Galib to Hanj

 ಗಾಲಿಬ್ (1797-1869): 

ಮಸೀದಿಯಲಿ ಕುಳಿತು ಮದ್ಯ ಹೀರಲೇಕೆ ನಿರ್ಬಂಧ,

ಜಗದ ಕಣಕಣದಲ್ಲೂ ಇರಲು ದೇವನ ಅನುಬಂಧ!


ಅಲ್ಲಮ ಇಕ್ಬಾಲ್ (1877-1938): 

ಮಸೀದಿಯಲ್ಲ ಕುಡುಕರ ವಿಳಾಸ, ಅದು ದೇವರ ನಿವಾಸ.

ಕುಡಿಯಲು ಹೊಕ್ಕುಬಿಡು ದೇವನಿಲ್ಲದ ಕಾಫಿರನ ಮನಸ!


ಅಹ್ಮದ್ ಫರಾಜ್ (1931-2008): 

ಬಂದಿಹೆನು ನಾನು ಕಾಫಿರನ ಮನವ ಕಂಡು,

ದೇವನಿದ್ಧಾನೆ ಅಲ್ಲಿಯೂ ನಿಗೂಢಗೊಂಡು!


ವಾಸಿ ಶಾ (1973 - ): 

ಜಗದ ಕಣಕಣದಲ್ಲೂ ಇರಲು ದೇವನ ಅನುಬಂಧ,

ಸ್ವರ್ಗಕ್ಕೆ ಹೋಗು ಕುಡಿಯಲು ಅಲ್ಲಿ ಇಲ್ಲ ನಿರ್ಬಂಧ!


ಸಾಕಿ ಫರೂಕಿ (1936-2018): 

ಕುಡಿಯುವುದು ನಾನು ಜಗದ ದುಃಖವ ಮರೆಯಲು.

ಮಜವೇನಿದೆ ದುಃಖವೇ ಇಲ್ಲದ ಸ್ವರ್ಗದಲಿ ಕುಡಿಯಲು!


ರವಿ ಹಂಜ್ (ವರ್ತಮಾನ): ಅನಂತ ಕನ್ಯಾಸೆರೆಯ ದುಃಖ ಮಡುಗಟ್ಟಿದೆ ಅಲ್ಲಿಯೂ,

ಕಾತರಿಸುತಿಹರು ಹೂರಿಯರು ದುಃಖದೆ ಕೂಡಿ ಕುಡಿಯಲು!


ಶತಮಾನಗಳಿಂದ ಮೊನ್ನೆ ಮೊನ್ನೆಯತನಕ ಹೀಗೆ ಮದಿರೆ-ಮಸೀಹ, ರಸಿಕ-ರಹೀಮ ವ್ಯಾಖ್ಯಾನವನ್ನು ಮಾಡಿಕೊಂಡು ಬಂದಿದ್ದ ಸಾಹಿತ್ಯ ಪರಂಪರೆಯನ್ನು ಇಂದಿನ ದುರಿತ ಕಾಲದಲ್ಲಿ ಕಾಪಿಡುವುದು ಅತ್ಯಂತ ಅವಶ್ಯವಾಗಿದೆ. ಒಂದೆಡೆ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗಿದೆ ಎಂಬ ಹತಾಶೆಯ ಮಾತು ಕೇಳಿಬಂದರೆ, ಇನ್ನೊಂದೆಡೆ ಎಗ್ಗಿಲ್ಲದ ಹೀಯಾಳಿಕೆ ಇದೆ. ಇವೆರಡರ ನಡುವೆ ಚುನಾವಣೆ ಮುಗಿದಿದೆ, ಚಿತಾವಣೆ ಬರಲಿದೆ. ನಡುವೆ ನಡೆಯಲಿ ಈ ಮದಿರೆಯ ಸಮಾರಾಧನೆ!


ಚಿಯರ್ಸ್, ಸ್ಕೋಲ್, ಸಾಲ್ಯೂತ್.

No comments: