ಪಂಥಕೂಪದಲ್ಲಿ ಮುಳುಗಿ ಹೋಗಿರುವ ಇಂದಿನ ಕನ್ನಡ ಬೌದ್ಧಿಕ(?)ರ ಪಟಾಲಂ

ಪಂಥಕೂಪದಲ್ಲಿ ಮುಳುಗಿ ಹೋಗಿರುವ ಇಂದಿನ ಕನ್ನಡ ಬೌದ್ಧಿಕ(?)ರ ಪಟಾಲಂ ನನ್ನ ಕೃತಿ "ಭಾರತ ಒಂದು ಮರುಶೋಧನೆ" ಬಗೆಗಿನ ಅಪಪ್ರಚಾರವು ನಾನು ನನ್ನ ಕೃತಿಯ ಅವಲೋಕನದಲ್ಲಿ ವ್ಯಕ್ತಪಡಿಸಿದ್ದ ಕಳವಳ ವಾಸ್ತವಕ್ಕೆ ಇಳಿದುಬಂದುದರ ಸಾಕ್ಷಿಯನ್ನೊದಗಿಸಿದೆ.
ಆದರೆ, ಹಾಗೆಯೇ ಭಾರತದ ಸತ್ಯದ ಅರಿವು ನಾನು ವ್ಯಕ್ತಪಡಿಸಿದ ಆಶಾವಾದದ ಆಶಾಕಿರಣವಾಗಿ ದಾಕ್ಷಾಯಿಣಿ ಹುಡೇದ್ ಅವರ ವಿಮರ್ಶೆಯಲ್ಲಿ ಮತ್ತು ಅಪಪ್ರಚಾರದ ವಿಮರ್ಶೆಯ ವಿಮರ್ಶೆಯನ್ನು ಮಾಡಿದ Mallikarjuna Tankada ಅವರ ಅಭಿಪ್ರಾಯದಲ್ಲಿ ಮೂಡಿಬಂದಿದೆ. ಸತ್ಯವನ್ನು ಯಾರೂ ಮುಚ್ಚಿಡಲಾಗದು ಎಂಬುದಕ್ಕೆ ಇದೇ ಸಾಕ್ಷಿ! ಬನ್ನಿ, ಸತ್ಯಪಂಥವನ್ನು ಬೆಳೆಸೋಣ.
Mallikarjuna Tankada ಬರೆಯುತ್ತಾರೆ:
ಒಬ್ಬ ಇತಿಹಾಸ ವಿದ್ಯಾರ್ಥಿಗೆ ಆಧಾರ ತಿಳಿಯದೆ ಮಾತಾಡಬಾರದು ಅನ್ನೊದು ಕನಿಷ್ಟ ತಿಳುವಳಿಕೆ. ಶ್ರೀಯುತ ರೇಣುಕಾರಾದ್ಯರ ಎಲ್ಲ ಪೋಸ್ಟುಗಳನ್ನ ಬೆದಕಿನ ಆಧಾರದ ಮೇಲಷ್ಟೆ ಹೇಳುವುದಾದರೆ, ಅವರಿಗೆ history and historiography ಗಳ ಅರ್ಥ ಮತ್ತು ವ್ಯತ್ಯಾಸದ ಅರಿವೇ ಇಲ್ಲ. ಒಂದು ಇತಿಹಾಸದ ಕುರಿತಾದ ಪುಸ್ತಕದ ವ್ಯಾಖ್ಯಾನ ಮತ್ತು ಹರವುಗಳ ವಿಶ್ಲೇಷಣೆಯ ಪರಿಭಾಷೆ ಅವರಿಗೆ ದಕ್ಕಿದ ಶಿಸ್ತು ಅಲ್ಲವೆಂದು ನಿಖರವಾಗಿ ಹೇಳಬಲ್ಲೆ.
ಉದಾ- ೧. ರವಿಯವರು ಪ್ರತಿಯೊಂದು ಸಾಧ್ಯತೆಗೂ ಪರಮರ್ಸಿತ ಅಕಾರಾದಿಗಳನ್ನ ನೀಡಿದ್ದಾರೆ. ಇದು ಒಬ್ಬ ಶುದ್ದ ಇತಿಹಾಸ ಕೆದರುವವನ ಪಕ್ಕಾ ಲಕ್ಷಣ.
೨. ರೇಣುಕಾರಾಧ್ಯರು ಇತಿಹಾಸ ಪ್ರಜ್ಞೆಯಲ್ಲಿ ಸೊನ್ನೆ. ಕಾರಣ, ಬಲವಾದ ಆಧಾರಗಳ ಮೇಲೆ ನಿಂತಿರುವ ಕೃತಿಯ ವಿಮರ್ಶೆಗೂ ಪ್ರಬಲ ಅಧ್ಯಯನದ ಆಧಾರ ಮತ್ತು ಕೃತಿಗಳ ಆಧಾರ ಬೇಕು. ಆದರೆ ರಾಧ್ಯರು ಇಲ್ಲಿ ಸಂಪೂರ್ಣ ಸೋತಿದ್ದಾರೆ. ಏಕೆಂದರೆ ಹಂಜರ ಕೃತಿಯು ಯಾಕೆ ನಿರಾಸೆ ಮೂಡಿಸಿದೆ ಅನ್ನುವುದಕ್ಕೆ ಒಂದು ಆಧಾರ ಕೂಡ ನೀಡದೆ ಇರೋದು ಅವರ ಖಾಲಿತನ ತೋರಿಸುತ್ತದೆ.
೩. " ಆ ಕೃತಿ ಬಗ್ಗೆ ಇನ್ನೊಮ್ಮೆ ಬರೆಯಬಾರದು ಅಂದುಕೊಂಡಿದ್ದೆ" ಎಂದು ಬರೆದು ಕೊಂಡಿದ್ದಾರೆ. ಇದು ಅವರ ಚೌಟಳೆತೆಯ ಅಧ್ಯಯನದ ದೂರ ತಿಳಿಸುತ್ತೆ.. ಹಾ.ಹಾ.. ಪಾಪಾ ಅವರಿಗೆ ರವಿಯವರು ಕೊಟ್ಟಿರುವ ಆಕರಗಳ ಒಂದು ಕೃತಿಯು ತಿಳಿದಿಲ್ಲ ..ತಿಳಿದಿದ್ದರೆ ಹೀಗಾಡುತ್ತಿರಲಿಲ್ಲ!
೪. ಪ್ರತಿಕ್ರಿಯಿಸಿರುವ ಆನೇಕರು ರಾಧ್ಯರ ಸಿಗರೇಟ್ ತುದಿಯ ಬೆಂಕಿಯನ್ನೆ ಬ್ರಹ್ಮಾಂಡ ಜ್ಯೋತಿ ಅದ್ಕೊಂಡಿದ್ದಾರೆ. ಏಕಂದ್ರೆ ಅವರುಗಳೇ ಹೇಳಿಕೊಂಡಂತೆ, ಅವರ್ಯಾರೂ ಈ ಕೃತಿಯನ್ನು ಓದಿದವರಲ್ಲ.
೫. ಒಬ್ಬ ಮಹಿಳಾ ಶಕ್ತಿ ತಮ್ಮ ಸಿಟ್ಟಿನ ಧಾಟಿಯಲ್ಲಿ, ಕಟ್ಟಾದ ಹಾವಿನ ಬಾಲದಂತೆ ನಾಲಿಗೆಯನ್ನ ಚಟಪಟಿಸಿದ್ದಾರೆ. ಅದರೆ ಅದಕ್ಕೂ ಮೊದಲು ಅವರೇ ನಾನ್ಸೆಸ್, ಚಿಂಗಿ.‌ ಹೀಗೆ ಸ್ಖಲಿಸಿಕೊಂಡಿದ್ದಾರೆ. ಇದನ್ನು ಬುಲ್ ಶಿಟ್ ಅನ್ನಬಹುದು ನಾವು.
೬. ಕೃತಿಯನ್ನ ಓದದೇನೆ ಒಬ್ಬ ಮಹಾಶಯರು ಪರ್ವ ಅಂಥ ಅಧ್ಯಾಯಗಳನ್ನು ಕರೆದಿದ್ದಕ್ಕೆ ಓದಿಲ್ಲವಂತೆ ಇದನ್ನ ಹೇಗೆ ವಿಶ್ಲೇಷಿಸಲಿ ಹೇಳಿ!
೭. ಈ ಥರದ ಚರ್ಚೆಯಿಂದ ಕೃತಿಗೆ ಪ್ರಚಾರ ಸಿಗುತ್ತಿದೆ ಎಂದು ಮತ್ತೊಬ್ಬರು ವಕ್ರ ವಿಚಾರ ನುಡಿದಿದ್ದಾರೆ. ಆದರೆ ನಿಜವೆಂದರೆ ಒಬ್ಬ ಅಧ್ಯಯನಶೀಲನ ಕೃತಿಯನ್ನ ಆರಂಭದಲ್ಲೇ ಹೊಸಕಲು ಒಗ್ಗಟ್ಟಾಗಿ ಪ್ರಯತ್ನ ಮಾಡಿದ್ದಾರೆ.
೮. ಕೊನೆಗೆ ರಾಧ್ಯರವರು "ವ್ಯಕ್ತಿ ಒಳ್ಳೆಯವರು" ಎಂದಿರುವುದು ಅವರ ಹೊರ-ಒಳಗಿನ ತಾಕಲಾಟವನ್ನ ತಿಳಿಸುತ್ತೆ. ಓದುಗರಿಗೆ ಅವರ ಬಗ್ಗೆ ಮ್ಲಾನತೆ ಉಂಟಾಗುತ್ತದೆ.
೯. ಪೇಚಿಗೆ ಸಿಲುಕಿರೋದು ರವಿಯವರಲ್ಲ .. ನೀಗದ ವಿಷಯಕ್ಕೆ ಕೈಹಾಕಿ, ಸ್ವಂತಿಕೆ ಇಲ್ಲದ ಗುಂಪಿನ ಸಮರ್ಥಿಗಳೇ ತಾವುಗಳು. ತಮಗೆ ಅದು ಇದ್ದರೆ ರವಿಯವರ ಆಧಾರಗಳನ್ನ ಆಧಾರಸಹಿತ ಹೀಗಳೆಯಿರಿ ..... ಗೊತ್ತು, ಆಡಿಕೊಳ್ಳುವ ದಬ್ಬಾಕಿದ ಕೊಡವೆಂದು.
ಓದುಗರೇ ಸ್ವಂತಿಕೆ ಬೆಳೆಸಿಕೊಳ್ಳಿ... ಸ್ವಂತ ಇಚ್ಚೆಯಿಂದ ಓದಿ.
ರೇಣುಕಾರಾಧ್ಯರದು ಈರ್ಶೆ, ವಿಮರ್ಶೆಯಲ್ಲ. ಅವರಾರು ಸ್ವಂತಿಕೆಯಿಂದ ಓದಿದವರಲ್ಲ. ಸ್ವಲ್ಪ ಓದಿದ್ದರೂ ಅದು ರೇಣುಕಾರಾಧ್ಯರು ನೋಟಿಸಿದ ಕೆಲವು ಉಪ್ಪಡಿ ಪುಸ್ತಕಗಳಷ್ಟೆ.
ರವಿಯವರು ಆರಂಭದಲ್ಲಿ ರಾಧ್ಯರು ಉತ್ತಮ ವಿಮರ್ಶಕರಾಗುವ ಲಕ್ಷಣಗಳಿವೆ ಎಂದಿದ್ದಕ್ಕೆ ಗೌರವವಿತ್ತು. ಆದರೆ ಅವರಲ್ಲಿ ಆ ಯಾವ ಲಕ್ಷಣಗಳು ಕಾಣಿಸುತ್ತಿಲ್ಲ. ಉತ್ತಮ ವಿಮರ್ಶಕ ಯಾವಗುಂಪಿಗೂ ಸೇರಬಾರದು. ಇವರಲ್ಲಿ ಪಂಥವಿಷ ತುಂಬಿದೆ. ಸಾಧ್ಯವಾದರೆ ತೇಜಸ್ವಿಯವರ ವಿಮರ್ಶೆಯ ವಿಮರ್ಶೆ ಓದಿದರೆ ಸಾಕು.

2 comments:

ವಿ.ರಾ.ಹೆ. said...

ಬರೀ ಬೌದ್ಧಿಕ ಪಟಾಲಂ ಮಾತ್ರ ಅಲ್ಲ ಜನಸಾಮಾನ್ಯರೂ ಬಹುತೇಕ ಹಾಗೇ ಆಗಿಹೋಗಿದ್ದಾರೆ!

Ravi Hanj said...

100℅