಧಾರ್ಮಿಕ ಶ್ರದ್ಧೆಯನ್ನು ಗೌರವಿಸಿಯಷ್ಟೇ.


ಹಲಾಲ್ ಪದಾರ್ಥವನ್ನು ಮಾತ್ರ ತಿನ್ನುವ ಸಲೀಂ ನನ್ನನ್ನು ಯಾವುದಾದರೂ ಕಬಾಬ್ ಜಾಯಿಂಟಿಗೆ ಕರೆದೊಯ್ಯದೆ ಧರ್ಮಭ್ರಷ್ಟವಾಗಿಸಬಲ್ಲ ಸಬ್ವೇಗೆ ಕರೆದಾಗ ಕೊಂಚ ಆಶ್ಚರ್ಯಗೊಂಡಿದ್ದ ನನಗೆ ಆತ ಏಕೆ ನನ್ನನ್ನು ಅಲ್ಲಿಗೇ ಕರೆದೊಯ್ದದ್ದು ಎಂದು ಆತ ಬಿಲ್ ಕೊಡುವವರೆಗೆ ಅರ್ಥವಾಗಿರಲಿಲ್ಲ! 


ಚೆಕ್ ಔಟ್ ಹುಡುಗಿ, "ಇಟ್ಸ್ $6.99" ಎಂದಾಗ ಸಲೀಂ ತನ್ನ ಜೇಬಿನಿಂದ ಒಂದು ಪುಕ್ಕಟೆ ಸ್ಯಾಂಡ್ವಿಚ್ ಕೂಪನ್ ಕೊಟ್ಟು, "ಥ್ಯಾಂಕ್ ಯು" ಎಂದಾಗ ಆತನ ಊಟದ ಒತ್ತಾಯ, ಧಾರ್ಮಿಕ ಶ್ರದ್ಧೆ, ಸ್ಯಾಂಡ್ವಿಚ್ ಹುಡುಗಿಯ ಸೇವಾ ಮನೋಭಾವ, ಅಮೆರಿಕನ್ ಮಾರುಕಟ್ಟೆಯ ಚಾಪೆಯ ತಂತ್ರದ ಕೂಪನ್, ಧರ್ಮವನ್ನು ಪಂಥಕ್ಕೊಡ್ಡಿಯಾದರೂ ಸರಿಯೇ ರಂಗೋಲಿ ಕೆಳಗೆ ನುಸುಳಬೇಕು ಎನ್ನುವ ಸಲೀಮನ ಪ್ರತಿತಂತ್ರ ಎಲ್ಲವೂ ತಲೆಯಲ್ಲಿ ಗಿರ್ರನೆ ಗಿರಕಿ ಹೊಡೆಯತೊಡಗಿತು.


"ಫ್ರೆಂಚ್ ಫ್ರೈ ಕರಿಯಲು ಬಳಸಿದ ಪ್ರಾಣಿಜನ್ಯ ಎಣ್ಣೆ ನನ್ನನ್ನು ಧರ್ಮಭ್ರಷ್ಟನಾಗಿಸಿತು" ಎಂದು ಮೆಕ್ಡಾನಾಲ್ಡ್ ಇಂದ ಕಾಸು ಬಿಚ್ಚಿಸಿದ್ದ ಭಾರತೀಯರ, ಮತ್ತು ಸುಧಾ ಮೂರ್ತಿಯವರ "ಮಾಂಸದ ಸಾರಿನಲ್ಲಿ ಅದ್ದಿದ ಸೌಟನ್ನು ಸಾಂಬಾರಿನಲ್ಲಿ ಅದ್ದಿ ಬಡಿಸಿದರೆ... ಎಂದು ಭಯವಾಗುತ್ತದೆ" ಎಂಬರ್ಥದ ಮಾತನ್ನು ಅರ್ಥಹೀನರಾಗಿ ಬಳಸಿದ "ಉದಾರ ಚಿಂತಕ"ರೆಲ್ಲರ ಮೂಲವು ಗಿರಕಿ ಹೊಡೆಯುತ್ತಿದ್ದ ನನ್ನ ತಲೆಯಲ್ಲಿ ಕಡೆಕಡೆದು ಬೆಣ್ಣೆಯಂತೆ ಸುಜ್ಞಾನವಾಗಿ ಸುಸ್ಪಷ್ಟವಾಗಿ ತೇಲಿಬಂದಿತು.


ಅದು ಏನಪ್ಪಾ ಎಂದರೆ........


ಎನ್ಫೀಲ್ಡ್ ಕೋವಿಗೆ ತುಂಬಲು ಕೊಟ್ಟ ಕೊಬ್ಬು ಸವರಿದ ತೋಟಾಗಳಿಗೆ ಉದ್ದೇಶಪೂರ್ವಕವಾಗಿ ಧರ್ಮಭ್ರಷ್ಟರಾಗಿಸಲು ಹಂದಿ, ದನದ ಕೊಬ್ಬು ಸವರಿದ್ದು ಎಂದು "ಕಿಡಿ" ಹಚ್ಚಿ ಸ್ವಾತಂತ್ರ್ಯ ಪಡೆದ ದೇಶದಲ್ಲಿ ಇನ್ನೆಂತಹ ಪ್ರಜೆಗಳು ಇರಲು ಸಾಧ್ಯ!


ಕ್ಯಾಮೆರಾ ಇಡಿ, ಸೌಟು ಬಿಡಿ, "ಫನ್"ಗಾಗಿ ಫಕ್ ಮಾಡಿ. ಎಲ್ಲಾ ಮಕ್ಕಳಾಟ ಆಡಿ ಮಕ್ಕಳು ಮಾಡಿ.


ಹಮೇ ತೋ ಲೂಟ್ ಲಿಯಾ ಮಿಲ್ಕೇ ಹುಸ್ನ್ ವಾಲೋನೇ ಗೋರೆ ಗೋರೆ ಗಾಲೋನೇ ಕಾಲೇ ಕಾಲೇ ಬಾಲೋನೇ....


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

No comments: