ಅಟ್ರಾಸಿಟಿ ಅಟ್ರಾಸಿಟಿ

 ಮೂವತ್ತು ವರ್ಷಗಳ ಹಿಂದೆ ನಮ್ಮ ಬಂಧುಗಳ ಹಳ್ಳಿಯ ಕ್ಷೌರಿಕನ ಮೇಲೆ ಒಂದು ಅಟ್ರಾಸಿಟಿ ಕೇಸು ಬಿದ್ದಿತ್ತು. ಮಂಗಳವಾರ ರಜಾ ಮಾಡಿದ್ದ ಕ್ಷೌರಿಕನ ಮನೆಗೆ ಹೋದ ಆ ಊರಿನ ದಲಿತ ಮುಖಂಡ ಮುಖಕ್ಷೌರ ಮಾಡಲು ಆಗ್ರಹಿಸಿದ. ಈ ದಿನ ರಜಾ ಎಂದ ಕ್ಷೌರಿಕನ ಮೇಲೆ ಅಟ್ರಾಸಿಟಿ ಕೇಸು ಹಾಕಿ ಆ ಕ್ಷೌರಿಕ ಮುಂದೆಂದೂ ಕ್ಷೌರಿಕ ವೃತ್ತಿ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟು ಆ ಕೇಸು ರಾಜಿ ಆಯಿತು.


ನನ್ನ ಬಂಧುವೊಬ್ಬರು ನಿತ್ಯ ಮಧ್ಯರಾತ್ರಿ ಕೋವಿಯನ್ನು ಬಗಲಿಗೆ ಏರಿಸಿಕೊಂಡು ತಮ್ಮ ತೆಂಗಿನತೋಟದ ಒಂದು ಭಾಗಕ್ಕೆ ತೆರಳಿ ಆಕಾಶಕ್ಕೆ ಗುಂಡು ಹಾರಿಸಿ ಮನೆಗೆ ತೆರಳಿ ಮಲಗುತ್ತಿದ್ದರು. ಹೀಗೆಯೇ ಒಮ್ಮೆ ಅವರು ಆಕಾಶಕ್ಕೆ ಹಾರಿಸಿದ ಗುಂಡು ಕಾಯಿ ಕದಿಯಲು ಮರವೇರಿದ್ದ ಕಳ್ಳನಿಗೆ ಗಾಬರಿ ಉಂಟು ಮಾಡಿ ಆತ ದೊಪ್ಪೆಂದು ಮರದಿಂದ ಉರುಳಿ ಸತ್ತಿದ್ದ. ಅವರ ದುರಾದೃಷ್ಟಕ್ಕೆ ಆ ಕಳ್ಳ ದಲಿತನಾಗಿದ್ದ. ಮತ್ತದೇ ಅಟ್ರಾಸಿಟಿ, ಕೊಲೆ, ಇತ್ಯಾದಿ "ಮೀಸಲಾತಿ" ಮೊಕದ್ದಮೆ, ಶಿಕ್ಷೆ......ತಮ್ಮ ತೋಟವನ್ನು ಕಳ್ಳರಿಂದ, ಕಾಡುಪ್ರಾಣಿಗಳಿಂದ ಕಾಯ್ದುಕೊಳ್ಳುವ ಪ್ರಯತ್ನ ಮಾಡಿದ ಪರವಾನಗಿ ಹೊಂದಿದ ಕೋವಿದಾರ ರೈತನಿಗೆ.


ಇಂತಹ ಅಟ್ರಾಸಿಟಿ ಕೇಸುಗಳು ಪ್ರತಿ ಹಳ್ಳಿಯಲ್ಲಿ ಹತ್ತಾರು ಆ ಕಾಲದಲ್ಲೇ ಇದ್ದವು. ಈಗ ಅವು ಮಿತಿ ಮೀರಿವೆ. ಈ ಬಗ್ಗೆ ಯಾವಾಗ  ಮಣಿಪುರದ ಮಾದರಿ ಸಾಮಾಜಿಕ ಸಂಘರ್ಷ ಆಸ್ಫೋಟಗೊಳ್ಳುವುದೋ ಬಲ್ಲವರು ಯಾರು?!? 


ಇನ್ನು ಇದೇ ಮೀಸಲಾತಿ ಏಳ್ಗೆಯ ದಲಿತ ಸಾಹಿತ್ಯ ಪರಿಷತ್ತಿನ ಮುಂದಿನ ವಾರದ ಬಿಜಾಪುರ ಸಾಹಿತ್ಯ ಸಮ್ಮೇಳನದಲ್ಲಿ ಎಂಬತ್ತು ಭಾಗ ಬಲಿತ (ಬಲಗೈ) ದಲಿತರದೇ ಮೇಜುವಾನಿ. ಅಲ್ಲಿ ಎಡಗೈ ತೊಳೆಯಲು ಮಾತ್ರ ಎಂಬಂತಿದೆ. ಪ್ರಾತಿನಿಧಿತ್ವ ಸರಿಯಿಲ್ಲ ಎಂದು ಹಾವೇರಿಯ ಸಾಹಿತ್ಯ ಸಮ್ಮೇಳನಕ್ಕೆ ಪರ್ಯಾಯ ಮಾಡಿದ್ದ ಚಿಂತಕರು ಇದಕ್ಕೆ ಎಡಗೈ ಪರ್ಯಾಯ ಮಾಡುವರೇ?!? 


ಇದು ಅಸಮತೋಲಿತ ಮೀಸಲಾತಿಯ ವಾಸ್ತವ. ಯಾರು ಏನೇ ಹೇ"ಲಿ"ದರೂ ಇದು ವಾಸ್ತವ. ಇದು ಹೇ"ಲಿ"ಕೆ ಎಂದು ಹತ್ತು ಸಾವಿರ ಮೈಲಿ ದೂರದ ಏಸಿ ರೂಮಿನಲ್ಲಿ ಕುಳಿತ ನನ್ನಂತಹ ವಿದೇಶಿ ಏಜೆಂಟನಿಗೆ ಕಾಣುವುದು ಭಾರತದ ಬೆವರಿನ ವಾಸನೆಯ ಮಣ್ಣಿನ ಕಣಕಣ ಅಂಟಿಸಿಕೊಂಡ ಭಾರತ ಮಾತೆಯ ಸತ್ಪುತ್ರ/ತ್ರಿ/Q/? ಸಂವಿಧಾನ ಊದುವ Non Disclosure Agreement (NDA) INDIAನ್ ಮಕ್ಕಳಿಗೆ ಏಕೆ ಕಾಣುತ್ತಿಲ್ಲ?! 


ಜಾತಿಗಳ ಬಗ್ಗೆ ಏನೂ ಗೊತ್ತಿರದ ನಾನು ಕನ್ನಡ ಸಾಹಿತ್ಯ ಲೋಕ ಪ್ರವೇಶಿಸಿದ ಕ್ಷಣಕ್ಕೆ ಭಾರತದ ಜಾತಿ ವ್ಯವಸ್ಥೆಯನ್ನು ಅರಿಯದಿದ್ದರೆ ನನಗೆ ಈ ಕ್ಷೇತ್ರದಲ್ಲಿ ಸಂವಹಿಸುವುದು ಸಾಧ್ಯವೇ ಇಲ್ಲ ಎಂದು ನನ್ನ ಸಾಹಿತ್ಯಿಕ ಮಿತ್ರ/ತ್ರೆಯರು ಮನವರಿಕೆ ಮಾಡಿಕೊಟ್ಟರು. ಅದರ ಫಲಶ್ರುತಿಯೇ ನಾನು ಕೇವಲ ದ.ಸಾ.ಪ. ಆಮಂತ್ರಣ ಪತ್ರಿಕೆ ನೋಡಿ ಯಾರು ಬಲಗೈ ಯಾರು ಎಡಗೈ ಎಂದು ಹೇಳುವಷ್ಟು ಪರಿಣಿತಿ ಗಳಿಸಿರುವೆ. ಏಕೆಂದರೆ ಅರಿವೇ ಗುರು. ಮನಸ್ಸಿದ್ದರೆ ಮಾರ್ಗ, ಜಾತಿ ಅರಿಯಲು, ಅಳಿಸಲು!

 

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ


No comments: