ಚೌಕಿದಾರ ವರ್ಸಸ್ ಫೌಜುದಾರ

"ಮುಳುಗುತ್ತಿರುವವನಿಗೆ ಹುಲ್ಲುಕಡ್ಡಿಯೂ ಆಸರೆ" ಎಂಬಂತೆ ಯಾರೋ ಒಬ್ಬ ಮಾಜಿ ಸೈನಿಕನ ಹಿನ್ನೆಲೆ ಗೊತ್ತಿಲ್ಲದೆ, ಅರಿತುಕೊಳ್ಳುವ ಪ್ರಯತ್ನವನ್ನೂ ಮಾಡದೆ, ಕೇವಲ ಆತನ ಟ್ರೋಲು ನಂಬಿಕೊಂಡು ಆತನಿಗೆ ಒಂದು ಪ್ರಮುಖ ರಾಜಕೀಯ ಪಕ್ಷ ವಾರಾಣಸಿಯಿಂದ ಸಂಸತ್ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಕೊಟ್ಟಿತು.

ಆತನನ್ನು ನಾಡಿನ ಸಮಸ್ತ ಪ್ರಜ್ಞಾವಂತರು, ವಿಶ್ವವಿದ್ಯಾಲಯದ ಪ್ರೊಫೆಸರರುಗಳು ಬೆಂಬಲಿಸಿ ಆನಂದಭಾಷ್ಪ ಸುರಿಸುತ್ತಾ ಚೌಕಿದಾರನಿಗೆ ಫೌಜುದಾರ ಎಂದು ಉದ್ಘೋಷಗಳನ್ನು ಜೋಡಿಸಿದರು. 

ಆತನ ಅಭ್ಯರ್ಥಿತನ ಸಂವಿಧಾನಿಕ ಕಾನೂನಿನ ಪ್ರಕಾರ ತಿರಸ್ಕೃತಗೊಂಡಿದೆ!

ಒಂದು ಅತಿ ಸಣ್ಣ ಕಾನೂನನ್ನು ತಿಳಿದುಕೊಳ್ಳದ ಈ ಪಕ್ಷಗಳು ಏನು ಆಡಳಿತ ನಡೆಸಿಯಾವು?

ಈ ಪ್ರೊಫೆಸರರುಗಳು, ಸಂಶೋಧನೆ ಬಿಡಿ, ಏನನ್ನು ಬೋಧಿಸಿಯಾರು?

ಮುಳುಗುತ್ತಿರುವವರನ್ನು ಎತ್ತಿ ಸಂರಕ್ಷಿಸುವ ಕಾರ್ಯವನ್ನು ದೇಶ ತ್ವರಿತವಾಗಿ ಮಾಡಲಿ.

ಹಾಂ, ಅದಕ್ಕೆ ನನ್ನ ಹ್ಯಾಷ್ ಟ್ಯಾಗ್ ಹೇಳುವುದು..

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

No comments: