"ಲುಕ್ಔಟ್ ನೋಟಿಸ್"

 ಭೂಪಾಲ್ ಅನಿಲ ದುರಂತದ ಆರೋಪಿ ವಾರೆನ್ ಆಂಡರ್ಸನ್ "ಲುಕ್ಔಟ್ ನೋಟಿಸ್" ಮೀರಿ ದೇಶ ಬಿಟ್ಟು ಪರಾರಿಯಾದದ್ದು ಕಾಂಗ್ರೆಸ್ ಆಡಳಿತದ ಕಾಲದಲ್ಲಿ.

ಬೋಫೋರ್ಸ್ ಹಗರಣದ ಆರೋಪಿ ಒತ್ತಾವಿಯೋ ಕ್ವತ್ರಾಚಿ "ಲುಕ್ಔಟ್ ನೋಟಿಸ್" ಮೀರಿ ದೇಶ ಬಿಟ್ಟು ಪರಾರಿಯಾದದ್ದು ಕಾಂಗ್ರೆಸ್ ಆಡಳಿತದ ಕಾಲದಲ್ಲಿ.
ಇವೆರಡೂ ಅತ್ಯಂತ ಗುರುತರ ಕ್ರಿಮಿನಲ್ ಕೇಸುಗಳು.
ಈಗ ಪ್ರಜ್ವಲ್ ರೇವಣ್ಣ ಚುನಾವಣೆ ಆದ ಮರುದಿನ ದೇಶ ಬಿಟ್ಟು ಹೋಗಿದ್ದಾನೆ.
ಆತ ದೇಶ ಬಿಟ್ಟು ಹೋಗುವಾಗ ಆತನನ್ನು ತಡೆಯಲು ಅವನ ಮೇಲೆ ಯಾವುದೇ ಕೇಸು ದಾಖಲಾಗಿರಲಿಲ್ಲ. ಅವನನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ತಡೆಯಲು ಬೇಕಾದ ಪೊಲೀಸರ "ಲುಕ್ಔಟ್ ನೋಟಿಸ್" ಸಹ ಜಾರಿಯಾದದ್ದು ಇಂದು ಮೇ ಎರಡರಂದು, ಆತ ಹೋಗಿ ಒಂದು ವಾರದ ನಂತರ.
ಹೀಗಿದ್ದಾಗ ಕೇವಲ ಟಿವಿ ನೋಡಿ, ಸುದ್ದಿ ಕೇಳಿ ಮೋದಿ, ಶಾಗಳು ಜೇಮ್ಸ್ ಬಾಂಡ್ ರೀತಿ ಬೆನ್ನತ್ತಿ ಓಡಿಹೋಗಿ ಪ್ರಜ್ವಲನನ್ನು ಬಂಧಿಸಬೇಕಿತ್ತೆ?!?
ಇಂತಹ ಊಹಾಪೋಹದ ಸಂಕಥನವನ್ನು ಪೋಣಿಸುವ ರಾಜ್ಯದ ಮುಮ, ಉಮುಮ, ಗೃಹ, ಎಕ್ಸೆಟ್ರಾ, ಎಕ್ಸೆಟ್ರಾ,
ಎಕ್ಸೆಟ್ರಾಗಳು, "ಕುಣಿಯಲಾರದವಳು ನೆಲ ಡೊಂಕು ಅಂದಳಂತೆ" ಎಂದಂತೆ ಎನ್ನುತ್ತಿರುವುದು ಏಕೆ?!? ಇವರಿಗೆ ತಕ್ಕ ಹಿಮ್ಮೇಳ, ಕರುಣಾಜನಕ ಸಂಕಥನದ ಬುದ್ಧಿಜೀವಿಗಳು ಊಳಿಡುತ್ತಿರುವುದು ಏಕೆ?!
ಏಕೆಂದರೆ ಕೇವಲ ಪಂಚಾಯಿತಿ ಸದಸ್ಯರಾಗಬಲ್ಲ ಅರ್ಹತೆ ಉಳ್ಳ ಇಂಥವರು ರಾಜ್ಯದ ಮುಖ್ಯಮಂತ್ರಿ, ಮಂತ್ರಿ ಎಲ್ಲಾ ಆದರೆ ಏನಾಗುವುದೋ ಅದೇ ರಾಜ್ಯದಲ್ಲಿ ಆಗುತ್ತಿರುವುದು. ಹಾಗೆಯೇ, ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಎಲ್ಲಾ ವಿಷಯದಲ್ಲೂ ಪರಿಣಿತಿ ಪಡೆದಿರುವ ರೆಡಿ ರಾಮ್ ಮ್ಯಾನ್ ಕೃಪಾಪೋಷಿತ ಚಿಂತಕರು!!!
ಇಷ್ಟೇ ಇಷ್ಟೇ ಇಷ್ಟೇ.
ಇದೆಲ್ಲವನ್ನೂ ಮೀರಿ ಆರೋಪಗಳು ಸಾಬೀತಾಗಿ ನ್ಯಾಯ ದೊರಕಲಿ ಎಂಬುದು ಒಂದು ಮರೀಚಿಕೆ.

No comments: