ಬಂಡಾಯ ಸಾಹಿತ್ಯ ಸಂಘಟನೆ - ದಾವಣಗೆರೆ ಸಮ್ಮೇಳನ

 ೨೦೧೯ ರಲ್ಲಿ ಬಂಡಾಯ ಸಾಹಿತ್ಯ ಸಮ್ಮೇಳನದಲ್ಲಿ ಬರಗೂರು ರಾಮಚಂದ್ರಪ್ಪ ಹೀಗೆ ಹೇಳಿದ್ದರು ಎಂದು ನವೆಂಬರ್ ೧೭ ೨೦೧೯ ರ ಪ್ರಜಾವಾಣಿಯಲ್ಲಿ ವರದಿಯಾಗಿದೆ.

"ಇತ್ತೀಚಿನ ದಿನಗಳಲ್ಲಿ ಜಾತಿಯ ಗತಿಶೀಲತೆ ಬದಲಾಗುತ್ತಿದೆ. ಮೇಲ್ಜಾತಿಗಳು ಉಪಜಾತಿಗಳನ್ನು ಮರೆತು ಒಂದಾಗುತ್ತಿದ್ದಾರೆ. ಆದರೆ, ಕೆಳವರ್ಗದ ಜಾತಿಗಳಲ್ಲಿ ಉಪಜಾತಿಗಳ ಒಡಕು ಹೆಚ್ಚಾಗುತ್ತಿದೆ. ಈ ವೈರುಧ್ಯ ಜಾತಿ ವಿನಾಶಕ್ಕಿಂತ, ಜಾತಿ ವಿಕಾಸಕ್ಕೆ ಸಾಕ್ಷಿಯಾಗುತ್ತಿದೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ತಿಳಿಸಿದರು.
ಬಂಡಾಯ ಸಾಹಿತ್ಯ ಸಂಘಟನೆಯು ಭಾನುವಾರ ಆಯೋಜಿಸಿದ್ದ ‘ಮೀಸಲಾತಿ: ನೂರು ವರ್ಷ’ ರಾಜ್ಯಮಟ್ಟದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು."
ಈಗ ಇದೇ ಬಂಡಾಯ ಸಾಹಿತ್ಯ ಸಂಘಟನೆಯ ಸಮ್ಮೇಳನ ದಾವಣಗೆರೆಯಲ್ಲಿ ಕೆಲವೇ ದಿನಗಳಲ್ಲಿ ನಡೆಯುತ್ತಿದೆ. ೨೦೧೯ರ ತಮ್ಮ ಹೇಳಿಕೆಯಂತೆ "ಜಾತಿ ವಿಕಾಸ"ವನ್ನು ಮಾನ್ಯ ಬರಗೂರರು ಈ ಸಮ್ಮೇಳನದ ಎಲ್ಲಾ ಕಾರ್ಯಕ್ರಮದಲ್ಲಿ ತಮ್ಮ ಸ್ವಜಾತಿ ಬಾಂಧವರನ್ನು ಮತ್ತು ತಮ್ಮ ಬಾಂಧವರನ್ನು ಬೆಂಬಲಿಸಿದವರನ್ನು, ತಾವು ಮುನ್ನುಡಿ ಬರೆದುಕೊಟ್ಟವರನ್ನು, ಅಥವಾ ತಮಗೆ ಜೈಕಾರ ಹಾಕಿದವರನ್ನು ಸೇರಿಸಿ ಬಂಡಾಯವನ್ನೇ ಢಂಬಾಚಾರವಾಗಿಸಿದ್ದಾರೆ. ಈ ಬರಗೂರರ "ಜಾತಿ ವಿಕಾಸ"ದ ಬಗ್ಗೆ ಈಗಾಗಲೇ ಸಾಕಷ್ಟು ಅಸಮಾಧಾನ ಈ ಸಮ್ಮೇಳನದ ಹಿನ್ನೆಲೆಯಲ್ಲಿ ಬಹಿರಂಗಗೊಂಡಿದೆ. "ತೆಪರೇಸಿ" ಎಂದು ಎಲ್ಲಿಂದಲೋ ಬಂದು ಚುರುಮುರಿ ಕಟ್ಟೆಪುರಾಣ ಮಿಕ್ಸ್ ಹೊಡೆಯುವವರನ್ನು ಸಂಚಲನೆಗಿರಿಸಿಬಿಟ್ಟರೆ ಪಕ್ಕಾ ದಾವಣಗೆರೆಯವರಲ್ಲದೆ ರಾಜ್ಯಾದ್ಯಂತ ಇರುವ ಬಂಡಾಯಗಾರರು ತೆಪರೇಸಿಗಳಾಗಿಬಿಡುತ್ತಾರೆಯೇ?!
ಪ್ರಗತಿಪರರು, ಬಂಡಾಯಗಾರರು, ಚಿಂತಕರು ಏಕೆ ಜಾತಿಗಳನ್ನು ಪ್ರಮುಖವಾಗಿ "ಅಸ್ಮಿತೆ" ಎನ್ನುತ್ತಾರೆ ಎಂದರೆ ಹೀಗೆ ವಿಕಾಸ ಹೊಂದಲಷ್ಟೆ! ಮೊನ್ನೆ ತಿಳಿಸಾರಿನ ನರಪೇತಲರ "ಸಂಧಿ ಸಾಹಿತ್ಯ"ಕ್ಕೆ ಎಗರಿಬಿದ್ದು ಕ್ಯಾನ್ಸಲ್ ಮಾಡಿಸಿದ ಬಾಡಿನ ದಷ್ಟಪುಷ್ಟ "ಅಸ್ಮಿತೆ" ಬಂಡಾಯಗಾರರು ಈಗ್ಯಾಕೆ ಬಾಯಿ ಬಂದ್ ಮಾಡಿಕೊಂಡಿರುವರೋ!?!

No comments: