ಕ್ರೇಜಿ ಫಿಲೋಸಾಫರ್ ಅವರ "ಅರಿದಡೆ ಆರದು ಮರೆದೊಡೆ ಮೂರದು" ವಿಶ್ಲೇಷಣೆ

 ಓದಿದ ಪುಸ್ತಕ


ಅರಿದಡೆ ಆರದು ಮರೆದೊಡೆ ಮೂರದು

ಲೇಖಕರು #ರವಿಹಂಜ್

#ಇದು ಕಥೆಯಲ್ಲ ಕಾದಂಬರಿಯೂ ಅಲ್ಲ 

ಇದು ನಮ್ಮೂರಿನ ನಿಮ್ಮೂರಿನ  ನಿಜ ಇತಿಹಾಸ


#ಇತ್ತೀಚಿಗೆ ಓದಿದ ಪುಸ್ತಕ

ರವಿ ಹಂಜ್ ರವರ ಮಹಾಪಯಣ ಪುಸ್ತಕವನ್ನು ಓದಿ  ಕ್ರಿಸ್ತ ಶಕ ಆರನೇ ಶತಮಾನವನ್ನು ಹೊಕ್ಕು ಬಂದಿದ್ದೆ 

ಈಗ ಅವರ ಮತ್ತೊಂದು ಪುಸ್ತಕ ಓದಿ    ಹನ್ನೆರನೇ ಶತಮಾನದಿಂದ ಹದಿನೆಂಟನೇ ಶತಮಾನದ ವರೆವಿಗೂ  (ಹಾಗೂ ಪ್ರಸ್ತತ ದಿನದ ವರೆವಿಗೂ) ಕರುನಾಡಿನ ಉತ್ತರ ತುದಿಯಿಂದ ದಕ್ಷಿಣದ ತುದಿಯ ವರೆವಿಗೂ ಕರುನಾಡಿನಲ್ಲಿ ಸಂಭವಿಸಿದ ರೋಚಕ ಇತಿಹಾಸವನ್ನು ಓದಿದಾಗ ಅಂತಹ ಕ್ರೌರ್ಯಗಳಿಂದ ಜನ ಸಾಮಾನ್ಯರನ್ನು ಕಾಪಾಡಿರುವ ನಮ್ಮ ಸಂವಿಧಾನ .ಕಾನೂನು ಕಟ್ಟಲೆಗಳ‌ಬಗ್ಗೆ ಗೌರವವು ಹೆಚ್ಚಾಯ್ತು  ಹಾಗೂ 

ರವಿ ಹಂಜ್  ರವರ ಜ್ಞಾನ ಬಂಡಾರದಲ್ಲಡಗಿರುವ ಅಧ್ಬುತ ಕನ್ನಡ ಪದ ಪುಂಜಗಳನ್ನು ಓದಿ ಕನ್ನಡದಲ್ಲೇ ಓದಿ ಬರೆದರೂ ಸಹಾ ಆ ಪದಗಳ ಹಾಗೂ ಅಂತಹ ವಾಖ್ಯಗಳ ಅಸ್ತತ್ವವನ್ನೇ ಅರಿಯದಿದ್ದ ನನ್ನ ಬಗ್ಗೆ ನನಗೇ ಬೇಸರವಾಯ್ತು..

#ಅರಿದಡೆ ಆರದು ಮರೆದೊಡೆ ಮೂರದು 

ಒಂದು ಅಧ್ಬುತ ಹಾಗು ಕರುನಾಡಿನ. ಓದುಗನಿಗೆ ಅವನ ಯಾವ ಊರಿನವನೇ ಆಗಿದರು ಅವನೂರಿನ ಇತಿಹಾಸವನ್ನು ಓದಿದ ಅನುಭವವಾಗುವುದು .

ಹೆಚ್ ಎಸ್ ಶಿವಪ್ರಕಾಶ್ ರವರ ಮಹಾಚೈತ್ರ ಕೃತಿಯಂತೆಯೇ ಕಲ್ಯಾಣ ನಗರದೊಳಗೆ ನೆಡೆಯು ನಾಟಕದ ದೃಷ್ಯದಿಂದ ಆರಂಭವಾಗುವ ಕಥೆ ಹಾಗು ಕಥೆಯ ವಿಷಯ ನಾಟಕದ ಪಾತ್ರದಾರಿಗಳನ್ನು ಪ್ರೇಕ್ಷಕರನ್ನು .ಸಾರ್ವಜನಿಕರನ್ನೂ ಹಾಗೂ ಓದುಗನನ್ನು ಸೇರಿಸಿಕೊಂಡ ಪುಟಗಳು ಮುಂದುವರೆಯುತ್ತವೆ..

ಬಳ್ಳಾರಿ ಕಾಲೇಜೊಂದರಲ್ಲಿ  ಪ್ರಾದ್ಯಾಪಕನಾಗಿರುವ ಸ್ನೇಹಿತನೊಬ್ಬ ಹೇಳುತ್ತಿದ್ದ 

ನಮ್ಮ ನಾಡು ಅದರಲ್ಲೂ ಹಳೆ ಮೈಸೂರು ಪ್ರಾಂತ್ಯವು ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಅಕ್ಕ ಪಕ್ಕದ ಮೂರ್ನಾಲ್ಕು ರಾಜ್ಯಗಳಿಗಿಂತಲೂ ಮುಂದುವರೆದಿದೆ ಇದಕ್ಕೆ ಕಾರಣ ಮೈಸೂರು ಸಂಸ್ಥಾನದ ಆಳ್ವಿಕೆಯಲ್ಲಿದ್ದ ಜನಪರ ಹಾಗೂ ಪ್ರಗತಿಪರ ಕಾರ್ಯಗಳು ಎಂದು ನಾನು ಅವನ ಮಾತನ್ನು  ಸಮ್ಮತಿಸಿಕೊಂಡಿದ್ದೆ ಹಾಗೂ ಸಮ್ಮತಿಸುತ್ತೇನೆ ..

ಈ ಪುಸ್ತಕ ಓದಿದ ನಂತರ ಕರುನಾಡಿನ ಕೆಳ ವರ್ಗದ ಜಾತಿಯ ಜನರ ಶೈಕ್ಷಣಿಕ ಹಾಗೂ ಭೌದ್ದಿಕ ವಿಕಾಸದಲ್ಲಿ  ಹಾಗು ಕೃಷಿಕ್ರಾಂತಿಯಲ್ಲಿ ವೀರಶೈವ ಮಠಗಳ ಕೊಡುಗೆಯ ಬಗ್ಗೆ ತಿಳಿದು ಆಶ್ಚರ್ಯವಾಯ್ತು 

ಇಷ್ಟಕ್ಕೂ ಈ ಪುಸ್ತಕವು ಖಂಡಿತಾ ಒಂದು ಕಲ್ಪಿತ ಕಥೆಯಲ್ಲ ಕಾದಂಬರಿಯಲ್ಲ  ನಿಜ ಇತಿಹಾಸವನ್ನು ತಿಳಿಸುವ ಒಂದು ಸಂಶೋಧನಾ ಕೃತಿ. 

ವೀರಶೈವ ಮಠಗಳಲ್ಲಿ ನೆಡೆಯತ್ತಿದ್ದ ಅಕ್ಷರ ದಾಸೋಹ ಅನ್ನದಾಸೋಹದ ಚಿಂತನೆಗಳನ್ನು ನಾಡಿನ ಉದ್ದಗಲಕ್ಕೂ ಹರಡಿ ಕಾರ್ಯರೂಪಗೊಳಿಸಿದರ ಫಲವಾಗಿ  ಇಂದು ಕರುನಾಡು ಹಲವು ರಾಜ್ಯಗಳಿಗಿಂತಲೂ ಶೈಕ್ಷಣಿಕ ಆರ್ಥಿಕ ಹಾಗೂ ಬೌದ್ದಿಕ ಪ್ರಗತಿ ಸಾಧಿಸಿದೆ ಎಂದು ನಿಸ್ಸಂಶಯವಾಗಿ ಹೇಳಬಹುದು. 

ಜಾತಿ ವ್ಯವಸ್ತೆ .ಕ್ರೌರ್ಯ.ಕ್ರಾಂತಿಕಾರಿಗಳು .ಶರಣರು.ಸಾದು ಸಜ್ಜನರು ಮಠಾದೀಶರು.   ಸನ್ಯಾಸಿ  ಸನ್ಯಾಸತ್ವ .ವ್ಯಾಪಾರಿ ಉದ್ಯೋಗಿ ‌ಅವರುಗಳ ಹಲವು ಮುಖಗಳ ಅನಾವರಣ .

ಶರಣರ ಉದಯ ಯಾವ ಶರಣ ಯಾವ ವಚನವನ್ನು ಯಾವ ಸಂದರ್ಭದಲ್ಲಿ ಏಕೆ ಹೇಳಿದ .ಇವೆಲ್ಲವನ್ನೂ ನಾವು ಕಥೆಯಂತೆ ಓದುತ್ತಿದ್ದರೂ ನಮಗೆ ಇತಿಹಾಸವು ಅರ್ಥವಾಗುತ್ತಿರುತ್ತದೆ .

ಈ ಪುಸ್ತಕವು ಒಂದು ಇತಿಹಾಸವನ್ನು ನಾಟಕದಂತೆ .ತೊಗಲುಗೊಂಬೆಯ ಆಟದಂತೆ ಕಥೆಯಂತೆ.ವಚನಗಳಂತೆ ಹೇಳುವ ಒಂದು ಪ್ರಯೋಗದಂತಿದೆ .

ಓದುಗನಿಗೂ ಸಹಾ ಇಂತಹ ಪ್ರಯೋಗಾತ್ಮಕ ಪುಸ್ತಕ ಓದುವುದು ಒಂದು ಹೊಸ ಅನುಭವವೂ ಹೊಸ ಸಂವೇದನೆಯೂ ಉಂಟಾಗುವುದು .


#ನಮ್ಮೂರು

ನಮ್ಮೂರಿನಲ್ಲಿ ತೆಂಗಿನ ಮರಗಳೇ ಪ್ರಮುಖ ಬೆಳೆ ಆದುದರಿಂದ ನಮ್ಮ ಊರನ್ನು   ಕಲ್ಪತರು ನಾಡೆನ್ನುವರು ನಮ್ಮೂರಿಗೆ ತೆಂಗು ಬಂದ ಇತಿಹಾಸ ತಿಳಿದಿರಲಿಲ್ಲ .

ಇಲ್ಲಿ ಮೊಟ್ಟ ಮೊದಲು ತೆಂಗು ಬೆಳೆಸಿದ ಹಾಗು ತೋಟಗಳನ್ನು ನಿರ್ಮಿಸಿದ ತೋಂಟದ ಸಿದ್ದಸಿದ್ದಲಿಂಗ ಶರಣರಿಗೊಂದು ನಮೋ ನಮಃ .

ಒಂದು ವಿಶೇಷ ಕೃತಿಯನ್ನು ರಚಿಸಿ ಓದಿರೆಂದು ಪ್ರೀತಿಯಿಂದ ಕಳುಹಿಸಿದ ರವಿಹಂಜ್ ಸರ್  ನಿಮಗೆ ಪ್ರೀತಿಯ ಪ್ರಣಾಮಗಳು

No comments: