ಭಾರತ ಒಂದು ಮರುಶೋಧನೆ ಕುರಿತ ಜಟಾಪಟಿ!

ದಾಕ್ಷಾಯಿಣಿ ಹುಡೇದ್ ಅವರು ವೃತ್ತಿಯಲ್ಲಿ ಶಾಲಾ ಶಿಕ್ಷಕಿ. ಎಡಪಂಥ ಚಿಂತನಧಾರೆಗಳ ಬಗ್ಗೆ ಒಲವಿರುವ ಇವರು ಹಲವಾರು ಜೀವಪರ, ಬಹುತ್ವದ ಕುರಿತಾದ ಚಿಂತನೆಯನ್ನು ಯಾವುದೇ ದ್ವಂದ್ವವಿಲ್ಲದೆ ಪ್ರತಿಪಾದಿಸುವವರು. ಅಂತಹ ಒಂದು ಮುಕ್ತ ಚಿಂತನೆ ಮತ್ತು ಜ್ಞಾನಾರ್ಜನೆಯ ಹಸಿವಿರುವ ಕಾರಣ ನನ್ನ "ಭಾರತ ಒಂದು ಮರುಶೋಧನೆ"ಯನ್ನು ಓದುವುದೂ ಅಲ್ಲದೆ ಅಷ್ಟೇ ಮುಕ್ತವಾಗಿ ತಮ್ಮ ಸದಭಿಪ್ರಾಯವನ್ನು ತಮ್ಮ ಫೇಸ್ಬುಕ್ ವಾಲಿನಲ್ಲಿ ಹಂಚಿಕೊಂಡಿದ್ದಾರೆ.

ಯಾವುದೇ ವಿಚಾರ ಮತ್ತು ವಿಷಯಕ್ಕೂ ಮಿತಿಗಳಿರಬಹುದು. ಅವುಗಳನ್ನು ಪರಸ್ಪರ ಚರ್ಚಿಸಿ ಪರಿಹರಿಸಿಕೊಂಡು ಸತ್ಯವನ್ನು ಕಂಡುಕೊಳ್ಳಬೇಕೆಂಬ ಉದಾರತೆಯನ್ನ ಪ್ರತಿಪಾದಿಸುವ ನಾವೆಲ್ಲರೂ ದಾಕ್ಷಾಯಿಣಿಯವರ ಅಭಿಪ್ರಾಯವನ್ನು ಓದಲೇಬೇಕು. ಇವರ ವಿಮರ್ಶೆಯ ಕೊಂಡಿ ಇಲ್ಲಿದೆ.

https://m.facebook.com/story.php?story_fbid=790210234769298&id=100013409864949

ನಂತರ ಇವರ ಪೋಸ್ಟಿಗೆ ಪ್ರತಿಯಾಗಿ ತಮ್ಮ ಎಡಪಂಥೀಯ ಗುಂಪಿನಿಂದ ಒಬ್ಬರು ಗಡಿ ದಾಟುತ್ತಿದ್ದಾರೆಂದು ಮತ್ತೊಬ್ಬರು ಪೋಸ್ಟ್ ಹಾಕಿ ಬೌದ್ಧಿಕ ಬೆದರಿಕೆಯ ತಂತ್ರವನ್ನು ಬಳಸಿರುವುದನ್ನು ಗಮನಿಸಿ. ಅದರ ಕೊಂಡಿ ಇಲ್ಲಿದೆ.

https://m.facebook.com/story.php?story_fbid=2522244181217116&id=100002946772746

ಈ ಪೋಸ್ಟಿಗೆ ಬಂದಿರುವ ಪ್ರತಿಕ್ರಿಯೆಗಳನ್ನೂ ಗಮನಿಸಿ.

ಒಂದು ಕೃತಿಯನ್ನು ಓದದೆಲೆ, ಅಥವಾ ಪೂರ್ವಾಗ್ರಹಪೀಡಿತವಾಗಿ ಓದಿ, ಇಂತಿಂತಹ ವಿಷಯಕ್ಕೆ ಪೂರಕ ಸಾಕ್ಷಿಯ ಆಕರವನ್ನು ಕೊಟ್ಟಿಲ್ಲವೆಂದು ವಸ್ತುನಿಷ್ಠವಾಗಿ ವಿಮರ್ಶಿಸದೆ ಬೇಕಾಬಿಟ್ಟಿ ಕಾಮೆಂಟಿಸುವ ತಂತ್ರವೇ ಕೂಪಮಂಡೂಕ ತಂತ್ರ! ತಮ್ಮ ಸಿದ್ದಾಂತ ಪಂಥದ ಬಾವಿಯೊಳಗಿಂದ ಒಂದು ಕಪ್ಪೆ ಹಾರಿ ಹೊರಜಗತ್ತನ್ನು ಕಂಡು ಜಗತ್ತು ಸುಂದರ ಎಂದೊಡನೇ ಬಾವಿಯೊಳಗಿನ ಇತರೆ ಕಪ್ಪೆಗಳು ಆ ಮುಗ್ದ/ಮುಕ್ತ ಮನಸ್ಸಿನ ಕಪ್ಪೆಯನ್ನು ನೀನು ಇದನ್ನು ಓದಿದ್ದೀಯೆ/ಅದನ್ನು ಓದಿದ್ದೀಯೆ? ನಿನ್ನ ಓದು ತುಂಬಾ ಮಿತಿಯೊಳಗಿನದು ಅಥವಾ ಅಪ್ರಾಮಾನಿಕವಾದದ್ದು, ಇದು ಬ್ರಾಹ್ಮಣ್ಯ ಮನಸ್ಥಿತಿ, ಅದು ಹಿಡನ್ ಅಜೆಂಡಾದ ಕೃತಿ, ವ್ಯಕ್ತಿ ಸರಿಯಿಲ್ಲ ಮುಂತಾದ ವಟರ್ಗುಟ್ಟುವಿಕೆ ಏನನ್ನು ಹೇಳುತ್ತದೆ?

ಉರುಳುತ್ತಿರುವವನೇ ಸಿಕ್ಕುವ ಹುಲ್ಲುಕಡ್ಡಿಗಳನ್ನೆಲ್ಲಾ ಬಾಚಿ ಹಿಡಿಯಲೆತ್ನಿಸುವುದು.  ಅದು ಒಂದು ದುರ್ಬಲ ಮನಸ್ಥಿತಿಯ ಪರಿಸ್ಥಿತಿ. ಮನಶಾಸ್ತ್ರವನ್ನು ಕಿಂಚಿತ್ ಓದಿಕೊಂಡವರಿಗೂ ಇದು ಅರ್ಥವಾಗಿಬಿಡುತ್ತದೆ. ವಸ್ತುವನ್ನು ಹಿಡಿದು ವ್ಯಕ್ತಿಯನ್ನು ನಿಂದಿಸುವ ಇವರ ವರಸೆ ಸಾಕಷ್ಟು ಸಾರಿ ಫೇಸ್ಬುಕ್ನಲ್ಲಿ ಕಂಡಿದೆ. ಇದಕ್ಕೆ ಸಾಕ್ಷಿಯಾಗಿ ಮೊನ್ನೆ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಆಯ್ಕೆಗೊಂಡವರ ಮೇಲಿನ ದ್ವೇಷಕಾರಕ ಪೋಸ್ಟ್ ಕೂಡ ಇಂತಹ ಪ್ರವೃತ್ತಿಗೆ ಸಾಕ್ಷಿಯಾಗಿದೆ.

ಸತ್ಯವಿದ್ದರೂ ತಮ್ಮ ಸಿದ್ದಾಂತಕ್ಕೊಪ್ಪದ ಒಂದು ಭಾಗವನ್ನು ಹಿಡಿದುಕೊಂಡು ಹಿಂಜುತ್ತಿರುವ ಇವರ ಪರಿ ನೋಡಿ. ಹಾಗೆ ಒಂದು ಭಾಗದ ಸ್ಕ್ರೀನ್ ಶಾಟ್ ಹಾಕಿ ರಂಜಿಸಿ ಕಾಮೆಂಟಿಗರನ್ನು ಖುಷಿ ಪಡಿಸುವ ಈ ವಿದ್ವಾಂಸರು ಪುಸ್ತಕವನ್ನೇ ತಮ್ಮ ಬಳಗಕ್ಕೆ ಕೊಟ್ಟು ಓದಿಸಿದ್ದೇ ಆದರೆ ಬರುವ ಅಭಿಪ್ರಾಯಗಳು ವಸ್ತುನಿಷ್ಠವಾಗಿ ದಾಕ್ಷಾಯಣಿ ಹುಡೇದ್ ಅವರ ಅಭಿಪ್ರಾಯದಂತೆಯೇ ಆಗಿರುತ್ತವೆ ಎಂದು ಖಚಿತವಾಗಿ ಹೇಳಬಲ್ಲೆ. ಏಕೆಂದರೆ ಸತ್ಯದ ಬುನಾದಿಯ ಮೇಲೆ ನನ್ನ ಪುಸ್ತಕವಿದೆಯೇ ಹೊರತು ಸತ್ತ ಪಂಥಸಿದ್ದಾಂತಗಳ ಮೇಲಲ್ಲ.

ವಿಮರ್ಶೆಗೊಂದು ಪರಿಭಾಷೆಯಿದೆಯೆನ್ನುವುದನ್ನು ಮರೆತ ಇವರಿಗೆ ದಾಕ್ಷಾಯಿಣಿಯವರ ಬರಹದಲ್ಲಿ ಅಪ್ರಾಮಾಣಿಕತೆ ಕಾಣಿಸಿರುವುದೊಂದು ವಿಪರ್ಯಾಸವಷ್ಟೇ ಅಲ್ಲದೇ ದಬ್ಬಾಳಿಕೆ ಕೂಡ. ಈ ಗುಂಪುಗಾರಿಕೆಯ ಅಸಹಿಷ್ಣು ಗುಣ, ಮತ್ತು ದಾಕ್ಷಾಯಿಣಿಯವರ ಮುಕ್ತ ಮುಗ್ಧ ಬರಹ ಇವೆರಡೂ ಇಲ್ಲಿ ಗಮನಾರ್ಹ.

ಒಟ್ಟಿನಲ್ಲಿ ಜನಪರವಲ್ಲದ ಸೈದ್ದಾಂತಿಕ ಮುಖವಾಡಗಳಿಲ್ಲದೆ ಪುಸ್ತಕಗಳನ್ನು ಬರೆಯುವಂತಾಗಬೇಕು ಎನ್ನುವ ಈ ಗುಂಪು ಅಂತಹದೇ ನಿಲುವಿನಿಂದ ಬರೆದ ನನ್ನ "ಭಾರತ ಒಂದು ಮರುಶೋಧನೆ" ಪುಸ್ತಕವನ್ನು ಗ್ರಹಿಸಬಲ್ಲುದೇ!?!

ಸತ್ಯಮೇವಜಯತೇ!

ಪುಸ್ತಕಕ್ಕಾಗಿ ಸಂಪರ್ಕಿಸಿ:

http://www.navakarnatakaonline.com/bookslist.php

No comments: