ಮೋದಿಯ ಭೇದಿಯ ಸಾಂದ್ರತೆ

ತುಂಗೆಯಿಂದ ಭದ್ರೆಗೆ ನೀರೆತ್ತಿ ಹರಿಸಿ, ಅಲ್ಲಿಂದ ವೇದಾವತಿಯ ಮುಖಾಂತರ ವಾಣಿವಿಲಾಸ ಸಾಗರಕ್ಕೆ ಪ್ರಾಯೋಗಿಕವಾಗಿ ಈಗಾಗಲೇ ಅನುಷ್ಠಾನಗೊಂಡು ಸಿದ್ಧವಿರುವ ಭದ್ರಾ ಮೇಲ್ದಂಡೆ ಯೋಜನೆಯ ಸಂಪನ್ಮೂಲಗಳನ್ನೇ ಉಪಯೋಗಿಸಿಕೊಂಡು ನೀರು ಹರಿಸಲು ತುಂಗಾ ಪ್ರವಾಹ ಅವಕಾಶವನ್ನು ಕೊಟ್ಟಿದ್ದಿತು.
ಈ ಯೋಜನೆಯನ್ನು ಪ್ರಾಯೋಗಿಕವಾಗಿ ಪ್ರಯೋಗಿಸಿದ್ದರೆ ಶಿವಮೊಗ್ಗೆಯ ಕುಂಬಾರಗುಂಡಿಯಲ್ಲಿ ಪ್ರವಾಹವೇ ಆಗುತ್ತಿರಲಿಲ್ಲ ಮತ್ತು ಎಷ್ಟೋ ವರ್ಷಗಳಿಂದ ಡೆಡ್ ಸ್ಟೋರೇಜಿನಲ್ಲಿರುವ ವಾಣಿವಿಲಾಸ ಸಾಗರ ತುಂಬುತ್ತಿತ್ತು.
ಅದಲ್ಲದೆ ದಾವಣಗೆರೆ ಜಿಲ್ಲೆಯಲ್ಲಿ ಕಳೆದ ವರ್ಷ ಅನುಷ್ಠಾನಗೊಂಡ ಎಪ್ಪತ್ತೆರಡು ಕೆರೆ ಯೋಜನೆಯನ್ನು ಈ ವೇಳೆಯಲ್ಲಿ ಉಪಯೋಗಿಸಿಕೊಂಡಿದ್ದರೆ ತುಂಗಾಭದ್ರ ಆರ್ಭಟ ಕೂಡಾ ಶಾಂತವಾಗಿರುತ್ತಿತ್ತು. ಬರಡು ಕೆರೆಗಳು ಕೂಡ ತುಂಬಿಕೊಳ್ಳುತ್ತಿದ್ದವು. ಎಲ್ಲಕ್ಕೂ ಮಿಗಿಲಾಗಿ ಜಲನಿರ್ವಹಣೆಯ ಒಂದು ಅತ್ಯುತ್ತಮ ಪ್ರಯೋಗಶೀಲ ಸಿದ್ದ ಮಾಡೆಲ್ ಪ್ರಾಮಾಣಿತವಾಗುತ್ತಿತ್ತು.
ಏಕೆ ಹೀಗೆ ಪ್ರವಾಹ ನಿರ್ವಹಣೆ ಸಾಧ್ಯವಾಗಲಿಲ್ಲ?!?
ನಾನೊಬ್ಬ ಎನ್ನಾರೈ ಪೆದ್ದ, ನಾನೇನು ಬಲ್ಲೆ? ಬಲ್ಲವರ ಕೇಳೋಣವೆಂದರೆ ಬುದ್ಧಿವಂತರೆಲ್ಲಾ ಮೋದಿಯ ಭೇದಿಯ ಸಾಂದ್ರತೆ, ಬಣ್ಣ, ವಾಸನೆ, ರುಚಿಗಳ ವಿಶ್ಲೇಷಣೆಯಲ್ಲಿ ಮಗ್ನ!

No comments: