Selective ಹೋರಾಟಗಳು

 ಹದಿನೆಂಟನೇ ಶತಮಾನದ ಫ್ರೆಂಚ್ ಕ್ರಾಂತಿಯ ಸಂದರ್ಭದಲ್ಲಿ ಬಹುಪಾಲು ಬುದ್ಧಿಜೀವಿಗಳು ತಟಸ್ಥರಾಗಿದ್ದರೂ ಬ್ಯಾರನ್ ಮಾಂಟೆಸ್ಕ್ಯೂ, ವಾಲ್ಟೇರ್, ಜೀನ್ ರೋಸ್ಯು ಅಂತಹ ತತ್ವಜ್ಞಾನಿ ಸಾಹಿತಿಗಳು ಫ್ರೆಂಚ್ ಜಾಗೃತಿಗೆ ಕಾರಣರಾಗಿದ್ದರು.


ಹಿಟ್ಲರ್ ಕಾಲದ ಜರ್ಮನಿಯಲ್ಲಿ ಯಹೂದಿಗಳ ರಕ್ಷಣೆಗೆ ಮುಂದಾಗಿದ್ದ ಮಾರ್ಥಾ ವೇಟ್ಸ್ಟಿಲ್ ಶಾರ್ಪ್ ದಂಪತಿ, ವೇರಿಯನ್ ಫ್ರೈ, ಜೀನೋ ಬರ್ತಾಲಿ, ಜಾನ್ ಸ್ವಾರ್ಟರ್ನ್ಜಿಕ್, ಜಾನ್ ಕರಾಸ್ಕಿ ಮುಂತಾದವರ ಬರಹ ಮತ್ತು ವರದಿಗಳಲ್ಲದೆ ಅವರು ಖುದ್ದು ರಿಸ್ಕ್ ತೆಗೆದುಕೊಂಡು ಯಹೂದಿಗಳನ್ನು ರಕ್ಷಿಸಿದ್ದರು.


ರಷ್ಯನ್ ಕ್ರಾಂತಿಯ ಉದಾರವಾದಿಗಳೆಂದು ಗುರುತಿಸಿಕೊಂಡಿದ್ದ intelligentsia ಗುಂಪಿನ ಆಂಟಾನ್ ಚೆಕೋವ್, ವಾಸಿಲಿ ಜುಕೊವ್ಸ್ಕಿ, ಅಲೆಕ್ಸಾಂಡರ್ ರಾಡಿಷ್ಚೆವ್, ಆಂಡ್ರೆ ಸಕರೋವರಂತಹ ಬುದ್ದಿಜೀವಿಗಳಲ್ಲದೆ ಲಿಯೋ ಟಾಲ್ಸ್ಟಾಯ್ ಅಂತಹ ಸಾಹಿತಿಗಳು ಸಹ ಕ್ರಾಂತಿಯ ಮೇಲೆ ಗಾಢ ಪ್ರಭಾವವನ್ನು ಬೀರಿದ್ದರು.


ಸಲ್ಮಾನ್ ರಶ್ದಿ ಅವರು ತಮ್ಮ ಕೃತಿ "ಸಟಾನಿಕ್ ವರ್ಸಸ್"ನಿಂದಾಗಿ ಫತ್ವಾಕ್ಕೊಳಗಾದಾಗ ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬೆಂಬಲಿಸಿದ್ದ ಭಾರತೀಯ ಸಾಹಿತ್ಯ ವಲಯವು ಚಾರ್ಲಿ ಹೆಬ್ಡೋ ಅವರ ಅಭಿವ್ಯಕ್ತಿ ಸ್ವಾತಂತ್ರ್ಯದ ಕಾಲಕ್ಕಾಗಲೇ ಓಲೈಕೆಯ ಜಾಣ ಪ್ರಭಾವಕ್ಕೊಳಗಾಗಿ ಮೌನವಾಗಿತ್ತು. ರಶ್ದಿ ಫತ್ವಾ ವಿರೋಧಿಸಿದ್ದ ಸಾಹಿತಿಗಳೇ ಹೆಬ್ಡೋ ಫತ್ವಾಕ್ಕೆ ಮೌನ ವಹಿಸಿದ್ದರು ಎಂಬುದು ಗಮನಾರ್ಹ.  ಈ ಮಧ್ಯೆ ಬಂದ ತಸ್ಲೀಮಾ ನಸ್ರೀನ್ ಅವರಿಗೆ ಭಾರತೀಯ ಜನ ಸಾಮಾನ್ಯರ ಒಕ್ಕೊರಲಿನ ಬೆಂಬಲ ಸಿಕ್ಕರೂ ಭಾರತೀಯ ಸಾಹಿತಿಗಳ ಬೆಂಬಲ ರಶ್ದಿ ಕಾಲಕ್ಕಿಂತ ಇಲ್ಲವೇ ಇಲ್ಲ ಎನ್ನುವಷ್ಟು ಇಳಿಮುಖಗೊಂಡಿತ್ತು ಎಂಬುದೂ ಗಮನಾರ್ಹ! ಮಾತನಾಡಲೇಬೇಕಾದಾಗ ಇವರೆಲ್ಲಾ ಜಾಣಮೌನಕ್ಕೆ ಜಾರಿದ್ದರು.


ಭಾರತೀಯ ಉದಾರವಾದದ ಆಯ್ದ ಹೋರಾಟಗಳ, ಅತೀವ ಓಲೈಕೆಯ ಫಲವೇ ಇಂದಿನ ಹಿಜಾಬ್-ಕೇಸರಿಶಾಲು, ಹಲಾಲ್-ಜಟ್ಕಾ, ಜಾತ್ರೆ-ಉರ್ಸ್ ವ್ಯಾಪಾರಗಳ ಜಂಜಾಟಕ್ಕೆ ಸ್ಫೂರ್ತಿ! ರಶ್ದಿ ಕಾಲದಲ್ಲಿ ಧರ್ಮಾತೀತವಾಗಿದ್ದ ಎಡಪಂಥೀಯ ಹೋರಾಟವು ಹೆಬ್ಡೋ ಕಾಲಕ್ಕೆ ಧರ್ಮಾಧೀನವಾಗಿದೆ. ಹಾಗೆಯೇ ಧಾರ್ಮಿಕ ಅವಹೇಳನವೆನಿಸಿದ್ದ ಹುಸೇನರ ಕಲೆಯ ಎಡದ ಪುರಸ್ಕಾರ ಇಂದು ಫೋಟೋಶಾಪ್ ಕಲೆಯನ್ನು ಪರೋಕ್ಷವಾಗಿ ಪ್ರಚೋದಿಸಿ ಪ್ರೋತ್ಸಾಹಿಸಿ ಮುನ್ನೆಲೆಗೆ ತಂದಿದೆ.


ಜಾಗತಿಕವಾಗಿ ರೋಮನ್ ಸಾಮ್ರಾಜ್ಯದಲ್ಲಿ, ಯುರೋಪ್ ಕ್ರಾಂತಿಗಳಲ್ಲಿ, ಚೈನಾ ರಷ್ಯಾದಂತಹ ಕಮ್ಯುನಿಸ್ಟ್ ಆಡಳಿತಗಳಲ್ಲಿ, ಕಳೆದ ದಶಕದ ಈಜಿಪ್ಟ್ ಕ್ಷಿಪ್ರ ಕ್ರಾಂತಿಯಲ್ಲಿ ಸಹ ಅಭಿವ್ಯಕ್ತಿ ಸ್ವಾತಂತ್ರ್ಯದ ನಿಷ್ಪಕ್ಷಪಾತ ಹೋರಾಟಗಳ ಪ್ರಭಾವವನ್ನು  ಮನಗಾಣಬಹುದು. ಆದರೆ ಭಾರತದಲ್ಲಿ ಅದು selective ಹೋರಾಟವಾಗಿ ರೂಪುಗೊಂಡು ದೇಶವನ್ನು ದುರಂತದೆಡೆ ತಳ್ಳಿದೆ. ಬಲಪಂಥೀಯರ ಇಂದಿನ "ಪ್ರತಿಕ್ರಿಯೆ"ಗೆ ಕ್ರಿಯಾಶೀಲ ಎಡಪಂಥವು ಭದ್ರ ಬುನಾದಿಯನ್ನು ಹಾಕಿಕೊಟ್ಟಿದೆ. ಓಲೈಕೆ (appeasement), ಊಳಿಗಮಾನ ಪ್ರಜಾಪ್ರಭುತ್ವ (Feudal Democracy), ಮತ್ತು ಅಧಿನಾಯಕತ್ವ (Hegemony)ಗಳು ಒಂದು ದೇಶವನ್ನು ಏನು ಮಾಡಬಲ್ಲವು ಎಂಬುದಕ್ಕೆ ಇಂದಿನ ಏಕೈಕ ಉದಾಹರಣೆ, ಭಾರತ! 


ಇನ್ನು ಹೀಗಿದ್ದೂ ಭಾರತ ಮಿಂಚುತ್ತಿರುವುದೇಕೆ? (ಜನ)ಸಂಖ್ಯಾಕಾರಣ! ಇದನ್ನು ಮನಗಾಣಬೇಕೆ, ಓದಿ ಬಸವರಾಜಕಾರಣ! ;) 


BTW, Use your powerful left brain wisely and left hand cleanly!


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

No comments: