ತೇಜಸ್ವಿ ಸೂರ್ಯಾ, ಪಂಪ ರನ್ನ!

ಆಷಾಡದಾಗ ಅಧಿಕ ಮಾಸ ಕೇಳಿದ್ದೆ. ಆದ್ರ, ಆಗಸ್ಟ್ರಿನ್ಯಾಗ ರಾಜ್ಯೋತ್ಸವ ಕೇಳಿರಲಿಲ್ಲ. ವಿಮಾನ ಹತ್ತಿ ಹುಚ್ಚಾಸ್ಪತ್ರ್ಯಾಗ ಇಳಿಯುದ್ರೊಳಗಾ ಹಿಂಗ ಆಗೇದ್ರಲ್ಲಪಾ, ಅವನೌನ!
ಏನ್ ಇದು ಅಂಥಾ ನೋಡಿದ್ರ...
ಪಾಪ, ಮರೋಡ್ಯಾರು ಯಾರ ಅವ್ರ ಧರ್ಮದ ಬ್ಯಾನರ್ರು ರಾಜಸ್ತಾನಿ, ಹಿಂದಿ ಭಾಷಾದಾಗ ಹಾಕ್ಕೊಂಡಿದ್ರ, ತುಡುಗು ಮಂದಿ ಗಲಾಟಿ ಮಾಡಿದ್ನ ಸೂರ್ಯ ಟ್ವೀಟ್ ಮಾಡಿದ್ನಂತ. ಅದಕ್ಕಾ ಎಲ್ಲಾರೂ ಕನಡಾನ ಕತ್ತಿ ಗುರಾಣಿ ಮಾಡ್ಕೊಂಡು ನಿಂತಾರಂತ, ಇದು ಹಕೀಕತ್ತು.
ಸರಿ, ನನ ದೋಸ್ತು ಡಾವನಗೇರಿ ವಿಜಯ ಮೆಟಲ್ಸ್ ವಿಜಿನ ಏನಲೇ ಏನಂತಿ ಇದ್ಕ ಅಂದೆ.
ಅದ್ಕ ವಿಜಿ "ಮಿಂಡ್ರಿಗುಟ್ಟಿದರಿಗೆ ಕೆಲಸ ಇಲ್ಲ ಬಗಿಸಿ ಇಲ್ಲ. ಪಂಪ ರನ್ನ ಎಲ್ಲಾ ಜೈನರು ಅದಾರ, ಮಾರೋಡೇರು ಆಟ ಜೈನರ ಅಲ್ಲ ಅಂತಾರಲ್ಲ... ಅವುಕ್ಕ ನಮ್ ಧರ್ಮ ಇತಿಹಾಸ ಏನ್ ಗೊತ್ತದ! ಕನ್ನಡ ಜೈನರು ದಿಗಂಬರರು ಅದಾರ, ನಾವು ಮಾರೋಡೆರು ಶ್ವೇತಾಂಬರರು. ಜನ ಆಪೀಸು, ಅಂಗಡಿ, ಕೆಲಸಕ್ಕ ಹ್ಯಾಂಗ ಬಟ್ಟಿ ಹಾಕ್ಕೊಂಡು ಇರ್ತಾರ ಮತ್ತ ಮೈ ತೊಕ್ಕೊಣಬೇಕಾರ ಹ್ಯಾಂಗ ಬರೇ ಬತ್ತಲ ಇರ್ತಾರಲ್ಲ ಅಂಥ ವ್ಯತ್ಯಾಸ ಐತಿ ನಮ್ಮದ್ರಾಗ. ಈ ದಡ್ಡ ಸೂ..ಮಕ್ಕಳು ಚಡ್ಡಿ ಹಾಕ್ಕೊಂಡು ಮೈ ತೊಕ್ಕೊಳ್ಳೋರಿಗೆ ಏನ್ ಅರ್ಥ್ ಆದೀತು ಬಿಡಲೇ. ಅವುಕ್ಕ ಅವ್ರ ಸಾಮಾನೇ ಹ್ಯಾಂಗ ಐತಿ ಗೊತ್ತುಲ್ಲ. ಇನ್ನ ಬ್ಯಾರೇರ್ದು ಏನ್ ನೋಡಿರ್ತಾವು? ಬೆಂಗ್ಳುರಾಗ ಕನ್ನಡ ಇವ್ರ ಹಾಳು ಮಾಡ್ಕೊಂಡು ನಮ್ಮ ಮುಕಳಿಗೆ ಒರಸಾಕ ಹತ್ಯಾರ. ಯಾಕಂದ್ರ ಪುಗಶೆಟಿ ಸಿಗರು ನಾವೇ ಅಲ್ಲೆನ್ ಮತ್ತಾ! ನಾಲಿಗಿ ಸೀಳಿದ್ರ ಮೂಗಾಗ ಕನ್ನಡ ಮಾತಾಡ್ತೇವಿ ಅಂಥ ಅವ್ರಿಗೆ ಅವ್ರ ನಾಲಿಗಿ ಸೀಳಿಕೆಂಡು, ಮುಗು ಕೊಯ್ಕೆಂಡು ಮುಕುಳಾಗ ಕನ್ನಡ ಮಾತಾಡದು ನೋಡಲೇ ಯಾವಾರ ಕನ್ನಡ ಚಾನಲ್ ಹಚ್ಚಿ" ಅಂದ.
ಅಲ್ಲಿಗೇ ಪಂಪ ರನ್ನ ಸೂರ್ಯ ರವಿ ಕತಿ ಮುಗೀತು.
ಏನ್ ಇವ ಹಿಂಗ್ ಮಾತಾಡಕ ಹತ್ಯಾನ ಅಂತೀರಿ! ಎಲ್ಲೋ ನನ್ DNAದಾಗ ಇದ್ದ ಸೊಲ್ಲಾಪುರಿ ಕನ್ನಡನಾ ಬಿಜಾಪುರದ ತೋತಾಪುರಿ ಕವಿಯಿತ್ರಿ ಒಬ್ಬರು ಮನ್ನೆ ಬಡುದು ಎಬ್ಬಿಸ್ಯಾರ (ಕಾಂಪ್ಲಿಮೆಂಟ್ ಇದು, ಮತ್ತ ಇನ್ನೇನಾರ ಅನ್ಕೋ ಬ್ಯಾಡ್ರಿ), ಹಂಗಾಗಿ ಹೀಂಗ. ಇದ್ರ ಮ್ಯಾಲೆ ಜನರಲ್ ವಾರ್ಡಿನ್ಯಾಗ ಅಡ್ಮಿಟ್ ಬ್ಯಾರೆ ಆಗೀನಲ್ಲ!

No comments: