ಹೊಗೇನಕಲ್, ಹಾಲಿವುಡ್ ಲಲನೆಯರು, ಸ್ಯಾಂಡಲ್ ವುಡ್ ಧೀರರು!

ಈಗಷ್ಟೇ ಹೊಗೇನಕಲ್ ಹೊಗೆ ಆರಿದೆ. ಇದು ಬಿರುಗಾಳಿ ಬೀಸುವ ಮುಂಚಿನ ನಿಶ್ಯಬ್ದವಿದ್ದರೂ ಇರಬಹುದು. ಒಟ್ಟಿನಲ್ಲಿ ಇದು ಹಲವಾರು ಜನರ ಬಣ್ಣವನ್ನು ಬಯಲು ಮಾಡಿದೆ. ಆದರೆ ಅದನ್ನು ಗಮನಿಸಿದವರು ಬಹಳ ಕಡಿಮೆಯೇ ಅನ್ನಬಹುದು.

ಕ.ರ.ವೇ. ಸಣ್ಣದಾಗಿ ಆರಂಭಿಸಿದ ಈ ಆಂದೋಲನ ಚುನಾವಣೆ ಮುಂದಾಲೋಚನೆಯ ರಂಗೇರಿಸಿಕೊಂಡು ಉಗ್ರ ಹೋರಾಟದ ಸ್ವರೂಪವನ್ನು ಪಡೆದು, ಇನ್ನೇನು ಸಾಕಷ್ಟು ಬಂದ್, ಲೂಟಿ, ಕಂಡಲ್ಲಿ ಗುಂಡು ಮುಂತಾದವುಗಳು ಜರುಗುತ್ತವೇ ಎಂದುಕೊಳ್ಳುತ್ತಿದ್ದಂತೆಯೇ ಅದ್ಯಾವುದಿಲ್ಲದೆ ಸದ್ಯಕ್ಕೆ ತಣ್ಣಗಾಗಿದೆ. ಇದು ಕನ್ನಡಿಗರ ಹೋರಾಟದ ಫಲವೋ, ಮುದಿ ಕಲೈನ್ಯಾರ್ (ತಮಿಳರು ಕರುಣಾನಿಧಿಯವರನ್ನು ಕರೆಯುವುದು ಹೀಗೆ) ಅರುಳುಮರುಳೋ ತತ್ಕಾಲಿಕವಾಗಿ ತಡೆಯೊಡ್ಡಿದೆ. ಆದರೂ ಈ ಹೋರಾಟ ಸಾಕಷ್ಟು ಸಿನಿ ಪ್ರಖ್ಯಾತರ ಮೇಕಪ್ ಅನ್ನು ಅಳಿಸಿಹಾಕಿದೆ. ಆದರೆ ಮೇಕಪ್ಪಿಗೂ ಬರೀ ಕಪ್ಪಿಗೂ ವ್ಯತ್ಯಾಸವರಿಯದ ಮುಗ್ಧ ಕನ್ನಡಿಗರ ಕಣ್ಣಿಗೆ ಇದು ಅಷ್ಟಾಗಿ ಗಮನಕ್ಕೆ ಬಂದಿಲ್ಲವೆಂದೇ ನನ್ನ ಅನಿಸಿಕೆ.

ಈ ಹೊಗೇನಕಲ್ ಹೋರಾಟಕ್ಕೆ ಬೆಂಬಲಿಸಿ ಅತ್ತ ತಮಿಳುನಾಡಿನ "ನಡಿಗರ್ ಸಂಘಂ" (ನಡಿಗರ್ ಸಂಘಂ ಎಂದರೆ ಕಲಾವಿದರ ಸಂಘವೆಂದು) ಮುಷ್ಕರ ನಡೆಸಿದಾಗ ತನ್ನ ಪ್ರತಿಯೊಬ್ಬ ಸದಸ್ಯರೂ ಭಾಗವಹಿಸಬೇಕೆಂದು ರಾಜಾಜ್ಞೆಯನ್ನು ಹೊರಡಿಸಿತ್ತೋ ಅಥವಾ ಅದರೆಲ್ಲಾ ಸದಸ್ಯರೂ ಸ್ವಯಂ ಭಾಗವಹಿಸಿದರೋ ಒಟ್ಟಾಗೆ ತಮಿಳು ಸಿನಿಮಾರಂಗದ ದಿಗ್ಗಜರೆಲ್ಲಾ ಅಂದು ಅಲ್ಲಿದ್ದರು. ಅಮೇರಿಕಾದಲ್ಲಿ ಶೂಟಿಂಗ್ ಮಾಡುತ್ತಿದ್ದ ಕಮಲಹಾಸನ್ ಕೂಡ ತಕ್ಷಣವೇ ಹೊರಟು ಮಧ್ಯಾಹ್ನದ ಹೊತ್ತಿಗೆ ಮುಷ್ಕರದಲ್ಲಿ ಸೇರಿಕೊಂಡನೆಂದು ನನ್ನ ತಮಿಳು ಸ್ನೇಹಿತನೋರ್ವ ನನ್ನೊಂದಿಗೆ ಹೇಳಿಕೊಂಡನು. ಸದ್ಯ, ಅವನು ಕನ್ನಡ ನಡಿಗರ್ ಸಂಘದ ಮುಷ್ಕರದ ವಿವರಗಳನ್ನು ಕೇಳಲಿಲ್ಲ. ಈಗಾಗಲೇ ಮೆತ್ತಗಾಗಿರುವ ಪಾರ್ವತಮ್ಮ ರಾಜಕುಮಾರ್, ತಮಿಳರ ಅಧಿಪತ್ಯದ ಕನ್ನಡ ಚಾನೆಲ್ಲಿನ ಗೋಳಿನ ಸೀರಿಯಲ್ಲುಗಳ ಹಾಲಿ/ಮಾಜಿ ನಾಯಕಿಯರುಗಳು, ಬೆರಳೆಣಿಕೆಯ ಹಾಲಿ ಸಿನಿಮಾ ಹೀರೋಗಳು, ಅವರೊಂದಿಗೆ ಅವರುಗಳ ಪಟಾಲಂ ಇದ್ದುದನ್ನು, ನನ್ನ ಆ ತಮಿಳು ಮಿತ್ರ ಕೇಳಿದ್ದರೆ ಏನೆಂದು ಹೇಳಬೇಕಿತ್ತೋ?

ಜೀವನವನ್ನು ಹುಡುಕುತ್ತ, ಜೀವನ ಕಂಡಲ್ಲಿ ಜೀವನ ಮಾಡುವುದು ಮಾನವ ಸಹಜ ಗುಣ. ಆ ಮಾನವ ಸಹಜ ಗುಣದಿಂದಲೇ ಅವಕಾಶಗಳನ್ನು ಹುಡುಕುತ್ತ ನಡೆದ ರಜನಿಕಾಂತ್, ಪ್ರಕಾಶ್ ರೈ, ಅರ್ಜುನ್ ಸರ್ಜಾ ಅಂಥವರು ತಮಿಳಿನಲ್ಲಿ ಅವಕಾಶಗಳನ್ನು ಪಡೆದು ಅಲ್ಲಿ ನೆಲೆ ನಿಂತು, ನೆಲೆ ನಿಂತ ಜಾಗಕ್ಕೆ ನಿಷ್ಟೆಯನ್ನು ವ್ಯಕ್ತಪಡಿಸಿರುವುದು ಸಹಜವೇ ಆಗಿದೆ. ಯಾವುದೇ ಪ್ರಾಮಾಣಿಕ ವ್ಯಕ್ತಿ ಕೂಡ ಮಾಡಬೇಕಾದುದು ಅದನ್ನೇ. ಅದಕ್ಕೆ ಕನ್ನಡಿಗರಾದ ನಾವುಗಳು, ಕನ್ನಡ ಮೂಲದ ಆ ನಟರುಗಳ ಬಗ್ಗೆ ಹೆಮ್ಮೆ ಪಡಬೇಕೇ ವಿನಹಃ ಅವರುಗಳನ್ನು ಮೂದಲಿಸಬಾರದೆಂದೇ ನನಗನ್ನಿಸುತ್ತದೆ.

ಅದೇ ನಮ್ಮ ಚಿತ್ರರಂಗದವರನ್ನು ನೋಡಿದಾಗ, ರಾಜಕುಮಾರರ ನಂತರದ ಸ್ಥಾನವನ್ನು ತುಂಬಿದವರು/ತುಂಬುವವರು ಎಂದೆಲ್ಲಾ ಹೇಳಿಸಿಕೊಳ್ಳುವ ನಮ್ಮ ಮಂಡ್ಯದ ಗಂಡು, ಸಾಹಸಸಿಂಹಗಳು ಎಲ್ಲಿದ್ದವೋ? ಕಾರಣಾಂತರಗಳಿಂದ ಈ ಹೋರಾಟಕ್ಕೆ ಭಾಗವಹಿಸಲಾಗದಿದ್ದ ಈ ಧೀರರ ಕಾರಣಗಳು, ಕಮಲಹಾಸನ್ ತನ್ನ ಶೂಟಿಂಗ್ ಸ್ಥಗಿತಗೊಳಿಸಿ ಅಮೇರಿಕಾದಿಂದ ಹೋಗಿ ಭಾಗವಹಿಸುವಂತಹ ಕಷ್ಟವನ್ನೇನೂ ಬಯಸುತ್ತಿದ್ದಿಲ್ಲವೆಂದೇ ಅನಿಸುತ್ತದೆ.

ಲಂಚಕೋರರ ವಿರುದ್ಧ, ದುರುಳ ರಾಜಕಾರಣಿಗಳ ವಿರುದ್ದ ರೆಬೆಲ್ ಆಗಿ ನಟಿಸಿ ಪ್ರಖ್ಯಾತರಾದ ರೆಬೆಲ್ ಸ್ಟಾರ್, ನಮ್ಮಗಳ ಮುಂದೆಯೇ ಅಂತಹ ರಾಜಕಾರಣಿಗಳ ಗುಂಪಿಗೆ ಸೇರಿ ರಾಜಕಾರಣಿಯಾದುದು ಮಾರ್ಮಿಕ ವಿಪರ್ಯಾಸ. ಹಾಗೆಯೇ ಸಾಹಸಸಿಂಹವೂ ಕೂಡ ಯಾವುದೇ ಜನಪರ ಹೋರಾಟಗಳಲ್ಲಿ ಸಿಂಹದಂತೆ ಕಾಣಿಸಿಕೊಳ್ಳದೆ ಮೃಗಾಲಯ ಸಿಂಹವೇ ಆಗಿದೆ. ಕನ್ನಡಿಗರು ಅರಿಯಬೇಕು, ಈ ಸಿನಿಮಾ ಮಂದಿಯಿಂದ ಸುಖವಿಲ್ಲವೆಂಬುದನ್ನು.

ನೀವುಗಳು ಹಾಗೆಯೇ ಈ ಹಾಲಿವುಡ್ ನಟ ನಟಿಯರುಗಳನ್ನು ಗಮನಿಸಿ ನೋಡಿ. ಅವರೆಲ್ಲಾ ಯಾವುದಾದರೊಂದು ಸಾಮಾಜಿಕ ಸೇವೆಗೋ, ಹೋರಾಟಕ್ಕೋ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜಮುಖಿಗಳಾಗಿರುತ್ತಾರೆ. ತನಗೆ ನಾಲ್ಕು ಮಕ್ಕಳಿದ್ದರೂ ಮಡೋನ್ನಾ ಆಫ್ರಿಕಾದ ಬಡ ಮಗುವೊಂದನ್ನು ದತ್ತು ತೆಗೆದುಕೊಂಡಿದ್ದಾಳೆ. ಏಂಜೆಲಿನಾ ಜೋಲೀ ವಿಶ್ವಸಂಸ್ಥೆಯ ಶಾಂತಿ ರಾಯಭಾರಿಯಾಗಿ ಕಾಂಬೋಡಿಯಾದಲ್ಲಿ ಆಗಾಗ್ಗೆ ಸಮಾಜಸೇವೆಯಲ್ಲಿ ತೊಡಗುತ್ತಾಳೆ. ಪಾಕಿಸ್ತಾನದಲ್ಲಿ ಭೂಕಂಪವಾದಾಗ ತನ್ನ ಗೆಳೆಯ ಬ್ರಾಡ್ ಪಿಟ್ ನೊಂದಿಗೆ ಖುದ್ದಾಗಿ ಭೂಕಂಪ ಸ್ಥಳಕ್ಕೆ ಭೇಟಿಕೊಟ್ಟು ಜನಸೇವೆ ಮಾಡಿದ್ದಾಳೆ. ಭಾರೀ ಎದೆಗಾತಿ ಪಮೇಲಾ ಪ್ರಾಣಿದಯಾ ಸಂಘಕ್ಕೆ ತನ್ನೆದೆಯ ತಿದಿಯೊತ್ತಿ ಹಣ ಸಂಗ್ರಹಿಸುತ್ತಾಳೆ. ಇಲ್ಲಿ ಬರೀ ಹಂಗಸರನ್ನೇ ಉದಹರಿಸಿದ್ದೇನೆ. ಯಾಕೆಂದರೆ ಬರೀ ಹಾಲಿವುಡ್ಡಿನ ಹೆಂಗಸರ್‍ಏ ಇಷ್ಟರ ಮಟ್ಟಿಗೆ ತಮ್ಮ ಖ್ಯಾತಿಯ ಬಲವನ್ನು ಸಮಾಜ ಸೇವೆಗಾಗಿ ಬಳಸುತ್ತಿದ್ದರೆ, ಇನ್ನು ಹಾಲಿವುಡ್ ಗಂಡುಗಳ ಸಮಾಜಸೇವೆಯ ಬಗ್ಗೆ ನೀವೇ ಊಹಿಸಿ!!!

ಇನ್ನು ನಮ್ಮ ಜನಗಳನ್ನು ನೋಡಿ! ರಿಚರ್ಡ್ ಗಿಯರ್ ಯಾರೆಂದು ಕೇಳಿದರೆ ಶಿಲ್ಪಾ ಶೆಟ್ಟಿಗೆ ಕಿಸ್ ಕೊಟ್ಟವನು ಎಂದು ತಡಮಾಡದೆ ಹೇಳುತ್ತಾರೆ. ಆದರೇ ಇದೇ ರಿಚರ್ಡ್ ಗಿಯರ್ ಅದೆಷ್ಟು ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾನೆ ಗೊತ್ತೆ? ಎಂದು ಕೇಳಿದರೆ ’ಹು ಕೇರ್‍ಸ್’ ಎನ್ನುತ್ತಾರೆ. ಟಿಬೆಟ್ ಹೋರಾಟವನ್ನು ಬೆಂಬಲಿಸುವ ರಿಚರ್ಡ್ ಗಿಯರ್, ಬಡತನ ನಿವಾರಿಸಬೇಕೆನ್ನುವ ಬಾನೋ, ಏಡ್ಸ್ ಅಳಿಸಿ ಎನ್ನುವ ಬೀಟಲ್ಸ್ ನ ಪೌಲ್ ಮೆಕ್ಕಾರ್‍ಟ್ನಿ, ಮಕ್ಕಳ ಅಭ್ಯುದಯಕ್ಕೆ ಹೋರಾಡುವ ಸ್ಟೀವೆನ್ ಸ್ಪೀಲ್ ಬರ್ಗ್............ಹಾಲಿವುಡ್ಡಿನ ಪ್ರತಿಯೊಬ್ಬ ಹಿರಿ ಕಿರಿ ನಟ, ನಟಿ, ಸಂಗೀತಗಾರ, ಟಿ.ವಿ. ತಾರೆಯರು ಅಷ್ಟೇ ಅಲ್ಲದೆ "ಅಮೇರಿಕನ್ ಐಡಲ್" ನಂತಹ ಟಿ.ವಿ. ಶೋಗಳು ಕೂಡಾ ಚಂದಾ ಎತ್ತಿ ಸಮಾಜವನ್ನು ಕಟ್ಟುವ ಕೈಂಕರ್ಯಕ್ಕೆ ಹಣ ಸಹಾಯ ಮಾಡುತ್ತಿದ್ದಾವೆ. ಇದೆಲ್ಲಾ ಭಾರತದ ನಟ, ನಟಿಯರುಗಳು ಅದ್ಯಾವಾಗ ಮಾಡುತ್ತಾರೋ?

ನಮ್ಮ ಸ್ಯಾಂಡಲ್ ವುಡ್ ಧೀರರು... ಸಮಾಜಸೇವೆಯನ್ನು ಬಿಡಿ, ಅದು ಬಹುದೂರದ ಮಾತು, ತಮ್ಮ ತಮ್ಮ ವೃತ್ತಿ ಬಾಂಧವರೇ ಆದ ರಾಜಾನಂದ್, ನೀಗ್ರೋ ಜಾನಿ ಕೊರಗಿ ಸಾಯುತ್ತಿದ್ದಾಗ ಅವರುಗಳ ಸಹಾಯಕ್ಕೆ ಇವರ್‍ಯಾರೂ ಒದಗದ ನಿದರ್ಶನಗಳು ಇನ್ನೂ ಹಸಿರಾಗಿವೆ. ಇಂಥ ನಾಟಕದ ಮಂದಿಯನ್ನು ನೆಚ್ಚಿಕೊಂಡು ಕನ್ನಡ ಹೋರಾಟಕ್ಕೆ ಹೊರ್‍ಅಟರೆ ಅದರ ಕ್ಲೈಮಾಕ್ಸ್ ಇವರುಗಳ ಚಲನಚಿತ್ರಗಳಂತಿರದೇ ರಾಜಾನಂದ್, ನೀಗ್ರೋ ಜಾನಿ ಅಂತಿಮದಂತಿರುತ್ತದೇನೋ!

ಪ್ರತಿಯೊಂದನ್ನು ಹಾಲಿವುಡ್ ಸಿನಿಮಾಗಳಿಗೆ ಹೋಲಿಸಿಕೊಳ್ಳುವ, ಕನ್ನಡ ಸಿನಿಮಾ ಶೂಟಿಂಗಿಗೆ ಹಾಲಿವುಡ್ಡಿಗೆ ಬರುವ, ತಮ್ಮ ತಲೆಗೋ, ಹೊಟ್ಟೆಗೋ ಅಮೇರಿಕಾದಲ್ಲಿ ತಯಾರಿಸಿದ ವಸ್ತುವೇ ಬೇಕೆನ್ನುವ, ಈ ಭಾವುಕಜೀವಿಗಳು ಕೊಂಚವಾದರೂ ಹಾಲಿವುಡ್ ನಟನಟಿಯರುಗಳ ಪ್ರಾಕ್ಟಿಕ್ಯಾಲಿಟಿಯನ್ನು ಕಲಿಯಬೇಕು.

ಹೊಗೇನಕಲ್ ನಂತಹ ವಿವಾದಗಳಿಗೆ ನ್ಯಾಯಾಲಯ ಹೋರಾಟವೇ ಸರಿಯೆನಿಸುತ್ತದೆ. ಅದನ್ನು ಸೋನಿಯಾ ಸರಿಮಾಡುತ್ತಾರೆನ್ನುವ ಮೊಯ್ಲಿ, ಪ್ರವಾಸ ಹೋಗುವ ಎಡ್ಯೂರಪ್ಪ, ವಿಗ್ಗಿನ ಕೃಷ್ಣ, ಕರ್ನಾಟಕಕ್ಕೆ ಅತಂತ್ರವೇ ಗತಿಯೆನ್ನುವ ದೇವೇಗೌಡ, ಶಿರಡಿ ಸಾಯಿಬಾಬಾ ವೇಷದ ಸಾಹಸಸಿಂಹ, ರಮ್ಮಿನ ಕಣ್ಣಿನ ಮಂಡ್ಯದ ಗಂಡು, ಥೇಟ್ ತಮಿಳು ಕಾಪಿಯಂತಿರುವ ನವ್ಯಪೀಳಿಗೆಯ ಕನ್ನಡ ಸಿನಿಮಾ ನಾಯಕರುಗಳು, ಗೋಸುಂಬೆ ಬುದ್ಧಿಜೀವಿಗಳು, ದಲೈಲಾಮಾರಿಗೆ ’ಬಸವಶ್ರೀ’ ಕೊಟ್ಟು ಪಬ್ಲಿಸಿಟಿ ಪಡೆದು ಈಗವರ ಹೋರಾಟವನ್ನು ಮರೆತಿರುವ ಚಿತ್ರದುರ್ಗದ ಶ್ರೀ, ಇವರುಗಳಿಂದ ನಾಡು ಕಟ್ಟುವ ಕಾರ್ಯವಾಗುವುದೇ? ನಾಡು ಕಟ್ಟಲು ಬೇಕು ಸಾಮಾನ್ಯಜೀವಿಗಳು. ಕನ್ನಡ ಹೋರಾಟ ಸಂಘಗಳು ಈ "ಕನ್ನಡ ಸೆಲೆಬ್ರಿಟಿ"ಗಳನ್ನು ಹೊರಗಿಟ್ಟು ತಮ್ಮ ಹೋರಾಟವನ್ನು ಜನಸಾಮಾನ್ಯರ ಬೆಂಬಲದಿಂದ ಸಂಘಟಿಸುವತ್ತ ಆಲೋಚಿಸಬೇಕು. ಒಂದು ವೇಳೆ ಇವರುಗಳ ಸಹಕಾರವನ್ನು ಬಯಸಿದರೂ ಈ ಸೆಲೆಬ್ರಿಟಿಗಳನ್ನು ಒಂದು ಅನುಮಾನದ ದೃಷ್ಟಿಯಿಂದಲೇ ನೋಡುತ್ತಿರಬೇಕು.

ಅಣಕ:

ಹೊಗೇನಕಲ್ ಹೋರಾಟಕ್ಕೆ ಬೆಂಭಲ ವ್ಯಕ್ತಪಡಿಸಿ ಕನ್ನಡ ಚಿತ್ರರಂಗದ ಮುಶ್ಕರಕ್ಕೆ ನಿಮಗೆಲ್ಲಾ ಹಾದರದ ಅಹ್ವಾನ! ಹೀಗೂ ಇರುತ್ತವೆ ಒಮ್ಮೊಮ್ಮೆ ಬೆಂಗಳೂರು ಕೇಂದ್ರಿತ ಕನ್ನಡ ಚಿತ್ರರಂಗದ ಜಾಹೀರಾತುಗಳು!

11 comments:

Naveen Mutnal said...

Mr. Ravi its good article. It reminds our SO called Kannada Heros about their responsibility towards their motherland and lack of coordination and leadership in Kannada film industry..
I saw ur posts today...
Really nice....
Going well, please continue....

Anonymous said...

Hi Ravi --

Read your blog about Hoggenkal. May be the reason why Vishnu and Ambi stayed out of Hunger Strike is they knew Karnataka is wrong in this matter.
Why I am saying this is the presence of Legal document in the form of NOC given by Karnataka govt. way back in 1998 itself. Politicians from Karnataka are the worst. They raked up this issue which is supposed to be a non-issue just because the election is around the Corner. Now that an NOC exist, is not the responsibility of Political leaders to examine that and find out whether TN is violating any conditions put in that NOC? I read a wonderful article that appeared on DEccan Herald written by ex-minister Nanje Gowda who was present when the NOC was signed. According to him Karnataka don't have legal or moral right to oppose TN's Hoggenkal Driking water project.

Regards,
Venkatesh

Anonymous said...

Hi Mr.Ravi,

Poojyarige vandanegalu..

Nimma articles ellavannu hodide.. chennagidaave.. I liked the information you provided on history behind "Tibet" issue. Please post an article about history of "Honganakkal" issue. (like how it became a political issue ,all of a sudden. what are the reasons for all these riots? It would be greate if you could provide info on root causes of "Honganakkal issue".)

Thanks,
Narayan

Anonymous said...

Namma hane baraha...

ಅಮರ said...

ನಮಸ್ಕಾರ,

ಹೊಗೆನಕಲ್ ವಿವಾದದ ಬಗ್ಗೆ ಸವಿಸ್ಥಾರವಾಗಿ ಬರೆದಿದ್ದೀರಿ, ನೋಡೊಣ ಚುಣಾವಣೆ ನಂತರ ಏನಾಗುತ್ತೊ ಅಂತ.

@ವೆಂಕಟೇಶ್: ನೀವು ಪ್ರಸ್ಥಾಪಿಸಿದ ವಿಷಯದ ಬಗ್ಗೆ ನನಗೂ ಅಸ್ಪಷ್ಟವಾಗಿ ತಿಳಿದಿದೆ, ೧೯೯೮ ರಲ್ಲಿ ಇಬ್ಬರು ಒಪ್ಪಿರ ಬಹುದು. ಆದರೆ ಮತ್ತೊಂದು ವಿಷಯ ನೆನೆಪಿಗೆ ಬಂತು ಈ ಮೊದಲು ಕರ್ನಾಟಕ ದಿಂದ ಮಲೈಮಹದೇಶ್ವರ ಬೆಟ್ಟಕ್ಕೆ ಕುಡಿಯುವ ನೀರಿನ ಸಣ್ಣ ಯೋಜನೆಯನ್ನು ಮಾಡದಂತೆ ನಮ್ಮ ಮೇಲೆ ಒತ್ತಡ ತಂದಿತು ಮತ್ತು ಕಬಿನಿ ಕೊಳ್ಳದಲ್ಲು ಕೂಡ ನಮ್ಮ ಪಾಲಿನ ನೀರನ್ನು ಬಳಸಿಕೊಳ್ಳುವ ಯೋಜನೆಗಳಿಗೆ ಅಡ್ಡ ಬರುತ್ತಿರುವುದು ಎಲ್ಲರಿಗೂ ತಿಳಿದ ವಿಷಯ.ಇದಕ್ಕೆಲ್ಲ ಅವರು ಕೊಡುವ ಒಂದೆ ಕಾರಣ ಕಾವೇರಿ ನ್ಯಾಯಮಂಡಳಿ ಆದೇಶ ಬಂದ ಮೇಲೆಯೆ ಹೊಸ ಯೋಜನೆಗಳನ್ನ ಮಾಡಬೇಕು ಎಂದು. ಹಾಗಾದರೆ ಈ ಯೋಜನೆಯ ಮಾಡಲು ಅವರಿಗೆ ನೈತಿಕ ಹಕ್ಕಿದೆಯೆ ಮತ್ತು ಯೋಜನೆಯ ಪೂರ್ಣ ಮಾಹಿತಿ ಕೂಡ ತಿಳಿದಿಲ್ಲ.

-ಅಮರ

Ravi Hanj said...

Hi Venkatesh - Thanks for the input and raising that Hogenakal issues is in legal jurisdiction. As I wrote in this article that this issue needs to resolved by the court of justice. The main take away from this article is that our so called STARS never willingly participated in any of the events for social causes. Sorry if I confuse you.

Thanks for taking time to read the article and writing the comment.

Best Regards,
Ravi Hanj

Anonymous said...

Hi Ravi --

I am least bothered about our Stars. It is better to keep them out of the daily struggles. I guess, except Dr.Rajkumar no actor worth his salt have the charm to inspire people. Since your article is read by many people, please make an effort to point out that dissent can be peaceful. Innocent people are killed or hurt when things go out of control which usually does as the people like Vatal Nagaraj,KRV and our politicians don't know any other way of expression their displeasure and that too they do it when they don't have a case to present to the outside world.

Regards,
Venkatesh

Ravi Hanj said...

Dear Venkatesh - Thanks again for checking the comments and the advice. You are very true about our Kannada Oraatagaaras! Please read my article about them posted last year during/before Rajyotsava.

http://kannadathinktank.blogspot.com/2007/10/blog-post_27.html

Happy Reading!
Thanks,
Ravi.

Ravi Hanj said...

Venkatesh - Please also see "Ye kachcharaa log hai" article published in February this year.

Thanks,
Ravi.

Supreeth.K.S said...

ರವಿ ಸರ್,
ಕನ್ನಡ ನಾಡು ನುಡಿಯ ಬಗೆಗಿನ ಹೋರಾಟದ ವಿಚಾರ ಬಂದಾಗ ಕೇವಲ ಸಿನೆಮಾ ನಟರ ಬಗ್ಗೆ ಮಾತನಾಡುವುದೇಕೆ? ತಮಿಳು ಸಿನೆಮಾ ನಟರು ಹೋರ್‍ಆಟ ಮಾಡಿದರು ಎಂಬುದಕ್ಕೆ ಪ್ರತಿಯಾಗಿ ಇಲ್ಲೂ ಅಂಥ ಪ್ರತಿಭಟನೆ ನಡೆಯಬೇಕು ಎಂಬುದು ನಿಮ್ಮ ವಾದವೇ?

ಸಿನೆಮಾದ ನಾಯಕ ನಟರು ಹಾಗೂ ಕಲಾವಿದರೂ ಸಹ ತಮ್ಮ ಕ್ಷೇತ್ರದಲ್ಲಿ ದುಡಿಯುವ ಕಾರ್ಮಿಕರು. ಸಾಹಿತಿಗಳು, ಪತ್ರಕರ್ತರು, ನ್ಯಾಯವಾದಿಗಳು, ವೈದ್ಯರು, ಇಂಜಿನಿಯರುಗಳು, ನೀಲಕೇಣಿಗಳು, ನೈಸ್ ಖೇಣಿಗಳು ಮುಂತಾದವ್ರಿಗೆ ಇಲ್ಲದ ಜವಾಬ್ದಾರಿ ಕೇವಲ ಸಿನೆಮಾ ನಟರಿಗೆ ಮಾತ್ರ ಏಕೆ ಹೊರಿಸಬೇಕು?

ಇನ್ನು ಹಾಲಿವುಡ್ಡಿನ ನಟರ ಸಮಾಜ ಸೇವೆಯ ಬಗ್ಗೆ ಬರೆದಿರುವಿರಿ. ಪಮೇಲಾ ಆಂಡರ್ಸನ್ ಮಾದರಿಯ ‘ಸಮಾಜ ಸೇವೆ’ ನಮಗೆ ಬೇಕೆ? ಇಷ್ಟಕ್ಕೂ ಅವರು ಸಮಾಜಸೇವೆಗಾಗಿ ತಮ್ಮ ಖ್ಯಾತಿಯನ್ನು ಬಳಸಿಕೊಳ್ಳುತ್ತಿದ್ದಾರೆಯೇ ಅಥವಾ ಖ್ಯಾತಿಗಾಗಿ ಸಮಾಜ ಸೇವೆಯನ್ನೇ? ಇತ್ತೀಚೆಗೆ ಸಮಾಜ ಸೇವೆ ಎಂಬುದು ಸಹ ಫ್ಯಾಶನ್ ಆಗುತ್ತಿದೆ.

ಸಂದರ್ಶನವೊಂದರಲ್ಲಿ ಹಿಂದಿಯ ಐಟಂ ಗರ್ಲ್ ರಾಖಿ ಸಾವಂತ್ ತನಗೆ ಹೆಚ್ಚು ಹೆಚ್ಚು ಐಟಂ ಸಾಂಗುಗಳಲ್ಲಿ ಅವಕಾಶ ಕೊಡಬೇಕು. ಅದರಿಂದ ನಾನು ಸಮಾಜ ಸೇವೆ ಮಾಡಲು ಹೆಚ್ಚು ನೆರವಾಗುತ್ತದೆ ಎಂದು ಹೇಳಿದ್ದು ಈ ಸಂದರ್ಭದಲ್ಲಿ ನೆನಪಾಗುತ್ತದೆ.


........
http://uniquesupri.wordpress.com/

Ravi Hanj said...

Supreet - Happy to see you back. I did not see you update your "Onti hakkiya haadu" these days. It's "spring" now, time for hakki to sing. :) Were you busy with your exams or something?

Anyway, its a good point that you raised about Nilekani, ITans, Kheni. These individuals and professions are only known to Bangaloreans and the learned folks. Unfortunately Boregowda knows only Jaggesh, Shashikumar, and Rakshitha :). Even the media won't give a damn if ITans do something in this regard. People with a public image must put it to good cause and use.

I get your point of Rakhi as the most bollywood is just a copycat of hollywood. But unfortunately indian stars are not that honest in their effort. As you said, its a fashion! The hollywood stars are honest in their social service effort including Pam and they don't get much publicity for their social service here. They treat life, profession seperately. Never mixes it up. I guess I could say that as I have involved in many social service campaigns here as a part of my company's fund raising events.

Please keep writing.

Take Care,

Best,
Ravi.