ಪ್ರಧಾನಿ ನಿವಾಸ, ಪರಪ್ಪನ ವಿಳಾಸ

 ಒಬ್ಬ ಸಾಮಾನ್ಯ ರೈತನ ಮಗನನ್ನು ಪ್ರಧಾನಿ ಮಾಡಿದ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದ ಅಂಬೇಡ್ಕರ್ ವಿರಚಿತ ಸಾಂವಿಧಾನಿಕ ಗಣತಂತ್ರವು ಆತನ ಮೊಮ್ಮಗನ ಲೈಂಗಿಕ ದೌರ್ಜನ್ಯಗಳಿಗೆ ತನ್ನ ನ್ಯಾಯಾಂಗದಡಿ "ವಿಚಾರಿಸಿ" ಶಿಕ್ಷೆ ವಿಧಿಸಬಲ್ಲುದೆ?!? 

ಮೇಟಿ, ಜಾರಕಿಹೊಳಿ, ಬ್ಲೂಬಾಯ್ಸ್ ಇತ್ಯಾದಿ ಏನಾದರೆಂದು ಇಲ್ಲಿ ಪರಾಂಭರಿಸಬಹುದು.

ಭಾರತೀಯ ಸಾಂವಿಧಾನಿಕ ವ್ಯವಸ್ಥೆಯು ಯಾವ ಊಳಿಗಮಾನ ವ್ಯವಸ್ಥೆಯನ್ನು ವಿರೋಧಿಸಿ ಪ್ರಜಾಪ್ರಭುತ್ವವನ್ನು ಅಳವಡಿಸಿದ್ದೇನೆನ್ನುತ್ತದೋ ಅದೇ "ಊಳಿಗಮಾನ ವ್ಯವಸ್ಥೆ"ಯು ಪ್ರಜಾಪ್ರಭುತ್ವವನ್ನು ಕಾಸಿಗಾಗಿ ಓಟು, ವಂಶಪಾಪಂಪರಿಕ ಟಿಕೆಟ್ ಹಂಚಿಕೆ ಇತ್ಯಾದಿಯಿಂದ ತನ್ನ ಶೃಂಗಾರಾಭರಣವಾಗಿಸಿ ಈಗಾಗಲೇ ಸಾಂವಿಧಾನಿಕ ಆಶಯವನ್ನು ಅಣಕವಾಗಿಸಿದೆ. 

ಈ ಲೈಂಗಿಕ ದೌರ್ಜನ್ಯಕ್ಕೆ ಶಿಕ್ಷೆಯನ್ನು ವಿಧಿಸಿದರೂ / ವಿಧಿಸದಿದ್ದರೂ ಈ ಘಟನೆಯು ಊಳಿಗಮಾನ ಭಾರತೀಯ ಪ್ರಜಾಪ್ರಭುತ್ವದ ಮುಕುಟಕ್ಕೆ ಕೋಹಿನೂರ್ ವಜ್ರವಾಗಲಿದೆ. ಏಕೆಂದರೆ ಈಗಾಗಲೇ ಸಾಕಷ್ಟು ಅಸಂವಿಧಾನಿಕ ಬಹುಪತ್ನಿತ್ವ, ಲೈಂಗಿಕ ದೌರ್ಜನ್ಯ/ಕಿರುಕುಳ, ಕುರ್ಚಿಗಾಗಿ ಕಾಮ, ಉದ್ಯೋಗಕ್ಕಾಗಿ ಸಂಭೋಗ, ಪದೋನ್ನತಿಗಾಗಿ ರತಿದಾಸ್ಯದ ಪಕ್ಷಾತೀತ ಮಣಿಗಳು ಆಗಲೇ ಈ ಮುಕುಟಮಣಿಯನ್ನು ಅಲಂಕರಿಸಿವೆ.  ಈಗ ಒಂದೊಮ್ಮೆ ಪ್ರಜಾಪ್ರಭುತ್ವದ ಅತ್ಯುನ್ನತ ಸ್ಥಾನವಾದ ಪ್ರಧಾನಿ ಹುದ್ದೆಯನ್ನು ಹೊಂದಿದ ವ್ಯಕ್ತಿಯ ಮೊಮ್ಮಗನ ಪ್ರಕರಣ "Icing on the Cake" ಎನ್ನುವಂತಾಗಲಿದೆ. 

ಈ ಪ್ರಕರಣದ ಆರೋಪಿಯ ಹೆಸರಲ್ಲೇ ಊಳಿಗಮಾನ ಪದವಾದ "ಗೌಡ" ಎಂದಿರುವುದು ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿನ ಗೋಮುಖವ್ಯಾಘ್ರ ಊಳಿಗಮಾನ ಪ್ರಜಾಪ್ರಭುತ್ವದ ಗಮ್ಯದ ಹೊಳಹಾಗಿದೆ. ಇದು ಹಾಸನದ ಹಾರನಹಳ್ಳಿ ಕೋಡಿಮಠದ ಹೊತ್ತುಗೆಯಲ್ಲಿಯೂ ಇದೆ. ಚೆನ್ನಬಸವಣ್ಣನ ಕಾಲಜ್ಞಾನ ವಚಗಳಲ್ಲೂ ಇದೆ.

ಓದಿ ಅರ್ಥೈಸುವ ಕಾಲಜ್ಞಾನಿ ಮಾತ್ರ ಅಲ್ಲಿಲ್ಲ, ಇಲ್ಲಿದ್ದಾನೆ!

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

No comments: