Cut the chain

ಇತ್ತೀಚೆಗೆ ಫೇಸ್ಬುಕ್ನಲ್ಲಿ ನಾನು ಇಂತವನು, ನಿಮಗೆ ಇಷ್ಟವೆ, ಅನಿಷ್ಟವೆ, ಎಲ್ಲಿ ಹೇಗೆ ಸಂಧಿಸಿದ್ದೆವು ಎಂದು ಒಂದು ಕಾಮೆಂಟ್ ಹಾಕಿ ಎಂಬ ಸರಣಿ ಪೋಸ್ಟುಗಳನ್ನು ಗಮನಿಸಿದ್ದೀರಷ್ಟೇ.

ಇಲ್ಲಿ ತಮ್ಮ ಸ್ನೇಹಿತರ ಲಿಸ್ಟ್ ನೋಡಿ ಖುದ್ದು ತಾವೇ ಯಾರನ್ನು ಎಲ್ಲಿ, ಹೇಗೆ, ಇತ್ಯಾದಿಯಾಗಿ ಭೇಟಿ ಮಾಡಿದ್ದೆವು, ಮಾತನಾಡಿದ್ದೆವು ಎಂದು ತಮ್ಮನ್ನು ತಾವು ಅರಿಯದೆ ಇತರರನ್ನು ಕೇಳುವುದಿದೆಯಲ್ಲ ಅದು ಆತ್ಮರತಿಯ ಒಂದು ಬಗೆ.

ವಿಷಾದದ ಸಂಗತಿಯೆಂದರೆ ಈ ಆತ್ಮರತಿಗೆ ನಿರ್ವಾಣವನ್ನೇ ಹೊಂದಿದ್ದೇವೆಂದುಕೊಂಡವರು ಕೂಡ ಬಲಿಯಾಗಿರುವುದು!

ಈ ನಾನು ಎಂಬ ಆತ್ಮರತಿಯ ಹಸ್ತಮೈಥುನಕ್ಕೆ ದಯವಿಟ್ಟು ಬೇರೆಯವರ ಸಹಾಯಹಸ್ತವನ್ನು ಕೇಳಬೇಡಿ. ನಿಮ್ಮ ಹಸ್ತ, ನಿಮ್ಮದೇ ಲಿಸ್ಟು, ನಿಮ್ಮದೇ ನೆನಪು ಯಾ ಕಲ್ಪನೆಯಲ್ಲಿ ನಿಮ್ಮನ್ನು ನೀವು ಅರಿತು ನಾನಾರೆಂಬುದು ನಾನಲ್ಲವೆಂಬ ನಿಜ ನಿರ್ವಾಣವನ್ನು ಅರಿಯಿರಿ.

ತುಂಡರಿಸಬೇಕಿರುವುದು ಕೇವಲ ಕೊರೋನಾ ಸರಪಳಿಯನ್ನಲ್ಲ, ಈ ರೀತಿಯ ಉನ್ಮಾದದ ಏ(ಹೇ)ರಿಕೆಯನ್ನು ಕೂಡ.

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ
#ಕರ್ನಾಟಕವೆಂಬೋಕಮಂಗಿಪುರದಲ್ಲಿ

No comments: