ಮೋದಿಯ ಹೂಸು, ಬುದ್ದಿಜೀವಿಗಳ ಪೂಸು!

ಮೋದಿ ಹೂಸಿದರೂ ಅದು ಸುವಾಸಿತವಾಗಿರಬೇಕು ಎಂದು ಫರ್ಮಾನು ಹೊರಡಿಸುವ ಕಾಮಿ ಬುದ್ದಿಜೀವಿಗಳ ಬೇಡಿಕೆ ಅತ್ಯಂತ ಸಹಜವಾದದ್ದು.

ಏಕೆಂದರೆ ಜಗತ್ತಿನ ಎಲ್ಲ ಕಮ್ಯುನಿಸ್ಟ್ ಪ್ರಭುತ್ವಗಳು ವಾಕ್ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ, ಸ್ತ್ರೀಸ್ವಾತಂತ್ರ್ಯ, ಆಹಾರಸ್ವಾತಂತ್ರ್ಯ, ಮುಂತಾದ "ಸ್ವಾ"ಗಳನ್ನೆಲ್ಲ "ಸ್ವಾಹ" ಮಾಡಿವೆ.

ಈ ಎಲ್ಲ ಸ್ವಾಹ ಮಾಡಿದ ಕಮ್ಯುನಿಸ್ಟ್ ನಾಯಕ ಹೂಸಿದರೆ ಅದು ಸುವಾಸಿತವಾಗಿರುತ್ತದೆ. ಇಲ್ಲದಿದ್ದರೆ ಆತನ ಅಡುಗೆಯವ ಗಲ್ಲಿಗೇರುತ್ತಾನೆ.

ತಮ್ಮ ಪ್ರೀತಿಪಾತ್ರ ಕಮ್ಯುನಿಸ್ಟ್ ತತ್ವಗಳಾದ ಎಲ್ಲ ಸ್ವಾತಂತ್ರ್ಯಗಳ ಹರಣ "ಸ್ವಾಹ" ಮಾಡಿ ಸರ್ವಾಧಿಕಾರವನ್ನು ಸ್ಥಾಪಿಸುತ್ತಿರುವ ಮೋದಿ ಈ ಬುದ್ಧಿಜೀವಿಗಳ ಅಪ್ರತಿಮ ನಾಯಕ! ಆತನ ಕೇಸರಿ ಧ್ವಜ ಅಸಲಿಗೆ ಕೆಂಪು ಧ್ವಜ. ಆತನ ಭಾರತ್ ಮಾತಾಕಿ, ಲಾಲ್ ಸಲಾಂ!

ಕಮ್ಯುನಿಸ್ಟರ ಕ್ರಾಂತಿ ಭೂಗತವಾಗಿ ನಿರ್ಧಾರವಾಗುವಂತೆ ಈ ಕಾಮಿ ಬುದ್ದಿಜೀವಿಗಳು ಕೂಡಾ ಒಂದು ಭೂಗತ ಉದ್ದೇಶವನ್ನಿಟ್ಟುಕೊಂಡು ಚಳುವಳಿಗಳು ಮಾಡುತ್ತಿದ್ದಾರೆ. ತಮ್ಮ ಅಪ್ರತಿಮ ನಾಯಕನಿಗೆ ಅತ್ಯಂತ ಪ್ರಚಾರ ಗಳಿಸಿಕೊಡುವ ಚಳುವಳಿಗಳನ್ನು ಮಾತ್ರ ಅವರು ಏರ್ಪಡಿಸುತ್ತಿದ್ದಾರೆ. ಆತನನ್ನು ಒಂದಿಪ್ಪತ್ತು ವರ್ಷಗಳ ಕಾಲ ಅಧಿಕಾರದಲ್ಲಿರಿಸುವುದು ಅವರ ಒಳ ಉದ್ದೇಶ. ಹಾಗಾಗಿ ಇವರು ಅನ್ಯಪಕ್ಷ ಜಪದ ಬಿಜೆಪಿ ಡಬಲ್ ಏಜೆಂಟರು!

ಅಂದಹಾಗೆ ಕಮ್ಯುನಿಸ್ಟರಿಗೆ ಡಬಲ್ ಏಜೆಂಟ್ ಎಂಬುದು ಒಂದು ಜೇಮ್ಸ್ಬಾಂಡ್ ರೋಲಿನಂತಹ ರೋಚಕ ಹುದ್ದೆ. ಬಾಂಡನ ಗೆಳತಿಯರಿಗಿಂತ  ಸ್ನಾತಕೋತ್ತರ ಪದವಿಯನ್ನು ಪಡೆದ ಲಾಲ್ ಲಾಲ್ ಕಾಮಿ ಪ್ರೇಯಸಿಯರು, ಕಾಮಿ ಡಬಲ್ ಏಜೆಂಟರಿಗಿರುತ್ತಾರೆ. ಕಾಮಿ ಎಂದರೆ ಕಾಮ್ಯುನಿಸ್ಟರು.

ಫಿಡೆಲ್ ಕ್ಯಾಸ್ಟ್ರೊ ತನ್ನ ದೇಶದ ಸೂಳೆಯು ಕೂಡ ಸ್ನಾತಕೋತ್ತರ ಪದವೀಧರೆಯಾಗಿರುವಳೆಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದುದನ್ನು ಒಮ್ಮೆ ನೆನಪಿಸಿಕೊಳ್ಳಿ. ಇವರ ಹೆಮ್ಮೆಯ ಕುವರ, ಗುವೆರಾ ಬದುಕಿರುತ್ತಿದ್ದರೆ ಇಂದು ಆ "ಸ್ನಾತಕೋತ್ತರ" ಮಹಿಳೆಯರೊಂದಿಗೆ ಕಾಲ ಕಳೆಯುತ್ತಿದ್ದ!

ಮುಂಬಯಿಯ ಅಪಾರ್ಟುಮೆಂಟುಗಳ ಮೆಟ್ಟಿಲುಗಳ ಪ್ರತಿ ಮೂಲೆಗಳಲ್ಲಿ ಯಾರೂ ಉಗುಳಬಾರದೆಂದು ಎಲ್ಲಾ ಧರ್ಮದ ದೇವರುಗಳ ಟೈಲ್ಸ್ ಅಂಟಿಸಿರುವಂತೆ, ಇವರ ಹುನ್ನಾರವನ್ನು ಯಾರೂ ಕೆಣಕಬಾರದೆಂದು ಕಡೆಯಲ್ಲಿ ಒಂದು  "ಜೈಭೀಮ್" ಘೋಷಣೆಯನ್ನು  ಅಸ್ತ್ರವಾಗಿಸಿಕೊಂಡಿರುವ ಕಿಲಾಡಿಗಳು ಇವರು.

ಇಷ್ಟೆಲ್ಲಾ ತಯಾರಾಗಿ ಅಲ್ಲಲ್ಲಿ ಕಲ್ವರ್ರುಗಳನ್ನು ಒಡೆಯುತ್ತಾ ಜುಗಾರಿ ಕ್ರಾಸಿನ ಪ್ರೊ. ಗಂಗೂಲಿ ಶಿಷ್ಯರು ಮಾಡುತ್ತಿರುವ ಕ್ರಾಂತಿಯನ್ನು ಭಕ್ತರೇ ಅರಿತುಕೊಳ್ಳಿ. ಇವರೂ ಕೂಡಾ ನಿಮ್ಮವರೇ.

Disclaimer:
ಜಗತ್ತಿನ ಎಲ್ಲ ಕಮ್ಯುನಿಸ್ಟ್ ಪ್ರಭುತ್ವಗಳು
ಪ್ರಜಾಪೀಡಕವಾಗಿ, ಸರ್ವಾಧಿಕಾರವಾಗಿ, ಏಕವ್ಯಕ್ತಿ ಆರಾಧಕವಾಗಿ ಪರಿವರ್ತಿತಗೊಂಡಿರುವುದು ಸಾರ್ವಕಾಲಿಕ  ವಾಸ್ತವ ಸತ್ಯ!

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

No comments: