ರಂಜಾನ್ ದರ್ಗಾ ಶಿಕಾಗೋ

 ಒಂದೊಮ್ಮೆ ನಾನೂ ಸಹ ವಯೋಸಹಜ ಮುಗ್ಧತೆಯೋ ಅಥವಾ ವಿಳಂಬಿತ ತೋಡಿ ರಾಗದ ಹದಿಹರೆಯದ ಕಾರಣವೋ ಬುದ್ದಿಜೀವಿಗಳ ವಿಧೇಯ ವಿನಮ್ರ ಓದುಗನಾಗಿದ್ದೆ. ಅವರ ಬರಹಗಳು ಕ್ರಾಂತಿಕಾರಕ ಎಂದು ಬಗೆದು ಮುಂದೊಮ್ಮೆ ಅವರು ಕೊಡಬಹುದಾದ ಕ್ರಾಂತಿಯ ಭಾಗವಾಗಲು ಉತ್ಸುಕನಾಗಿ ಕಾಯುತ್ತಿದ್ದೆ.......ಅಮೆರಿಕೆಗೆ ಬಂದು ದಶಕ ಕಳೆದಿದ್ದರೂ!

ಇಂತಿಪ್ಪ ಸನ್ನಿವೇಶದಲ್ಲಿ VSNA (ವೀರಶೈವ ಸಮಾಜ ಆಫ್ ನಾರ್ತ್ ಅಮೆರಿಕ) ಸಂಸ್ಥೆಯು ರಂಜಾನ್ ದರ್ಗಾ ಮತ್ತು ರವಿಕೃಷ್ಣಾರೆಡ್ಡಿ ಅವರನ್ನು ತಮ್ಮ ಸಮಾಜದ ಅಧಿವೇಶನಕ್ಕೆ ಮುಖ್ಯ ಅತಿಥಿಗಳಾಗಿ ಆಹ್ವಾನಿಸಿದ ಸುದ್ದಿ ಓದಿದೆ. ಇವರ ಹೆಸರಿನ ಕಾರಣ ವೀರಶೈವರಲ್ಲ ಎನಿಸಿದವರನ್ನು ಸಹ ಒಂದು ಜಾತಿ ಸಂಸ್ಥೆ ತನ್ನ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು ಅಂದು ಮಹಾನ್ ಪ್ರಗತಿಪರ ಎನಿಸಿತು. ಈ ಕುರಿತು ರವಿಕೃಷ್ಣಾರೆಡ್ಡಿ ಅವರಿಗೆ ಕಾಮೆಂಟ್ ಸಹ ಹಾಕಿದ್ದು ನೆನಪಿದೆ. ನಂತರ ರಂಜಾನ್ ದರ್ಗಾ ಶಿಕಾಗೋ ಸಮೀಪದ ಮಿಲುವಾಕಿಗೆ ಬಂದಿದ್ದು ಅವರ ಸಂಪರ್ಕದ ನಂಬರ್ ಒಂದು ಸಿಕ್ಕಿತು. ಪ್ರಗತಿಪರ ಚಿಂತಕರಾದ ದರ್ಗಾ ಅವರನ್ನು ಭೇಟಿ ಮಾಡಿ ಚರ್ಚಿಸುವುದು ನನ್ನ ಪೂರ್ವಜನ್ಮದ ಸುಯೋಗ ಎಂದೇ ಬಗೆದು ಅವರನ್ನು ಭೇಟಿ ಮಾಡಲು ಫೋನ್ ಮಾಡಿದೆ. ಆಗ ಅವರು ಉಳಿದುಕೊಂಡಿದ್ದ ಮನೆಯ ಒಡೆಯರು, ಬರುವ ವೀಕೆಂಡ್ ಶಿಕಾಗೋ VSNA ಸಭೆಯೊಂದರಲ್ಲಿ ಅವರು ಭಾಗವಹಿಸುವರೆಂದೂ, ಅಲ್ಲಿ ಅವರನ್ನು ಭೇಟಿ ಮಾಡಬಹುದೆಂದೂ ತಿಳಿಸಿದರು. ಅದರಂತೆ ನಾನು ಆಗ ಆ ಸಭೆಗೆ ಹೋಗಿದ್ದೆ.
ಇಂದಿನ ಬಹುಪಾಲು ಮಠಾಧೀಶರು ಅರಿತಿರುವಷ್ಟೇ ತೇಲ್ಮೇಲು ವಚನ ಸಾಹಿತ್ಯವಷ್ಟನ್ನೇ ನಾನೂ ಸಹ ಅಂದು ಓದಿದ್ದು, ಅರಿತಿದ್ದು. ಹಾಗಾಗಿ ರಂಜಾನ್ ದರ್ಗಾ ಎಂದರೆ
ಇವರೆಲ್ಲರಿಗಿಂತ ಹೆಚ್ಚಿನ ಓದಿನ ಮತ್ತು ಮೇಲಾಗಿ ಎಡಪಂಥೀಯ ಪ್ರಖರ ಚಿಂತಕ(????????????) ಎನಿಸಿ ನನಗೆ ಆದರ್ಶ ಎನಿಸಿದ್ದರು. ಹಾಗಾಗಿಯೇ ನನ್ನೆಲ್ಲಾ ಅಂದಿನ ನಿರೀಕ್ಷೆ ಮತ್ತು ಭೇಟಿ ಮಾಡುವ ತವಕ.
ಈ ಎಲ್ಲಾ ಕ್ರಾಂತಿಕಾರಕ ನಿರೀಕ್ಷೆ, ತವಕಗಳ ನಡುವೆ ನಾನು ಅಂದು ಆ VSNA ಸಭೆಗೆ ಹಾಜರಾದೆ. ಲಿಂಗಪೂಜೆ ಮತ್ತಿತರೆ ಧಾರ್ಮಿಕ ಕಾರ್ಯಕ್ರಮಗಳು ಮುಗಿದ ನಂತರ ಭಾಷಣಕಾರರಾದ ದರ್ಗಾ ಮತ್ತು ಬೀದರ್ "ಲಿಂಗಾಯತ" ಶರಣೆ ಅನ್ನಪೂರ್ಣ ಎನ್ನುವವರು ಭಾಷಣ ಮಾಡಿದರು. ಕ್ರಾಂತಿಕಾರಕ ಭಾಷಣವನ್ನು ಎದುರು ನೋಡುತ್ತಿದ್ದ ನನಗೆ ಅವರೀರ್ವರೂ ಈ ಸಂಘದ ಹೆಸರು "ವೀರಶೈವ" ಎಂದೇಕಿದೆ? ಅದನ್ನು ಶೀಘ್ರವೇ "ಲಿಂಗಾಯತ" ಎಂದು ಬದಲಾಯಿಸಲು ಕ್ರಮ ಕೈಗೊಳ್ಳಿ ಎಂದು ಕರೆ ನೀಡಿ ಬಸವಭಜನೆ ಮಾಡಿ ಕೈಮುಗಿದದ್ದು ನನ್ನನ್ನು ಅತೀವ ಭ್ರಮನಿರಸನಗೊಳಿಸಿತು. ಹನ್ನೆರಡನೇ ಶತಮಾನದಲ್ಲಿ ಧರ್ಮ ಒಂದು ನೆಪವಾಗಿ ಸಾಮಾಜಿಕ ಕ್ರಾಂತಿ ಪ್ರಮುಖವಾಗಿ ವಚನಕಾರ ಕ್ರಾಂತಿಕಾರಿಗಳು ಮಾಡಿದ ಸಾಮಾಜಿಕ ಕ್ರಾಂತಿಯ ಬಗ್ಗೆ ಅಷ್ಟೇನೂ ಹೇಳದೆ, ಕಾರ್ಲ್ ಮಾರ್ಕ್ಸ್ ಧರ್ಮ ಎಂಬುದು ಹೇಗೆ ಬಡಜನರ ಒಂದು ಯುಟೋಪಿಯಾ ಆಗಿತ್ತು ಎಂಬ ವಿಶ್ಲೇಷಣೆಯನ್ನೂ ಕೊಡದೆ ಅವರನ್ನು ಅವರೇ ಸೀಮಿತಗೊಳಿಸಿಕೊಂಡರು.
ಅಂದಾದ ನನ್ನೆಲ್ಲಾ ಭ್ರಮನಿರಸನ ಮುಂದೆ ನನ್ನನ್ನು ವೀರಶೈವ, ಲಿಂಗಾಯತ, ಬಸವ, ಕಲ್ಯಾಣಕ್ರಾಂತಿ, ವಚನ ಸಾಹಿತ್ಯವನ್ನು ಓದಿ ಸತ್ಯದ ಸಂಶೋಧನೆಗೆ ಪ್ರೇರೇಪಿಸಿತು. ಅದರ ಪ್ರತಿಫಲವೇ ನನ್ನ, "ಬಸವರಾಜಕಾರಣ." Eliminating the hype from reality! ಅಂದರೆ, "ತೋಪು ತೆಗೆದು ನಿಕಾಲ್ ಮಾಡು" ಎಂದರ್ಥ!
ಇಂತಿಪ್ಪ ಕ್ರಾಂತಿಕಾರಕ ಸತ್ಯವಾನರು ಕೂಡಲಸಂಗಮದೇವ ತೆಗೆದು ಲಿಂಗಾನಂದವನ್ನು ಯಾನೆ ಜನಪದ ಶೈಲಿಯಲ್ಲಿ "ತಲೆಗಿಂತ ತರಡು ದಪ್ಪ" ಎಂದದ್ದು ಕೆಲವರಿಗೆ ರೋಮಾಂಚಕಾರಿ ಆಪ್ಯಾಯಮಾನ ವಿಷಯ! ಪ್ರಾಯಶಃ ರೋಮಾಂಚನದ ಕಾರಣ ರೋಮವೇ ಲಿಂಗ ಎಂದೆನಿಸಿರಲೂಬಹುದು. ಹಾಗಾಗಿಯೇ ಲಿಂಗಾನಂದದ ಮಹಾದೇವಿಯನ್ನು ಮೂದೇವಿ ಎಂದ ಲಂಕೇಶರ ಮಗಳೇ ಮೂದೇವಿಯನ್ನು ಮಹಾದೇವಿ ಎಂದುದು! ಕಿಂಡರ್ ಗಾರ್ಟನ್ನಿಗೆ ಲಕ್ಷ ಲಕ್ಷ ರೂಪಾಯಿ ಕಕ್ಕಿ ಓದಿದ ಚಾಕೋಲೆಟ್ ಬೇಬಿಗಳ ಭಾರತೀಯ ಪರಿವರ್ತನೆಗೆ ಒಂದು ಉತ್ಕೃಷ್ಟ ಮಾದರಿ!
ಇದೆಲ್ಲ ಅಂದು ಶಿಕಾಗೋದಲ್ಲಿ ವೀರಶೈವ ತೆಗೆದು ಲಿಂಗಾಯತ ಮಾಡಿ ಯಾನೆ ತಲೆಗಿಂತ.......ದಪ್ಪ ಮಾಡಿ ಎಂದು ಕರೆ ನೀಡಿದ ಅನ್ನಪೂರ್ಣ ಎನ್ನುವವರು ಮೊನ್ನೆ ನಿಧನರಾದ ಸುದ್ದಿ ಕೇಳಿ ನೆನಪಾದದ್ದು ಮತ್ತು ಇಷ್ಟೆಲ್ಲಾ ಬರೆಯಬೇಕಾದದ್ದು.
ಉಳಿದಂತೆ.....ನೀವು ಕಾಣಿರೇ, ಛಾಂಗು ಭಲರೇ.

No comments: