World Translation Day!

ಒಂದು ಕೃತಿಯ ಅನುವಾದವನ್ನು ಮಾಡುವಾಗ ಅನುವಾದಕ ಮೂಲ ಕೃತಿಯ ಲೇಖಕನೇ ಆಗಿ ಪರಕಾಯ ಪ್ರವೇಶ ಮಾಡಬೇಕು. ತನ್ನ ಕೃತಿಯನ್ನು ಒಂದು ಪ್ರಾದೇಶಿಕ ಭಾಷೆಯಿಂದ ಇಂಗ್ಲಿಷ್ ಎಂಬ ಜಾಗತಿಕ ಭಾಷೆಗಾಗಲಿ ಅಥವಾ ಮತ್ತೊಂದು ಪ್ರಾದೇಶಿಕ ಭಾಷೆಗಾಗಲಿ ಹೇಗೆ ಅಳವಡಿಸಬೇಕೆಂಬ ಚಿಂತನೆಗೊಳಪಡಿಸಿ ಅನುವಾದಿಸಬೇಕಾಗುತ್ತದೆ. ಅನುವಾದಿಸಬೇಕಾದ ಭಾಷೆಗೆ ಸರಿಹೊಂದಬಹುದಾದ ನುಡಿಗಟ್ಟುಗಳು, ಗಾದೆಗಳು, ಸೂಕ್ತ ಸಂಭಾಷಣಾ ವೈವಿಧ್ಯತೆ, ಮತ್ತದೇ ಪರಿಸರಕ್ಕೆ ಮತ್ತು ಓದುಗನಿಗೆ ರಿಲೇಟ್ ಯಾ ಹೊಂದುವಂತಹ ಪರಿಭಾಷೆಯಲ್ಲಿ ಮೂಲ ಕೃತಿಯನ್ನು ಪುನರ್ರಚಿಸಬೇಕಾಗುತ್ತದೆ. ಹಾಗೆಂದ ಮಾತ್ರಕ್ಕೆ ಕೃತಿಯನ್ನು ಸಂಪೂರ್ಣವಾಗಿ ಹೊಸದಾಗಿ ರಚಿಸುವುದೆಂದಲ್ಲವೆಂಬ ಎಚ್ಚರಿಕೆಯನ್ನೂ ಇಟ್ಟುಕೊಂಡು ಹೊಸ ಭಾಷೆಗೆ ಮೂಲ ಸೊಗಡನ್ನು ಅಳವಡಿಸುತ್ತ ಸಾಗಬೇಕಾಗುತ್ತದೆ.

ಆದರೆ "ಮೂಲ ಕೃತಿಗೆ ಚ್ಯುತಿ ಬರದಂತೆ" ಎಂಬ ತತ್ವವನ್ನು ಯಥಾವತ್ತಾಗಿ ಹೇರಿಕೊಂಡು ಪದದಿಂದ ಪದವನ್ನೂ ಯಥಾವತ್ತಾಗಿ ಅನುವಾದಿಸುತ್ತಾ ಹೋದರೆ ಆದು ಅಭಾಸವೆನ್ನಿಸಿಬಿಡುತ್ತದೆ. ಅಂತಹ ಸಾಕಷ್ಟು ಅನುವಾದಗಳ ಉದಾಹರಣೆಗಳಿವೆ. ಹಾಗಾಗಿ ಅನುವಾದವೆಂಬುದು ಅತ್ಯಂತ ಶ್ರಮದ ಕೆಲಸ. ಇಲ್ಲಿ ಎರಡು ಭಾಷೆಗಳ ಪಾಂಡಿತ್ಯಕ್ಕಿಂತ ಆ ಭಾಷೆಗಳ ನಿತ್ಯ ಬಳಸುವಿಕೆಯ ಅನುಭವ ಮತ್ತು ಕಥಾವಸ್ತುವಿನ ಗಾಢ ಹಿನ್ನೆಲೆ ಕೂಡಾ ಅತ್ಯಂತ ಪ್ರಮುಖ.

ಈ ಎಲ್ಲಾ ಸೂತ್ರಗಳನ್ನಾಧಾರವಾಗಿಟ್ಟುಕೊಂಡು ಜುಗಾರಿ ಕ್ರಾಸ್ ಅನ್ನು ಅನುವಾದಿಸಿದ್ದೇನೆ. ಅದರ ಒಂದು ಅಧ್ಯಾಯ ತಮ್ಮ ಓದಿಗಾಗಿ ಇಲ್ಲಿದೆ. ಕನ್ನಡ ಸಾಹಿತ್ಯ ಪ್ರೇಮಿಗಳಾದ ತಾವು ಓದಿ ಸೂಕ್ತ ಸಲಹೆಗಳನ್ನು ಕೊಟ್ಟರೆ ಮುಂದೆ ಮಾಡಬಹುದಾದ ಅನುವಾದ ಕಾರ್ಯಗಳಿಗೆ ಅನುಕೂಲ. ಬನ್ನಿ ಕನ್ನಡ ಸಾಹಿತ್ಯವನ್ನು ವಿಶ್ವವ್ಯಾಪಿಯಾಗಿಸಲು ಸಹಕರಿಸಿ.
#World_Translation_Day

ಮೋದಿಯ ಭೇದಿಯ ಸಾಂದ್ರತೆ

ತುಂಗೆಯಿಂದ ಭದ್ರೆಗೆ ನೀರೆತ್ತಿ ಹರಿಸಿ, ಅಲ್ಲಿಂದ ವೇದಾವತಿಯ ಮುಖಾಂತರ ವಾಣಿವಿಲಾಸ ಸಾಗರಕ್ಕೆ ಪ್ರಾಯೋಗಿಕವಾಗಿ ಈಗಾಗಲೇ ಅನುಷ್ಠಾನಗೊಂಡು ಸಿದ್ಧವಿರುವ ಭದ್ರಾ ಮೇಲ್ದಂಡೆ ಯೋಜನೆಯ ಸಂಪನ್ಮೂಲಗಳನ್ನೇ ಉಪಯೋಗಿಸಿಕೊಂಡು ನೀರು ಹರಿಸಲು ತುಂಗಾ ಪ್ರವಾಹ ಅವಕಾಶವನ್ನು ಕೊಟ್ಟಿದ್ದಿತು.
ಈ ಯೋಜನೆಯನ್ನು ಪ್ರಾಯೋಗಿಕವಾಗಿ ಪ್ರಯೋಗಿಸಿದ್ದರೆ ಶಿವಮೊಗ್ಗೆಯ ಕುಂಬಾರಗುಂಡಿಯಲ್ಲಿ ಪ್ರವಾಹವೇ ಆಗುತ್ತಿರಲಿಲ್ಲ ಮತ್ತು ಎಷ್ಟೋ ವರ್ಷಗಳಿಂದ ಡೆಡ್ ಸ್ಟೋರೇಜಿನಲ್ಲಿರುವ ವಾಣಿವಿಲಾಸ ಸಾಗರ ತುಂಬುತ್ತಿತ್ತು.
ಅದಲ್ಲದೆ ದಾವಣಗೆರೆ ಜಿಲ್ಲೆಯಲ್ಲಿ ಕಳೆದ ವರ್ಷ ಅನುಷ್ಠಾನಗೊಂಡ ಎಪ್ಪತ್ತೆರಡು ಕೆರೆ ಯೋಜನೆಯನ್ನು ಈ ವೇಳೆಯಲ್ಲಿ ಉಪಯೋಗಿಸಿಕೊಂಡಿದ್ದರೆ ತುಂಗಾಭದ್ರ ಆರ್ಭಟ ಕೂಡಾ ಶಾಂತವಾಗಿರುತ್ತಿತ್ತು. ಬರಡು ಕೆರೆಗಳು ಕೂಡ ತುಂಬಿಕೊಳ್ಳುತ್ತಿದ್ದವು. ಎಲ್ಲಕ್ಕೂ ಮಿಗಿಲಾಗಿ ಜಲನಿರ್ವಹಣೆಯ ಒಂದು ಅತ್ಯುತ್ತಮ ಪ್ರಯೋಗಶೀಲ ಸಿದ್ದ ಮಾಡೆಲ್ ಪ್ರಾಮಾಣಿತವಾಗುತ್ತಿತ್ತು.
ಏಕೆ ಹೀಗೆ ಪ್ರವಾಹ ನಿರ್ವಹಣೆ ಸಾಧ್ಯವಾಗಲಿಲ್ಲ?!?
ನಾನೊಬ್ಬ ಎನ್ನಾರೈ ಪೆದ್ದ, ನಾನೇನು ಬಲ್ಲೆ? ಬಲ್ಲವರ ಕೇಳೋಣವೆಂದರೆ ಬುದ್ಧಿವಂತರೆಲ್ಲಾ ಮೋದಿಯ ಭೇದಿಯ ಸಾಂದ್ರತೆ, ಬಣ್ಣ, ವಾಸನೆ, ರುಚಿಗಳ ವಿಶ್ಲೇಷಣೆಯಲ್ಲಿ ಮಗ್ನ!