ಆಗಸ್ಟ್ ೧೫ ೧೯೪೭ ಭೌಗೋಳಿಕವಾಗಿ ದೇಶವನ್ನು ವಿಭಜಿಸಿದರೆ, ಜನವರಿ ೨೬ ೧೯೫೦ ಮಾನಸಿಕವಾಗಿ ದೇಶವನ್ನು ವಿಭಜಿಸಿದೆ.

 ಆಗಸ್ಟ್ ೧೫ ೧೯೪೭ ಭೌಗೋಳಿಕವಾಗಿ ದೇಶವನ್ನು ವಿಭಜಿಸಿದರೆ, ಜನವರಿ ೨೬ ೧೯೫೦ ಮಾನಸಿಕವಾಗಿ ದೇಶವನ್ನು ವಿಭಜಿಸಿದೆ.

ಸಾಮಾಜಿಕ ನ್ಯಾಯವನ್ನು ಅನೇಕ ದೇಶಗಳು ಸಮಾನ ಸಾಮಾಜಿಕ ನ್ಯಾಯವಾಗಿ ೧೯೫೦ಕ್ಕೂ ಮುಂಚೆಯೇ ಸಾಂವಿಧಾನಿಕವಾಗಿ ಅನುಷ್ಠಾನಗೊಳಿಸಿದ್ದವು. ಆದರೆ ಭಾರತೀಯ ಸಾಮಾಜಿಕ ನ್ಯಾಯದ ಸಾಂವಿಧಾನಿಕ ಉದ್ದೇಶದಲ್ಲಿ ವ್ಯಕ್ತಿಗತ ಉದ್ದೇಶವೇ ದೇಶದ ಸ್ವಾತಂತ್ರ್ಯದಷ್ಟೇ ವ್ಯಕ್ತಿಗತ ಉದ್ದೇಶವಾಗಿತ್ತು. ಅದ ಕಾರಣ, ದೇಶದ ಹಿತಾಸಕ್ತಿಗಿಂತ ವ್ಯಕ್ತಿಗತ ಪ್ರತಿಷ್ಠೆಯೇ ಘನವಾಗಿ ಇಂದಿನ ಎಲ್ಲಾ ಭಾರತೀಯ ಚುನಾವಣೆಗಳೂ, ಅಭ್ಯರ್ಥಿಗಳೂ, ಮತದಾರರೂ ಆಯಾ ಕಾರಣವನ್ನು ಪ್ರತಿಬಿಂಬಿಸುತ್ತಿ(ವೆ)ದ್ದಾರೆ, ವಿಜೃಂಭಿಸುತ್ತಿದ್ದಾರೆ.
ಹಾಗಾಗಿಯೇ ಇಂದು ಭಾರತದ ಪ್ರತಿಯೊಂದು ಸಾಮಾಜಿಕ ಹಂತದಲ್ಲಿ ವ್ಯಕ್ತಿಪೂಜೆಯೇ ಪ್ರಮುಖವಾಗಿರುವುದು. ಇದು ಮಹಾತ್ಮದಲ್ಲಿ, ಜೈಭೀಮದಲ್ಲಿ, ಬಡವರ ತಾಯಿಯಲ್ಲಿ, ರೈತನ ಮಗದಲ್ಲಿ, ಮೋಡಿಯಲ್ಲಿ, ರಾಜಾಹುಲಿಯಲ್ಲಿ, ಟಗರುವಿನಲ್ಲಿ, ಹೊನ್ನಾಳಿ ಹೋರಿಯಲ್ಲಿ, ಗಣಿಧಣಿಯಲ್ಲಿ, ದೀದಿಯಲ್ಲಿ, ಪುರುಚ್ಚಿ ತಲೈವಿ/ತಲೈವದಲ್ಲಿ...... ಬಿಟ್ಬಂದಹಳ್ಳಿ ಬಂಧುವಿನಲ್ಲಿ ಕಣ್ಣು ಹಾಯಿಸಿದಲ್ಲೆಲ್ಲಾ ಕಣ್ಣು ಕೋರೈಸುವುದು.
ಏಳಿ ಎದ್ದೇಳಿ........!

No comments: