ಹುಯೆನ್ ತ್ಸಾಂಗ್ ನ ಮಹಾಪಯಣ: ಪ್ರತಿಕ್ರಿಯೆಗಳು

ಹುಯೆನ್ ತ್ಸಾಂಗ್ ನ ಮಹಾಪಯಣ
---------------------------------
ಹೈಸ್ಕೂಲ್ ನಲ್ಲಿ ಸಾಮಾಜಿಕ ವಿಜ್ಞಾನ ಪುಸ್ತಕ ಓದುವಾಗ ಅಂಕಗಳಿಗಾಗಿ ಆತನ ಹೆಸರನ್ನು ನೆನಪಿನಲ್ಲಿಟ್ಟುಕೊಂಡದ್ದು ಬಿಟ್ಟರೆ, ಆತನ ಕುರಿತಾಗಿ ಮತ್ತೇನೂ ತಿಳಿದಿರಲಿಲ್ಲ. ರವಿ ಹಂಜ್ ರವರು ' ಹುಯೆನ್ ತ್ಸಾಂಗನ ಮಹಾಪಯಣ ' ಪುಸ್ತಕದ ಮೂಲಕ ಆತನ ಚರಿತ್ರೆಯನ್ನು ಸೊಗಸಾಗಿ ನಿರೂಪಿಸಿದ್ದಾರೆ.ಪುಸ್ತಕ ಬಿಡುಗಡೆಯ ದಿನ ಹಂಜ್ ರವರು ತಿಳಿಸಿದಂತೆ ಸುಮಾರು ಆರು ವರ್ಷಗಳ ಕಾಲ ಅಧ್ಯಯನ ನಡೆಸಿ ಬರೆದಿರುವಂತ ಕೃತಿ.

ನಾನು ಒಂದೇ ಉಸಿರಿಗೆ,ಒಂದೇ ದಿನದಲ್ಲಿ ಓದಿ ಮುಗಿಸಿದ ಮೊಟ್ಟಮೊದಲ ಪುಸ್ತಕ.

ತನ್ನ ಅಣ್ಣನಂತೆ ತಾನೂ ಬೌದ್ಧ ಭಿಕ್ಷು ವಾಗಬೇಕೆಂಬ ಹಂಬಲದಿಂದ ನಿಗದಿತ ವಯಸ್ಸಿನ ಅರ್ಹತೆಗಿಂತ ಕಿರಿಯನಾಗಿದ್ದರೂ ಧರ್ಮಶಾಲೆಯ ಆಯ್ಕೆ ಸಮಿತಿಯ ಮುಂದೆ ದಿಟ್ಟ ವಾಗಿ ಉತ್ತರಿಸುವ ಮೂಲಕ ಆಯ್ಕೆಗೊಂಡು ಮಹಾಯಾನವನ್ನು ಆಳವಾಗಿ ಅಭ್ಯಸಿಸುತ್ತಾನೆ.
ಬೌದ್ಧ ಧರ್ಮದ ತವರೂರಾದ ಭಾರತವನ್ನು ದರ್ಶಿಸಬೇಕೆಂಬ ಮಹದಾಸೆ ಹೊತ್ತು ಅಂದಿನ ಚೀನೀ ಚಕ್ರವರ್ತಿಯ ಆಜ್ಞೆಯನ್ನು ಮೀರಿ ಟ್ಯಾಂಗ್ ಸಾಮ್ರಾಜ್ಯದ ರಾಜಧಾನಿ ಚಾಂಗಾನ್ ನಿಂದ ಹೊರಟು, ಹಗಲಿನಲ್ಲಿ ಅವಿತುಕೊಂಡು ರಾತ್ರಿಯಲ್ಲಿ ಪ್ರಯಾಣ ಬೆಳೆಸುತ್ತಾನೆ.ಸುಮಾರು 10000 ಮೈಲುಗಳ ದುರ್ಗಮಯಾತ್ರೆ ಕೈಗೊಳ್ಳುವ ತ್ಸಾಂಗನು ಕೇವಲ ಜ್ಞಾನದ ಶೋಧನೆಯ ಗುರಿಹೊತ್ತು ನಡೆಯುತ್ತಾನೆ.
ಭಾರತದಲ್ಲಿ ಬೌದ್ಧ ಧರ್ಮದ ಕುರಿತಾಗಿ ಅಧ್ಯಯನ ನಡೆಸುವುದರೊಂದಿಗೆ ಆಗಿನ ಇಲ್ಲಿನ ಜನರ ಸಂಸ್ಕ್ರತಿಯನ್ನು ದಾಖಲಿಸುವುದರ ಜೊತೆಗೆ ಭೌಗೋಳಿಕ ಹಿನ್ನೆಲೆ, ಹವಾಮಾನ ಮುಂತಾದ ಇತಿಹಾಸದಲ್ಲಿ ದಾಖಲಾಗುವಂತ ಅನೇಕ  ವಿಚಾರಗಳನ್ನು ದಾಖಲಿಸುತ್ತಾ ಸಾಗುತ್ತಾನೆ.ಬೌದ್ಧ ಧರ್ಮ ಅದಾಗಲೇ ಅವನತಿ ಹೊಂದುತ್ತಿದ್ದ ಕಾಲದಲ್ಲಿ ದರ್ಶಿಸುವ ತ್ಸಾಂಗನು ಅದರ ಕುರಿತಾಗಿ ನೊಂದುಕೊಳ್ಳುತ್ತಾನೆ.
ತ್ಸಾಂಗನ ಮಹಾಪಯಣದ ಈ ಪುಸ್ತಕ ರಹಮತ್ ತರೀಕೆರೆ ಯವರು ಹೇಳಿದಂತೆ ನಮಗೂ ಆ ಯಾತ್ರೆಯ ಸ್ಥಳಗಳನ್ನು ನೋಡಿ ಬರುವಂತೆ ಅನಿಸುವುದು ಸತ್ಯ.
ರವಿ ಹಂಜ್ ರವರು ತುಂಬಾ ಸೊಗಸಾಗಿ ನಿರೂಪಿಸಿದ್ದು, ರೋಮಾಂಚಕ ಕಾದಂಬರಿ ಓದಿದ ಅನುಭವ ಸಿಗುತ್ತದೆ.

ಎಲ್ಲರೂ "ಮಹಾಪಯಣ" ದ ಪುಸ್ತಕದ ಮೂಲಕ ಯಾತ್ರೆ ಕೈಗೊಳ್ಳಿ. ರೋಮಾಂಚಕ ಅನುಭವ ಪಡೆದುಕೊಳ್ಳಿ.

-ಪಂಪ ತೋರಣಗಲ್
----------------------------------------------
ಸರ್ ಪುಸ್ತಕ ಓದಿದೆ. ನನ್ನ ಕುತೂಹಲವನ್ನು ತಣಿಸಿದ್ದಲ್ಲದೆ ಹ್ಯುಯೆನ್ ತ್ಸಾಂಗ್‌ನ ಯಾತ್ರೆ ಬಗ್ಗೆ ನನಗಿದ್ದ ಅನೇಕ ಗೊಂದಲ ಗೋಜಲುಗಳಿಗೆ ಪರಿಹಾರ ಒದಗಿಸಿತು. ಹಿನಾಯಾನ, ಮಹಾಯಾನ, ಯೋಗಾಚಾರ ತತ್ವ, ಪಂಥಗಳ ಬಗ್ಗೆ ನನಗಿದ್ದ ಅನುಮಾನಗಳನ್ನು ಬಗೆ ಹರಿಸಿತು. ಹ್ಯುಯೆನ್ ತ್ಸಾಂಗ್ ದಕ್ಷಿಣ ಭಾರತಕ್ಕೆ ಬಂದಾಗ ಇಲ್ಲಿನ ದೊರೆಗಳ ಭೇಟಿ ಮಾಡಿದ್ದರ ಬಗ್ಗೆ ವಿವರ ಮಾಹಿತಿ ನೀಡದಿರುವುದು ನಿರಾಶೆ ತಂದರೂ. ಹರ್ಷವರ್ಧನ, ಅಸ್ಸಾಂನ ಮಹಾರಾಜ, ನಳಂದ ವಿಶ್ವವಿದ್ಯಾಲಯದಲ್ಲಿ ಜ್ಞಾನಾರ್ಜನೆಗೆ ಸೇರಿದ ಬಗೆಗಿನ ವಿವರಗಳು ಓದುಗರ ಜ್ಞಾನದಾಹ ನೀಗಿಸುವುದಲ್ಲದೆ ಇತಿಹಾಸದ ಬಗೆಗಿನ ಅನೇಕ ಗೊಂದಲಗಳನ್ನು ನಿವಾರಿಸುತ್ತವೆ. ಹ್ಯುಯೆನ್ ತ್ಸಾಂಗ್ ಸಿಲೋನ್‌ಗೆ ಭೇಟಿ ನೀಡಿರಲಿಲ್ಲ ಎನ್ನಲಾಗುತ್ತದೆ. ಆದರೆ ಅಲ್ಲಿಗೆ ಭೇಟಿ ನೀಡಿದ್ದ ಎಂದು ಚಿತ್ರಿಸಲಾಗಿದೆ ಆದರೆ ಅದರ ಬಗ್ಗೆಯೂ ಹೆಚ್ಚಿನ ವಿಚಾರಗಳಿಲ್ಲ. ತ್ಸಾಂಗ್ ಕೈಗೊಂಡ ಸಂಪೂರ್ಣ ಯಾತ್ರೆಯ ಮ್ಯಾಪ್ ಹಾಕಿ ಓದುಗರಿಗೆ ಆತನ ತಿರುಗಾಟದ ಸ್ಪಷ್ಟ ಗ್ರಹಿಕೆ ನೀಡಬಹುದಿತ್ತು. ಮತ್ತೊಂದು ಆತ ಟ್ಯಾಂಗ್ ಸಾಮ್ರಾಜ್ಯದ ಪಶ್ಚಿಮಕ್ಕೆ ಬಹುದೂರ ಸಾಗಿ ಮತ್ತೆ ದಕ್ಷಿಣಕ್ಕೆ ಸುತ್ತಿ ಬರುವ ಔಚಿತ್ಯ ಅರ್ಥವಾಗುವುದಿಲ್ಲ. ಕೃತಿಯಲ್ಲೂ ಆ ಬಗ್ಗೆ ಹೆಚ್ಚಿನ ಮಾಹಿತಿ ದೊರಕುವುದಿಲ್ಲ.
ಇರಲಿ.  ತಾಷ್ಕೆಂಟ್, ಕಿರ್ಗಿಸ್ತಾನ್, ಅಪ್ಘಾನಿಸ್ತಾನ, ಈಗಿನ ಪಾಕಿಸ್ತಾನ್ ಮೂಲಕ ಭಾರತದ ನೆಲ ತಲುಪುವ ಹ್ಯುಯೆನ್ ತ್ಸಾಂಗ್ ಭಾರತದ ಅಂದಿನ ಸ್ಥಿತಿಗತಿಗಳ ಬಗ್ಗೆ ದಾಖಲಿಸದೇ ಹೋಗಿದ್ದರೆ ನಮ್ಮ ದೇಶದ ಇತಿಹಾಸವೇ ಅಪೂರ್ಣವಾಗುತ್ತಿತ್ತು ಎನಿಸುತ್ತದೆ. ಭಾರತದ ಇತಿಹಾಸದ ಬಗ್ಗೆ ತಳಸ್ಪರ್ಶಿಯಾಗಿ ಅಧ್ಯಯನ ಕೈಗೊಳ್ಳುವವರಿಗೆ ಹ್ಯುಯೆನ್ ತ್ಸಾಂಗ್ ಎಂಬ ತಿರುಗಾಡಿ ಒಬ್ಬ ಮಾರ್ಗದರ್ಶಕನಂತೆ ಗೋಚರಿಸುತ್ತಾನೆ. ಈ ಕೃತಿ ಅತ್ಯಂತ ಮೌಲಿಕ ಕೃತಿಯಾಗಿದ್ದು ಎಲ್ಲಾ ಸಾಹಿತ್ಯಾಸಕ್ತರು. ಅಧ್ಯಯನಕಾರರು, ಇತಿಹಾಸ ತಜ್ಞರು ಒದಲೇಬೇಕಾದ ಕೃತಿ. ಓದದಿದ್ದರೆ ಇತಿಹಾಸದ ಲಿಂಕ್ ಮಿಸ್ ಆಗುವುದಂತೂ ಖಚಿತ.
- ನೀರಕಲ್ಲು ಶಿವಕುಮಾರ್
-----------------------------------
Ravi Hanj sir I read this book.
This is one of the best informative book especially for teachers and students
This book is of great importance and necessity to Kannada literature and education field
This should be kept in library of all schools and colleges
Your hard work of 5years is not wasted.
People will remember you for the contribution of this book.
Thank you sir.

-Bhagya Lakshmi
------------------------------------------
ಓದಿದೆ....ಸೊಗಸಾದ ಪುಸ್ತಕ..
ಹ್ಯುಯೆನ್ ತ್ಸಾಂಗ್ ಮಹಾಶಯ ಇಷ್ಟೆಲ್ಲಾ ಓಡಾಡಿ,ಸ್ಥಳಗಳಲ್ಲಿನ ವಿವರಗಳನ್ನು ಬಿಚ್ಚಿಡುತ್ತಾ ಹೋದಂತೆಲ್ಲಾ ಮನಸು ತುಂಬಿಬಂತು...ಆ ಕಾಲದಲ್ಲಿ ಈತನ ಪ್ರವಾಸದ ಕನಸು, ಕಷ್ಟ ಕಾರ್ಪಣ್ಯಗಳು ಸುಖ ದುಃಖ ಗಳೆನ್ನಲ್ಲಾ ಆತ ಅವಡುಗಚ್ಚಿಕೊಂಡು ಮೌನವಾಗಿ ಆದರೆ ಯಶಸ್ವಿಯಾಗಿ ದಾಖಲಿಸುತ್ತಾ ಹೋಗಿರೋದು ಇನ್ನೊಂದು ಅದ್ಭುತ...
ಇಂಡಿಯಾ ದವರ ಬಗ್ಗೆ ಆತನ ಅಭಿಪ್ರಾಯ ಈಗಲೂ ಚೂರೂ ಬದಲಾಗದೇ ಉಳಿದಿರೋದು ಇನ್ನೊಂದು ವಿಶಾದದ ಸಂಗತಿ

ಏನಾರ ಆಗ್ಲಿ..ರವಿ ಸರ್ ಅವರಿಗೆ
ಪ್ರಕಾಶಕರಿಗೂ ಅಭಿನಂದನೆಗಳು..

ಇಂಥದೊಂದು ವೈಶಿಷ್ಟ್ಯ ಪೂರ್ಣ ಪುಸ್ತಕ ಕೊಟ್ಟಿದ್ದಕ್ಕೆ!
- ಮೋಹನ್ ಕೋರಿ
-------------------------------------------
Ravi Hanj ಪುಸ್ತಕ ಒಂದೇ ಏಟಿಗೆ ಓದಿ ಮುಗಿಸಿದೆ. ಒಂದು ಅದ್ಭುತ ಪಯಣ. ನನ್ನ ಮಡದಿ Sowmya Suma ಓದಿ ತುಂಬಾ ಖುಷಿ ಪಟ್ಟಳು. ನನ್ನ ಮಗಳು Meghana Sudhindra ಹಾಗೂ ಮೂವರು ಆತ್ಮೀಯ ಮಿತ್ರರಿಗೂ ಪ್ರತಿಗಳನ್ನು ಕೊಂಡಿದ್ದೇನೆ. ಆಲ್ ದಿ ಬೆಸ್ಟ್.
ಒಳ್ಳೆಯ ಪ್ರಯತ್ನ Chandrakanta Vaddu ಅವರೆ.
- ಸುಧೀಂದ್ರ ಹಾಲ್ದೊಡ್ಡೇರಿ

No comments: