ಬಸವರಾಜಕಾರಣ - ಪ್ರಶಾಂತ್ ಭಟ್ ಅಭಿಪ್ರಾಯ

 ಬಸವರಾಜಕಾರಣ - ರವಿ ಹಂಜ್


ಈ ಪುಸ್ತಕ ಓದುತ್ತಿದ್ದ ಹಾಗೆ ಕಂಪಿಸಿಬಿಟ್ಟೆ. ಇದನ್ನು ಓದಿದ್ದಕ್ಕೆ ಯಾರಾದರೂ ಕೇಸು ಹಾಕಿದರೇನು ಗತಿ ಎಂಬಷ್ಟು ಭಯವಾಗಿ. ಲಿಂಗಾಯಿತ ವೀರಶೈವ ತಿಕ್ಕಾಟವಷ್ಟೇ ಬಗೆಯುವುದು ಇದರ ಹೂರಣವಲ್ಲ. ಇದು ಇಡಿಯ ಭಾರತೀಯ ತತ್ವಶಾಸ್ತ್ರದ ತರ್ಕವನ್ನು‌ ವಿವರಿಸಿ ಪ್ರವೇಶವನ್ನು ಒದಗಿಸಿ ಅಸ್ಪೃಶ್ಯತೆ ಬಗ್ಗೆ ಇತಿಹಾಸದ ಪುಟಗಳಲ್ಲಿ ಕೆದಕಿ ಬ್ರಾಹ್ಮಣ ಎಂದರೆ ಏನು ಹೇಗಿತ್ತು ಎಂಬುದನ್ನು ವಿವರಿಸಿ ಆಮೇಲೆ ವಚನಗಳ ಮೂಲಕ ಇಡಿಯ ವಿಷಯವನ್ನು ಡೀಕೋಡ್ ಮಾಡಲು ಹೊರಡುತ್ತದೆ.

ಇಲ್ಲಿ ವಚನಗಳಿಗೆ ಬೇರೆ ಬೇರೆ ರೀತಿಯ ವ್ಯಾಖ್ಯಾನವನ್ನು ಕೊಡಬಹುದು.

ಆದರೆ ಆ ವಚನಗಳು ರಚಿತವಾದ ಕಾಲಮಾನ ಹಾಗೂ ಆ ಕಾಲಘಟ್ಟದ ರಾಜಕೀಯ ಸಾಮಾಜಿಕ ಸ್ಥಿತ್ಯಂತರದ ಮೂಲಕ ಅವುಗಳನ್ನು ಲೇಖಕರು ವಿವರಿಸುತ್ತಾರೆ.

ಇದನ್ನು ಹೌದು ಎನ್ನಲೂ ಅಲ್ಲ ಎನ್ನಲೂ ಮನಸು ಹಿಂಜರಿಯುತ್ತದೆ.

ಕೊನೆಗೆ ಕೊಟ್ಟ ಕೆಂಪೇಗೌಡರ ಕುರಿತಾದ ಸಣ್ಣ ವಿವರಣೆಯನ್ನು ಕೂಡ.


ಬಹುಶಃ ಇಷ್ಟು ನೇರ ವಿಮರ್ಶೆ ಆಗುಂಬೆ ನಟರಾಜ್ ಬಿಟ್ಟರೆ ‌ಬರೆದವರು ಇವರೇ ಇರಬೇಕು.


ಹೆಚ್ಚೇನಿಲ್ಲ. ಈ ಪುಸ್ತಕ ಓದಿರಿ. ಒಪ್ಪುವುದು ಬಿಡುವುದು ನಿಮಗೆ ಬಿಟ್ಟ ವಿಷಯ. ಯಾರೂ ಪ್ರಶ್ನೆಗೆ ಅತೀತರಲ್ಲ ಸತ್ಯಾನ್ವೇಷಣೆಯೇ ಅಂತಿಮ ಗುರಿ ಅನ್ನುವುದು ಮನಸಲ್ಲಿದ್ದರೆ ಸಾಕು.

No comments: