ಬೌದ್ಧಿಕ ತಾಲಿಬಾನ್!

 ತರ್ಕ, ತುಲನೆ, ವಿಶ್ಲೇಷಣೆ, ವಾಕ್ ಸ್ವಾತಂತ್ರ್ಯ, ಮತ್ತು ವಿಡಂಬನೆಗಳು ಭಾರತದಲ್ಲಿ ವಿರಳವಾಗುತ್ತಿವೆ. ಈಗಿರುವುದು ಅತ್ಯುಗ್ರ ಎಡಬಲವಾದ!


ಉರ್ದು ಕವಿ ಮುನಾವರ್ ರಾಣಾ ಎಂಬುವವರಿಗೆ ತಾಲಿಬಾನ್ ಕುರಿತು ಕೇಳಿದಾಗ ವಾಲ್ಮೀಕಿ ಸಹ ರಾಮಾಯಣ ಬರೆದು ದೇವನಾಗುವ ಮುನ್ನ ಡಕಾಯಿತನಾಗಿದ್ದ ಎಂಬ ಸದಾಶಯದ ಮಾತುಗಳಾಡಿ ವಾಲ್ಮೀಕಿ ಸಮಾಜದ ಭಾವನೆಗಳಿಗೆ ಧಕ್ಕೆ ತಂದಿದ್ದಾರೆಂದು ಮಧ್ಯಪ್ರದೇಶದ ಬಿಜೆಪಿ ನಾಯಕನಿಂದ ಕೇಸು ಜಡಿಸಿಕೊಂಡಿದ್ದಾರೆ. 


ಕೇಂದ್ರ ಮಂತ್ರಿ ರಾಣೆಯವರು ಸ್ವಾತಂತ್ರ್ಯ ಸಿಕ್ಕು ಎಷ್ಟು ವರ್ಷಗಳಾದವೆಂದು ಅರಿಯದ ಶಿವಸೇನಾ ಮುಖ್ಯಸ್ಥನ ಕೆನ್ನೆಗೆ ಬಾರಿಸುತ್ತಿದ್ದೆ ಎಂದು ಭಾಷಣ ಮಾಡಿ ಮಹಾರಾಷ್ಟ್ರ ಪೊಲೀಸರಿಂದ ಕೇಸು ಜಡಿಸಿಕೊಂಡಿದ್ದಾರೆ.


ಖುದ್ದು ನಾನು ಸಹ ಮದಕರಿ ನಾಯಕನ ಬಗ್ಗೆ ಹೀಗೊಂದು ಪ್ರತೀತಿಯಿದೆ, ಪೂರಕ ಮಾಹಿತಿಯಿದ್ದರೆ ಕೊಡಿ ಎಂದು ಕೇಳಿ ಕರ್ನಾಟಕ ಪೊಲೀಸರಿಂದ FIR ಜಡಿಸಿಕೊಂಡಿದ್ದೇನೆ. 


ಹೀಗೆಯೇ ಸದಾಶಯದ ಮಾತನಾಡಿದ ರಶೀದ್ ಅವರ ಮೇಲೆ ಎಡಪಂಥೀಯ ಅತ್ಯುಗ್ರರು ಅತ್ಯುಗ್ರವಾಗಿ ಕರ್ನಾಟಕದಾದ್ಯಂತ ಹರಿಹಾಯ್ದಿದ್ದಾರೆ.  ಅಷ್ಟಕ್ಕೇ ತಪರಾಕಿ ತಟ್ಟಲು ಅವಕಾಶ ಸಿಕ್ಕಿತೆಂದು ರಶೀದ್ ನಮ್ಮವರೆಂದು ಬಲಪಂಥೀಯರು ಕ್ಲಬ್ ಹೌಸಿಗೆ ಕರೆಸಿ ಆದರಿಸಿದ್ದಾರೆ.


ಇತ್ತ "ಬೆಂಕಿ ಬಿದ್ದು ಬಾಯಿ ಬಡಿದುಕೊಳ್ಳುತ್ತಿರುವ ಬಲಪಂಥೀಯ ನಾಯಿಗಳು" ಎಂಬ ಅತ್ಯುಗ್ರ ಕೀಳು ಶೀರ್ಷಿಕೆ ಯ ವಿಷಯದ ಬಗ್ಗೆ ಕ್ಲಬ್ ಹೌಸ್ನಲ್ಲಿ ದಿಲ್ಲಿಯ ಪ್ರತಿಷ್ಠಿತ ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರರು ಭಾಗವಹಿಸಿದ್ದಾರೆ.


ಈ ಎಲ್ಲಾ ಸಂಗತಿಗಳನ್ನು ಗಮನಿಸಿದರೆ ಅಫ್ಘಾನಿಸ್ತಾನದ್ದು ಭೌತಿಕ ತಾಲಿಬಾನ್, ಭಾರತದ್ದು ಬೌದ್ಧಿಕ ತಾಲಿಬಾನ್ ಎನಿಸುವುದಿಲ್ಲವೇ?!


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

No comments: