ತಿಪ್ಪ, ತಿಪ್ಪು/ಟಿಪ್ಪು

ಓಲೈಕೆ ಇಂದಿನ ರಾಜಕಾರಣಿಗಳಿಗೆ ಎಷ್ಟು ಅನಿವಾರ್ಯವೋ ಅಶೋಕ, ಹರ್ಷ, ಹೊಯ್ಸಳ, ವಿಜಯನಗರ, ಹೈದರಾಲಿ, ಟಿಪ್ಪುಗಳಿಗೂ ಅಷ್ಟೇ ಅನಿವಾರ್ಯವಾಗಿತ್ತು. ಹೈದರಾಲಿ ಹೈದರಾಬಾದನ್ನು ಸೇರಲು ಆತನಿಗೆ ಅಗತ್ಯ ಸೇನಾ ನೆರವು ನೀಡಲು ಅಪಾರ ಸಂಖ್ಯೆಯಲ್ಲಿ ನಾಯಕ ಜನಾಂಗ ಒಡಂಬಡಿಕೆ ಮಾಡಿಕೊಂಡಿತ್ತು. ಹೈದರಾಬಾದ್ ಮಾರ್ಗಮಧ್ಯದಲ್ಲಿ ಬರುವ ಊರುಗಳನ್ನು ದೋಚಿದ ಸಿರಿ ತಮಗೆ ಸೇರಬೇಕೆಂಬುದೇ ಆ ಒಡಂಬಡಿಕೆ. ಅತ್ಯಂತ ನಿರ್ದಾಕ್ಷಿಣ್ಯವಾಗಿ ಹೋರಾಡಿ ವೈರಿಗಳನ್ನು ನಿರ್ನಾಮ ಮಾಡುತ್ತಿದ್ದ ಈ ಜನಾಂಗವನ್ನು ಎದುರು ಹಾಕಿಕೊಳ್ಳದೇ ಅವರನ್ನು ಓಲೈಸಿಕೊಂಡಿರಬೇಕೆಂಬುದನ್ನಾಗಲೇ ಹೈದರಾಲಿ ಕಂಡುಕೊಂಡಿದ್ದನು. ಆ ಓಲೈಕೆಯ ಫಲಶ್ರುತಿಯೇ ಟಿಪ್ಪು ನಾಮ! ನಾಯಕರುಗಳ ಆದ್ಯದೈವ ತಿಪ್ಪೇರುದ್ರನ ಹೆಸರನ್ನು ತನ್ನ ಮಗನಿಗೆ ತಿಪ್ಪ ಎಂದು ಇರಿಸಿದ.
ಮೈಸೂರು ಸೀಮೆಯ ಜನ ಪ್ರೀತಿಪೂರ್ವಕವಾಗಿ ಹೆಸರುಗಳ ಮುಂದೆ "ಉ"ಕಾರವನ್ನು ಸೇರಿಸುತ್ತಾರೆ. ಉದಾಹರಣೆಗೆ ಶಿವನನ್ನು ಶಿವು, ಶಂಕರನನ್ನು ಶಂಕ್ರೂ, ರಂಗ ರಂಗು, ಇತ್ಯಾದಿಯಂತೆ. ಆ ರೀತಿಯಾಗಿ ತಿಪ್ಪ, ತಿಪ್ಪು/ಟಿಪ್ಪು ಆಗಿರಬಹುದೆಂಬುದು ನನ್ನ ಗಟ್ಟಿ ಅನಿಸಿಕೆ.
ಇತಿಹಾಸದ ಅಂದಿನ ಭಾರತದಲ್ಲಿಯೂ, ವಾಸ್ತವದ ಇಂದಿನ ಭಾರತದಲ್ಲಿಯೂ ಜನಮನಸ್ಥಿತಿ ಯಥಾಸ್ಥಿತಿ! ಇನ್ನು ವಸ್ತುಸ್ಥಿತಿಯನ್ನು ವಿಶ್ಲೇಷಿಸದೆ ಇತಿಹಾಸಕಾ(ಕೋ)ರರು ಗುಂಗಿನಲ್ಲಿ ತಥಾಗತ ಬರೆದುದರ ಫಲಶ್ರುತಿಯೇ ಇಂದಿನ ರಂಗಿತರಂಗ ಭಾರತದ ಇತಿಹಾಸ. ಓಲೈಕೆಯೇ ಭಾರತದ ಭದ್ರ ಬುನಾದಿ, ಇದು ಐತಿಹಾಸಿಕ ಸತ್ಯ! ಇದು ನಮ್ಮ ನಿಮ್ಮೆಲ್ಲರ ಡಿಎನ್ಎ.

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ 

No comments: