ಮೀಟೂವಿನ ಆಚೆ ದಾಟು

ಲಂಕೇಶ್ ಆರತಿಯನ್ನು ಹಾಕಿಕೊಂಡು ಸಿನೆಮಾ ಮಾಡುತ್ತಿದ್ದಾಗ, ಪ್ರಣಯ ಸನ್ನಿವೇಶವೊಂದರಲ್ಲಿ ಆರತಿ "ಕಣ್ಣಲ್ಲೇ ಎಲ್ಲಾ ಕಾಮನೆ/ಭಾವನೆಗಳನ್ನು ತೋರಿಸುತ್ತೇನೆ" ಎಂದಳಂತೆ.

ಆಗ ಕಣ್ಣಲ್ಲೇ ಎಲ್ಲಾ ತೋರ್ಸೋದಾದ್ರೆ ಬೇರೇ ಅಂಗಾಗಗಳು ಏಕಿರಬೇಕು ಎಂದು ತಪರಾಕಿ ತಟ್ಟಿ ತಮಗೆ ಬೇಕಾದಂತೆ ಲಂಕೇಶ್ ಚಿತ್ರೀಕರಿಸಿಕೊಂಡರಂತೆ! ಇದು ಲಂಕೇಶರ ಒಂದು "ಕೋಡು", "ಕ್ರಿಯಾಶೀಲತೆ", "ಸೃಜನಶೀಲತೆ" ಎಂಬಂತೆ ಹೆಮ್ಮೆಯಿಂದ ಅವರ ಭಕ್ತರನೇಕರು ಬರೆದಿದ್ದನ್ನು ಸಾಕಷ್ಟು ಸಾರಿ ಓದಿದ್ದೇವೆ.

ಈಗ ಆ ಲಂಕೇಶರ ನಿರ್ದೇಶನದ, ಸಾಮಾಜಿಕ ಕಳಕಳಿಯ ಪರಂಪರೆಯನ್ನು (ವ್ಯಕ್ತಿತ್ವ, ವೈಯಕ್ತಿಕ ಜೀವನವಲ್ಲದ) ಹೊತ್ತಿರುವ ಪುತ್ರಿ, ಮತ್ತು ಲಂಕೇಶರನ್ನು ಆರಾಧಿಸುವ ಅಭಿಮಾನಿಗಳ ಪಡೆಯಿರುವ FIRE ಸಂಸ್ಥೆ, ನಿಜಕ್ಕೂ MeToo ಪರ ನಿಷ್ಪಕ್ಷಪಾತವಾಗಿರುತ್ತದೆಯೇ?

ಆತ ಒಂದು ಕ್ರಿಯಾಶೀಲ ಹೆಣ್ಣಿಗೆ ಅಂಗಾಂಗ ತೋರೆಂದುದು ಕ್ರಿಯಾತ್ಮಕವೂ, ಮತ್ತೊಬ್ಬ ಗಂಡು ಒಂದು ಹೆಣ್ಣನ್ನು ಊಟಕ್ಕೆ (ಆಟಕ್ಕೇ ಎಂದುಕೊಳ್ಳಿ) ಯಾವುದೇ ವೃತ್ತಿ ಸಂಬಂಧೀ ನಿಬಂಧನೆಗಳ ಒತ್ತಡವಿಲ್ಲದೆ ಕರೆದುದು ಕಾಮಪೀಡನೆ ಎಂದು ಪ್ರತಿಪಾದಿಸುವುದೇ ಹಾಸ್ಯಾಸ್ಪದ. ಹಾಗಿದ್ದರೆ ಸಂಗಾತಿಯನ್ನು ಬಯಸಿ ನಡೆಸುವ ಎಲ್ಲಾ ಸಾಮಾಜಿಕ ಪ್ರಕ್ರಿಯೆಗಳಾದ ವಧುವರಾನ್ವೇಷಣೆ, ಡೇಟಿಂಗ್, ಇತ್ಯಾದಿ ಕೂಡ ಕಾಮಪೀಡನೆಯೇ?!

ಡೇಟಿಂಗಿಗೆಂದೇ ಹೊರಕ್ಕೆ ಕರೆಯುವುದು ಕಾಮಪೀಡನೆಯಾಗುವುದಿಲ್ಲ. ಭಾರತೀಯ ಸಿನೆಮಾ ಉದ್ಯಮದಲ್ಲಿ ನಿಜ ಕಾಮಪೀಡನೆಯ ಪ್ರಕರಣಗಳು ಸಾರ್ವಭೌಮನಿಂದ ಹಿಡಿದು ಕ್ಲ್ಯಾಪ್ಬಾಯ್ಸ್ ವರೆಗೆ ಅಗಣಿತವಾಗಿವೆ. ಇದ್ದುದರಲ್ಲಿ ಸಂಗೀತಾ ಭಟ್ ಎತ್ತಿರುವ ದೂರು ಸತ್ಯಕ್ಕೆ ಸಮಂಜಸವಾಗಿದೆ. ಅಂತಹ ಪ್ರಕರಣಗಳನ್ನು ಬೆಳೆಕಿಗೆ ತರುವತ್ತ FIRE ಕಾರ್ಯೋನ್ಮುಖವಾಗಲಿ.

"Asking Out" doesn't constitute as "Sexual Harassment". You need a stronger case than mere "he asked me out"! The Indian film industry is full of such real strong cases. Hope FIRE would work to bring the real cases out.

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

FIRE ಸಂಸ್ಥೆಯ ಸಹಾಯ ಕೋರಿ ಸಂಗೀತಾ ಭಟ್ ಬರದಿದ್ದುದರಿಂದ ಸಂಸ್ಥೆ ಆಕೆಗೆ ಸಹಾಯ ಮಾಡುತ್ತಿಲ್ಲವಂತೆ. ಸಂಸ್ಥೆಗೆ ಅದರದೇ ಆದ "ಚೌಕಟ್ಟು" ಇದೆಯಂತೆ. ಹಾಗೆಂದು ಸಂಸ್ಥೆಯ ಪರಿಚಯವಿರುವ ಸ್ನೇಹಿತ ನಿತೇಶ್ ಕುಂಟಾಡಿ Kuntady Nithesh ತಿಳಿಸಿದ್ದಾರೆ.

ಶೋಷಿತ ಮಹಿಳೆ ತನ್ನ ಬಾಗಿಲಿಗೆ ಬಂದು ಸಹಾಯ ಕೇಳಲಿ ಎಂಬ ನಿಯಮವೇ ಊಳಿಗಮಾನ್ಯ ಪದ್ದತಿ!

ಪದೇ ಪದೇ ಊಟಕ್ಕೆ ಕರೆದನೆಂಬ ಒಬ್ಬ ನಟಿಯ ದೂರಿಗೆ ಅಲ್ಲೋಲಕಲ್ಲೋಲ ಮಾಡುತ್ತಿರುವ ಚಳುವಳಿ ವೀರರು, ಬಿಡಿಬಿಡಿಯಾಗಿ ಪೀಡನೆಯನ್ನು ವರ್ಣಿಸಿರುವ ಸಂಗೀತಾ ಭಟ್ ರನ್ನೇಕೆ ಮೂಲೆಯಲ್ಲಿರಿಸಿದ್ದಾರೆ? ಆಕೆಗೆ ಸಾಂತ್ವನ, ಧೈರ್ಯ ನೀಡಿ ಆಕೆಯ ಪೀಡನೆಗೆ ಕಾರಣರಾದವರ ವಿರುದ್ಧ ಕ್ರಮ ಜರುಗಿಸಲು ಸಹಾಯ ಮಾಡುತ್ತಿಲ್ಲವೇಕೆ? ಆಕೆ ಕನ್ನಡ ಚಿತ್ರರಂಗದ ಕುರಿತು ಪ್ರಪ್ರಥಮವಾಗಿ ದೂರಿದ್ದಾಳೆಂದು ಹೆಸರಿಸಿದ್ದು ಬಿಟ್ಟರೆ ಲಕ್ಷ್ಯವೆಲ್ಲಾ ಸೋಲುವ ಕುದುರೆಯ ಮೇಲಿದೆ.

ಒಬ್ಬ ಸ್ನೇಹಿತ ಯಾ ಸಹೋದ್ಯೋಗಿ ಪದೇ ಪದೇ ಊಟಕ್ಕೆ ಆಟದ ಉದ್ದೇಶದಿಂದಲೇ ಕರೆದರೆ ಅದು ವೃತ್ತಿರಂಗದ ಕಾಮಪೀಡನೆ ಆಗುವುದಿಲ್ಲ. ಆತ ಅದರೊಂದಿಗೆ ವೃತ್ತಿಗೆ ಸಂಬಂಧಿಸಿದ ಯಾವುದಾದರೂ ಆಮಿಷವನ್ನೊಡ್ಡಿದಾಗ ಮಾತ್ರ ಅದು ಕಾಮಪೀಡಿತ. ಇಲ್ಲದಿದ್ದರೆ ಅದು ಇಬ್ಬರು ವಯಸ್ಕರ ನಡುವಿನ ಮಾತುಕತೆ ಮಾತ್ರ, ಇದು ಸಾಮಾನ್ಯ ಜ್ಞಾನ. 

ಆಯ್ದ ಆಯ್ಕೆಯ ಶೋಷಿತರನ್ನು ಮಾತ್ರ (ಮ)ಮೆರೆಸುವ ಇಂತಹ ಚಳುವಳಿ, ಬುದ್ಧಿಜೀವಿ, ನಿವೇದನೆ, ಸಂಸ್ಥೆಗಳು ಸ್ವಾಸ್ಥ್ಯ ಸಮಾಜವನ್ನು ನಿರ್ಮಾಣ ಮಾಡಿಯಾವೆಯೇ?

ಯಾವುದೇ ನಿವೇದನೆಗಳನ್ನು ಸಹಿ ಹಾಕಿ ಹಂಚಿಕೊಳ್ಳುವ ಮುಂಚೆ ಸಂಚಿನ ಅರಿವಿರಲಿ.

#ಸೂಚನೆ: ನನ್ನ ಹಿಂದಿನ ಪೋಸ್ಟಿನಲ್ಲಿ ಉದ್ದೇಶಪೂರ್ವಕವಾಗಿ ಲಂಕೇಶರನ್ನು ಎಳೆದು ತಂದಿದ್ದೆ. ಏಕೆಂದರೆ ಲಂಕೇಶ್ ಆರತಿಗೆ ಹಾಗೆ ಹೇಳಿದ್ದರೋ ಇಲ್ಲವೋ ಅವರ ಭಕ್ತರು ಮಾತ್ರ ಆ ಕುರಿತಾಗಿ ಅವರು ತೀರಿಕೊಂಡ ನಂತರ ಬರೆದದ್ದೇ ಬರೆದದ್ದು!

ಲಂಕೇಶರ ಪರಂಪರೆ(?)ಯನ್ನು ಗುತ್ತಿಗೆ ಹಿಡಿದಿರುವ ಒಂದು ಬಹುದೊಡ್ಡ ಗುಂಪು ಅವರ ಅಮಾಯಕ ಮಗಳನ್ನು ಹುಯಿಲೆಬ್ಬಿಸಿ ದಿಕ್ಕೆಡಿಸಿ ಆದ ಅನಾಹುತ ದೇಶ ನೋಡಿದೆ.

ಈಗ ಅದೇ ಗುಂಪು, ದೇಶದ ಎಲ್ಲ ವಿವಾದಗಳಲ್ಲಿ ತಮಗೆ ಮೈಲೇಜ್ ಕೊಡುವ, ಸಂಗತಿಗಳನ್ನು ಮಾತ್ರ ಆಯ್ದುಕೊಂಡು (ವೀರಶೈವ ಲಿಂಗಾಯತ, ಅಯ್ಯಪ್ಪ, ಮೀಟೂ, ಇತ್ಯಾದಿ)
ತಮ್ಮ ವಿರೋಧಿಗಳಿಗೆ "F" ಮಾಡುವ ಏಕಮಾತ್ರ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಜನತೆ ಆ ಉದ್ದೇಶಕ್ಕೆ ವ್ಯಾಸಲಿನ್ ಆಗಬಾರದು.

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

No comments: