ಬ್ರಾಹ್ಮಣ್ಯಮುಕ್ತ ಸಮಾಜವೋ, ಬುದ್ಧಿಜೀವಿಮುಕ್ತ ಸಮಾಜವೋ!

ಕೆಳಸ್ತರದ ಚಂದ್ರಗುಪ್ತ ಮೌರ್ಯನನ್ನು ಚಕ್ರವರ್ತಿಯಾಗಿಸಿದ ಕ್ರಿಸ್ತಪೂರ್ವ ಚಾಣಕ್ಯನೆಂಬ ಬ್ರಾಹ್ಮಣನಿಂದ ಕ್ರಿಸ್ತಶಕೆಯ ನರಹಂತಕನಾಗಿದ್ದ ಟಿಪ್ಪುವನ್ನು ದೂರದರ್ಶಿತ್ವದ ನಾಯಕನಾಗಿಸಿದ ದಿವಾನ್ ಪೂರ್ಣಯ್ಯನೆಂಬೋ, ದಲಿತ ಅಂಬೇಡ್ಕರರನ್ನು ಆಧುನಿಕ ಭಾರತದ ಸಂವಿಧಾನಶಿಲ್ಪಿಯಾಗಿಸಿದ ಅಂಬೇಡ್ಕರ್ (ಅಂಬೇವಾಡೇಕರ್) ಎಂಬ ಬ್ರಾಹ್ಮಣರವರೆಗೆ ಆಗಿಹೋದ ಎಲ್ಲ ಬಡ ಬ್ರಾಹ್ಮಣರು ಜೀವ ಸವೆಸಿದ್ದು ತಮ್ಮನ್ನು ನಂಬಿದ ಕ್ಷತ್ರಿಯ, ವೈಶ್ಯ, ಶೂದ್ರ, ಹಾಗೂ ದಲಿತ ಬಲಶಾಲಿಗಳ ವೃದ್ಧಿಗಾಗಿ. ಇವರ ಕುಟಿಲತೆ, ಚತುರತೆ, ಬುದ್ಧಿಮತ್ತೆ, ಶಾನುಭೋಗತನ, ಗುಮಾಸ್ತಿಕೆ ಎಲ್ಲಾ ಅವರ ಆಶ್ರಯದಾತ ಜಮೀನುದಾರ, ಗೌಡ, ಸರದಾರ, ಸಾಮಂತ, ರಾಜರುಗಳ ಉದ್ಧಾರಕ್ಕಾಗಿ! ಹೀಗಿದ್ದ, ಇರುವ ಭಾರತದ ಈ ಎರಡು ಪ್ರತಿಶತ ಜನಸಂಖ್ಯೆಯ ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ಭಾರತದ ಬುದ್ದಿಜೀವಿಗಳು ಬ್ರಾಹ್ಮಣ್ಯಮುಕ್ತ ಸಮಾಜವನ್ನು ಕಟ್ಟುವ ಕರೆ ಜನಾಂಗದ್ವೇಷವಲ್ಲದೇ ಇನ್ನೇನು!?! ದಲಿತ ಶೋಷಣೆ ಇದ್ದರೆ ಅದು ಅಬ್ರಾಹ್ಮಣ್ಯರಿಂದಲೇ ಹೊರತು ಅಲ್ಪಸಂಖ್ಯಾತರಲ್ಲೇ ಅಲ್ಪಸಂಖ್ಯಾತರಾದ ಬ್ರಾಹ್ಮಣರಿಂದಲ್ಲ.

ಸತ್ರದ ಕಾವಲುಭಟನ ಸಾಮ್ರಾಟನಾಗಿಸಿದನಂದು ಚಾಣಕ್ಯನೆಂಬ ವಿಪ್ರ,
ಕೊಲೆಗಡುಕ ತಿಪ್ಪನ ರಕ್ಷಕನಾಗಿಸಿದ ಪೂರ್ಣಯ್ಯನೆಂಬನಿನ್ನೊಬ್ಬ ಬ್ರಾಹ್ಮಣ,
ಸಂವಿಧಾನಶಿಲ್ಪಿಯ ಪೊರೆದು ಪೋಷಿಸಿದ ಅಂಬೇವಾಡೇಕರನೆಂಬ ಹಾರುವ, ಇಂತಪ್ಪು ಅಲ್ಪ ಹಾರುವರು ಮುಂತಪ್ಪು ಜನಂಗಳ ಕಲ್ಪ ಕಟ್ಟಿರೆ ಅವಂಗಳ ನಿರ್ನಾಮ ಮಾಡೆಂಬ ಲದ್ದಿಜೀವಿಗಳ ಶುದ್ಧಿ ಮಾಡೆಂಬ ಹಗೇದಿಬ್ಬೇಶ್ವರ

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

No comments: