ಜಕಣಾಚಾರಿ

 ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಇಬ್ಬರೂ ಬೇರೆ ಎಂಬ ಚಿದಾನಂದಮೂರ್ತಿಯವರಷ್ಟೇ ಅಲ್ಲದೆ ಎಲ್. ಬಸವರಾಜುರವರ ಸಂಶೋಧನೆಯನ್ನು ಓಲೈಕಿಗಳು ಯಶಸ್ವಿಯಾಗಿ ಹಳ್ಳ ಸೇರಿಸಿಯಾಯಿತು.  


ಈಗ ಒಂದು ಜಾತಿ ಸಮಾಜವನ್ನು ಓಲೈಸಲು ಜಯಂತಿವೀರ ಮುಖ್ಯಮಂತ್ರಿ ಶ್ರೀ ಎಡೆಯೂರಪ್ಪನವರು ಜಕಣಾಚಾರಿ ಎಂಬ ಕಾಲ್ಪನಿಕ ವ್ಯಕ್ತಿಯ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಘೋಷಿಸಲು ಒಪ್ಪಿಗೆ ನೀಡಿದ್ದಾರೆ. 


ದಕ್ಷಿಣಾಚಾರ ಎಂಬ ಶಿಲ್ಪಕಲಾ ಪ್ರಾಕಾರವು ಕಾಲಾಂತರದಲ್ಲಿ ದಖನಾಚಾರ, ಜಕಣಾಚಾರ, ಜಕಣಾಚಾರಿ ಎಂದು ಅಪಭ್ರಂಶಗೊಂಡಿತೆಂಬುದನ್ನು ಇತಿಹಾಸತಜ್ಞರಾದ ವಸುಂಧರಾ ಫಿಲಿಯೋಜಾ ಮುಂತಾದ ತಜ್ಞರು ಎಪ್ಪತ್ತರ ದಶಕದಲ್ಲೇ ಸಾಬೀತುಪಡಿಸಿದ್ದಾರೆ. ಸತ್ಯ ಹೀಗಿದ್ದರೂ ಕಟ್ಟುಕತೆಗಳು, ಓಲೈಕೆಗಳು, ಓಟು/ನೋಟಿನ ರಾಜಕೀಯಗಳು ಇತಿಹಾಸವನ್ನು ತಿರುಚುತ್ತಿರುವುದಕ್ಕೆ ದಾಸಿಮಯ್ಯರುಗಳ ನಂತರ ಜಕಣಾಚಾರಿ ಜಯಂತಿ ಒಂದು ಅತ್ಯುತ್ತಮ ಉದಾಹರಣೆ.


ಇಂತಹ ಓಲೈಕೆಗೆ ತಕ್ಕನಾಗಿ  ಶ್ವಾಸ ಗುರು ತಮ್ಮ ಶ್ವಾಸವನ್ನು ಮೂಲಸ್ಥಾನ/ಪೀಠಸ್ಥಾನದಿಂದ ಪಸರಿಸಿದ್ದಾರೆ. ಮೈಕೈ ಬಗ್ಗಿಸಿ ಏದುಸಿರು ಬಿಟ್ಟರೆ ಯೋಗವಲ್ಲ ಅದು ಸರ್ಕಸ್ ಎಂಬ ಪರಿಜ್ಞಾನವಿಲ್ಲದ ಭಕ್ತರು, ಅದಕ್ಕೆ ತಕ್ಕ ಪೀಠಿಗಳು, ರಾಜಕಾರಣಿಗಳು, ಮಾಧ್ಯಮಗಳು.......ಭಾರತಮಾತೆಯ ಯೋಗಾಯೋಗ!!!


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

No comments: